ತಿಳಿಮುಗಿಲ ತೊಟ್ಟಿಲಲಿ ಚಂದಿರ

ಬಾನಿನ ಅಂಗಳ ಇರುಳಲಿ ಹೊಳೆದಿದೆ

ಮೇನೆಯು ಹೊರಟಿದೆ ಮೆರವಣಿಗೆ

ಸೋನೆಯ ಹನಿಯದು ಅಕ್ಷತೆ ಹಾಕಿದೆ

ಯಾನದಿ ಸುಂದರ ಬರವಣಿಗೆ..

 

ಚಂದಿರ ತೊಟ್ಟಿಲು ಮಿಂಚಿದೆ ಬಾನಲಿ

ಆಟದೊಂದಿಗೆ ಮಾತು ಮುಗಿಸಿದ ಕ್ರಿಕೆಟ್ ಆಟಗಾರ- ಡೀನ್ ಜೋನ್ಸ್

ಅಂದು ಆಗಸ್ಟ್ ೭, ೨೦೦೬ರಂದು ಕೊಲಂಬೋದಲ್ಲಿ ಶ್ರೀಲಂಕಾ ಹಾಗೂ ಪ್ರವಾಸೀ ದಕ್ಷಿಣ ಆಫ್ರಿಕಾ ನಡುವೆ ಆಡಲಾಗುತ್ತಿದ್ದ ಟೆಸ್ಟ್ ಪಂದ್ಯದ ನಾಲ್ಕನೇ ದಿನ. ಫೀಲ್ಡಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹಾಶಿಂ ಆಮ್ಲಾ ಒಂದು ಕ್ಯಾಚ್ ಪಡೆದುಕೊಳ್ಳುತ್ತಾರೆ. ಆಗ ಅವರನ್ನು ವೀಕ್ಷಕ ವಿವರಣೆ ನೀಡುತ್ತಿದ್ದ ವ್ಯಕ್ತಿ ‘ಭಯೋತ್ಪಾದಕ ಇನ್ನೊಂದು ವಿಕೆಟ್ ಪಡೆದುಕೊಂಡ' ( the Terrorist gets another wicket) ಎಂದು ವಿವರಿಸುತ್ತಾರೆ. ಹಾಶಿಂ ಆಮ್ಲಾ ಮುಸಲ್ಮಾನನಾಗಿದ್ದು, ಉದ್ದನೆಯ ಗಡ್ಡ ಬಿಟ್ಟಿರುತ್ತಾರೆ. ಆ ಕಾರಣದಿಂದ ಈ ‘ಭಯೋತ್ಪಾದಕ' ಎಂಬ ಮಾತು ದೊಡ್ಡ ಸುದ್ದಿಯಾಗಿ ಬಿಡುತ್ತದೆ. ವೀಕ್ಷಕ ವಿವರಣೆ ನೀಡಿದ ವ್ಯಕ್ತಿ ತನ್ನ ಕೆಲಸ ಕಳೆದುಕೊಳ್ಳುತ್ತಾನೆ. ಆ ವ್ಯಕ್ತಿ ಯಾರು ಗೊತ್ತಾ?

Image

ಬಾಳಿಗೊಂದು ಕಿವಿಮಾತು

ಮಾ(ದಾ)ನವ

ಮಾನವ ಮತ್ತು ದಾನವ ಇಲ್ಲಿ 'ಮಾ'ಮತ್ತು 'ದಾ'ಮಾತ್ರ ಅಕ್ಷರ ವ್ಯತ್ಯಾಸಗಳನ್ನು ನಾವು ಕಾಣಬಹುದು.

ಮಾ--ಮಾರ್ದವತೆ, ಮಧುರತೆ, ಒಳ್ಳೆಯ ಗುಣಗಳು, ಅಮರತ್ವದ ಸಂಕೇತ.

ದ ಅಥವಾ ದಾ--ದಯಾಹೀನತೆ, ಧರ್ಮಭೃಷ್ಟತೆ, ದೌರ್ಜನ್ಯ, ಕೆಟ್ಟ ಕೆಲಸಗಳ ಸಂಕೇತ.

Image

ಬದುಕು ಬದಲಿಸಬಲ್ಲ ಅಮೃತವಾಣಿಗಳು

ಯಾರೋ ಸಂಗ್ರಹಿಸಿದ ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ - ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.

