ಚಹಾ ಮಾರಿ ವಿದೇಶಯಾನ ಮಾಡುವ ಮೋಹನಾ ಮತ್ತು ವಿಜಯನ್

ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ ಮಾನವನ ಆಶೆಗೆ ಮಿತಿಯೇ ಇರುವುದಿಲ್ಲ. ನಾನೀಗ ಹೇಳ ಹೊರಟಿರುವುದು ಟೀ ಮಾರುತ್ತಾ ಅದರಲ್ಲಿ ಉಳಿಸಿದ ಹಣದಿಂದ ವಿದೇಶ ಪ್ರವಾಸ ಮಾಡುವ ದಂಪತಿಯ ಬಗ್ಗೆ. 

Image

ಝೆನ್ ಪ್ರಸಂಗ: ಧ್ಯಾನದ ಅರ್ಥ

ಸಂಜೆಯ ಹೊತ್ತು. ಕೆರೆಯ ದಡದಲ್ಲಿ ಕುಳಿತಿದ್ದ ಗುರು-ಶಿಷ್ಯರ ಮಾತುಕತೆ ನಡೆದಿತ್ತು.

ಅಲ್ಲೇ ದೂರದಲ್ಲಿ ಬಹಳ ಹೊತ್ತಿನಿಂದ ಹಕ್ಕಿಯೊಂದು ನೀರನ್ನು ನೋಡುತ್ತಾ ಕುಳಿತಿತ್ತು. ಅದನ್ನು ಗಮನಿಸಿದ ಶಿಷ್ಯನೊಬ್ಬನ ಉದ್ಗಾರ, “ನೋಡಿ, ಅಲ್ಲೊಂದು ಹಕ್ಕಿ, ನಾವು ಇಲ್ಲಿಗೆ ಬಂದಾಗಿನಿಂದ ಸುಮ್ಮನೆ ಕುಳಿತಿದೆ!” ಮತ್ತೊಬ್ಬ ಶಿಷ್ಯ ತಕ್ಷಣ ಪ್ರತಿಕ್ರಿಯಿಸಿದ, “ಹಾಗಲ್ಲ, ಆ ಹಕ್ಕಿ ಧ್ಯಾನ ಮಾಡುತ್ತಿದೆ.”

ಈ ಸಂವಾದ ಕೇಳಿಸಿಕೊಂಡ ಗುರು ಎತ್ತಿದ ಪ್ರಶ್ನೆ: “ಧ್ಯಾನ, ಏನು ಅದರರ್ಥ?” ಎಲ್ಲ ಶಿಷ್ಯರ ಒಕ್ಕೊರಲ ಉತ್ತರ, “ನಮಗೆ ಚೆನ್ನಾಗಿ ಗೊತ್ತಿದೆ.”

Image

ಗಣಿತಜ್ಞರ ರಸಪ್ರಸಂಗಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ಬೆಲೆ: ರೂ. 99.00, ಮುದ್ರಣ: ಅಕ್ಟೋಬರ್ 2020

ಅಯೋಧ್ಯಾ ಪ್ರಕಾಶನದ ೧೪ ನೇ ಪುಸ್ತಕವಾಗಿ ಹೊರಬಂದಿರುವ ‘ಗಣಿತಜ್ಞರ ರಸಪ್ರಸಂಗಗಳು' ಬರೆದಿರುವವರು ಸ್ವತಃ ಗಣಿತ ಬೋಧಕರಾದ ರೋಹಿತ್ ಚಕ್ರತೀರ್ಥ ಇವರು. ಗಣಿತ ಬಹುತೇಕ ಮಂದಿಗೆ ಕಬ್ಬಿಣದ ಕಡಲೆಯೇ. ಪಿಯುಸಿಯಿಂದ ಪದವಿಯವರೆಗೆ ನಾನೂ ಗಣಿತವನ್ನೇ ಒಂದು ವಿಷಯವಾಗಿ ಕಲಿತರೂ ನನಗಿನ್ನೂ ಗಣಿತ ಅರ್ಥವೇ ಆಗಿಲ್ಲ. ಇದು ನನ್ನ ವೈಯಕ್ತಿಕ ಸಮಸ್ಯೆ. ಆದರೆ ಗಣಿತದಲ್ಲಿ ಬರೆದದ್ದು ಸರಿಯಾದರೆ ನೂರಕ್ಕೆ ನೂರು ಅಂಕ ಗ್ಯಾರಂಟಿ ಎಂದು ಆಗ ಪ್ರಚಲಿತವಾಗಿದ್ದ ಮಾತು. (ಆದರೆ ಈಗ ಭಾಷಾ ವಿಷಯದಲ್ಲೂ ಶೇಕಡಾ ನೂರು ಅಂಕಗಳನ್ನು ಕೊಡುತ್ತಾರೆ). ಸುಮಾರು ೫೦ಕ್ಕೂ ಮಿಕ್ಕಿದ ಖ್ಯಾತ ಗಣಿತಜ್ಞರ ರಸನಿಮಿಷಗಳನ್ನು ಕಟ್ಟಿಕೊಡುವ ಕೆಲಸ ರೋಹಿತ್ ಮಾಡಿದ್ದಾರೆ.

