ಕಾಲರಾತ್ರಿದೇವಿ (ಮಹಾ ಕಾಳಿ)

ಕಾರ್ಗತ್ತಲ ದೇವಿ ದಿವ್ಯತಥ್ಯ ವಿಶ್ವಹಾರ್ತಿ

ಶುಭವನ್ನೆ ಕೋರುತಿರುವೆ ದೇವಿ ಶುಭಂಕರಿ

ಕರಮುಗಿದು ಬೇಡುವೆ ನಿನ್ನನ್ನೆ ವಿಶ್ವಕಾರ್ತಿ

ದುಷ್ಟರಿಗೆ ದುಷ್ಕೃತ್ಯ ತೋರುವ ಭಯಂಕರಿ||

 

ಚಿಗುರೆಲೆಗಳ ತಂಬುಳಿ

Image

ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು, ಬಾಳೆ ಹೂವು ಎಲ್ಲವನ್ನು ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಹುರಿಯಬೇಕು. ಒಂದು ಕಪ್ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, 4 ಗಾಂಧಾರಿ ಮೆಣಸು, ಸಣ್ಣ ತುಂಡು ಹಸಿ ಶುಂಠಿ, ಚಿಟಿಕೆ ಜೀರಿಗೆ ಮತ್ತು ಅರಶಿನಹುಡಿ ಸೇರಿಸಿ ನುಣ್ಣಗೆ ರುಬ್ಬಿ, ಎರಡು ಸೌಟು ಮಜ್ಜಿಗೆ ಸೇರಿಸಿ ಮಿಶ್ರ ಮಾಡಬೇಕು.ಒಗ್ಗರಣೆ ಕೊಟ್ಟರೂ ಕೊಡದಿದ್ದರೂ ಆಗುತ್ತದೆ. ಸಾಸಿವೆ, ಒಣಮೆಣಸು, ಬೇಕಾದರೆ ಬೆಳ್ಳುಳ್ಳಿ ಹಾಕಬಹುದು. ಹಾಕಿ ತುಪ್ಪದಲ್ಲಿ ಒಗ್ಗರಣೆ ಕೊಡಬೇಕು.

ಬೇಕಿರುವ ಸಾಮಗ್ರಿ

ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು ,ಬಾಳೆ ಹೂವು ಎಲ್ಲವನ್ನು ಚೆನ್ನಾಗಿ ಸ್ವಚ್ಛ ಮಾಡಿರಿ. 

 

ನಮ್ಮ ಹೆಮ್ಮೆಯ ಭಾರತ (21 - 22)

೨೧.ಭಾರತದ ಅದ್ಭುತ ವನ್ಯಜೀವಿಗಳು
ಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು.

ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜೀವವೈವಿಧ್ಯತೆಗೆ ಭಾರತವೇ ತವರೂರು. ಹಾಗೆಯೇ, ಜಗತ್ತಿನ ಸುಮಾರು ಶೇಕಡಾ ೩೩ರಷ್ಟು ಸಸ್ಯ ಪ್ರಭೇದಗಳು (ಸ್ಪಿಷೀಸ್) ಭಾರತದಲ್ಲಿ ಮಾತ್ರ ಇವೆ.

ಭಾರತದಲ್ಲಿ ೩೭೨ ಸಸ್ತನಿಗಳ ಸ್ಪಿಷೀಸ್‌ಗಳಿವೆ. ಆನೆ, ಭಾರತೀಯ ಕಾಡುಕೋಣ, ಖಡ್ಗಮೃಗ, ಹಿಮಾಲಯದ ಕುರಿ ಇವುಗಳಲ್ಲಿ ಸೇರಿವೆ. ದೊಡ್ಡ ಬೆಕ್ಕುಗಳಾದ ಹುಲಿ ಮತ್ತು ಸಿಂಹಗಳೂ ಭಾರತದಲ್ಲಿವೆ.

