ಕನ್ನಡ ರಾಜ್ಯೋತ್ಸವದ ಕವನಗಳು

*ರನ್ನ ಚಿನ್ನದ ನಾಡು*

ಕನ್ನಡ ನಾಡಿದು ಚಿನ್ನದ ಬೀಡಿದು

ರನ್ನನು ಜನಿಸಿದ ಪುಣ್ಯನೆಲ|

ಪೊನ್ನನು ಪಾಡಿದ ಜನ್ನನು ಪೊಗಳಿದ

ಕನ್ನಡ ನಾಡಿನ ಪುಣ್ಯಜಲ||೧||

 

ತಾಯಿ ಭಾಷೆ ಕನ್ನಡದ ಉಳಿವಿಗಾಗಿ...

ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು ಕರ್ತವ್ಯಗಳು ನನಗೆ ತಿಳಿದಂತೆ...

Image

ಸಾಗರದಲ್ಲಿ ಹಾಡುವ ಸಾಗರಿ ವೇಲ್

ಸಾಗರದ ದೈತ್ಯ ಸಸ್ತನಿ ಸಾಗರಿ ಎಂಬ ವೇಲ್ ಮುಂಜಾವದಲ್ಲಿ ನೀರಿನಲ್ಲಿ ಈಜಾಡುತ್ತಾ “ಓಹೋ, ಎಂಥ ಚಂದದ ಮುಂಜಾವ” ಎಂದು ಹಾಡಿತು. ಸೂರ್ಯನ ಕಿರಣಗಳು ಶುಭ್ರ ನೀಲಿ ನೀರಿನ ಆಳಕ್ಕೆ ನುಗ್ಗುತ್ತಿದ್ದವು. ಅದು ಅತ್ತಿತ್ತ ಈಜಾಡಿ, ಚಕ್ರಾಕಾರದಲ್ಲಿ ಸುತ್ತಾಡಿ, ಭುಸ್ಸೆಂದು ಸಾಗದಲೆಗಳ ಮೇಲಕ್ಕೆ ಕಂಸಾಕಾರದಲ್ಲಿ ಹಾರಿ ನಾಜೂಕಾಗಿ ಪುನಃ ನೀರಿಗೆ ಇಳಿಯಿತು.

ಹಾಡುವುದು ಮತ್ತು ಸಾಗರದ ನೀರಿನಲ್ಲಿ ನೃತ್ಯ ಮಾಡುವುದೆಂದರೆ ಸಾಗರಿಗೆ ಖುಷಿಯೋ ಖುಷಿ. ಅದರ ನೃತ್ಯ ಚಂದವೋ ಚಂದ. ಆದರೆ ಅದರ ಹಾಡುವಿಕೆ ಮಾತ್ರ ಕರ್ಣಕಠೋರ. ಅದು ಒಂದಾದ ಮೇಲೊಂದರಂತೆ ಹಾಡುಗಳನ್ನು ಹಾಡುವಾಗ ಅದರ ದೊಡ್ಡ ಬಾಯಿ ಇಷ್ಟಗಲ ತೆರೆದುಕೊಳ್ಳುತ್ತಿತ್ತು. ಆದರೆ ಸಾಗರಿಯ ಯಾವ ಹಾಡಿಗೂ ರಾಗವೇ ಇರುತ್ತಿರಲಿಲ್ಲ!

Image

ಫ್ರಮ್ ಪುಲ್ವಾಮಾ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.110.00, ಮುದ್ರಣ: ಮೇ 2019

ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯವರು ಉಗ್ರರ ಪುಲ್ವಾಮಾ ದಾಳಿಯ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್, ನಮ್ಮ ಧೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರ ದಾಳಿ ಹಾಗೂ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ತೋರಿದ ಕೆಚ್ಚು ಇವುಗಳ ಬಗ್ಗೆ ಬರೆದ ಒಂದು ಫುಟ್ಟ ಪುಸ್ತಕವೇ ‘ಫ್ರಮ್ ಪುಲ್ವಾಮಾ’. ಪುಸ್ತಕದ ರಕ್ಷಾಪುಟದಲ್ಲೇ ವಿಂಗ್ ಕಮಾಂಡರ್ ಅಭಿನಂದನ್ ಅವರ ಭಾವಚಿತ್ರವನ್ನು ಮುದ್ರಿಸಿ ಅದಕ್ಕೆ ಧೀರಾಭಿನಂದನ್ ಎಂದು ಗೌರವ ಸಲ್ಲಿಸಿದ್ದಾರೆ. ಆ ಸಮಯ ಕನ್ನಡದ ನ್ಯೂಸ್ ಚಾನೆಲ್ ಆಗಿರುವ ದಿಗ್ವಿಜಯ ನ್ಯೂಸ್ ನ ಸಹಕಾರದಿಂದ ಪುಲ್ವಾಮಾಗೆ ತೆರಳಿದ ರವಿ ಬೆಳಗೆರೆ ವರದಿಯನ್ನೂ ಮಾಡಿದ್ದರು.

