ಕೀಟ ಜಗತ್ತಿನ ಅಚ್ಚರಿ- ಜಿರಾಫೆ ಜೀರುಂಡೆ

ಡಾರ್ವಿನ್ ನ ವಿಕಾಸವಾದಕ್ಕೆ ಉತ್ತಮ ಉದಾಹರಣೆಯೆಂದರೆ ಜಿರಾಫೆ ಎಂಬ ಪ್ರಾಣಿ. ಅದರ ಉದ್ದದ ಕತ್ತು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಸಹಸ್ರಾರು ವರ್ಷಗಳ ಹಿಂದೆ ಜಿರಾಫೆಯ ಕತ್ತು ಬೇರೆಲ್ಲಾ ಪ್ರಾಣಿಗಳಂತೆಯೇ ಇತ್ತಂತೆ. ನಂತರದ ದಿನಗಳಲ್ಲಿ ನೆಲದಲ್ಲಿನ ಆಹಾರದ ಕೊರತೆಯಿಂದಾಗಿ ಎತ್ತರದ ಮರಗಳ ಎಲೆಗಳನ್ನು ತಿನ್ನಲು ಪ್ರಯತ್ನಿಸಿದಾಗ ಜಿರಾಫೆಯ ಕತ್ತು ಉದ್ದವಾಗುತ್ತಾ ಹೋಯಿತೆಂದು ಡಾರ್ವಿನ್ ವಾದ. ಇದೇನೇ ಇರಲಿ. ಕೀಟ ಜಗತ್ತಿನಲ್ಲೊಂದು ಜಿರಾಫೆ ಕತ್ತಿನ ಕೀಟವಿದೆ. ಜಿರಾಫೆ ಪ್ರಾಣಿಯಂತೆಯೇ ಉದ್ದವಾದ ಕತ್ತನ್ನು ಹೊಂದಿರುವುದರಿಂದಲೇ ಈ ಕೀಟಕ್ಕೆ ಆ ಹೆಸರು ಬಂದಿದೆ.

Image

ಸುಳ್ಳಿನ ನೆರಳಲ್ಲಿ ಸತ್ಯ

ಸತ್ಯಕ್ಕೆ ಸಾವಿಲ್ಲ ಅಂದವರಾರು?
ಸುಳ್ಳು ಸಾಯಿಸುತ್ತದೆ 
ಜನಗಳನ್ನು ಮನಗಳನ್ನು 
ಕೊನೆಗೆ ಸತ್ಯವನ್ನೂ

ಸುಳ್ಳು ಆಕರ್ಷಣೀಯ  
ಸತ್ಯ ಕಡೆಗಣನೀಯ

ಸುಳ್ಳಂತೂ ವಾಚಾಳಿ 
ಸತ್ಯವೋ ಗಂಭೀರ

ಸುಳ್ಳು ಮುದ ನೀಡುವ ಮೆತ್ತೆ
ಸತ್ಯ ಕಾಲಿಗೆ ಚುಚ್ಚುವ ಮುಳ್ಳು

ಸುಳ್ಳಿನದು ಪ್ರಚಾರಪ್ರಿಯತೆ
ಸತ್ಯದ್ದು ದಿವ್ಯ ನಿರ್ಲಕ್ಷತೆ

ಸುಳ್ಳಿಗಿದೆ ಶರವೇಗ
ಸತ್ಯಕ್ಕಿಲ್ಲ ಆ'ವೇಗ'

ಸುಳ್ಳಿಗಿಲ್ಲ ಎಲ್ಲೆ
ಸತ್ಯಕ್ಕಿಲ್ಲ ಬೆಲೆ

ಸುಳ್ಳಿಗುಂಟು ಸಹಸ್ರಾರು 
ಹರಿಕಾರರು(ಹಾಹಾಕಾರರು?)
ಸತ್ಯಕ್ಕೆ ಕಡ್ಡಾಯ ಬೇಕು
ಅನ್ವೇಷಿಗರು

 

ಚಿತ್ರ: Google images 

ಒಂದು ಚಿತ್ರ- ಎರಡು ಕವನಗಳು

ಎಮ್ಮೆಯ ಮಜ (ಭಾ.ಷ)

ಚೂಪು ಕಣ್ಣಿನ ಮಹಿಷ ನೋಡಿರಿ

ಕೋಪವಿಲ್ಲದೆ ಕೆಸರು ಕೆಂಪಲಿ

ತಾಪ ಪಡೆಯಲು ಹಾದಿ ಮದ್ಯೆದಿ ಹೊಂಡ ನೀರಿನಲಿ

ಚಾಪು ಮೂಡಿಸಿ ನೋಟ ಬೀರುತ

ತಂದೆಯ ಮನಸು...

ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯದಾಗಿ " ನಿನಗೇನೂ ಆಗಲ್ಲ ಚಿನ್ನೂ , ಏನೂ ಹೆದರಬೇಡ " ಅಂತ ಒಳಗೊಳಗೆ ಅಳು ಉಕ್ಕಿ ಬರುತ್ತಿದ್ದರೂ, ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿಯಿಂದ ಸವರುತ್ತಾ, ಆಕೆಯ ಹಣೆಗೆ ಮುತ್ತಿಕ್ಕಿ  ಸಾಂತ್ವನ ಹೇಳುತ್ತಾ ಕಳುಹಿಸಿಕೊಡುವಾಗ - " ಓ ದೇವರೇ ತಾಯಿ ಮಗುವನ್ನು ನೀನೇ ಕಾಪಾಡು " ಎಂಬ ಪ್ರಾರ್ಥನೆಯಾಗಿರುತ್ತದೆ ಗಂಡನಾದವನ ಮನಸಲ್ಲಿ.... 

