ಅಮ್ಮ ನೀನು ಅಮೃತದಾತೆ
ಅಮ್ಮನೊಲವೆ ಸದಾ ಆಸರೆ
ಅನುರಾಗಕದು ನಿತ್ಯ ಕೈಸೆರೆ
ಅಮೃತವನೀವ ದಿವ್ಯ ಸಕ್ಕರೆ
ಅಕ್ಷಯಪಾತ್ರೆಯು ತಥ್ಯಧಾರೆ...
ಅವಲೊಡಲು ಸ್ವರ್ಗವದು
- Read more about ಅಮ್ಮ ನೀನು ಅಮೃತದಾತೆ
- Log in or register to post comments
ಅಮ್ಮನೊಲವೆ ಸದಾ ಆಸರೆ
ಅನುರಾಗಕದು ನಿತ್ಯ ಕೈಸೆರೆ
ಅಮೃತವನೀವ ದಿವ್ಯ ಸಕ್ಕರೆ
ಅಕ್ಷಯಪಾತ್ರೆಯು ತಥ್ಯಧಾರೆ...
ಅವಲೊಡಲು ಸ್ವರ್ಗವದು
ಮೊದಲಿಗೆ ಗೋಧಿಯನ್ನು ೧-೨ ಗಂಟೆ ನೆನೆಸಿ. ಹೆಚ್ಚು ಮೆದುವಾಗುವುದು ಬೇಡ. ನೆನೆದ ಮೇಲೆ ಅದಕ್ಕೆ ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿರಿ. ನಯವಾಗಿ ರುಬ್ಬ ಬಾರದು. ಗೋಧಿ ತುಂಡು ಕೈಗೆ ಸಿಗುವಂತಿರಬೇಕು. ರುಬ್ಬಿದ ಬಳಿಕ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಕಾಯಿತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಒಂದು ಕಾವಲಿಯನ್ನು ಬಿಸಿಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ. ರುಬ್ಬಿದ ಮಿಶ್ರಣವನ್ನು ಕೈಯಿಂದಲೇ ಕಾವಲಿಯ ಮೇಲೆ ತಟ್ಟಬೇಕು. ಕಾಯುವಾಗ ರೊಟ್ಟಿಯ ಮೇಲೆ ಸ್ವಲ್ಪ ತುಪ್ಪ ಹಾಕಿದರೆ ರುಚಿ ಮತ್ತು ಪರಿಮಳ ಚೆನ್ನಾಗಿರುತ್ತದೆ.
ಗೋಧಿ ಕಾಳು ೧ ಕಪ್, ಸಿಹಿಗೆ ಬೇಕಾದಷ್ಟು ಬೆಲ್ಲ, ಕಾಯಿ ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ
ಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವುಗಳು. ಆದರೆ ಒಮ್ಮೊಮ್ಮೆ ಈ ಪ್ರಕೃತಿ ಇರುವುದೇ ನಮಗಾಗಿ ಎಂಬ ಭ್ರಮೆಯಿಂದ, ಅದರ ನಾಶಕ್ಕೆ ಹೆಜ್ಜೆಯಿಟ್ಟುಬಿಡುತ್ತೇವೆ. ಹೀಗೆ ಒಬ್ಬೊಬ್ಬರಾಗಿ ಅಧಿಕಾರ ಚಲಾಯಿಸಿ *ದೈವತ್ವ* ಹೋಗಿ ಇಂದು ವಿನಾಶದತ್ತ ಬಂದು ನಿಂತಿದೆ. ಗಾಳಿ ನಮ್ಮ ಉಸಿರು, ಉಸಿರೇ ದೇವರು, ಉಸಿರು ನಿಂತಾಗ ಏನಿದೆ, ಏನಾಗುತ್ತದೆ, ಎಲ್ಲವನ್ನೂ ಬಲ್ಲವರು ನಾವು.ಆದರು ಗೊತ್ತಿದ್ದು ಗೊತ್ತಿದ್ದೂ ಉಸಿರಿಗೆ ಸಂಚಕಾರ ತರುವ ಕೆಲಸಕ್ಕೆ ಕೈ ಹಾಕಿದ್ದೇವೆ. ನೀರು, ಆಕಾಶ, ಭೂಮಿ ಎಲ್ಲವೂ ನಮಗೆ ಬೇಕು, ಎಲ್ಲದರಲ್ಲಿಯೂ ಆ ಭಗವಂತನನ್ನು ಕಾಣುವವರು ನಾವು.
೨೩.ಪ್ರವಾಸಿಗಳ ಆಕರ್ಷಣೆಯ ತಾಣ ಭಾರತ
ವಿಶಾಲ ಭಾರತದ ಮನಮೋಹಕ ಪ್ರಾಕೃತಿಕ ತಾಣಗಳು ಮತ್ತು ವೈವಿಧ್ಯಮಯ ಪಾರಂಪರಿಕ ತಾಣಗಳು ವಿವಿಧ ದೇಶಗಳ ಲಕ್ಷಗಟ್ಟಲೆ ಪ್ರವಾಸಿಗಳನ್ನು ಪ್ರತಿ ವರುಷವೂ ಆಕರ್ಷಿಸುತ್ತವೆ.
