ಸುವಾಸನೆ ಬೀರುವ ಕಸ್ತೂರಿ ಮೃಗ

‘ಕತ್ತೆಗೇನು ಗೊತ್ತು ಕಸ್ತೂರಿಯ ಗಂಧ' ಎಂಬುದು ಹಳೆಯ ಗಾದೆ ಮಾತು. ಕಸ್ತೂರಿಯ ಸುವಾಸನೆಯು ಬಹಳ ಪ್ರಸಿದ್ಧ. ನೈಜವಾದ ಕಸ್ತೂರಿ ಉತ್ಪಾದನೆಯಾಗುವುದು ಕಸ್ತೂರಿ ಮೃಗ ಎಂಬ ಜಿಂಕೆ ಜಾತಿಯ ಪ್ರಾಣಿಯ ಗ್ರಂಥಿಗಳಲ್ಲಿ. ಕಸ್ತೂರಿ ಪರಿಮಳ ಸೂಸುವಾಗ ಕಸ್ತೂರಿ ಮೃಗಕ್ಕೆ ಆ ಸುವಾಸನೆ ಎಲ್ಲಿಂದ ಬರುತ್ತದೆ ಎಂದು ತಿಳಿಯದೇ, ಇಡೀ ಕಾಡಿನಲ್ಲಿ ಓಡಾಡಿ ಸುಸ್ತು ಮಾಡಿಕೊಳ್ಳುತ್ತದೆಯಂತೆ. ಹೀಗೆ ಬಳಲಿದ ಪ್ರಾಣಿಯನ್ನು ಬೇಟೆಗಾರರು ಸುಲಭವಾಗಿ ಹಿಡಿದು ಕೊಂಡು ಅದರ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆಯುತ್ತಾರಂತೆ. ಇದು ಎಷ್ಟು ಸತ್ಯ ಮಾತೋ ಗೊತ್ತಿಲ್ಲ. ಆದರೆ ಬಹು ಸಮಯದಿಂದ ಪ್ರಚಲಿತವಿರುವ ಸಂಗತಿ.

Image

ನವರಾತ್ರಿಯ ಐದನೆಯ ದಿನದ ಪೂಜೆಯ ಸ್ಕಂದಮಾತಾ ದೇವಿ

ಸಂಪದದಲ್ಲಿ ಸ್ಕಂದಮಾತಾ ದೇವಿಯ ಭಕ್ತಿಪೂರ್ವಕವಾದ ಸುಂದರವಾದ ಕವನವನ್ನು ನೋಡಿದೆ. ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತಾ ದೇವಿಯ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ನಾನು ಹಂಚಿಕೊಳ್ಳ ಬಯಸುತ್ತೇನೆ.

ದೇವಿಯ ಐದನೇ ರೂಪವು  ಸ್ಕಂದ ಮಾತೆಯಾಗಿದ್ದಾಳೆ. ಈ ದೇವಿಯನ್ನು ಪಂಚಮಿಯ ದಿವಸ  ಪೂಜಿಸುವರು. ಈ ದೇವಿಯನ್ನು ಪಂಚಮಿ ಎಂದೂ  ಕೂಡ ಕರೆಯುತ್ತಾರೆ. ಇವಳ ಶರೀರವು ಬಿಳಿಯ ಬಣ್ಣವಾಗಿ, ಮಮತಾಮಯಿಯಾಗಿ, ಮಾತೃಸ್ವರೂಪಿಯಾಗಿ ವಿರಾಜಿಸುತ್ತಿದ್ದಾಳೆ. 

Image

ಗೀತಾಮೃತ - 7

ಅಧ್ಯಾಯ ೨

    ಇಂದ್ರಿಯಾಣಾಂ ಹಿ ಚರತಾಂ ಯನ್ಮನೋ ನು ವಿಧೀಯತೇ/

 ತದಸ್ಯ ಹರತಿ ಪ್ರಜ್ಞಾಂ  ವಾಯುರ್ನಾವಮಿವಾಂಭಸಿ//೬೭//

Image

ಆ ಹೆಜ್ಜೆ ಈ ಹೆಜ್ಜೆ

 

ಹಿಂದೊಮ್ಮೆ ಇದ್ದ ಹಿಂದಿನ ಬಾಗಿಲಿಗೆ

ಇಲ್ಲದ ಬೀಗದ ಕೈ ಹುಡುಕುವ

ಮೊದಲು ಸೆರೆಮನೆಯಾಗಿತ್ತೆಂದು

ಬಳಲುವದೇಕೆ

ಅಳುವದೇಕೆ

 

ಮುಂದೆ ತಲೆ ಎತ್ತಿ ನೋಡಿದಂತೆಲ್ಲ

ಇರುವಷ್ಟು ದಿನ ಈ ಕಡೆಯಿಂದ

ಆ ಕಡೆಯವರೆಗೆ

ನಾವಿಬ್ಬರೂ

ಇದ್ದ ಮೇಲೆ ಹರಟುವದೆಷ್ಟು 

ನೀ

ಬಳಿ ಇಲ್ಲವಾದ ಮೇಲೆ

 

