ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

ನವಿಲುಗರಿಯನ್ನು ಮುಕುಟದಲ್ಲಿ ಹೊಂದಿರದ ಶ್ರೀಕೃಷ್ಣನ ಮುಖವನ್ನು ಕಲ್ಪಿಸಿಕೊಳ್ಳುವುದೂ ನಮಗೆ ಅಸಾಧ್ಯ. ಯಾವುದೇ ಯಕ್ಷಗಾನವಿರಲಿ, ನಾಟಕವಿರಲಿ ಅಥವಾ ಮಕ್ಕಳ ಛದ್ಮವೇಷ ಸ್ಪರ್ಧೆಯಿರಲಿ, ಕೃಷ್ಣನ ಪಾತ್ರ ಇದೆಯೆಂದರೆ ಅದಕ್ಕೆ ನವಿಲುಗರಿ ಬೇಕೇ ಬೇಕು. ಈ ನವಿಲು ಗರಿ ಕೃಷ್ಣನ ಮುಕುಟದ ಶೋಭೆಯನ್ನು ಹೆಚ್ಚಿಸಿರುವುದಂತೂ ನಿಜ. ಆದರೆ ನೀವೆಂದಾದರೂ ಕೃಷ್ಣನ ಮುಕುಟಕ್ಕೆ ಈ ನವಿಲುಗರಿ ಹೇಗೆ ಹತ್ತಿಕೊಂಡಿತು? ಕೃಷ್ಣನು ತನ್ನ ಮುಕುಟದಲ್ಲಿ ನವಿಲುಗರಿಗೆ ಏಕೆ ಪ್ರಾಮುಖ್ಯತೆ ನೀಡಿದ ಎಂದು ಗೊತ್ತೇ? ಅದು ತಿಳೀಯಬೇಕಾದರೆ ನೀವು ರಾಮಾಯಣದ ಸಮಯಕ್ಕೆ ಹೋಗಲೇ ಬೇಕು. ವಿಷ್ಣುವಿನ ದಶಾವತಾರಗಳಲ್ಲಿ ರಾಮ ಹಾಗೂ ಕೃಷ್ಣ ಬರುತ್ತಾರೆ.

Image

ನಿಗೂಢ ನಾಣ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಮೈಲ್ಯಾಂಗ್ ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ: ೨೦೨೦

ಬಿಟ್ ಕಾಯಿನ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಈಗೀಗ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಬಿಟ್ ಕಾಯಿನ್ಸ್ ಬಗ್ಗೆ ಜನ ಸಾಮಾನ್ಯರಿಗೆ ಏನೇನೂ ತಿಳಿದಿಲ್ಲ. ಸುಮ್ಮನೇ ವಿವರಗಳನ್ನು ಕೊಡುತ್ತಾ ಹೋದರೆ ಅರ್ಥವೂ ಆಗಲಾರದು. ಅದಕ್ಕಾಗಿಯೇ ವಿಠಲ್ ಶೆಣೈ ಅವರು ಕಾದಂಬರಿ ರೂಪದಲ್ಲಿ ‘ನಿಗೂಢ ನಾಣ್ಯ' ಎಂಬ ಪುಸ್ತಕವನ್ನು ಬರೆದು ಓದುಗ ಪ್ರಭುವಿನ ಮಡಿಲಿಗೆ ಹಾಕಿದ್ದಾರೆ. ‘ನಿಗೂಢ ನಾಣ್ಯ' ಬಹಳ ಹಿಂದೆಯೇ ‘ಮೈಲ್ಯಾಂಗ್ ಬುಕ್ಸ್’ ಎಂಬ ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್ ಮಾರುವ ಸಂಸ್ಥೆಯ ಮೂಲಕ ಪ್ರಕಟವಾಗಿತ್ತು. ಬಹಳಷ್ಟು ಜನಪ್ರಿಯವೂ ಆಗಿತ್ತು.

