ಶೆರ್ಲಾಕ್ ಹೋಮ್ಸ್ : ಸೃಷ್ಟಿಕರ್ತನನ್ನೇ ಮೀರಿ ಬೆಳೆದ ಪಾತ್ರ

ನೀವು ಪತ್ತೇದಾರಿ ಕಾದಂಬರಿಗಳ ಬಗ್ಗೆ ಆಸಕ್ತರಾಗಿದ್ದರೆ ನಿಮಗೆ ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರನ ಬಗ್ಗೆ ತಿಳಿದೇ ಇರುತ್ತದೆ. ಪತ್ತೇದಾರ ಶೆರ್ಲಾಕ್ ಹೋಮ್ಸ್ ಮತ್ತು ಅವನ ಗೆಳೆಯ ಡಾ.ವಾಟ್ಸನ್ ಬಗ್ಗೆ ತಿಳಿದಿರುವಷ್ಟು ನಮಗೆ ಅವರ ಸೃಷ್ಟಿಕರ್ತ ಲೇಖಕರ ಬಗ್ಗೆ ತಿಳಿಯದೇ ಇರೋದು ಸಾಹಿತ್ಯ ಲೋಕದ ಕುಚೋದ್ಯವೆಂದೇ ಹೇಳ ಬಹುದು. ಇಲ್ಲಿ ಪತ್ತೇದಾರನ ಪಾತ್ರವು ಅವನನ್ನು ಸೃಷ್ಟಿಸಿದ ಲೇಖಕನನ್ನೇ ಮೀರಿ ಬೆಳೆದಿದೆ. ಶೆರ್ಲಾಕ್ ಹೋಮ್ಸ್ ಎಂಬ ವ್ಯಕ್ತಿ ನಿಜವಾಗಿಯೇ ಇದ್ದಾನೆ ಎಂದು ಜನರು ನಂಬುವಷ್ಟು ಜೀವಂತವಾಗಿ ಚಿತ್ರಿಸಿದ್ದಾರೆ ಅದರ ಲೇಖಕರು. ಹಾಗಾದರೆ ಆ ಪಾತ್ರದ ಲೇಖಕರು ಯಾರು, ಏನಿದರ ಹಿನ್ನಲೆ? ಬನ್ನಿ ತಿಳಿದುಕೊಳ್ಳುವ. 

Image

ಶುಭದಿನಕ್ಕೊಂದು ಶುಭನುಡಿ

ಮರೆಯುವುದು ಎಂಬುದು ಒಳ್ಳೆಯ ಗುಣವೂ ಹೌದು, ಕೆಟ್ಟ ಗುಣವೂ ಹೌದು. ಮರೆತೇ ಹೋಯಿತು, ಎಷ್ಟೋ ಸಲ ಈ ಪದವನ್ನು ನಮ್ಮ ಜೀವನದಲ್ಲಿ ಬಳಸುತ್ತೇವೆ. ಇದು ಮಾನವ ಸಹಜ ಗುಣ. ಮನ್ನಿಸುವುದು ಅಥವಾ ಕ್ಷಮಿಸುವುದು ದೈವೀಗುಣ.To forget is Human.To forgive is Divine--ಇದು ಒಂದು ಆಂಗ್ಲ ಗಾದೆ.

Image

ಋಷ್ಯಶೃಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಹರೀಶ ಹಾಗಲವಾಡಿ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೫.೦೦ ಮೊದಲ ಮುದ್ರಣ: ೨೦೨೦

ಬೆಂಗಳೂರಿನ ಛಂದ ಪುಸ್ತಕದವರು ಪ್ರತೀ ವರ್ಷ ಉದಯೋನ್ಮುಖ ಬರಹಗಾರರ ಪುಸ್ತಕಗಳನ್ನು ಮುದ್ರಿಸುತ್ತಾರೆ. ೨೦೨೦ರ ಸಾಲಿನಲ್ಲಿ ಬಿಡುಗಡೆಯಾದ ೪ ಪುಸ್ತಕಗಳಲ್ಲಿ ಒಂದು ಪುಸ್ತಕವೇ ಹರೀಶ್ ಹಾಗಲವಾಡಿಯವರ ಕಾದಂಬರಿ ಋಷ್ಯಶೃಂಗ. ತುಮಕೂರಿನ ಬಳಿಯ ಹಾಗಲವಾಡಿಯವರಾದ ಹರೀಶ್ ಇವರಿಗೆ ವಿದ್ಯಾಭ್ಯಾಸದ ಕಾಲದಿಂದಲೂ ಸಂಸ್ಕೃತಿ, ಆಧ್ಯಾತ್ಮಗಳ ಸೆಳೆತ. ಈಗ ಪ್ರಸ್ತುತ ಸಂಸ್ಕೃತ ಅಧ್ಯಾಪಕರಾಗಿ, ಭಾರತೀಯ ಸಂಸ್ಕೃತಿಯ ಸಂಶೋಧಕ ವಿದ್ಯಾರ್ಥಿಯಾಗಿ ದುಡಿಯುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ನ್ಯಾಸ' ಇವರ ಮೊದಲ ಕಾದಂಬರಿ.

