ಶಂಕರಾನಂದ ಹೆಬ್ಬಾಳರ ಒಂದು ಗಝಲ್

ಅಷ್ಟಾದಶ ಪುರಾಣ ದಶೋಪನಿಷತ್ತುಗಳನು

ಪಾರಾಯಣ ಮಾಡಿಸುತ್ತಲಿ ಆಲಿಸು|

ರಾಮಾಯಣ ಮಹಾಭಾರತ ಕಾವ್ಯಗಳನು

ತಿಳಿದು ಓದಿಸುತ್ತಲಿ ಆಲಿಸು||

 

ತೀರ್ಥಂಕರರ ಚರಿತೆ ಶಾಸನದ ಸ್ತುತಿಸಾಲುಗಳ

ಈ ಕುರಿ‌ ಕಾಯೋನ ಮಗನಿಗ್ಯಾಕ್ರೋ ಪಿಯುಸಿ ಎಲ್ಲ..

ಕ್ಯಾಪ್ಟನ್ ಗೋಪಿನಾಥ್ ನಮ್ಮ ಹೆಮ್ಮೆಯ ಕನ್ನಡಿಗರು. ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿ ಜನ ಸಾಮಾನ್ಯರೂ ವಿಮಾನದಲ್ಲಿ ಹೋಗಬಹುದೆಂಬ ಕನಸನ್ನು ನನಸು ಮಾಡಿದವರು. ಮೊನ್ನೆ ಕ್ಯಾಪ್ಟನ್ ಗೋಪಿನಾಥ್ ಅವರ ಒಂದು ಸಂದರ್ಶನ ನೋಡುತ್ತಿದ್ದೆ.‌ ಅವರು ತಮ್ಮ ಡೆಕ್ಕನ್ ಹೆಲಿಕಾಪ್ಟರ್ ಸರ್ವಿಸಸ್ ಸಂಸ್ಥೆಯಲ್ಲಿ ಆದ ಒಂದು ಗ್ರಾಹಕ ಅನುಭವದ ಬಗ್ಗೆ ಹೇಳಿದ್ದು ಹೀಗೆ...

Image

ದೃಷ್ಟಿಹೀನರ ಭಗವಂತ - ಡಾ.ಸಾಂಡೋಕ್ ರೊಯಿಟ್

ದೇವರು ಮಾನವನಿಗೆ ನೀಡಿದ ಎಲ್ಲಾ ಅಂಗಾಂಗಗಳು ಅತ್ಯಮೂಲ್ಯವೇ. ಆದರೆ ಕಣ್ಣು ಅವುಗಳಲ್ಲಿ ಶ್ರೇಷ್ಣವಾದ ಅಂಗ. ಅದಕ್ಕೇ ಹೇಳುವುದು ನೇತ್ರದಾನ ಮಹಾದಾನ ಎಂದು. ನಾವು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ದಾನವಾಗಿ ನೀಡಿದರೆ ಇನ್ನೂ ಇಬ್ಬರು ನೇತ್ರಹೀನರು ಈ ಸುಂದರ ಪ್ರಪಂಚವನ್ನು ನೋಡಬಹುದು. ವೈದ್ಯರು ದೇವರ ಪ್ರತಿರೂಪ ಎನ್ನುತ್ತಾರೆ. ಹಲವಾರು ವೈದ್ಯರು ತಮ್ಮ ಕಾರ್ಯದ ಮೂಲಕ ಈ ಮಾತನ್ನು ನಿಜವಾಗಿಸಿದ್ದಾರೆ. ಇಂತಹದ್ದೇ ಓರ್ವ ಕಣ್ಣಿನ ವೈದ್ಯರ ಬಗ್ಗೆ ನಾನಿಂದು ನಿಮಗೆ ಕಿರು ಲೇಖನದ ಮೂಲಕ ತಿಳಿಸುವೆ.