Image

ಚಿತ್ರ ಒಂದು - ಗಝಲ್ ಗಳು ಎರಡು

ಗಝಲ್ - ೧

ಕತ್ತಲಲಿ ಹೂನಗೆ ಚೆಲ್ಲಿ ಬಂದ ಬೆಳಕು ಮನದಿ ನವೋಲ್ಲಾಸ ಮೂಡಿಸಿದೆ ಸಖಿ

ಸುತ್ತಲಿನ ತಮವ ಕಳೆದು ಭರವಸೆಯ ಕಿರಣಗಳ ಹರಿಸಿದೆ ಸಖಿ

 

ಬಿಳಿಯ ಉಡುಪು ಧರಿಸಿ ಸರಳ   ರೇಖೆಯಲಿ ಒಳಗಡಿಯಿಡುವ ರಶ್ಮಿಯ ಕಂಡೆಯಾ

ಕಣ್ಣಾ ಮುಚ್ಚೆ... ಕಾಡೇ ಗೂಡೇ...(ರಂಗಕಲಾವಿದೆ ಬಿ ಜಯಶ್ರೀ ಆತ್ಮಕತೆ)

ಪುಸ್ತಕದ ಲೇಖಕ/ಕವಿಯ ಹೆಸರು
ಬಿ.ಜಯಶ್ರೀ (ನಿರೂಪಣೆ : ಪ್ರೀತಿ ನಾಗರಾಜ್)
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ 250/-

ಸಾವಿರದ ಶರಣವ್ವ ತಾಯೇ.....

`ಕಣ್ಣಾ ಮುಚ್ಚೆ... ಕಾಡೇ ಗೂಡೇ...’ ಒಂದು ಯಶೋಗಾಥೆ. ಕಲಾವಿದೆಯೊಬ್ಬಳ ಯಶಸ್ಸಿನ ಹಿಂದಿನ ಅಗ್ನಿದಿವ್ಯಗಳ ಅನಾವರಣ. ಇಲ್ಲಿ ಬದುಕು ಒಂದು ಸಮುದ್ರದ ಘನತೆ ಪಡೆದುಕೊಂಡಿದೆ. ಅದನ್ನು ಮೊಗೆಯಲು ಬೊಗಸೆಯನ್ನು ನಂಬಿ ಹೊರಟ ಪ್ರೀತಿ ನಾಗರಾಜರು ತಮ್ಮ ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಾದಷ್ಟನ್ನು ನಮಗೂ ಹಂಚಿದ್ದಾರೆ. ಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ.

ಚಿಂತನ-ಮಂಥನ

ಮನಸ್ಸು

ನಮ್ಮ ಮನಸ್ಸು ಎನ್ನುವುದು ಒಂದು ಉತ್ತಮ ಕ್ಯಾಮೆರಾದ ಲೆನ್ಸ್ ಇದ್ದಂತೆ. ಲೆನ್ಸ್ ಚೆನ್ನಾಗಿದ್ದರೆ ಭಾವಚಿತ್ರ, ದೃಶ್ಯಗಳೂ ಚೆನ್ನಾಗಿರುತ್ತವೆ. ಎಷ್ಟೋ ಸಲ ನಾವು ಹೇಳುವುದುಂಟು 'ಅಯ್ಯೋ ಮಹರಾಯ, ನಿನ್ನ ಕ್ಯಾಮರಾ ಸರಿ ಇಲ್ಲ ,ಒಂದೂ ಫೋಟೋ ಚಂದ ಬಂದಿಲ್ಲ’ ಎಂಬುದಾಗಿ. ಆಗ ಫೋಟೋಗ್ರಾಫರ್ ಮನಸ್ಸಿನಲ್ಲಿಯೇ ಹೇಳುತ್ತಾನೆ 'ಇವರು ಇರುವುದೇ ಹೀಗೆ, ಇದ್ದ ಹಾಗೆ ಅಲ್ವಾ ಬರುವುದು?' ಅಂತ.

Image

ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು?