ಐತಿಹಾಸಿಕ ಕವನ - *ಗಂಡುಗಲಿ ಕುಮಾರ ರಾಮ*

ಕನ್ನಡ ನಾಡಿನ,ಚಿನ್ನದ ಬೀಡಿನ

ರನ್ನದ ರಾಮನು ಗಂಡುಗಲಿ||

ಕನ್ನವ ಹಾಕುವ,ನನ್ನಿಯ ನಾಡುವ

ಕುನ್ನಿಗೆ ಸಿಂಹ ಸ್ವಪ್ನದಲಿ ||೧||

 

ಪರನಾರಿಯಣ್ಣ,ಶಿರಕಾಯೊವಣ್ಣ

ಬಾಳಿಗೊಂದು ಚಿಂತನೆ (12) - ದೋಷ

*ದೋಷ*ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಸಂದರ್ಭಕ್ಕೆ ಸರಿಯಾಗಿ ನಾವು ಅದನ್ನು ಬಳಸಲು, ಅರ್ಥ ಮಾಡಿಕೊಳ್ಳಲು ಕಲಿಯುವುದೇ ಜಾಣತನ. 'ಆ ಹುಡುಗ ಅಥವಾ ಹುಡುಗಿಯ ಜಾತಕದಲ್ಲಿ ದೋಷವಿದೆ' ಹೇಳುವುದು ಕೇಳಿದ್ದೇವೆ. ರಾಹು, ಕೇತು, ಕುಜ ದೋಷಗಳು ಅಥವಾ ಇನ್ನಾವುದೋ. ನಂತರ ಅದಕ್ಕೆ ಪರಿಹಾರ ಮಾಡುವುದರಲ್ಲಿಯೇ ನಮ್ಮ ಅರ್ಧ ಆಯುಷ್ಯ ಕಳೆದು ಹೋಗುವುದು ಅರಿವಿಗೆ ಬರುವುದೇ ಇಲ್ಲ.

Image

ಕನ್ನಡ ಭಾಷೆಯ ರುಚಿಯನ್ನು ಸವಿದವನೇ ಬಲ್ಲ…

ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆ ನೋಡ ಹೋದರೆ ಕನ್ನಡಿಗರಿಗೆ ವರ್ಷದ ೩೬೫ ದಿನಗಳೂ ರಾಜ್ಯೋತ್ಸವವೇ. ಆದರೆ ನವೆಂಬರ್ ೧ ಕರ್ನಾಟಕ (ಮೈಸೂರು) ರಾಜ್ಯವು ಏಕೀಕರಣಗೊಂಡ ದಿನ. ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಎಂದು ನಾಮಕರಣಗೊಂಡಿತು. ನಂತರದ ದಿನಗಳಲ್ಲಿ ೧೯೭೩ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಯಿತು. ಕರ್ನಾಟಕವು ರಾಜ್ಯವು ಯಾವ ದೃಷ್ಟಿಯಿಂದ ನೋಡಿದರೂ ಸಂಪದ್ಭರಿತ ರಾಜ್ಯ. ಭೌಗೋಳಿಕವಾಗಿ ಅಥವಾ ಪ್ರಾದೇಶಿಕವಾಗಿ ರಾಜ್ಯವು ಅಪಾರ ಖ್ಯಾತಿ ಹೊಂದಿದೆ. ನಾನು ಇಲ್ಲಿ ಕನ್ನಡ ಭಾಷೆಯು ನನ್ನ ಜೀವನದಲ್ಲಿ ವಹಿಸಿದ ಪಾತ್ರದ ಬಗ್ಗೆ ಸ್ವಲ್ಪ ಬರೆಯಲಿರುವೆ.

Image

ಕನ್ನಡದ ವರ್ಣ ಮಾಲೆ

  • ಕನ್ನಡದವರ್ಣಮಾಲೆ

 

 

ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು. 

ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ 

ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು. 

ಟಕರಾಯಿಸಿಠಸ್ಸೆಯನ್ನುಡಕಾಯಿತರುಢಣಢಣಿಸಿ,ಕಾಣದಾದರು.

ತವರಿನಥಳಥಳರಥವುದಣಿಯದೆಧರಣಿಯಲ್ಲಿನಳನಳಿಸಿತು 

ಪಸರಿಸಿದಫಲವುಬತ್ತದಭತ್ತದತೆನೆಯಲ್ಲಿಮಣವಾಯಿತು. 

ಯಶಸ್ಸಿನರಹದಾರಿಲಭ್ಯವಿದ್ದಾಗವಶವಾಗದೆಶರವೇಗದಿಷಡ್ವರ್ಗಗಳ,ಸರಳತೆಯಹರಸಿಬಾಳಬೇಕುಸದ್ಗುಣದವ್ಯಂಜನದಲ್ಲಿ.

———ರುಕ್ಕುರೂಪಾ