ಹಿಮ ಆವರಿಸಿದ ಪರ್ವತಗಳು, ದೀರ್ಘ ಸಮುದ್ರ ತೀರಗಳು, ಹಿನ್ನೀರಿನ ಪ್ರದೇಶಗಳು, ಹಚ್ಚಹಸುರಿನ ಕಾಡುಗಳು, ನದಿದಡಗಳು, ಸರೋವರಗಳು - ಇವೆಲ್ಲ ಪ್ರಾಕೃತಿಕ ತಾಣಗಳು ಪ್ರವಾಸಿಗಳನ್ನು ದಂಗುಬಡಿಸುತ್ತವೆ. ವನ್ಯಜೀವಿ ರಕ್ಷಣಾ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಚಾರಿತ್ರಿಕ ಸ್ಥಳಗಳು, ಯುನೆಸ್ಕೋ ಪಾರಂಪರಿಕ ತಾಣಗಳು - ಇವೆಲ್ಲವೂ ಭಾರತದ ಆಕರ್ಷಣೆಯನ್ನು ಹಲವು ಪಟ್ಟು ಹೆಚ್ಚಿಸಿವೆ.
ಚೆಲುವೆ ಮನದೊಳು
ಚೆಲುವ ಬಂದನು
ಚೆಲುವಿನಾ ನಗು ಸೂಸುತ
ಚೆಲುವ ಸುಮವದು
ಚೆಲುವ ಹರಡಲು
ಚೆಲುವು ಬಂದಿತು ಬಳುಕುತ
ಪ್ರತಿಯೊಬ್ಬರ ಜೀವನದಲ್ಲಿ 'ಮೊದಲು' ಎಂಬ ಪದ ಆಗಾಗ ಬಂದೇ ಬರುತ್ತದೆ. ಮೊದಲ ಮಾತು, ಮೊದಲ ಅಕ್ಷರ, ಮೊದಲ ಹಲ್ಲು, ಮೊದಲ ಶಾಲೆ, ಮೊದಲ ಟೀಚರ್, ಮೊದಲ ಪ್ರೇಮ, ಮೊದಲ ಕೆಲಸ, ಮೊದಲ ಮಗು.. ಹೀಗೆ ಪಟ್ಟಿ ಎಂದೂ ಮುಗಿಯುದೇ ಇಲ್ಲ. ಕಥೆ, ಕವನ ಬರೆಯಲು ಅಥವಾ ಲೇಖಕನಾಗಲು ನೀವು ಚತುರ ಬರಹಗಾರರೇ ಆಗಬೇಕಿಲ್ಲ. ಹಲವರು ಮಂದಿ ಪ್ರತೀ ದಿನ ತಮ್ಮ ಚಟುವಟಿಕೆಗಳ ಬಗ್ಗೆ ಡೈರಿ ಬರೆಯುತ್ತಾರೆ. ಅದರಲ್ಲಿನ ಕೆಲವೊಂದು ಅಂಶಗಳು ನಿಜಕ್ಕೂ ಚೆನ್ನಾಗಿರುತ್ತದೆ. ಸತ್ಯವೆಂದರೆ ಅವರೆಲ್ಲಾ ಬರಹವನ್ನು ತಮ್ಮ ಉದ್ಯೋಗ ಅಥವಾ ಹವ್ಯಾಸವಾಗಿ ತೆಗೆದುಕೊಂಡಿಲ್ಲ ಅಷ್ಟೇ. ಅವರಿಗೆಲ್ಲಾ ಅವರದ್ದೇ ಆದ ಬೇರೆ ಬೇರೆ ಕೆಲಸ ಕಾರ್ಯಗಳು ಇರುತ್ತವೆ. ಆದರೂ ಡೈರಿ ಬರೆಯುವುದನ್ನು ತಪ್ಪಿಸಿಕೊಳ್ಳುವುದಿಲ್ಲ.
*ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಿತ ಸಂಕಲನ "ಅಪ್ಪೆಗ್ ಬಾಲೆದ ಓಲೆ"*
# 1993ರಲ್ಲಿ ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದ " ತುಳುಕೂಟೊ ಇಟ್ಟೆಲ್"ಎಂಬ ಸಂಸ್ಥೆಯು 1997ರಲ್ಲಿ "ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್" ಎಂಬ ಹೊಸನಾಮಧೇಯ ಪಡೆದುಕೊಂಡು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು. ಈ ಸಂಸ್ಥೆಯು ತನ್ನ ಹತ್ತನೇ ವರ್ಷದ ಸದವಸರದಲ್ಲಿ ನಡೆಸಿದ ಸ್ಪರ್ಧೆಯಾಗಿತ್ತು "ಅಪ್ಪೆಗ್ ಬಾಲೆದ ಓಲೆ".
ಕುಸುಮಾಕರ ದೇವರಗೆಣ್ಣೂರು -ಇವರು ಸುಪ್ರಸಿದ್ಧ ಸಾಹಿತಿಯಂತೆ. ಅಂತರ್ಜಾಲದಲ್ಲಿ ಹುಡುಕಿದರೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದೀತು. ಈ ಪುಸ್ತಕವನ್ನು ಕರ್ನಾಟಕ ಸರಕಾರವು ಬಹಳ ಕಡಿಮೆ ಬೆಲೆ (೨೫ ರೂ ) ಗೆ ಮಾರಾಟ ಮಾಡಿತು - ಕರ್ನಾಟಕಕ್ಕೆ 50 ವರ್ಷಗಳ ಆದ ಸಂದರ್ಭದಲ್ಲಿ,
ದಾನ
ಪಡೆಯುವುದು
ಕೊಡುವುದು
ಎರಡೂ
ಶ್ರೇಷ್ಠವೆ !
***