ಮದ್ದು ಗುಂಡಿನ ಕಿಡಿಯು ಹಾರಿಸಿ...
(ಭಾಮಿನಿ ಷಟ್ಪದಿ)
ದೀಪ ಹಚ್ಚುತ ತಮವದೂಡುತ
ಧೂಪ ಬೆಳಗಿ ಜ್ಞಾನ ತುಂಬಿದೆ
ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ
ಛಾಪು ಮೂಡಿಸಿ ಕಳೆಯು ಚೆಲ್ಲಿದೆ
- Read more about ಮದ್ದು ಗುಂಡಿನ ಕಿಡಿಯು ಹಾರಿಸಿ...
- Log in or register to post comments
(ಭಾಮಿನಿ ಷಟ್ಪದಿ)
ದೀಪ ಹಚ್ಚುತ ತಮವದೂಡುತ
ಧೂಪ ಬೆಳಗಿ ಜ್ಞಾನ ತುಂಬಿದೆ
ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ
ಛಾಪು ಮೂಡಿಸಿ ಕಳೆಯು ಚೆಲ್ಲಿದೆ
*ಅಧ್ಯಾಯ ೪*
*ಸ ಏವಾಯಂ ಮಯಾ ತೇದ್ಯ ಯೋಗ: ಪ್ರೋಕ್ತ: ಪುರಾತನ:/*
*ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್//೩//*
ಹುಣಸೆ ಮರದ ದೆವ್ವ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು.
ದೀಪಾವಳಿ ಹಬ್ಬದ ನರಕ ಚತುರ್ದಶಿ ಮುಗಿಸಿ ನಾವು ಲಕ್ಷ್ಮೀಪೂಜೆಗೆ ಅಣಿಯಾಗುತ್ತಿದ್ದೇವೆ. ಆದರೂ ನರಕ ಚತುರ್ದಶಿಯನ್ನು ನಾವು ಆಚರಿಸುವ ಪೌರಾಣಿಕ ಹಿನ್ನಲೆಯನ್ನು ಬ್ರಹ್ಮಾವರದ ಶ್ರೀ ಹರಿಕೃಷ್ಣ ಹೊಳ್ಳ ಇವರು ಸುಂದರವಾಗಿ ಕಥಾ ರೂಪದಲ್ಲಿ ಬರೆದಿದ್ದಾರೆ. ಬನ್ನಿ ಓದೋಣ...
( ಭಾಮಿನಿ ಷಟ್ಪದಿ)
ಕಮಲವದನೆಯೆ ವಿಷ್ಣುವಲ್ಲಭೆ
ಕಮಲಕೋಮಲ ಚಂಚರೀಕಳೆ
ಕಮಲ ಮಾಲೆಯ ಕೊರಳಿನಲ್ಲಿಯೆ ಧರಿಸಿ ಮೆರೆಯುವಳು||
ಕಮಲ ಕುಸುಮ ಪ್ರಿಯಳೆ ಲಕ್ಷ್ಮೀ
ಸುಂಯ್, ಸುಂಯ್, ಸುಂಯ್ ! ಮೋಂಟು ಮೊಲ ಹೊಲದಲ್ಲಿ ಇಪ್ಪತ್ತಡಿ ಓಡಿ, ನೆಲದಿಂದ ಸೊಂಯ್ಯನೆ ಎತ್ತರಕ್ಕೆ ಜಿಗಿಯಿತು. “ನೋಡಿ, ನಾನು ಗಾಳಿಯಲ್ಲಿ ಎತ್ತರಕ್ಕೆ ಹಾರಬಲ್ಲೆ” ಎಂದು ಹೊಲದಲ್ಲಿದ್ದ ಇತರ ಪ್ರಾಣಿಗಳಿಗೆ ಕೂಗಿ ಹೇಳಿತು.
“ಓ, ಚೆನ್ನಾಗಿ ಜಿಗಿಯುತ್ತಿ” ಎಂದಿತು ಕುರಿ. “ಚೆನ್ನಾಗಿ ಜಿಗಿಯುತ್ತಿ. ಆದರೆ ನನ್ನಷ್ಟು ಚೆನ್ನಾಗಿ ಜಿಗಿಯಲು ನಿನ್ನಿಂದಾಗದು. ನಾನು ಗೇಟಿನ ಮೇಲೆ ಜಿಗಿಯ ಬಲ್ಲೆ” ಎಂದಿತು ಕಾವಲು ನಾಯಿ. ತಕ್ಷಣವೇ ಕಾವಲು ನಾಯಿ ಓಡಿ ಹೋಗಿ, ಗೇಟಿನ ಮೇಲಕ್ಕೆ ಹಾರಿ ಬಯಲಿಗೆ ಜಿಗಿಯಿತು.
