ಕನ್ನಡ ನಾಡು-ನುಡಿ (೫) : ದಾಸ ಶ್ರೇಷ್ಠರು

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಸಾಧನೆಯನ್ನು ಮಾಡಿ,*ದಾಸ ಸಾಹಿತ್ಯ*ವನ್ನು ಉಣಬಡಿಸಿದವರಲ್ಲಿ ಅಗ್ರಗಣ್ಯರು *ಪುರಂದರದಾಸರು*. ಕೋಟಿ ಸಂಪತ್ತು ತನ್ನಲ್ಲಿದ್ದರೂ, ಎಲ್ಲವನ್ನೂ ತ್ಯಜಿಸಿ, ವ್ಯಾಸರಾಯರ ಶಿಷ್ಯರಾಗಿ, ದಾಸರಾಗಿ, ಹಾಡುಗಳ ಮೂಲಕ, ಲೋಕದ ಡೊಂಕುಗಳ ತಿದ್ದಲು ಪ್ರಯತ್ನಿಸಿದವರು.ದಾಸಸಾಹಿತ್ಯವನ್ನು ಅತ್ಯಂತ ಮೇಲ್ಮಟ್ಟಕ್ಕೆ ಒಯ್ದುವುದರಲ್ಲಿ ದುಡಿದವರು.

Image

ಅಕ್ಷರಗಳ ಮಾಂತ್ರಿಕ ರವಿ ಬೆಳಗೆರೆಯ ನೆನಪಿನಲ್ಲಿ…

ಇಂದು ಬೆಳಿಗ್ಗೆ ಏಳುವಾಗಲೇ ನನ್ನ ಪಾಲಿಗೆ ಶುಕ್ರವಾರ ‘ಬ್ಲ್ಯಾಕ್ ಫ್ರೈಡೇ' ಆಗಿತ್ತು. ಕನ್ನಡದ ಖ್ಯಾತ ಪತ್ರಕರ್ತ, ಲೇಖಕ, ನಿರೂಪಕ ರವಿ ಬೆಳಗೆರೆಯವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಮನಸ್ಸಿಗೆ ತುಂಬಾನೇ ಖೇದವಾಯಿತು. ಒಬ್ಬ ಲೇಖಕನಾಗಿ ನಾನು ಅವರ ಬರಹಗಳನ್ನು ತುಂಬಾ ಮೆಚ್ಚಿ ಕೊಂಡಿದ್ದೇನೆ. ಅವರ ಬಗೆಗಿನ ಬಹಳಷ್ಟು ವಿವರಗಳು ದೃಶ್ಯ ಮಾಧ್ಯಮದಲ್ಲಿ ಇವತ್ತು ದಿನವಿಡೀ ತೋರಿಸುವುದರಿಂದ ನಾನು ಅಧಿಕವಾಗಿ ಹೇಳಲೇನೂ ಹೋಗುವುದಿಲ್ಲ. ನನ್ನ ಅವರ ನಡುವಿನ ಸಣ್ಣಗಿನ ಒಡನಾಟದ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಲಷ್ಟೇ ಈ ಲೇಖನ ಮುಡಿಪು.

Image

ಅಶ್ರುತರ್ಪಣ

ಬಾಳ ಪಯಣದಲ್ಲಿ ಹಾದಿ ತೋರಿಸುತ

ಜೀವನ ಪೂರ್ತಿ ಜೀವವನು ಸವೆಸಿದಳು

ಕಷ್ಟಕಾಲದಲ್ಲಿ ಕೈ ಹಿಡಿದು ನಗುನಗುತಲಿ

ಬಾಳ ರಥವನು ಗಜದಂತೆ ಎಳೆದಳು

 

ಕೂಲಿನಾಲಿಯ ಮಾಡುತ ಬದುಕಿ

ನಮ್ಮ ಹೆಮ್ಮೆಯ ಭಾರತ (ಭಾಗ 27 - 28)

೨೭.ಜಗತ್ತಿನ ಅತಿ ವಿಸ್ತಾರವಾದ ನದಿಬಯಲು
ಸಿಂಧೂ - ಗಂಗಾ - ಬ್ರಹ್ಮಪುತ್ರ ನದಿಬಯಲು ಜಗತ್ತಿನ ಅತಿ ವಿಸ್ತಾರವಾದ ನದಿಬಯಲು. ಇದರ ಉದ್ದ ೩,೨೦೦ ಕಿಮೀ. ಇದರ ಒಂದು ಭಾಗ ಭಾರತದಲ್ಲಿದ್ದರೆ, ಇನ್ನೊಂದು ಭಾಗ ಪಾಕಿಸ್ಥಾನದಲ್ಲಿದೆ. ಭಾರತದಲ್ಲಿರುವ ಭಾಗದ ಉದ್ದ ೨,೪೦೦ ಕಿಮೀ. ಮತ್ತು ಸರಾಸರಿ ಅಗಲ ೧೫೦ರಿಂದ ೩೦೦ ಕಿಮೀ. ಇದು ವ್ಯಾಪಿಸಿರುವ ಪ್ರದೇಶ ೭.೮ ಲಕ್ಷ ಚದರ ಕಿಮೀ.

