ಝೆನ್ ಪ್ರಸಂಗ: ಗುರು, ಶಿಷ್ಯರಿಗೆ ಒಂದೇ ಆಹಾರ

ಝೆನ್ ಗುರು ಬಂಕೆಯವರಿಗೆ ವಯಸ್ಸಾಯಿತು. ಆಗ ಅವರ ಅಡುಗೆಯ ಮೇಲ್ವಿಚಾರಕ ಮತ್ತು ಸ್ವತಃ ಒಬ್ಬ ಭಿಕ್ಕು (ಬೌದ್ಧ ಸನ್ಯಾಸಿ) ಆದ ದೈರ್ಯೋಗೆ ಅನಿಸಿತು: ಗುರುಗಳ ಆರೋಗ್ಯ ಸುಧಾರಿಸಲಿಕ್ಕಾಗಿ ಅವರಿಗೆ ಉತ್ತಮ ಆಹಾರ ನೀಡಬೇಕು ಎಂದು.

ಹಾಗಾಗಿ, ರುಚಿರುಚಿಯಾದ ಹಾಗೂ ಪುಷ್ಟಿಕರವಾದ ಅಡುಗೆ ಸಿದ್ಧಪಡಿಸಿ ಗುರು ಬಂಕೆಯವರಿಗೆ ಬಡಿಸಲಾಯಿತು. ತಮ್ಮ ಮುಂದೆ ತಂದಿಟ್ಟ ಆಹಾರವನ್ನು ನೋಡಿದ ಗುರು ಬಂಕೆಯವರು ದೈರ್ಯೋ ಅವರನ್ನು ಕರೆಯಿಸಿದರು. ತನಗೆ ಮಾತ್ರ ಯಾಕೆ ಒಳ್ಳೆಯ ಆಹಾರ ನೀಡಲಾಗಿದೆ ಎಂದು ಪ್ರಶ್ನಿಸಿದರು.

Image

ಬಲೆಯಿದೆ ಎಚ್ಚರ

*ಬಲೆಯಿದೆ ಎಚ್ಚರ* (ಲಲಿತ ರಗಳೆ)

ಗಂಧವತಿ ಮೇಲೊಂದು ಜೀವಿ ಕುಳಿತಿದೆಯಲ್ಲ
ಚಂದದಿಂದಲಿ ಸುತ್ತ ಗಮನಿಸುತಲಿದೆಯಲ್ಲ
ಬೇಟೆಯನ್ನರಸುತ್ತ ಬಂದು ಸೇರಿದೆ ಬುವಿಗೆ
ನೋಟವನು ಹಾಯಿಸುತ ಕರೆಯುತಿದೆಯೇ ಬಳಿಗೆ

ಬಲೆಯ ಬೀಸುತ ಕೈಯ ಚಳಕವನು ತೋರುತಿದೆ
ತಲೆಯೊಳಗೆ ಯೋಚನೆಯು ಹಳಿತಪ್ಪಿ ಸಾಗುತಿದೆ
ಅರಿಯದೆಯೆ ಬೀಳುವುವು ಮುಗ್ಧ ಹುಳುಗಳು ಕೆಲವು
ಮರೆಯಲ್ಲಿ ನಿಂತ ಜೇಡಕೆ ತಾನೆ ನಿಜ ಗೆಲುವು

ಹಿಂದಿನಿಂದಲಿ ಬಂದು ಬೆನ್ನನಿರಿಯುವ ಜನರು
ಮುಂದೆ ನಿಲ್ಲುತ ಹೊಗಳಿಯಟ್ಟಕೇರಿಸುವವರು
ಗೊಂದಲವ ಮೂಡಿಸುತ ಹತ್ತಿರಕೆ ಕರೆವವರು
ಸಂದೇಹವೇ ಬೇಡ ಮೋಸದೊಳ ಕೆಡಹುವರು