Image

ನವರಾತ್ರಿಯ ಆರನೆಯ ದಿನದ ಪೂಜಾ ಮಾತೆ- ಕಾತ್ಯಾಯಿನಿ ದೇವಿ

ನವರಾತ್ರಿಯ ಆರನೆಯ ದಿವಸ ಮಾತೆಯನ್ನು ಕಾತ್ಯಾಯಿನಿಯಾಗಿ ಆರಾಧಿಸಲಾಗುವುದು.ಕಾತ್ಯಾಯಿನಿ ಮಾತೆಯ ಸ್ವರೂಪವು ಉಗ್ರರೂಪವಾಗಿರುತ್ತದೆ. ಸಿಂಹವಾಹಿನಿಯಾದ ಈಕೆ ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿಯೂ ಹೌದು, ಮಾತೃ ಸ್ವರೂಪಿಣಿಯೂ ಹೌದು. ಆದರೆ ಶಿಷ್ಟರ ಪಾಲಿಗೆ ಮಾತ್ರ ಸಂಹಾರಕಾರಿಣಿಯಾದ ಮಾತೆ ದುರ್ಗೆಯಾಗಿರುವಳು. ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾಕ್ರತಿಯ ಅಲಂಕಾರವನ್ನು ಹೊಂದಿರುತ್ತಾಳೆ.

 *ಪುರಾಣದ ಪ್ರಕಾರ*-*ಕಾತ್ಯಾಯಿನಿ ಮಾತೆಯ ಕಥೆ* 

Image

ಒಂದು ಒಳ್ಳೆಯ ನುಡಿ (14) - ಬೆನ್ನ ಹಿಂದಿನ ಶಕ್ತಿ

ನಾವೆಲ್ಲರೂ ದೇವರ ಇಚ್ಛೆಯಂತೆ, ನಾವು ನಾವು ಮಾಡಿದ ಪಾಪ-ಪುಣ್ಯಗಳಿಗನುಗುಣವಾಗಿ ಈ ಭೂಮಿ ಮೇಲೆ ಜನ್ಮವೆತ್ತಿದವರಾಗಿದ್ದೇವೆ. ಈ ಮನುಷ್ಯ ರೂಪದಲ್ಲಿ ಬಂದ ಮೇಲೆ ನಮ್ಮ ಕರ್ತವ್ಯಗಳು, ಜವಾಬ್ದಾರಿಗಳು ಬಹಳಷ್ಟಿದೆ. ಅದನ್ನೆಲ್ಲ ನಾವು ನಿಭಾಯಿಸಲೇಬೇಕು. ಯಾವುದೇ ಕಷ್ಟ ಬಂದಾಗ, ನೋವು ಪಟ್ಟಾಗ ಮಾತ್ರ ಭಗವಂತನನ್ನು ಸ್ಮರಿಸಿಕೊಳ್ಳುತ್ತೇವೆ.

Image

ಊಟವಾದ ನಂತರ ಏನು ಮಾಡಬಾರದು...?

ಮದ್ಯಾಹ್ನ ಅಥವಾ ರಾತ್ರಿ ನಾವು ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದೋ, ವ್ಯಾಯಾಮ ಮಾಡುವುದೋ, ನೀರು ಕುಡಿಯೋದೋ ಮಾಡುತ್ತೇವೆ. ಆದರೆ ಊಟ ಆದ ತಕ್ಷಣ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು ಎಂದು ಬಲ್ಲವರ ಅನಿಸಿಕೆ.

Image

ಸವೆಯದ ದಾರಿ -ಆತ್ಮ ವೃತ್ತಾಂತ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ರಮಾನಂದ ಬನಾರಿ
ಪ್ರಕಾಶಕರು
ತಾರಾ ಪ್ರಿಂಟ್ಸ್, ಮೈಸೂರು
ಪುಸ್ತಕದ ಬೆಲೆ
ರೂ.250-00, ಮುದ್ರಣ :2017

*ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"*

ಕಾತ್ಯಾಯಿನಿ ದೇವಿ

ದೇವಿಯೆ ಕಾಪಾಡು ಕರವನು ಮುಗಿದೆವು

ನೀ ಸಲಹುತಿರು ಮಾತೆ ನಮ್ಮನೆಲ್ಲಾ

ಅಭಯಹಸ್ತ ನೀಡು ತಾಯಿ ಸದಾ ಬೇಡುವೆ

ದೈನ್ಯತೆಯಲಿ ಬೇಡುವೆ ಮಹಾದೇವಿ...