Image

ಎರಡು ಹಿತನುಡಿಗಳು

ಚಾಣಕ್ಯ ನೀತಿ

ನಿಜವಾದ ಬಡವನೆಂದರೆ ಸರಿಯಾದ ವಿದ್ಯೆ ಕಲಿತು,ಸನ್ಮಾರ್ಗದಲ್ಲಿ ನಡೆಯದವರು.ಹಣವಿಲ್ಲದವರನ್ನೆಲ್ಲ ಒಟ್ಟು ಸೇರಿಸಿ ನಿರ್ಗತಿಕರೆಂಬ ಹಣೆಪಟ್ಟಿ ನಾವು ಕಟ್ಟಬಾರದು. ಬಡತನ-ಸಿರಿತನ ಎಂಬುದು ಯಾವತ್ತೂ ಶಾಶ್ವತವಲ್ಲ. ಅವು ಒಂದಕ್ಕೊಂದು ವೈರಿಗಳು. ವಿದ್ಯೆ, ವಿದ್ವತ್ ಎರಡೂ ದೇವಲೋಕದ ಕಾಮಧೇನುವಿನಂತೆ. ಆಪತ್ಕಾಲದಲ್ಲಿ ನಮ್ಮನ್ನು ರಕ್ಷಿಸುತ್ತದೆ. ಹೊಟ್ಟೆ ಪಾಡಿಗೆ ವಿದ್ಯೆ ಬೇಕು, ಜೊತೆಗೆ ತಾನೂ *ಬೆಳಕನ್ನು*ಪಡೆದು ಇತರರಿಗೂ ಬೆಳಕು ನೀಡುವ ಜ್ಞಾನವೇ ವಿದ್ಯೆ.

Image

ಪಡುವಲಕಾಯಿಯ ಬೀಜದ ದೋಸೆ

Image

ಮೊದಲಿಗೆ ಅಕ್ಕಿ, ಮೆಂತೆ, ಉದ್ದಿನಬೇಳೆಯನ್ನು ಜೊತೆಯಾಗಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ನಂತರ ನೆನೆದ ಸಾಮಾಗ್ರಿಗಳ ಜೊತೆ ಕಾಯಿ ಮೆಣಸು, ಪಡುವಲ ಬೀಜ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಸಣ್ಣಗೆ ಹೆಚ್ಚಿದ ನೀರುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪುಗಳನ್ನು ಆ ರುಬ್ಬಿದ ಮಿಶ್ರಣಕ್ಕೆ ಬೆರೆಸಿರಿ. ದೋಸೆಯ ಕಾವಲಿಯನ್ನು ಒಲೆಯ ಮೇಲಿಟ್ಟು ಸಣ್ಣ ಸಣ್ಣ ದೋಸೆ ಆಕಾರದಲ್ಲಿ ಈ ರುಬ್ಬಿದ ಮಿಶ್ರಣವನ್ನು ಹಾಕಿರಿ. ಬೇಕಾದಲ್ಲಿ ಕಾವಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿರಿ. ದೋಸೆಯನ್ನು ಎರಡೂ ಬದಿ ಕಾಯಿಸಿರಿ. ಬಿಸಿ ಬಿಸಿಯಾಗಿ ಊಟದ ಜೊತೆ ತಿನ್ನಲು ಹಿತಕರ

ಬೇಕಿರುವ ಸಾಮಗ್ರಿ

೨ ಮಧ್ಯಮ ಗಾತ್ರದ ಪಡುವಲ ಕಾಯಿಯ ಬೀಜಗಳು, ಬೆಳ್ತಿಗೆ ಅಕ್ಕಿ ೧/೨ ಕಪ್, ನೀರುಳ್ಳಿ ೧, ಕಾಯಿ ಮೆಣಸು ೨-೩, ಮೆಂತೆ ೨ ಚಮಚ, ಉದ್ದಿನ ಬೇಳೆ ೨ ಚಮಚ, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಎಣ್ಣೆ

ಬಾಲ್ಯದ ಸವಿ ನೆನಪುಗಳು

ಬಾಲ್ಯದ ಆಟವ ನೆನದರೆ ಚಂದವು

ಮತ್ತೆ ಮರಳದು ಆ ಶುಭಘಳಿಗೆ

ಅದ್ಭುತ ಅಮೋಘ ಸುಂದರ ಕ್ಷಣವದು

ನಲಿಯುತ ಜಿಗಿಯುವ ಬಾಳಿಗೆ..