ಸಂದರ್ಶನ ಮತ್ತು ಅದರ ರೀತಿ

 ಗಿರಿಧರ ಕಜೆ ಅವರ ಸಂದರ್ಶನವು ಚಂದನ ದೂರದರ್ಶನದಲ್ಲಿ ಬರುತ್ತಿತ್ತು. 

ಆರೋಗ್ಯ ಎಂದರೇನು ? ಪ್ರಸನ್ನ ಆತ್ಮ, ಮನ,  ಇಂದ್ರಿಯ ಅಂತೆ. ಕೇವಲ ರೋಗದ ಇಲ್ಲದಿರುವಿಕೆ ಅಲ್ಲ, ಜತೆಗೆ ಆತ್ಮ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿರಬೇಕಂತೆ. 

ಆರೋಗ್ಯ - ಆರೂ ಇಂದ್ರಿಯಗಳು ಯೋಗ್ಯ ಇರಬೇಕಂತೆ. 

ಐದು ಇಂದ್ರಿಯ ಗೊತ್ತು. ಆರನೆಯದು ಏನು? ಕೇಳುವಾಗ ತಪ್ಪಿಸಿಕೊಂಡೆ. 

ಸಂದರ್ಶನಗಳನ್ನು ಚರ್ಚೆಗಳನ್ನು ದೂರದರ್ಶನ, ರೇಡಿಯೋದಲ್ಲಿ ನೋಡುವಾಗ ಕೇಳುವಾಗ ಅನೇಕ ವಿಷಯಗಳನ್ನು ಗಮನಿಸಬಹುದು. 

ಜೇಡಗಳು ಹಾಗೂ ಅವುಗಳ ಬಲೆಗಳ ನಿಗೂಢ ಲೋಕ

ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂದಿನ ಕಾಲದಲ್ಲಿ ಜೇಡರ ಬಲೆಯಿಲ್ಲದ ಮನೆಯಿಲ್ಲ. ಎಷ್ಟು ಸಲ ಬಲೆ ತೆಗೆದರೂ ಕೆಲವೇ ದಿನಗಳಲ್ಲಿ ಜೇಡವು ತನ್ನ ಬಲೆಯನ್ನು ಮತ್ತೆ ಕಟ್ಟಿಕೊಳ್ಳುತ್ತದೆ. ಜೇಡನ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಹಲವಾರು ಮಾಹಿತಿಗಳಿವೆ. ಬನ್ನಿ ಒಮ್ಮೆ ಜೇಡರ ಲೋಕಕ್ಕೆ ಹೋಗಿ ಬರುವ. 

Image

ಎರಡು ಮೋಹಕ ಗಝಲ್ ಗಳು

ಗಝಲ್ ೧

ಮಾತಿರದ ಸಂಬಂಧ ಬದುಕಿನಲಿ ಬೇಕೇ ಸಖಿ

ಬತ್ತಿರುವ ಕನಸುಗಳು ನನಸಿನಲಿ ಬೇಕೇ ಸಖಿ

 

ಬಣ್ಣನೆಯ ಮಾತುಗಳಿಗೆ ಅರ್ಥವು ಇದೆಯೇನು

ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಸಖಿ

 

ಝೆನ್ ಪ್ರಸಂಗ: ಗುರುವಿನ ಶಿಷ್ಯನಾದ ಕಳ್ಳ

ಗುರು ಶಿಚಿರಿ ಸೂತ್ರಗಳನ್ನು ಪಠಿಸುತ್ತಿದ್ದಾಗ, ಕಳ್ಳನೊಬ್ಬ ಒಳ ಬಂದ. ಬಂದವನೇ ಚೂರಿ ತೋರುಸುತ್ತಾ ಹೆದರಿಸಿದ, “ನಿನ್ನಲ್ಲಿರುವ ಹಣವನ್ನೆಲ್ಲಾ ಕೊಡು. ಇಲ್ಲದಿದ್ದರೆ ನಿನ್ನ ಹೆಣ ಬೀಳುತ್ತದೆ.”