 

ಕಾತ್ಯಾಯಿನಿ ತಾಯಿ ಚತುರ್ಭುಜ ಮಾತೆಯೆ

ಪುಸ್ತಕನಿಧಿ: - 11.ಡಿ ವಿ ಜಿ ಅವರ e-ಪುಸ್ತಕ 'ಪುರುಷ ಸೂಕ್ತ'

 

 

ಈ ಎರಡು ಸಂಗತಿಗಳನ್ನು ನೀವು ಎಲ್ಲಿಯಾದರೂ ಓದಿರಬಹುದು.
1) ಅವನಿಗೆ ಸಾವಿರ ತಲೆಗಳು, ಸಾವಿರ ಕಣ್ಣುಗಳು, ಸಾವಿರ ಕೈಗಳು, ಸಾವಿರ  ಕಾಲುಗಳು  ಇತ್ಯಾದಿ
2) ಅವನ ಮುಖದಿಂದ ಬ್ರಾಹ್ಮಣರೂ,  ಅವನ ತೋಳುಗಳಿಂದ ಕ್ಷತ್ರಿಯರೂ  ಅವನ ತೊಡೆಗಳಿಂದ ವೈಶ್ಯರೂ  ಅವನ ಅಡಿಗಳಿಂದ ಶೂದ್ರರೂ  ಹುಟ್ಟಿದರು.   

ಇವು ಪುರುಷಸೂಕ್ತದಲ್ಲಿ ಬರುತ್ತವೆ.  ಇತ್ತೀಚೆಗೆ ಗೂಗಲ್ - e-ಪುಸ್ತಕಗಳಲ್ಲಿ ಡಿ ವಿ ಜಿ ಅವರು ಬರೆದ ಈ ಪುಸ್ತಕವು ಗಮನ ಸೆಳೆಯಿತು. ಗೂಗಲ್ ನ e-ಪುಸ್ತಕಗಳ ಅನುಕೂಲ ವೆಂದರೆ ಖರೀದಿಸುವ ಮೊದಲೇ ಕೆಲವು ಪುಟಗಳನ್ನು sample ಎ೦ದು ಓದುವ ಸೌಲಭ್ಯ ಇದೆ. ಹಾಗೆ ಓದಿ ಪುಸ್ತಕಕ್ಕಾಗಿ ಹಣ ಕೊಡುವ ಬಗ್ಗೆ ನಿರ್ಧರಿಸಬಹುದು.

ಮರಗೆಲಸದ ಶಿಲ್ಪಿ ಹಿರಿಯ ಜಾನಪದ ಕಲಾವಿದ ಶ್ರೀ ಗಂಗಾಧರ ವಿಶ್ವಕರ್ಮ

          ಕಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ವಿಶ್ವಕರ್ಮರು ಯಾಕೆಂದರೆ ನಮ್ಮ ಕನ್ನಡನಾಡು ಹಾಗೂ ದೇಶದಲ್ಲಿಯ ದೇಗುಲಗಳ ಕಲಾವೈಭವ ವಿಶ್ವಕರ್ಮ ವಂಶಜ ಅಮರ ಶಿಲ್ಪಿ ಜಕಾಣಾಚಾರ್ಯ ಅವರು ಮತ್ತು ಅವರ ತಂಡದಿಂದ ಈ ನಾಡಿಗೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು. ಅಂತ ಇತಿಹಾಸ ಹೇಳುತ್ತದೆ. ನಾನು ಈಗ ತಿಳಿಸಲು ಹೊರಟಿರುವ ವಿಷಯ ವಿಶ್ವಕರ್ಮ ವಂಶದಲ್ಲಿ ಹುಟ್ಟಿ ಬೆಳೆದು ಕಲೆಯನ್ನೆ ಉಸಿರಾಗಿಸಿಕೊಂಡು ಬಂದ ಉತ್ತರಕರ್ನಾಟಕದ ಹಿರಿಯ ಕಲಾವಿದರೊಬ್ಬರ ಉನ್ನತ ಜಾನಪದ ಕಲೆಯ ಬಗ್ಗೆ. ಶ್ರೀ ಗಂಗಾಧರ ಬಸಪ್ಪಾ ವಿಶ್ವಕರ್ಮ ಅವರು ತೀರಾ ಬಡತನದಲ್ಲಿ ಬೆಳೆದು ಬಂದವರು ಇವರ ತಂದೆ ಕೂಡ ಒಬ್ಬ ಶಿಲ್ಪಿಯಾದ್ದರಿಂದ ಗಂಗಾಧರ ಕೂಡ ತಮ್ಮ ಬಾಲ್ಯದಲ್ಲಿಯೇ ಶಿಲ್ಪಕಲೆಯನ್ನೆ ಮೈಗೂಡಿಸಿಕೊಂಡವರು.

Image