 

ಮಕ್ಕಳ ನಲಿವದು ನಕ್ಕರೆ ಬರುವುದೆ

ಮಾನಸಿಕ ಒತ್ತಡ ನಿರ್ವಹಣೆ ಮತ್ತು ಮನಸ್ಸಿನ ಮ್ಯಾಜಿಕ್

ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇನ್ನಷ್ಟು “ಜನಸ್ನೇಹಿ"ಯಾಗಿಸುವ ಮತ್ತು ಕೊರೋನಾ ವೈರಸ್ ಹಾವಳಿಯ ಈ ಸಮಯದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯ ವಿಧಾನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನ ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ೯ ನವಂಬರ್ ೨೦೨೦ರಂದು ಆಯೋಜಿಸಲಾಗಿತ್ತು.

Image

ಕನ್ನಡ ಭಾಷೆಯೆಂದರೆ ಅದು ಬದುಕಿನ ಸಂಸ್ಕೃತಿ

ನೀವು ಯಾವುದೋ ಕೆಲಸದ ಮೇಲೆ ವಿದೇಶಕ್ಕೆ ಹೋಗಿರುತ್ತೀರಿ. ಅಲ್ಲಿ ಎಲ್ಲಿ ನೋಡಿದರೂ ಹೊಸ ಮುಖ. ಹೊಸ ಜನ. ಹೊಸ ಭಾಷೆ, ಆಚಾರ ವಿಚಾರ. ಅಲ್ಲಿನ ಹೋಟೇಲ್ ಹೊಕ್ಕು ನೀವು ಕಾಫಿ ಹೀರುತ್ತಾ ಕುಳಿತಿರುವಾಗ ನಿಮ್ಮ ಹಿಂದಿನಿಂದ ‘ಕನ್ನಡ’ ಭಾಷೆಯ ಮಾತು ನಿಮಗೆ ಕಿವಿಗೆ ಬೀಳುತ್ತದೆ. ಕೂಡಲೇ ನೀವು ಹಿಂದಕ್ಕೆ ತಿರುಗಿ ನೋಡುತ್ತೀರಿ. ಅಲ್ಲೊಂದು ಕುಟುಂಬ ಇದೆ. ಅಪ್ಪ, ಅಮ್ಮ ಹಾಗೂ ಮಕ್ಕಳು. ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ನಿಮಗೆ ಆಗ ಬೆಂಗಳೂರಿನ ಮೆಜೆಸ್ಟಿಕ್ ನ ಹೋಟೇಲ್ ನಲ್ಲಿ ಕಾಫಿ ಕುಡಿಯುವ ಅನುಭವವಾಗುತ್ತದೆ. ಅಲ್ಲವೇ? ನೀವೇ ಅವರ ಬಳಿ ಹೋಗಿ ನೀವು ಕರ್ನಾಟಕದವರಾ? ಎಂದು ಕನ್ನಡದಲ್ಲೇ ಪರಿಚಯ ಮಾಡಿಕೊಳ್ಳುತ್ತೀರಿ. ಅವರೂ ಕನ್ನಡದಲ್ಲೇ ‘ಹೌದು' ಎಂದು ಉತ್ತರ ಕೊಡುತ್ತಾರೆ.