ಕಥಾ ಲೋಕ:ಮತ್ತೆ ನೆನಪಾದಳು ಕಪ್ಪು ಹುಡುಗಿ

ಯಾವುದೋ ಪತ್ರಿಕಾ ವರದಿ ಮಾಡಲು ನಾನು ಆ ದಿನ ದಾವಣಗೆರೆಯಲ್ಲಿದ್ದೆ. ಪ್ರಗತಿಪರ ಕೃಷಿಕರೊಬ್ಬರ ಸಂದರ್ಶನ ಮುಗಿಸಿ ಅಲ್ಲೇ ಸೈಬರ್‍ನಲ್ಲಿ ಕುಳಿತು ವರದಿಯನ್ನು ಬರೆದು ಫೋಟೋ ವರದಿ ಎಲ್ಲಾ ಕಚೇರಿಗೆ ಮೇಲ್ ಮಾಡಿದೆ. ನನಗೆ ರಾತ್ರಿ ಬಸ್‍ಗೆ ಟಿಕೆಟ್ ಬುಕ್ ಆಗಿತ್ತು. ಸಮಯ ನೋಡಿದೆ ಬೆಳಿಗ್ಗೆ 11 ಗಂಟೆ. ಇನ್ನೂ ತುಂಬಾ ಸಮಯವಿದೆ ಎಂದು ನಮ್ಮ ಪತ್ರಿಕಾ ಏಜೆಂಟ್ ಅಣ್ಣಪ್ಪನವರಿಗೆ ಫೋ ಮಾಡಿದೆ. ಬಿಡುವಾಗಿದ್ರೆ ಒಮ್ಮೆ ಗಾಂಧಿ ಸರ್ಕಲ್ ಕಡೆ ಬರ್ತೀರಾ ಅಂದೆ. ಮಧ್ಯರಾತ್ರಿಯಲ್ಲೂ ಎಬ್ಬಿಸಿ ಹೊರಡೋಣ್ವಾ ಎಂದರೆ ಎಲ್ಲಿಗೆ ಎಂದು ಕೇಳದೇ ಹೊರಟು ಬಿಡುವ ಆಸಾಮಿ ಅವನು.

Image

“ಭಾರತ ಬಿಟ್ಟು ತೊಲಗಿ": ಆಗಸ್ಟ್ ೧೯೪೨ರ ಕ್ರಾಂತಿ ಕಹಳೆ

"ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ ಘೋಷಣೆ, ೮ ಆಗಸ್ಟ್ ೧೯೪೨ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು ಕಾರಣವಾಯಿತು.

ಅಲ್ಲಿಯ ವರೆಗೆ, ಭಾರತೀಯರಿಗೆ ಆಡಳಿತದಲ್ಲಿ ಭಾಗಶಃ ಸ್ವಾತಂತ್ರ್ಯ ನೀಡುವ ಪ್ರಸ್ತಾಪಗಳನ್ನು ಚರ್ಚಿಸಲಾಗುತ್ತಿತ್ತು. ಆದರೆ, “ಕ್ವಿಟ್ ಇಂಡಿಯಾ" ಅಥವಾ “ಭಾರತ್ ಛೋಡೋ” ಆಂದೋಲನ ಭಾರತೀಯರಿಗೆ ಬೇಕಾದ್ದು ಸಂಪೂರ್ಣ ಸ್ವಾತಂತ್ರ್ಯ ಎಂಬುದನ್ನು ಇಡೀ ಜಗತ್ತಿಗೆ ಘೋಷಿಸಿ, ೧೫ ಆಗಸ್ಟ್ ೧೯೪೭ರಂದು ಭಾರತ ಸ್ವತಂತ್ರವಾಗಲು ಕಾರಣವಾಯಿತು.  

Image

ಶಿಕ್ಷಣದ ಬಗ್ಗೆ ಎರಡು ಕವನಗಳು

ವಿದ್ಯಾಗಮ

ವಿದ್ಯಾಗಮದಲಿ ನಡೆದಿದೆ ತರಗತಿ

ವದ್ಯಾ ಭಾಷೆಯ ಬಿತ್ತುತಲಿ

ಸದ್ಯದಿ ನೂತನ ಯೋಜನೆ ಬಂದಿದೆ

ಮದ್ಯೆಯೆ ಪಾಠವ ಹೇಳುತಲಿ..||

 

ಹಾಸ್ಯ ಅಂದರೆ ಇದು . .