ಬಾಳಿಗೊಂದು ಚಿಂತನೆ (13) - ಪರಿಶ್ರಮ

ನಮ್ಮ ಬದುಕಿನ ದಾರಿಯಲ್ಲಿ ಕಲ್ಲು ಮುಳ್ಳುಗಳು, ನಾನಾರೀತಿಯ ಅಡಚಣೆಗಳು ಬರಬಹುದು. ಅದನ್ನೆಲ್ಲ ದಾಟಿಕೊಂಡು, ಮುಂದೆ ಮುಂದೆ ಸಾಗುವವನೇ ನಿಜವಾದ ಸಾಧಕ. ಹಾಗಾದರೆ ಸಾಗಲು ಸುಮ್ಮನೆ ಕೈಕಟ್ಟಿ ಕುಳಿತರೆ ಆಗುತ್ತದೆಯೇ? ಇಲ್ಲ.ಇದಕ್ಕೆ ಬೇಕು ಸತತ *ಪರಿಶ್ರಮ*. ತೆಂಗಿನ ಕಾಯಿ ಎಲ್ಲಿಂದ  ಸಿಗುತ್ತದೆ? ತಕ್ಷಣ *ಮರದಿಂದ* ಹೇಳ್ತೇವೆ. ಮರಕ್ಕೆ ಎಲ್ಲಿಂದ ಬರುತ್ತದೆ? ಆಲೋಚನೆ ಮಾಡುತ್ತೇವೆ. ಸಾಕಷ್ಟು ನೀರು, ಗೊಬ್ಬರ ಹಾಕಿದಾಗ, ಸರಿಯಾಗಿ ಆ ಗಿಡವನ್ನು ಸಾಕಿದಾಗ ಫಲ ಬಂದೇ ಬರುತ್ತದೆ. ಹಾಗಾದರೆ ಇಲ್ಲಿ *ಕಠಿಣ ಪರಿಶ್ರಮ* ಅಗತ್ಯವೆಂದಾಯಿತು.

Image

ಗುರು ಗ್ರಹದ ಕುರಿತು ಪುಟ್ಟ ಮಾಹಿತಿ

ಗುರು (ಬ್ರಹಸ್ಪತಿ) ಗ್ರಹನು ಧನು ಮತ್ತು ಮೀನರಾಶಿಗಳ ಅಧಿಪತಿಯಾಗಿದ್ದು ಕರ್ಕ, ಮಕರ ರಾಶಿಗಳು ಕ್ರಮವಾಗಿ ಅವನ ಉಚ್ಚ ಮತ್ತು ನೀಚ ಕ್ಷೇತ್ರಗಳಾಗಿರುತ್ತವೆ. ಧನುವು ಮೂಲ ತ್ರಿಕೋಣ ರಾಶಿಯಾಗಿರುತ್ತದೆ. ಗುರು ಜ್ಯೋತಿಷ್ಯದಲ್ಲಿ ಪುರುಷ ಗ್ರಹ. ಗುರುವು ನೈಸರ್ಗಿಕವಾಗಿ ಶುಭ ಗ್ರಹನಾಗ್ರುತ್ತಾನೆ. ಗುರುವು ಆಕಾಶ ತತ್ವಕ್ಕೆ ಅಭಿಮಾನಿ ಮತ್ತು ವಾತ-ಕಫ ದೋಷಗಳ ಕಾರಕನಾಗಿದ್ದಾನೆ. 

Image

ದುರಾಶೆಯ ಟೆಡ್ದಿ ಕರಡಿ

ಕಂದು ಟೆಡ್ಡಿ ಕರಡಿಗೆ ಈ ಜಗತ್ತಿನಲ್ಲಿ ಅತ್ಯಂತ ಇಷ್ಟದ ತಿನಿಸು ಎಂದರೆ ಬನ್. ಅದರೆ ಮೇಲೆ ಸಕ್ಕರೆಯ ಪಾಕ ಇದ್ದರಂತೂ ಕಂದು ಟೆಡ್ದಿ ಕರಡಿ ಅದನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿತ್ತು. ಅಂತಹ ಬನ್ ಎಷ್ಟು ಕೊಟ್ಟರೂ ಅದು ದುರಾಶೆಯಿಂದ ತಿನ್ನುತ್ತಿತ್ತು.