Image

ದೇವರು ಮತ್ತು ಭಕ್ತಿ

ದೇವರು ಮತ್ತು ಭಕ್ತಿ ಎಂಬುದು ಒಂದು ಶಕ್ತಿ. ಸರ್ವಂತರಾಮಿಯಾದ, ಅಣುರೇಣು, ತೃಣ ಕಾಷ್ಟಗಳಲ್ಲೂ ನೆಲೆಸಿದ ‘ಭಗವಂತನ’ ನೆಲೆ ಬೆಲೆ ಕಂಡವರಾರೂ ಇಲ್ಲ. ನಮ್ಮ ಮನದಲ್ಲೊಂದು ಕಲ್ಪನೆ ’ದೇವರ’ ಬಗ್ಗೆ, ಹೀಗಿರಬಹುದು, ಹಾಗಿರಬಹುದು ಎಂಬುದಾಗಿ ಅಷ್ಟೆ. ನಮಗೆ ಆತನ ನಿಲುವನ್ನು ಪೂಜಿಸಲೋ, ಇನ್ನಾವುದಕ್ಕೋ ಬೇಕಾಗಿ ‘ಮೂರ್ತಸ್ವರೂಪ’ವನ್ನು ಮನದಲ್ಲಿ ಗ್ರಹಿಸಿ ಭಜಿಸುತ್ತೇವೆ. ಕಲ್ಲಿನ ಮೂರ್ತಿಯೇ ಆಗಲಿ, ಭಾವಚಿತ್ರವೇ ಇರಲಿ, ಬೇಡ ಪ್ರಜ್ವಲಿಸುತಿರುವ ಒಂದು ದೀಪವೇ ಆಗಲಿ, ಪ್ರಕೃತಿಯ ಯಾವುದೇ ವಸ್ತುವಾಗಲಿ ದೇವರನ್ನು ಅದರಲ್ಲಿ ಕಲ್ಪಿಸಿ, ಭಕ್ತಿಯಿಂದ ಆರಾಧಿಸುತ್ತೇವೆ

Image

ಸಾಮಾನ್ಯನ ಓದು - ನವೆಂಬರ್ 2020 ರ 'ಮಯೂರ' ತಿಂಗಳ ಪತ್ರಿಕೆ

 

ಈ ತಿಂಗಳ ಮಯೂರದಲ್ಲಿ ಸಿದ್ದಲಿಂಗು ಪರಿಣಯ ಎಂಬ ಕಥೆ ಇದೆ. ಇದರಲ್ಲಿ ನೋಡಲು ತುಂಬ ಕುರೂಪಿಯಾಗಿರುವಾತನ ಮದುವೆ ತಡವಾಗಿ ಆಗುತ್ತದೆ. ಹುಡುಗಿ ನಂಬಲು ಅಸಾಧ್ಯವಾಗುವಷ್ಟು ಸುಂದರಿ. ಮದುವೆಯನ್ನು ಗೊತ್ತು ಮಾಡುವಾಗ ಅವಳು ಮೂಕಿ ಎಂದು ಹೇಳಿರುತ್ತಾರೆ.  

 

ಆದರೆ ಮೊದಲ ರಾತ್ರಿ ಅವಳು ಮೂಕಿಯಲ್ಲ ಎಂದು ಗೊತ್ತಾಗುತ್ತದೆ. ಆದರೆ ಅದು ತೃತೀಯಲಿಂಗದ ವ್ಯಕ್ತಿ ! ಮುಂದೆ ಆಗುವುದೇನು ? ನೀವೇ ಕತೆಯನ್ನು ಓದಿ. 

 

ಓದುಗರಿಗೆ ಹಳಗನ್ನಡವನ್ನು ಪರಿಚಯಿಸುವ ನಿಚ್ಚಂ ಪೊಸತು ಎಂಬ ನಿಯತ ಅಂಕಣದಲ್ಲಿ ನಾಗವರ್ಮನ ಕರ್ನಾಟಕ ಕಾದಂಬರಿಯ ಬಗೆಗೆ ಲೇಖನ ಇದೆ.