ಎರಡು ಗಝಲ್ ಗಳು

ಗಝಲ್ ೧

ದತ್ತಪದ:ಪಯಣ

ಪಯಣವೆಲ್ಲಿಗೋ ಯಾರಿಗೂ ತಿಳಿಯದು ಏಕಾಂಗಿ ನಾನು

ಬದುಕೆಲ್ಲಿಗೋ  ನನಸಿಗೂ ಅರಿಯದು ಏಕಾಂಗಿ ನಾನು

 

ಕನಸಿನ ಬುತ್ತಿಯೆನ್ನುವ ದೋಣಿಯಲಿ ಸಾಗುತಿರುವೆನೆಂದೂ

ಭೀಮರಾಜನೆಂಬ ರಾಕೆಟ್ ಬಾಲದ ಹಕ್ಕಿ

ನಾವು ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಕಾಣುತ್ತೇವೆ. ಕೆಲವು ಸಲ ಅಪರೂಪದ ಪಕ್ಷಿಗಳೂ ಕಾಣ ಸಿಗುವುದುಂಟು. ಕೆಲವು ಪಕ್ಷಿಗಳು ತನ್ನ ಧ್ವನಿಯಿಂದಲೂ, ಕೆಲವು ಮೈ ಬಣ್ಣದಿಂದಲೂ ಗಮನ ಸೆಳೆದರೆ ಈ ಭೀಮರಾಜನೆಂಬ ಹಕ್ಕಿಯು ತನ್ನ ಉದ್ದದ ಬಾಲದಂತಹ ಗರಿಯಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಈ ಹಕ್ಕಿಯು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಕಾಣ ಸಿಗುತ್ತದೆ. 

Image

ಹುಲಿಯಿಂದ ಪಾರಾದ ಸೌದೆ ಕಡಿಯುವವನು

ಹಲವಾರು ವರುಷಗಳ ಹಿಂದೆ ಹಿಮಪುರವೆಂಬ ಹಳ್ಳಿಯಲ್ಲಿ ಗೋಪಣ್ಣ ಎಂಬ ಸೌದೆ ಕಡಿಯುವವನಿದ್ದ. ಪರ್ವತದ ತಪ್ಪಲಿನಲ್ಲಿದ್ದ ಆ ಹಳ್ಳಿಯ ಅಂಚಿನಲ್ಲಿ ದಟ್ಟ ಕಾಡು. ಗೋಪು ದಿನದಿನವೂ ಕಾಡಿಗೆ ಹೋಗಿ ಕಟ್ಟಿಗೆ ತಂದು ಮಾರುತ್ತಿದ್ದ.

ಅದೊಂದು ದಿನ ತಾನು ಕಡಿದಿದ್ದ ಸೌದೆಯನ್ನು ಗೋಪಣ್ಣ ಮೂಟೆ ಕಟ್ಟುತ್ತಿದ್ದ. ಆಗ ಹುಲಿಯ ಗರ್ಜನೆ ಕೇಳಿಸಿತು. ಆ ಹುಲಿ ನೆಗೆದು ಬಂದು ಅವನೆದುರು ನಿಂತಿತು. ಹುಲಿಯಿಂದ ಪಾರಾಗುವುದು ಹೇಗೆಂದು ಒಂದು ಕ್ಷಣ ಯೋಚಿಸಿದ ಗೋಪಣ್ಣ. ನಂತರ ಸೌದೆಯ ಹೊರೆಯನ್ನು ನೆಲದಲ್ಲಿ ಎಳೆಯ ತೊಡಗಿದ. ಅದು ಭಾರವಿರುವಂತೆ ನಟಿಸಿದ. ಇದನ್ನೆಲ್ಲ ನೋಡುತ್ತಿದ್ದ ಹುಲಿ ಅಬ್ಬರಿಸಿತು, “ಅದೊಂದು ಸಣ್ಣ ಮೂಟೆ. ಅದನ್ನು ನೀನು ಯಾಕೆ ತಲೆಯ ಮೇಲೆ ಎತ್ತಿಕೊಳ್ಳುತ್ತಿಲ್ಲ?"

Image

ಜನಗಳ ಮನ (ಭಾಗ ೩)

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-೫೬೦೦೦೯
ಪುಸ್ತಕದ ಬೆಲೆ
ರೂ. ೮೫.೦೦, ಮೊದಲ ಮುದ್ರಣ: ನವೆಂಬರ್ ೨೦೦೮

ಜನಗಳ ಮನ ಪತ್ರಕರ್ತ ವಿಶ್ವೇಶ್ವರ ಭಟ್ ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿರುವ ಸಮಯದಲ್ಲಿ ಬರೆದ ಅಂಕಣಗಳ ಸಂಗ್ರಹ. ಈಗಾಗಲೇ ೨ ಭಾಗ ಮಾರುಕಟ್ಟೆಗೆ ಬಂದಿದ್ದು, ಇದು ಆ ಸರಣಿಯ ಮೂರನೇ ಭಾಗ. ಅಂಕಣಕಾರನ ಒಂದು ಚೌಕಟ್ಟಿನಿಂದ ಹೊರಗೆ ಬಂದು ಯಾವ ವಿಷಯದ ಮೇಲಾದರೂ ಬರೆಯುವ ಸ್ವಾತಂತ್ರ್ಯದಿಂದ ಬರೆದ ಲೇಖನಗಳು ಇವು. ಇದರಲ್ಲಿ ಇಷ್ಟೇ ಬರೆಯ ಬೇಕೆಂಬ ಒತ್ತಾಯವಿಲ್ಲ, ಎಷ್ಟೇ ಬರೆದರೂ ಆಗಬಹುದು. ಹೀಗಾಗಿ ಈ ಪುಸ್ತಕದ ಬರಹಗಳಿಗೆ ಒಂದು ನಿರ್ದಿಷ್ಟ ಚೌಕಟ್ಟಿಲ್ಲ, ವೈವಿಧ್ಯಗಳಿಗೆ ಚೌಕಾಶಿಯೂ ಇಲ್ಲ. ದೀರ್ಘ ಪ್ರಯಾಣಕ್ಕೆ ಹೊರಟ ಅಲೆಮಾರಿ ಮಾಡಿಕೊಳ್ಳುವ ನೋಟ್ಸ್ ಗಳಂತೆ ಕೇಳಿದ್ದು, ಕಂಡದ್ದು ಎಲ್ಲಾ ಗೀಚಿದ್ದು ಇದರಲ್ಲಿ ಉಲ್ಲೇಖಿಸಿದ್ದಾರೆ. 