ಈ ನದಿಬಯಲು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಹಾಗೂ ಅವುಗಳ ಉಪನದಿಗಳ ಬಯಲುಗಳನ್ನು ಒಳಗೊಂಡಿದೆ. ಇದು ಜಗತ್ತಿನಲ್ಲೇ ಜನಸಾಂದ್ರತೆ ಅತ್ಯಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ಹಾಗೂ ಇದು ಬಹಳ ಫಲವತ್ತಾದ ನದಿಬಯಲು. ಯಾಕೆಂದರೆ ಈ ನದಿಗಳೂ ಉಪನದಿಗಳೂ ಹೊತ್ತು ತರುವ ಮೆಕ್ಕಲು ಮಣ್ಣು ಇಲ್ಲಿ ತುಂಬಿಕೊಂಡಿದೆ.

Image

ಪರಿಸರ ಸ್ನೇಹಿ ಬಿದಿರಿನ ಉತ್ಪನ್ನಗಳು

ಪರಿಸರ ಮಾಲಿನ್ಯ ನಮ್ಮ ದೇಶದ ಅತೀದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪ್ಲಾಸ್ಟಿಕ್ ಎಂದರೆ ತಪ್ಪಾಗಲಾರದು. ನಾವಿನ್ನೂ ಈ ಪ್ಲಾಸ್ಟಿಕ್ ಪೆಡಂಭೂತಕ್ಕೆ ಪರ್ಯಾಯವನ್ನು ಕಂಡುಹುಡುಕಿಲ್ಲ. ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಕಂಡು ಹಿಡಿದರೆ ಬಹಳಷ್ಟು ಉಪಕಾರವಿದೆ. ಆದರೆ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ನಾವು ಬಿದಿರು ಬಳಸಬಹುದು. ಕಳೆದ ವರ್ಷ ‘ಸಂಪದ’ದಲ್ಲಿ ಶ್ರೀ ಅಡ್ಡೂರು ಕೃಷ್ಣ ರಾವ್ ಇವರು ಬಿದಿರಿನ ಬಾಟಲಿ ಬಗ್ಗೆ ಒಂದು ಲೇಖನ ಬರೆದಿದ್ದರು. ಅದು ಅಸ್ಸಾಂನ ಡಿಬಿ ಇಂಡಸ್ಟ್ರೀಸ್ ನ ಸ್ಥಾಪಕರಾದ ಧೃತಿಮಾನ್ ಬೋರಾ ಸಾಧನೆ ಬಗ್ಗೆ ಬೆಳಕು ಚೆಲ್ಲಿದ ವಿಷಯವಾಗಿತ್ತು. ಅವರು ತಯಾರಿಸಿದ ಬಿದಿರಿನ ಬಾಟಲಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಅರ್ಥಪೂರ್ಣ ಲೇಖನ.

Image

ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದನೆ: ವಾಣಿ ಬಿ.ಆಚಾರ್ಯ, ಗುರುಚರಣ ಆಚಾರ್ಯ ಹಾಗೂ ಪಲ್ಲವಿ ಪಿ.ಭಟ್
ಪ್ರಕಾಶಕರು
ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ- 576118
ಪುಸ್ತಕದ ಬೆಲೆ
ರೂ.200.00. ಮುದ್ರಣ: 2019

ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ"

ಒಂದು ಸಣ್ಣ ಕಥೆ - ಮಾನವೀಯತೆ

ಈ ಕಥೆಯನ್ನು ನೀವು ಈಗಾಗಲೇ ಓದಿರಲೂ ಬಹುದು. ಆದರೆ ಪ್ರತೀ ಬಾರಿ ಓದಿದಾಗಲೂ ನನ್ನ ಕಣ್ಣಿನಿಂದ ನೀರು ಬರುತ್ತದೆ. ಅಷ್ಟು ಭಾವನಾತ್ಮಕವಾದ ಮಾನವೀಯತೆಯ ಕಥೆ ಇದು. ನೀವು ಓದಿ, ಬೇರೆಯವರಿಗೂ ಹಂಚಿರಿ.

Image

ಒಂದು ಒಳ್ಳೆಯ ನುಡಿ (19) - ದೇವರಿಗೆ ಶರಣಾಗು

ಶ್ರುತಿ ಸ್ಮ್ರೃತಿ ಪುರಾಣಾದಿ ಪಂಚರಾತ್ರ ವಿಧಿಮ್ ವಿನಾ/

 ಐಕಾಂತಿಕೀ ಹರೇರ್ ಭಕ್ತಿರ್ ಉತ್ಪಾತಾಯೈವ ಕಲ್ಪತೇ//

*ಉಪನಿಷತ್ತುಗಳು, ಪುರಾಣಗಳು, ನಾರದ ಪಂಚರಾತ್ರದಂತಹ ಅಧೀಕೃತ ವೈದಿಕ ಸಾಹಿತ್ಯವನ್ನು ನಿರ್ಲಕ್ಷಿಸಿದ, ಭಗವತ್ ಸೇವೆ, ಭಕ್ತಿಸೇವೆ ಕೇವಲ ಆಡಂಬರವಾದ್ದು, ಇದು ಸಮಾಜವನ್ನು ಕ್ಷೋಭೆಗೊಳಪಡಿಸುತ್ತದೆ*.

Image