ಇಂದು ನವಂಬರ ೧೪ ವಿಶೇಷ ದಿನ. ಶಾಲೆಗಳಿರುತ್ತಿದ್ದರೆ ಮಕ್ಕಳಿಗೆ ಒಂದು ರೀತಿಯಲ್ಲಿ ಸಂಭ್ರಮ ಸಡಗರ. ಚಾ ಚಾ ನೆಹರೂರವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ನಾಡಿನ ಸಮಸ್ತ ಮಕ್ಕಳಿಗೆ ಶುಭವಾಗಲೆಂದು ಹಿರಿಯರಾದಿಯೆಲ್ಲರು ಹಾರೈಸೋಣ . ಆ ಪ್ರಯುಕ್ತ ಒಂದು ದೇಶಭಕ್ತಿ ಗೀತೆ .... ಜೈ ಹೊ
ಮಕ್ಕಳೆಲ್ಲ ಬನ್ನಿರೆಲ್ಲ...
ಮಕ್ಕಳೆಲ್ಲ ಬನ್ನಿರೆಲ್ಲ
ಭಾವಗಳ ಚಿತ್ತಾರ
ಬಣ್ಣಗಳ ಚಿತ್ತಾರ
ಬೆಳಕುಗಳ ಹರಿಕಾರ
ವರುಷ ಹರುಷದ
ಜೊತೆಗೆ ಉಲ್ಲಾಸ ಸಾಗರ//
ದೀಪಾವಳಿ- ಹೆಸರೇ ಹೇಳುವಂತೆ ದೀಪಗಳ ಹಬ್ಬ. ನಾವು ಸಣ್ಣವರಿರುವಾಗ ಆಚರಣೆಯಲ್ಲಿ ಇದ್ದ ಸಂಭ್ರಮ ಈಗ ದೊಡ್ಡವರಾದ ಮೇಲೆ ಕಮ್ಮಿ ಆಗಿದೆ ಎಂದು ನಮಗೆ ಅನಿಸಿದರೂ ಈಗಿನ ಮಕ್ಕಳಿಗೆ ದೀಪಾವಳಿ ಸಂಭ್ರಮದ ಹಬ್ಬವೇ. ಏಕೆಂದರೆ ದೀಪಾವಳಿ ಸಮಯದ ಹೊಸ ಬಟ್ಟೆಗಳು, ಹೂವು ಹಣ್ಣುಗಳು, ಸಿಹಿ ತಿಂಡಿಗಳು, ಆಕಾಶ ಬುಟ್ಟಿ, ಮನೆಗೆ ಬರುವ ಬಂಧು ಮಿತ್ರರು, ಎಣ್ಣೆ ಸ್ನಾನ, ಗೋಪೂಜೆ ಎಲ್ಲದಕ್ಕಿಂತ ಮಿಗಿಲು ಪಟಾಕಿಗಳು. ಬಾಲ್ಯದಲ್ಲಿ ನಮಗೆ ಪಟಾಕಿ ಹೊಡೆಯುವ ಸಂಭ್ರಮವೇ ಬೇರೆಯಾಗಿತ್ತು. ಪಟಾಕಿಯನ್ನು ಸಿಡಿಸಲು ಈಗಿನಂತೆ ನಿರ್ಭಂಧಗಳಿರಲಿಲ್ಲ. ಹಸಿರು ಪಟಾಕಿ, ಶಬ್ದ ರಹಿತ, ವಾಯು ಮಾಲಿನ್ಯ ರಹಿತ ಪಟಾಕಿಗಳು ಎಂಬ ತಲೆ ಬಿಸಿಯಿರಲಿಲ್ಲ.
ನಾಳೆ ನರಕ ಚತುರ್ದಶಿ. ಅದರ ಹಿಂದಿನ ದಿನ, ತ್ರಯೋದಶಿಯ ಸಂಜೆ ‘ನೀರುತುಂಬುವ ಹಬ್ಬ’ ಎಂದು ಆಚರಿಸುವುದು ಪದ್ಧತಿ. ನನ್ನ ಚಿಕ್ಕಂದಿನಲ್ಲಿ, ಬೆಂಗಳೂರಿನ ನಮ್ಮ ಮನೆಯಲ್ಲಿ, ನಮ್ಮಮ್ಮ, ಹಂಡೆ, ಬಿಂದಿಗೆಗಳಲ್ಲಿ ನೀರು ತುಂಬಿಸಿಟ್ಟು, ಅದರ ಮುಂದೆ ರಂಗೋಲಿ ಬಿಡಿಸಿ, ಅವುಗಳಿಗೆ ಅರಿಶಿನ ಕುಂಕುಮವಿಟ್ಟು ಪೂಜೆ ಮಾಡುತ್ತಿದ್ದರು.