ಒಂದು ಒಳ್ಳೆಯ ನುಡಿ (17) - ಸುರಕ್ಷತೆ

*ಸುರಕ್ಷತೆ*ಪದದ ಅರ್ಥ ವಿಶಾಲವಾದ್ದು. ಎಂತಹ ಸುರಕ್ಷತೆ? ಹೇಗಿದ್ದ ಸುರಕ್ಷತೆ? ಯಾಕಾಗಿ? ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗ ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲರ ಬಾಯಿಯಲ್ಲಿ, ವಾರ್ತಾಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಎಲ್ಲಿ ಹೋದರೂ ಹೇಳುವುದು, ಕೇಳುವುದು ಒಂದೇ *ಕೊರೊನಾ*.

Image

ಮಹಾಭಾರತದ ಕಥೆಗಳು - ಶ್ರೀಕೃಷ್ಣನ ಉಪಾಯ

ಈ ಮಹಾಭಾರತ ಕಥೆ ಅನ್ನೋದು ಒಂದು ಮಹಾ ಸಾಗರವಿದ್ದಂತೆ. ಬದುಕಿನ ಪ್ರತಿ ಸಮಸ್ಯೆಗಳಿಗೂ ಪರಿಹಾರ ನೀಡುವ ಸಂಜೀವಿನಿ ಅನಿಸುತ್ತದೆ. ಅದರಲ್ಲಿಯ ಘಟನೆಗಳನ್ನ ಇಂದಿನ ನಮ್ಮ ಜೀವನಕ್ಕೆ ಮೇಳೈಸಿ, ಅರ್ಥೈಸಿ, ಸಮಾಧಾನದಿಂದ ಯೋಚಿಸಿದಾಗ  ಓ ಹೌದಲ್ವಾ ಎನ್ನುವ ಉದ್ಗಾರ ತಾನಾಗೇ ಬರುತ್ತೆ! ಉದಾಹರಣೆಗೆ ಈ ಕುರುಕ್ಷೇತ್ರ ಯುದ್ಧದ ಸಂದರ್ಭವನ್ನೇ ನೋಡಿ..

Image

ಬೇಟೆಗಾರ ಮೃಗಾರಿಯ ಪರಿವರ್ತನೆ

ದೇವರ್ಷಿ ನಾರದರು ತ್ರಿಲೋಕ ಸಂಚಾರಿಗಳು. ಒಮ್ಮೆ ಅವರು ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗಕ್ಕೆ ಹೊರಟಿದ್ದರು. ಪರಿಶುದ್ದ ಭಕ್ತರಾದ ನಾರದರು ಕೃಷ್ಣನನ್ನು ಸ್ಮರಿಸುತ್ತಾ ಕಾಡಿನಲ್ಲಿ ಹೋಗುತ್ತಿರುವಾಗ ಬಾಣದಿಂದ ಗಾಯಗೊಂಡು ನರಳುತ್ತಾ ಬಿದ್ದಿದ್ದ ಜಿಂಕೆಯೊಂದನ್ನು ನೋಡಿದರು. ಮುಂದೆ ಹೋದಂತೆ ಹಲವಾರು ಪ್ರಾಣಿಗಳು ಬಾಣಗಳ ಏಟಿನಿಂದ ಅರೆ ಜೀವವಾಗಿ ಒದ್ದಾಡುತ್ತಿದ್ದುದನ್ನು ಕಂಡು ಮರುಗಿದರು. ಗಾಯಗೊಂಡಿದ್ದ ಪ್ರಾಣಿಗಳ ನೋವನ್ನು ತನ್ನ ನೋವೆಂದು ಪರಿಗಣಿಸಿದ ನಾರದ ಮುನಿಗಳು ಬಾಣದಿಂದ ಪ್ರಾಣಿಗಳನ್ನು ಘಾಸಿಗೊಳಿಸಿದವರು ಯಾರು ಎಂದು ಹುಡುಕತೊಡಗಿದರು. ಆಗ ನಾರದರಿಗೆ ಮರವೊಂದರ ಹಿಂದೆ ಅಡಗಿ ಕುಳಿತಿದ್ದ ಬೇಟೆಗಾರ ಕಾಣಿಸಿದನು.

