ಝೆನ್ ಪ್ರಸಂಗ: ಮಾರ್ಗದ ಅರಿವು

ಒಬ್ಬ ಝೆನ್ ಗುರುಗಳ ಬಳಿಗೆ ಕನ್‌ಫ್ಯೂಷಿಯನ್ ಪಂಡಿತನೊಬ್ಬ ಬಂದ. "ಕನ್‌ಫ್ಯೂಷಿಯನ್ ತತ್ವಗಳ ಅನುಸಾರ "ಮಾರ್ಗ" ಎಂದರೇನೆಂದು ತಿಳಿದುಕೊಂಡಿದ್ದೇನೆ. ಝೆನ್ ತತ್ವಗಳ ಅನುಸಾರ ಮಾರ್ಗ ಎಂದರೇನೆಂದು ತಿಳಿಯಲು ಬಂದಿದ್ದೇನೆ. ದಯವಿಟ್ಟು ತಿಳಿಸುವಿರಾ?" ಎಂದು ಝೆನ್ ಗುರುವನ್ನು ವಿನಂತಿಸಿದ.

ಝೆನ್ ಗುರುಗಳು ಪಂಡಿತನ ಕೆನ್ನೆಗೆ ಜೋರಾಗಿ ಒಂದೇಟು ಬಿಗಿದು, ಆತನನ್ನು ತಳ್ಳಿದರು. ಕೋಪದಿಂದ ಕುದಿದು ಹೋದ ಪಂಡಿತ ತನ್ನ ಸೊಂಟದ ಖಡ್ಗವನ್ನು ಹೊರಕ್ಕೆಳೆದು ಝಳಪಿಸಿದ. ಆ ಕ್ಷಣದಲ್ಲಿ ಒಬ್ಬ ಝೆನ್ ಸಾಧಕ ಪಂಡಿತನನ್ನು ಅಡ್ಡಗಟ್ಟಿ, ಅವನ ಕ್ರೋಧಕ್ಕೆ ಕಾರಣವೇನೆಂದು ಪ್ರಶ್ನಿಸಿದ. ಗುರುಗಳು ಕೆನ್ನೆಗೆ ಬಾರಿಸಿ ತಳ್ಳಿದ ಸಂಗತಿಯನ್ನು ಸಿಟ್ಟಿನಿಂದ ಕಂಪಿಸುತ್ತಲೇ ತಿಳಿಸಿದ ಪಂಡಿತ.