ಪುಟ್ಟಿ ಗೊಂಬೆ ಬಹಳ ರುಚಿಯಾದ ಬನ್ನುಗಳನ್ನು ಪುಟ್ಟ ಆಟಿಕೆ ಕುಕ್ಕರಿನಲ್ಲಿ ಬೇಯಿಸುತ್ತಿತ್ತು. ದೊಡ್ಡ ಬನ್, ಸಣ್ಣ ಬನ್, ಕ್ರೀಮ್ ಬನ್, ಹಾಟ್-ಕ್ರಾಸ್ ಬನ್ - ಇಂತಹ ಹಲವಾರು ವಿಧದ ಬನ್ನುಗಳನ್ನು ಅದು ಬೇಯಿಸುತ್ತಿತ್ತು. ಅವನ್ನು ಆಟದ ಕೋಣೆಯ ಎಲ್ಲ ಗೊಂಬೆಗಳಿಗೆ ಅದು ಹಂಚುತ್ತಿತ್ತು. ಉಳಿದ ಎಲ್ಲರಿಗಿಂತ ಜಾಸ್ತಿ ಇವನ್ನು ಇಷ್ಟ ಪಡುತ್ತಿದ್ದದ್ದು ಕಂದು ಟೆಡ್ಡಿ ಕರಡಿ.

Image

ಶತಮಾನದ ಸಂಭ್ರಮದಲ್ಲಿ ಕಾಶಿ ವಿದ್ಯಾಪೀಠ

ಮಹಾತ್ಮ ಗಾಂಧೀಜಿಯವರು ಬ್ರಿಟೀಷರ ವಿದೇಶೀ ವಸ್ತುಗಳಿಗೆ ಸಡ್ಡು ಹೊಡೆದು, ಸ್ವದೇಶೀ ವಸ್ತುಗಳನ್ನೇ ಉಪಯೋಗಿಸಿ ಎಂದು ಕರೆಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಈ ಹೊಸ ರೀತಿಯ ಹೋರಾಟಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ಪ್ರಾರಂಭವಾಗಿತ್ತು. ಗಾಂಧೀಜಿಯವರ ಒಂದು ಕರೆಗೆ ಜನರು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದರು. ಬ್ರಿಟೀಷರು ತಯಾರಿಸುತ್ತಿದ್ದ ವಸ್ತುಗಳ ಜೊತೆಗೆ ಅವರು ನಡೆಸುತ್ತಿದ್ದ ಶೈಕ್ಷಣಿಕ ಕೇಂದ್ರಗಳನ್ನೂ ಬಹಿಷ್ಕರಿಸಬೇಕೆಂದು ಹಲವಾರು ಮಂದಿ ಗಾಂಧೀಜಿಯವರಿಗೆ ಸಲಹೆ ನೀಡಿದರು. ಈ ಸಲಹೆ ಅವರಿಗೆ ಬಹಳ ಪ್ರಿಯವೆನಿಸಿತು. 

Image

ಕನ್ನಡಿಗರ ಹಾಡು

*ಹೊಂಗೆಯ ನಾಡು, ಹುಣಸೆಯ ಬೀಡು, ನಮ್ಮ ಕನ್ನಡ ನಾಡು*.

ಕನ್ನಡದ ಮಣ್ಣಿನಲಿ ಅದೇನೋ ಕಂಪು, ತಂಪು, ಕನ್ನಡಿಗರ ಮನದಲ್ಲಿ ನೆಮ್ಮದಿಯ ನೆಲೆ-ಸೆಲೆ, ಸಂಸ್ಕೃತಿಗೆ ಹೆಸರೇ ನಮ್ಮ ಕನ್ನಡ, ಕನ್ನಡದ ನೆಲದಿ ಹರಿಯುವ ಜಲದಿ ಕನ್ನಡ, ವನಸ್ಪತಿಯ ತೌರೂರು ನಮ್ಮ ಕನ್ನಡ ಎಂಬುದಾಗಿ ಕನ್ನಡದ ಮೇಲಿನ, ಭಾಷೆಯ ಮೇಲಿನ ಅಭಿಮಾನವನ್ನು ಕವನಗಳ ಮೂಲಕ ಬರೆದು, ಹಂಚಿ, ಓದುಗರಿಗೆ ನೀಡಿದ ಬಹಳಷ್ಟು ಹಿರಿಯ ಕವಿಗಳಿದ್ದಾರೆ, ಆಗಿ ಹೋದವರಿದ್ದಾರೆ.

Image