“ಅಷ್ಟೇ ತಾನೇ? ಹಣ ಆ ಪೆಟ್ಟಿಗೆಯಲ್ಲಿದೆ, ತೆಗೆದುಕೋ” ಎಂದು ಕೈಯೆತ್ತಿ ಪೆಟ್ಟಿಗೆ ತೋರಿಸಿದ ಶಿಚಿರಿ, ಸೂತ್ರಗಳ ಪಠಣ ಮುಂದುವರಿಸಿದ.

ಕೆಲವು ನಿಮಿಷಗಳು ಸರಿದವು. ಶಿಚಿರಿ ತಲೆಯೆತ್ತಿ ಕಳ್ಳನನ್ನು ಉದ್ದೇಶಿಸಿ ಹೇಳಿದ, “ಎಲ್ಲಾ ಹಣ ತೆಗೆದುಕೊಳ್ಳಬೇಡ. ನಾಳೆ ಕಂದಾಯ ಕಟ್ಟಲಿಕ್ಕಿದೆ. ಸ್ವಲ್ಪ ಹಣ ಇಟ್ಟು ಹೋಗು.”

Image

ಚಿತ್ರಕಲೆಯ ಲೋಕದಲ್ಲಿ ಶ್ರೇಯಸ್ ಕಾಮತ್

ಬೆಳೆಯುವ ಸಿರಿ ಮೊಳಕೆಯಲ್ಲೇ.. ಇದು ಬಹಳ ಹಿಂದಿನಿಂದಲೂ ಹಿರಿಯರಾಡುವ ಹಿತ ಮಾತು. ಈ ಮಾತು ಯಾವಾಗಲೂ ಸರ್ವಕಾಲಿಕ ಸತ್ಯ. ಏಕೆಂದರೆ ನಮ್ಮ ಹಿರಿಯರು ತಮ್ಮ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ವಿಷಯಗಳನ್ನು ಗಾದೆ ಮಾತುಗಳನ್ನಾಗಿ ಮಾಡಿರುವರು. ಬಾಲ್ಯದಲ್ಲೇ ಚುರುಕಾಗಿರುವ, ಅಪಾರ ಪ್ರತಿಭೆಯನ್ನು ಹೊಂದಿರುವ ಮಕ್ಕಳ ಬಗ್ಗೆಯೂ ನಾವು ಈ ಮಾತನ್ನು ಬಳಸುತ್ತೇವೆ. ಕೆಲವು ಮಕ್ಕಳು ಕಲಿಕೆಯಲ್ಲಿ, ಕೆಲವರು ಕ್ರೀಡೆಯಲ್ಲಿ ಮತ್ತು ಕೆಲವರು ವಿವಿಧ ಕಲಾ ಪ್ರಕಾರಗಳಲ್ಲಿ ಪರಿಣತಿಯನ್ನು ಪಡೆದಿರುತ್ತಾರೆ. ಬಾಲ್ಯದಲ್ಲೇ ತಮ್ಮ ಒಲವು ಯಾವ ಕಡೆಗೆ ಇದೆ ಎಂದು ನಿರೂಪಿಸುತ್ತಾ ಹೋಗುತ್ತಾರೆ. ಇಂತಹ ಒಂದು ಬಾಲ ಪ್ರತಿಭೆಯನ್ನು ನಾನು ನಿಮಗೆ ಪರಿಚಯ ಮಾಡಿ ಕೊಡಲಿದ್ದೇನೆ.

Image

ಶುಭದಿನದ ಶುಭ ಸಮಾಚಾರ

ಗುಣೇಷ್ವಪಿ ಹಿ ಕರ್ತವ್ಯಾಃ ಪ್ರಯತ್ನಾಃ ಪುರುಷೈಃ ಸದಾ/

ಗುಣಯುಕ್ತೋ ದರಿದ್ರೋಪಿ ನೈಶ್ಚರೈರಗುಣೈಃ ಸಮಃ//

ಮನುಷ್ಯನು ಯಾವಾಗಲೂ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಅವನ ಘನತೆ ಹೆಚ್ಚುವುದು.

Image