ಎಲ್ಲರ ಪಾಡಂತೆ ನನ್ನದಾಗಿರಲಿಲ್ಲ

ನಿನ್ನಯವೇ ಎಲ್ಲ ಕಟ್ಟುಪಾಡುಗಳು

ಅಲ್ಲಲ್ಲಿ ಹೂತು ಹೋಗಿದ್ದರೂ

ನನ್ನನ್ನೇ ನಿರುಕಿಸುತ್ತ ನಿಟ್ಟುಸಿರಿನಲ್ಲೇ

ಅಳಿದುಳಿದ ಕನಸುಗಳನು

ಎಣಿಸುತ್ತ,

ಅಣಕಿಸುತ್ತ ಅತ್ತಿತ್ತ ಹರಡಿಕೊಂಡವು

 

ನಿನ್ನನ್ನೇ ತಿಳಿದುಕೊಳ್ಳಲು ಸಕಲ

ಝೆನ್ ಪ್ರಸಂಗ: ತಗೊಂಡವನಲ್ಲ, ಕೊಟ್ಟವನು ಕೃತಜ್ನನಾಗಿರಬೇಕು

ಆ ಗುರುಮಠದಲ್ಲಿ ನೂರಾರು ಶಿಷ್ಯರು. ಅಲ್ಲಿನ ಬೋಧನಾ ಭವನದ ಸ್ಥಳ ಸಾಕಾಗುತ್ತಿರಲಿಲ್ಲ. ವಿಶಾಲವಾದ ಕಟ್ಟಡ ಕಟ್ಟಿಸಲು ಗುರುವಿಗೆ ಹಣ ಬೇಕಾಗಿತ್ತು.

ಆಗ ಅಲ್ಲಿಗೆ ಬಂದ ವ್ಯಾಪಾರಿಯೊಬ್ಬ ಗುರುಗಳಿಗೆ ಸಹಾಯ ಮಾಡಲು ನಿರ್ಧರಿಸಿದ. ಆತ ಐನೂರು ಚಿನ್ನದ ನಾಣ್ಯಗಳನ್ನು ಮಠಕ್ಕೆ ಕಾಣಿಕೆಯಾಗಿ ಸಮರ್ಪಿಸಿದ.

“ಆಗಲಿ, ಮಠಕ್ಕಾಗಿ ಇದನ್ನು ಸ್ವೀಕರಿಸುತ್ತೇನೆ” ಎಂದರು ಅಲ್ಲಿನ ಗುರುಗಳು. ಇದನ್ನು ಕೇಳಿ ಆ ವ್ಯಾಪಾರಿ ಪೆಚ್ಚಾದ. ಒಂದಲ್ಲ, ಎರಡಲ್ಲ, ಐನೂರು ಚಿನ್ನದ ನಾಣ್ಯ ಸಮರ್ಪಿಸಿದ್ದೇನೆ. ಈ ಗುರುಗಳು ಒಂದೇ ಒಂದು ಕೃತಜ್ನತೆಯ ಮಾತು ಹೇಳುತ್ತಿಲ್ಲವಲ್ಲ ಎಂದುಕೊಂಡ ವ್ಯಾಪಾರಿ. ಕೊನೆಗೆ ತಡೆಯಲಾಗದೆ ವ್ಯಾಪಾರಿ ಹೇಳಿದ, "ಗುರುಗಳೇ, ಆ ಚೀಲದಲ್ಲಿ ಐನೂರು ಚಿನ್ನದ ನಾಣ್ಯಗಳನ್ನು ನಿಮಗೆ ಕೊಟ್ಟಿದ್ದೇನೆ.”

Image

*ಕುಟುಂಬದ ಮಹತ್ವ*

ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ,

ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ.

ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ,

ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ.

ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ,

Image

ಕೂಷ್ಮಾಂಡ ದೇವಿಗೆ ಜೈ ಎನ್ನಿರಿ

ಕೂಷ್ಮಾಂಡ ದೇವಿಯನು ಮನದಲ್ಲಿ ಸ್ಮರಿಸುತಲಿ

ಧ್ಯಾನಿಸುವೆ ವಂದಿಸುತ ಜಗನ್ಮಾತೆಯೆ ||

 

ಅಷ್ಟಭುಜ ದೇವಿಯನು ಕೆಂಬಣ್ಣ ಪುಷ್ಪದಲಿ

ಪೂಜಿಸುತ ನಲಿಯುವೆವು ಹರುಷದಲ್ಲಿ

ವ್ಯಾಘ್ರವಾಹಿನಿಯಾಗಿ ಬರುತಿಹಳು ತಾನಿಂದು