Image

ವೃಂದಾವನ-ವ್ಯಕ್ತಿಚಿತ್ರಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦ ಮುದ್ರಣ: ೨೦೨೦

ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ. ಅದರ ಹೆಸರು ಗಂಧದ ಮಾಲೆ. ಅವೂ ವ್ಯಕ್ತಿ ಚಿತ್ರಗಳದ್ದೇ ಕಥನ.

ಎರಡು ಗಝಲ್ ಗಳು

ಗಝಲ್ ೧

ಇರಿದ ಮಾತುಗಳ ಮರೆತು ಸನಿಹ  ಬರುವೆ ಸ್ವೀಕರಿಸು ಗೆಳೆಯಾ

ಮುರಿದ ಮನಸುಗಳ ಮಗದೊಮ್ಮೆ ಆವರಿಸು ಗೆಳೆಯಾ

 

ರಾಧಾ ಮಾಧವರ ಪ್ರೇಮ ನಿವೇದನೆಯ ನೋಡಿರುವೆಯಲ್ಲ

 ನೀಲಮೇಘ ಶ್ಯಾಮನಾಗಿ ಒಂದಾಗಿ ಉದ್ಧರಿಸು ಗೆಳೆಯಾ

 

ಪುಸ್ತಕನಿಧಿ: - 7. 'ಲಾವಣ್ಯವತಿ' ಎಂಬ ಹೆಸರಿನ ಐತಿಹಾಸಿಕ ಕಾದಂಬರಿ

ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಅನೇಕ  (ಸಾವಿರಕ್ಕೂ ಹೆಚ್ಚು) ಪುಸ್ತಕಗಳನ್ನು ಇಳಿಸಿಕೊಂಡಿದ್ದೆನು.   ಈಗ ಆ ತಾಣವು ಕೆಲಸ ಮಾಡುತ್ತಿಲ್ಲ. ಅಲ್ಲಿನ  ಪುಸ್ತಕಗಳು ಈಗ  archive.org  ತಾಣದಲ್ಲಿ ಸಿಗಬಹುದು.  ಅವುಗಳನ್ನು ಓದುವ ಕಾಲವು ನನ್ನ ಪಾಲಿಗೆ ಕೂಡಿ ಬಂದ ಹಾಗಿದೆ. :)

ಈ ದಿನ  'ಲಾವಣ್ಯವತಿ' ಎಂಬ ಹೆಸರಿನ ಐತಿಹಾಸಿಕ ಕಾದಂಬರಿ ಓದಿದೆನು . ಪೆನುಗೊಂಡೆ,  ನಿಡುಗಲ್ಲು  ಸ್ಥಳಗಳಿಗೆ ಸಂಬಂಧಪಟ್ಟಿದುದು ಇದು . 
ಎಂ. ಕೆ. ನಾಗಪ್ಪ ಎಂಬುವವರು ಬರೆದ  ಈ ಕಾದಂಬರಿಯು   https://archive.org/details/in.ernet.dli.2015.364694 ಈ ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.  ಇಂಥ ಹಳೆಯ ಕನ್ನಡ ಪುಸ್ತಕ ಹುಡುಕಲು pustaka.sanchaya.net ತಾಣವನ್ನು ಬಳಸಬಹುದು. 

ಜೀವದ ಭಾವ

ಅಳುತಿದೆ ಬಡ ಜೀವ
ತಂದೆ ತಾಯಿಯ ಪ್ರೀತಿ ಸಿಗದೆ
ಬೆಳೆಯುತಿದೆ
ಕಾಣದ ಲೋಕದಲಿ ಕೈಗೊಂಬೆಯಾಗಿ
ತಾಯಿಯಲ್ಲದ ತಾಯಿಯ ಮಡಿಲಿನಲಿ
ಜೀವನದಟ ಶುರುವಾಗಿ

ಬಯಸುತ ಪ್ರೀತಿಯನು
ತಾಯಿಯ ಮೊರೆ ಹೋಗಲು
ಅಲ್ಲಿ ಲ್ಲವೇ ತಾಯಿ
ತಂದೆಯ ಕಾಣಲು
ಓಡೋಡಿ ಬಂದರು
ಸಿಗನು ತಂದೆ
ಇಬ್ಬರೂ ಕೆಲಸದಲಿ ಮಗ್ನರು
ಮಗುವಿಲ್ಲಿ ತಬ್ಬಲಿಯ ಕಣ್ಣೀರು

ನಾಲ್ಕು ಗೋಡೆಯ ನಡುವೆ
ಬೆಳವಣಿಗೆಯ ಪರ್ವ
ಹೆಸರಿಗೆ ಸಂಬಂಧ
ಉಸಿರಿಗೆ ದಿಗ್ಬಂಧ
ತಾಯಿಯ ಬೇರು ಗಟ್ಟಿಯಾಗದೆ
ಬೆಳೆಯುತಿದೆ ಚಟ್ಟಿಗಿಡ
ಮಣ್ಣಗಿಡವಲ್ಲ