Image

ಸಮಾಜ ಸೇವೆ ಎಂದರೇನು ?

ನಿಸ್ವಾರ್ಥವೇ ? ತ್ಯಾಗವೇ ? ಸ್ವಾರ್ಥದ ಮುಖವಾಡವೇ ? ವೃತ್ತಿಯೇ ? ಹವ್ಯಾಸವೇ ? ಕರ್ತವ್ಯವೇ ? ವ್ಯಾಪಾರ ವ್ಯವಹಾರವೇ ? ಅಧಿಕಾರ ಹಣ ಪ್ರಚಾರದ ಮೋಹವೇ ? ಪಲಾಯನ ಮಾರ್ಗವೇ ? ನಾಯಕತ್ವದ ಪ್ರದರ್ಶನವೇ ? ಕೆಲಸವಿಲ್ಲದವರ ಅನವಶ್ಯಕ ಓಡಾಟವೇ ? ಹೊಟ್ಟೆ ಪಾಡಿನ ದಾರಿಯೇ ? ಬುದ್ದಿಯ ತೋರ್ಪಡಿಕೆಯೇ ? ಮನಸ್ಸಿನ ಅಹಂನ ತಣಿಸುವಿಕೆಯೇ ? ಜೀವನದ ಸಾಧನೆಯೇ ? ಅನುಭವದ ವಿಸ್ತರಣೆಯೇ ? ಜ್ಞಾನದ ಹಂಚಿಕೆಯೇ ? ಅಧ್ಯಾತ್ಮಿಕ ಧಾರ್ಮಿಕ ಉದ್ದೇಶವೇ ? ಬದುಕಿನ ಸಾರ್ಥಕತೆಯೇ ? ನಿರ್ಭಾವುಕ ಮನಸ್ಥಿತಿಯೇ ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ.

Image

ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ

ಕೆಡು ಮತ್ತು ಪಡು ಧಾತುಗಳನ್ನು ಭಾವನಾಮವಾಗಿ ಪರಿವರ್ತನೆಯಾಗುವಾಗ ಮೊದಲಿನ ಸ್ವರಗಳು ದೀರ್ಘವಾಗುತ್ತವೆ. ಕೆಡು->ಕೇಡು=ಅವನತಿ. ಪಡು->ಪಾಡು=ಅನುಭವ

ಉದಾಹರಣೆಗೆ: ಬೇಱೆಯವರಿಗೆ ಕೇಡು ಮಾಡಬೇಡ. ನಿನಗೇನು ಕೇಡುಗಾಲ ಬಂತೇ?

ಅವನು ಪಟ್ಟ ಪಾಡು ದೇವರೇ ಬಲ್ಲ. 

ನಮೀಬಿಯಾದ ನಿಗೂಢ ವೃತ್ತಗಳು

ನಾವು ವಾಸಿಸುತ್ತಿರುವ ಭೂಮಿಯು ಒಂದು ಅದ್ಬುತವಾದ ಗ್ರಹ. ಈ ಗ್ರಹದಲ್ಲಿ ವಿಜ್ಞಾನದ ಊಹೆಗೂ ನಿಲುಕದ ಹಲವಾರು ಸಂಗತಿಗಳನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಈಗಾಗಲೇ ನಾನು ‘ಸಂಪದ'ದಲ್ಲಿ ಡೆವಿಲ್ಸ್ ಕೆಟಲ್, ಕಲಾಚಿಯ ನಿದ್ರಾನಗರ, ಮರದ ಮೇಲೆ ಒಂದು ಮರ ಬೆಳೆದ ಪ್ರಸಂಗ, ಹೆಸ್ಡಾಲೆನ್ ಲೈಟ್ಸ್ ಗಳು ಎಂಬ ಅಪರೂಪದ ಊಹೆಗೂ ನಿಲುಕದ ಕೆಲವು ಸಂಗತಿಗಳನ್ನು ಬರೆದಿರುವೆ. ಈ ಸಾಲಿಗೆ ಸೇರುವ ಇನ್ನೊಂದು ಸಂಗತಿಯೆಂದರೆ ನಮೀಬಿಯಾ ದೇಶದ ನಿಗೂಢ ವೃತ್ತಗಳು.

Image