‘ಪೆನ್-ಪೆನ್ಸಿಲ್’ ನಾವು ಶಾಲೆಯಲ್ಲಿ ಕಲಿಯುವಾಗ ಅವಳಿ ಜವಳಿ ಪದಗಳಂತೆಯೇ ಬಳಕೆಯಾಗುತ್ತಿದ್ದುವು. ಪರೀಕ್ಷೆಗೆ ಹೊರಡುವಾಗ ಮನೆಯಲ್ಲಿ ‘ಪೆನ್-ಪೆನ್ಸಿಲ್' ತಕೊಂಡಿದ್ದೀಯಾ? ‘ ಎಂದು ಕೇಳುವುದು ಒಂದು ಸಹಜ ಮಾತಾಗಿತ್ತು. ನಾವು ಬರೆಯಲು ಅಧಿಕವಾಗಿ ಬಳಸುವ ವಸ್ತುಗಳೆಂದರೆ ಪೆನ್ ಮತ್ತು ಪೆನ್ಸಿಲ್. ಪೆನ್ ಮೂಲಕ ಬರೆಯುವುದು ಸುಲಭ. ಶಾಯಿ ಹಾಕಿ ಅಥವಾ ಶಾಯಿ ತುಂಬಿದ ರಿಫಿಲ್ ಹಾಕಿ ಎಷ್ಟು ಸಮಯವಾದರೂ ಬರೆಯಬಹುದು. ಆದರೆ ಪೆನ್ಸಿಲ್ ಮೂಲಕ ಬರೆಯಲು ಅದರ ಮೇಲಿರುವ ಮರದ ಕವಚವನ್ನು ಕಟ್ಟರ್ ಅಥವಾ ಶಾರ್ಪ್ ನರ್ ಎಂಬ ಯಂತ್ರ (?!)ದ ಮೂಲಕ ಕತ್ತರಿಸಿ ತೆಗೆದು ಮೊನಚುಗೊಳಿಸಿ ಒಳಗಿನ ಕಪ್ಪಗಿನ ಮೊನೆ ಹೊರಗೆ ಕಾಣುವಂತೆ ಮಾಡಬೇಕು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಕೆಲಸವೂ ಕಮ್ಮಿ ಆಗಿದೆ. ಏಕೆ ಗೊತ್ತಾ?

Image

ನಮ್ಮ ಹೆಮ್ಮೆಯ ಭಾರತ (13 - 14)

೧೩.ಭಾರತದ ಪಾರಂಪರಿಕ ಸ್ಥಳಗಳು ವಿಶ್ವವಿಖ್ಯಾತ
ಭಾರತದ ಸಂಪನ್ನ ಸಾಂಸ್ಕೃತಿಕ ಪರಂಪರೆ ಮತ್ತು ಪಾರಂಪರಿಕ ಸ್ಥಳಗಳು ನಮ್ಮ ಹೆಮ್ಮೆ. ಯುನೆಸ್ಕೋ ಸಂಸ್ಥೆಯ ೧೯೭೨ರ ಜಾಗತಿಕ ಪಾರಂಪರಿಕ ನಡಾವಳಿ ಅನುಸಾರ ಗುರುತಿಸಲಾದ ಸಾಂಸ್ಕೃತಿಕವಾಗಿ ಅಥವಾ ಪ್ರಾಕೃತಿಕವಾಗಿ ಪ್ರಾಮುಖ್ಯವಾದ ಸ್ಥಳಗಳೇ “ಪಾರಂಪರಿಕ ಸ್ಥಳಗಳು.”

ಭಾರತದಲ್ಲಿ ೩೦ ಜಾಗತಿಕ ಪಾರಂಪರಿಕ ಸ್ಥಳಗಳಿವೆ; ಇವುಗಳಲ್ಲಿ ೨೪ ಸಾಂಸ್ಕೃತಿಕ ಸ್ಥಳಗಳು, ಉಳಿದವು ಪಾಕೃತಿಕ ಸ್ಥಳಗಳು. ಅಜಂತಾ ಮತ್ತು ಎಲ್ಲೋರಾ ಗುಹೆಗಳು, ತಾಜಮಹಲ್, ಕೊನಾರ್ಕದ ಸೂರ್ಯ ದೇವಾಲಯ, ಎಲಿಫೆಂಟಾ ಗವಿಗಳು, ಬಿಹಾರದ ಬೋಧಗಯಾದ ಮಹಾಬೋಧಿ ದೇವಾಲಯ ಇವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳು.

ಇವುಗಳಲ್ಲಿ ಕೆಲವು ಸ್ಥಳಗಳಿಗಾದರೂ ಭೇಟಿ ನೀಡಿದರೆ “ಭಾರತವೆಂಬ ಅದ್ಭುತ”ದ ಕಿರು ಪರಿಚಯ ನಮಗಾಗುತ್ತದೆ.

Image