ವಿಘ್ನ ವಿನಾಶಕ ಗಣೇಶನ ಭಕ್ತಿಗೇತೆಗಳು

ಗಜಾನನ

ಮೂಷಿಕ ವಾಹನ ಪಾರ್ವತಿ ತನಯನೆ

ಕರಗಳ ಜೋಡಿಸಿ ವಂದಿಪೆನು

ಹರ್ಷದ ಹೊಳೆಯನು ಧರೆಯಲಿ ಹರಿಸುತ

ಭಕುತರ ರಕ್ಷಿಸು ಗಜಾನನ||

 

ನಮ್ಮ ಹೆಮ್ಮೆಯ ಭಾರತ (3 - 4)

೩.ಯೋಗ - ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ
ಸಂಸ್ಕೃತದ “ಯುಜ್" ಎಂಬ ಮೂಲಶಬ್ದದಿಂದ “ಯೋಗ" ಪದ ಮೂಡಿ ಬಂದಿದೆ. ಇದರ ಅರ್ಥ “ಜೊತೆಗೂಡುವುದು”. ಇದು ವ್ಯಕ್ತಿಯ ಶರೀರ ಮತ್ತು ಆತ್ಮದ ಸಂಯೋಗವನ್ನು ಸಂಕೇತಿಸುತ್ತದೆ.

ಯೋಗವೆಂದರೆ ಕೇವಲ ಯೋಗಾಸನಗಳ ಸಾಧನೆಯಲ್ಲ; ಯೋಗದಲ್ಲಿ ಎಂಟು ಭಾಗಗಳಿವೆ. ಇದುವೇ ಅಷ್ಟಾಂಗ ಯೋಗ. ಯೋಗದ ಅಭ್ಯಾಸದಿಂದ ದೇಹಕ್ಕೆ ಚೈತನ್ಯ ಮತ್ತು ಮನಸ್ಸಿಗೆ ಶಾಂತತೆ ಲಭ್ಯವಾಗುತ್ತದೆ. ನೂರಾರು ಯೋಗಾಸನಗಳಿವೆ. ಇವನ್ನು ಯೋಗಗುರುಗಳಿಂದ ಕಲಿತು ದಿನದಿನವೂ ಅಭ್ಯಾಸ ಮಾಡಿದರೆ, ಪ್ರತಿಯೊಂದು ಯೋಗಾಸನದಿಂದ ನಿರ್ದಿಷ್ಟ ಪ್ರಯೋಜನಗಳು ಲಭಿಸುತ್ತವೆ.

Image

ಸ್ವರ್ಣಗೌರಿಗೆ ನಮನ

ಶಿವನ ಪ್ರಿಯಳು ಅರ್ಧನಾರಿಶ್ವರಿಯು

ದವನ ಸೇಚನ ಜಗದೀಶ್ವರಿ

ಭವದಿ ನೆಲೆಸುತ ಜನರ ಪೋಷಿಸಿ

ಪವನದಂತೆಯೆ ಪರಮೇಶ್ವರಿ...

 

ವರವ ನೀಡುತ ಜಗವ ಪೊರೆಯುತ

ನೀಲಿ ಕಪ್ಪೆಗಳೆಂಬ ವಿಷಕಾರಿ ಜೀವಿ

ಮಳೆಗಾಲ ಪ್ರಾರಂಭವಾದೊಡನೆಯೇ ನಮಗೆ ಕಪ್ಪೆಗಳ ದನಿ ಕೇಳಲು ಪ್ರಾರಂಭವಾಗುತ್ತದೆ. ಮಳೆ ಬಂತೆಂದರೆ ಕಪ್ಪೆಗಳಿಗೆ ಹರ್ಷವೋ ಹರ್ಷ. ನಮ್ಮ ದೇಶದ ಬಹುತೇಕ ಕಪ್ಪೆಗಳು ಅಪಾಯಕಾರಿಯಲ್ಲ, ಬದಲಿಗೆ ಹಲವಾರು ಕೀಟಗಳನ್ನು ಭಕ್ಷಿಸಿ ನಮಗೆ ಉಪಕಾರವನ್ನು ಮಾಡುತ್ತವೆ. ಆದರೆ ನಾವು ಹೊರ ಜಗತ್ತಿನ ಕಪ್ಪೆಗಳ ಬಗ್ಗೆ ಗಮನಿಸುತ್ತಾ ಹೋದರೆ ನಮಗೆ ಅತ್ಯಂತ ಅಪಾಯಕಾರಿ ಕಪ್ಪೆಯ ಪ್ರಭೇಧಗಳು ಕಾಣ ಸಿಗುತ್ತವೆ. ಅವುಗಳಲ್ಲಿ ಒಂದು ನೀಲಿ ಕಪ್ಪೆ. 

Image