Image

ಚೊಕ್ಕವಾದ ಚಕ್ಕಡಿ

ಚೊಕ್ಕ ಗಾಡಿಯು ಮರದ ಬಂಡಿಯು

ನಕ್ಕು ನಲಿಯುತ ಸಾಗಿ ನಿಂತಿದೆ

ಸಿಕ್ಕ ಹುಲ್ಲನು ತೆಗೆದು ತುಂಬುತ ಬದುಕು ಸಾಗುತಿದೆ

ಪಕ್ಕ ಹೊಲವಿದೆ ಜಗ್ಗು ಹೊರಟಿದೆ

ರೊಕ್ಕ ಪಡೆಯುತ ಜೀವ ನಡೆದಿದೆ

ಫೋರೆಸ್ಟ್ ಮ್ಯಾನ್ ಆಫ್ ಇಂಡಿಯಾ- ಜಾಧವ್ ಪಯಾಂಗ್

ನಿಮಗೆಲ್ಲಾ ಸಾಲು ಮರದ ತಿಮ್ಮಕ್ಕ ಗೊತ್ತೇ ಇದೆ. ತಮಗೆ ಮಕ್ಕಳಿಲ್ಲ ಎಂಬ ಕೊರತೆಯನ್ನು ರಸ್ತೆಗಳ ಇಕ್ಕೆಲಗಳಲ್ಲಿ ಗಿಡ ನೆಟ್ಟು ಅದನ್ನು ಪೋಷಿಸಿ ಮರ ಮಾಡಿ ಮಕ್ಕಳಂತೆ ಆರೈಕೆ ಮಾಡಿ ನೀಗಿಸಿಕೊಂಡವರು. ಸಾಲು ಮರದ ತಿಮ್ಮಕ್ಕನವರಂತೆಯೇ ಮರಬೆಳೆಸಿ ಒಂದು ಅರಣ್ಯವನ್ನೇ ಸೃಷ್ಟಿಸಿದ ‘ಅರಣ್ಯ ಮನುಷ್ಯ' ಫೋರೆಸ್ಟ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಖ್ಯಾತಿ ಗಳಿಸಿದ ಜಾಧವ್ ಪಯಾಂಗ್ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕಿದೆ. ಈಗಾಗಲೇ ತಮ್ಮ ಜೀವಿತಾವಧಿಯ ೪೦ ವರ್ಷಗಳನ್ನು ಅವರು ಕಾಡು ಮಾಡುವುದಕ್ಕೇ ಶ್ರಮಿಸಿದ್ದಾರೆ. ಅವರ ಈ ಅವಿರತ ಶ್ರಮದ ಫಲವೇ ಸುಮಾರು ೫೦೦ ಹೆಕ್ಟೇರ್ ಗಳಷ್ಟು ದೊಡ್ಡದಾದ ಕಾಡು ನಿರ್ಮಾಣವಾಗಿರುವುದು. 

Image

ಪ್ರೇಮಪಾಶ

ಪುಸ್ತಕದ ಲೇಖಕ/ಕವಿಯ ಹೆಸರು
ಚೈತ್ರಾ ಕುಂದಾಪುರ
ಪ್ರಕಾಶಕರು
ಮುದ್ರಣ : ತ್ವರಿತ ಮುದ್ರಣ, ಗದಗ
ಪುಸ್ತಕದ ಬೆಲೆ
ರೂ.೧೦೦.೦೦ ಮುದ್ರಣ: ೨೦೨೦

ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಹಲವಾರು ಸಾಮಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಪತ್ರಿಕೆಯಲ್ಲಿ, ಸುದ್ದಿ ವಾಹಿನಿಗಳಲ್ಲಿ, ಕಾಲೇಜು ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅತ್ಯಂತ ಚಿಕ್ಕ ಪ್ರಾಯದಲ್ಲಿ ಯುವ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆನೆಯ ತೂಕ

ಒಂದಾನೊಂದು ಕಾಲದಲ್ಲಿ ಒಬ್ಬ ವಿಚಿತ್ರ ಸ್ವಭಾವದ ರಾಜನಿದ್ದ. ರಾಣಿ ಮತ್ತು ರಾಜನ ಅಸ್ಥಾನದವರ ಸಹಿತ ಆ ರಾಜ್ಯದ ಎಲ್ಲರಿಗೂ ರಾಜನ ವಿಚಿತ್ರ ಸ್ವಭಾವದ ಬಗ್ಗೆ ವಿಪರೀತ ಭಯ. ಯಾವ ಕ್ಷಣದಲ್ಲಿ ರಾಜ ಏನು ಮಾಡುತ್ತಾನೆಂದು ಯಾರೂ ಊಹಿಸುವಂತಿರಲಿಲ್ಲ.

ಅದೊಂದು ದಿನ ಗಜಸೇನ ಎಂಬ ಮಾವುತನನ್ನು ಆಸ್ಥಾನಕ್ಕೆ ಕರೆಸಿದ ರಾಜ. ಗಜಸೇನ ಬಂದು ಕೈಮುಗಿದು ನಿಂತಾಗ ರಾಜ ಆದೇಶಿಸಿದ, “ಗಜಸೇನಾ, ನನಗೆ ನನ್ನ ಆನೆಯ ತೂಕ ಎಷ್ಟೆಂದು ತಿಳಿಯಬೇಕಾಗಿದೆ. ನಾಳೆ ಸಂಜೆಯೊಳಗೆ ನನ್ನ ಆನೆಯ ತೂಕ ಎಷ್ಟೆಂದು ನೀನು ಹೇಳದಿದ್ದರೆ ನಿನ್ನನ್ನು ಗಲ್ಲಿಗೇರಿಸುತ್ತೇನೆ.”