ಒಂದು ಸಲ ಒಬ್ಬ ಹುಡುಗಿ ವಯಸ್ಸಾದ ತನ್ನ ತಾಯಿಯ ಜೊತೆ ವರಾಂಡಾ ದಲ್ಲಿ ಕುಳಿತಿದ್ದಳು. ಆವಾಗ ಅಲ್ಲಿಯೇ ಅವಳ ಬಾಯ್ ಫ್ರೆಂಡ್ ಬಂದು ಬಿಟ್ಟ.

ಆ ಹುಡುಗಿ ತನ್ನ ಬಾಯ್ ಫ್ರೆಂಡ್ ಗೆ ಹೀಗೆ ಹೇಳಿದಳು . .

 

" ನೀವು ರಾಮ್ ಪಾಲ್ ಯಾದವ್ ಅವರ ಪುಸ್ತಕ, " Dad is at Home " ತಂದಿದ್ದೀರಾ ? "

 

Image

ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?

ದಿನವಿಡೀ ಶ್ರಮ ವಹಿಸಿ ದುಡಿದು ಮನೆಗೆ ಮರಳುವ ನೀವು ಸುಖವಾದ ನಿದ್ರೆಯ ಆಶೆಯಲ್ಲಿರುತ್ತೀರಿ. ಆದರೆ ನೀವು ಹಾಸಿಗೆಯಲ್ಲಿ ಮಲಗಿದಾಗ ಎಷ್ಟು ಸಮಯವಾದರೂ ನಿದ್ರಾದೇವಿ ನಿಮ್ಮನ್ನು ಆವರಿಸದೇ ಇದ್ದಾಗ, ಇಡೀ ರಾತ್ರಿ ಹೊರಳಾಡಿ ಹಾಗೂ ಹೀಗೂ ಬೆಳಿಗ್ಗೆ ಆದಾಗ ನಿಮ್ಮ ದೇಹದ ಚೈತನ್ಯ ಮಾಯವಾಗಿರುತ್ತದೆ. ದಣಿದ ದೇಹಕ್ಕೆ ನಿದ್ರೆ ಅತ್ಯವಶ್ಯಕ. ವಯಸ್ಕರಿಗೆ ಕನಿಷ್ಟ ೬ ಗಂಟೆ ನಿದ್ರೆ ಅಗತ್ಯ ಎನ್ನುತ್ತದೆ ವೈದ್ಯಶಾಸ್ತ್ರ. ನಿದ್ರೆಯೇ ಬಾರದೇ ನಿದ್ರಾ ಮಾತ್ರೆಗೆ, ಕುಡಿತಕ್ಕೆ ಶರಣಾದವರ ಸಂಖ್ಯೆ ಕಮ್ಮಿಯೇನಿಲ್ಲ. ಹಲವು ಮಂದಿಗೆ ರಾತ್ರಿ ಮದ್ಯ ಕುಡಿಯದೇ ನಿದ್ರೆ ಬರುವುದೇ ಇಲ್ಲ. ಇದು ಒಂದು ಚಟವಾಗಿ ಮಾರ್ಪಟ್ಟಿರುತ್ತದೆ. ನಮಗೆ ನೆಮ್ಮದಿ ನೀಡುವ ನಿದ್ರೆಯೇ ಸಮಸ್ಯೆಯಾದರೆ? ಈ ಬಗ್ಗೆ ನೀವು ಯೋಚಿಸಿರಲಿಕ್ಕಿಲ್ಲ.

Image

ಮಳೆ ಬಿಸಿಲಿ‌ನ ಇದು ನಾಟಕ

ಕಡು ದುಗುಡದ ಬಿರು ಬೇಗೆಗೆ

   ಕುದಿಯಿತು ಎದೆಗಡಲು!

‌ಸದ್ದಿಲ್ಲದೆ ಮೇಲೆದ್ದಿತು

   ನಿಟ್ಟುಸಿರಿನ ಮುಗಿಲು

 

ಹನಿ ಗೂಡಿತು ಮಳೆ ಮೂಡಿತು