Image

ನಮ್ಮ ಹೆಮ್ಮೆಯ ಭಾರತ (5 - 6)

೫.ಜಗತ್ತನ್ನು ಬೆರಗಾಗಿಸಿದ ನಾಗರಿಕತೆ: ಭಾರತದ ಸಿಂಧೂ ಕಣಿವೆ ನಾಗರಿಕತೆ
ಸಿಂಧೂ ನದಿಯ ದಡದಲ್ಲಿ ಬೆಳೆದ ಪ್ರಾಚೀನ ನಾಗರಿಕತೆ ಸಿಂಧೂ ಕಣಿವೆ ನಾಗರಿಕತೆ. ಇದು ಸುಮಾರು ಒಂದು ಸಾವಿರ ವರುಷ (ಕ್ರಿ.ಪೂ.೨,೫೦೦ರಿಂದ ಕ್ರಿ.ಪೂ.೧,೫೦೦ ವರೆಗೆ) ಮೆರೆದ ನಾಗರಿಕತೆ. ಇಲ್ಲಿನ ಜನವಸತಿ ಈಗಿನ ಭಾರತ ಹಾಗೂ ಅಫಘಾನಿಸ್ಥಾನಗಳ ಭಾಗಗಳನ್ನು ಮತ್ತು ಈಗಿನ ಇಡೀ ಪಾಕಿಸ್ಥಾನವನ್ನು ಒಳಗೊಂಡಿತ್ತು.

ಸಿಂಧೂ ನಾಗರಿಕತೆಯ ಇಂಜಿನಿಯರುಗಳ ಕೌಶಲ್ಯ ನಮ್ಮನ್ನು ಬೆರಗಾಗಿಸುತ್ತದೆ. ಅವರು ಸೀಸ, ತಾಮ್ರ ಮತ್ತು ಸತು ಸಂಶೋಧಿಸಿದರು; ಅಲ್ಲಿನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಇಟ್ಟಿಗೆಗಳನ್ನು ಉಪಯೋಗಿಸುತ್ತಿದ್ದರು. ರಸ್ತೆಯ ಪಕ್ಕಗಳಲ್ಲಿ ಅತ್ಯುತ್ತಮ ಒಳಚರಂಡಿ ಜಾಲವನ್ನು ರಚಿಸಿದ್ದರು.

Image

ಪುಸ್ತಕನಿಧಿ -8. 'ನಮ್ಮ ಭಾರತ ' - ಯಥಾ ಪ್ರಜಾ ತಥಾ ರಾಜಾ?

ಏನು? ತಲೆಬರಹದಲ್ಲಿ ತಪ್ಪಿದೆಯೇ ? "ಯಥಾ ಪ್ರಜಾ ತಥಾ ರಾಜಾ" ? ಅದು "ಯಥಾ ರಾಜಾ ತಥಾ ಪ್ರಜಾ " ಅಲ್ಲವೆ? ಸರಿ, ಸ್ವಾಮೀ. ನಾವೆಲ್ಲ ಹಾಗೆಯೇ ಕೇಳಿದ್ದೇವೆ . ಆದರೆ ರಾಜರ ಕಾಲ ಮುಗಿದಿದೆ ಅಲ್ಲವೇ ? ಈಗ ಪ್ರಜೆಗಳ ಆಳ್ವಿಕೆಯ ಕಾಲ ಅಲ್ಲವೇ ? ದಯವಿಟ್ಟು ಮುಂದೆ ಓದಿ. ಮೀನೂ  ಮಸಾನಿ ಸ್ವತಂತ್ರ ಭಾರತದ ಒಬ್ಬ ಗೌರವಾನ್ವಿತ ರಾಜಕಾರಣಿ . ಅವರ ಬಗ್ಗೆ ವಿಕಿಪೀಡಿಯಾ ಮೂಲಕ ತಿಳಿಯಬಹುದು 1940 ರಲ್ಲಿ ಅವರು our India ಎಂಬ ಪುಸ್ತಕ ಬರೆದಿದ್ದರು. ಕನ್ನಡಕ್ಕೆ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಅನುವಾದಿಸಿದ್ದರು.  ಭಾರತ ಎಂದರೆ ಏನು, ಭಾರತದ ಜನ ಜೀವನ ಹೇಗಿದೆ.  ಜಗತ್ತಿನ ಇತರ ದೇಶಗಳ ಜನರಿಗೆ ಹೋಲಿಸಿದರೆ ನಾವು ಹೇಗಿದ್ದೇವೆ.