ಪಯಣದ ಹಾಡುಗಳು ೩

ಹೂ ಹಸಿರೆ  ಸಿರಿಯು ಇಲ್ಲಿ

     ನಿಲ್ಲು ನಿಲ್ಲೆಲೆ ಗೆಳೆಯ!

 

ಬಣ್ಣಬಣ್ಣದ ಕನಸ

ತುಂಬಿ ಬಗೆ ಬಾನೊಳಗೆ

        ಧಾವಿಸುವ ಜೀವ ಗೆಳೆಯ!

ಸಮರ್ಥ ಸಂಘಟಕ, ಆವಿಷ್ಕಾರಗಳಿಗೆ ಪೇಟೆಂಟ್ ಕೇಳದ ಕೃಷಿಕ: ಮಂಚಿ ಶ್ರೀನಿವಾಸ ಆಚಾರ್

(ಕೃಷಿಕರ ಪರವಾಗಿ ಮತ್ತು ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ನೂರಾರು ಕೃಷಿಕ ಸಮಾವೇಶಗಳಲ್ಲಿ ಬಲವಾಗಿ ಧ್ವನಿಯೆತ್ತುತ್ತಿದ್ದ ಸಮರ್ಥ ಸಂಘಟಕ ಮಂಚಿ ಶ್ರೀನಿವಾಸ ಆಚಾರ್ (೭೩) ಅಲ್ಪ ಕಾಲದ ಅಸೌಖ್ಯದಿಂದ ೨೯ ಆಗಸ್ಟ್  ೨೦೨೦ರಂದು ನಮ್ಮನ್ನು ಅಗಲಿದರು.  ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮತ್ತು ಕೃಷಿಕರೇ ರೂಪಿಸುವ ಅಪ್ಪಟ ಕೃಷಿಕಪರ ಮಾಸಪತ್ರಿಕೆ "ಅಡಿಕೆ ಪತ್ರಿಕೆ”ಯ ಸಂಪಾದಕ - ಪ್ರಕಾಶಕರಾಗಿ ಅವರು ಸಲ್ಲಿಸಿದ ಸೇವೆಗೆ ಬೆಲೆ ಕಟ್ಟಲಾಗದು. ಆತ್ಮೀಯ ಮಂಚಿ ಶ್ರೀನಿವಾಸ ಆಚಾರ್ ಬಗ್ಗೆ ನಾನು ಬರೆದಿದ್ದ ಬರಹವೊಂದು “ಉದಯವಾಣಿ"ಯ ನನ್ನ ಅಂಕಣ “ಬಹುಧಾನ್ಯ"ದಲ್ಲಿ ೧೫ ವರುಷಗಳ ಮುಂಚೆ, ೩ ಮೇ ೨೦೦೫ರಂದು ಪ್ರಕಟವಾಗಿತ್ತು. ಅದನ್ನೇ ಅವರಿಗೆ ನುಡಿನಮನವಾಗಿ ಪುನಃ ಪ್ರಕಟಿಸುತ್ತಿದ್ದೇನೆ.)

Image

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆಂಗ್ಲ- ಆಲ್ಫ್ರೆಡ್ ಆಲ್ಡ್ರೆಡ್

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಹಸ್ರಾರು ಭಾರತಾಂಬೆಯ ವೀರ ಪುತ್ರರ ಬಗ್ಗೆ ನಮಗೆ ತಿಳಿದೇ ಇದೆ. ಅವರೆಲ್ಲರೂ ಭಾರತ ದೇಶದಲ್ಲಿ ಹುಟ್ಟಿ ತಮ್ಮದೇ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಯಾರ ಆಕ್ರಮಣದಿಂದ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ಪರತಂತ್ರರಾದೆವೋ ಅವರ ನಾಡಿನಲ್ಲೇ ಹುಟ್ಟಿದ ಓರ್ವ ವ್ಯಕ್ತಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಅಚ್ಚರಿಯ ಸಂಗತಿಯೇ ಹೌದು. ಬ್ರಿಟೀಷರು ನಮ್ಮನ್ನು ಆಳುತ್ತಿರುವಾಗ ಅವರಲ್ಲಿ ಹಲವಾರು ಮಂದಿಗೆ ನಮ್ಮವರ ಕರುಣಾಜನಕ ಸ್ಥಿತಿಯ ಬಗ್ಗೆ ಕನಿಕರವಿತ್ತು.

Image

ವಿಭೂತಿ ಮಹಿಮೆಯ ಕಥೆ

ಈಶ್ವರನ ಪತ್ನಿಯಾದ ಪಾರ್ವತಿ ದೇವಿಗೆ ಒಮ್ಮೆ ಒಂದು ಯೋಚನೆ ಬಂತು. ‘ಬ್ರಹ್ಮನ ಪತ್ನಿ ಸರಸ್ವತಿ, ವಿಷ್ಣುವಿನ ಪತ್ನಿ ಲಕ್ಷ್ಮಿ ಈರ್ವರೂ ಮೈತುಂಬಾ ಬಂಗಾರ ಹಾಕಿಕೊಂಡಿದ್ದಾರೆ. ನಾನು ಮಾತ್ರ ನಿರಾಭರಣ ಸುಂದರಿಯಂತೆ ಬಂಗಾರವಿಲ್ಲದೇ ಇದ್ದೇನಲ್ಲಾ’. ತ್ರಿಮೂರ್ತಿಯಲ್ಲಿ ಒಬ್ಬರಾದ ಈಶ್ವರನ ಪತ್ನಿಯಾದ ತಾನು ಯಾಕೆ ಬಂಗಾರದ ಆಭರಣಗಳನ್ನು ಹಾಕಿಕೊಳ್ಳಬಾರದೆಂದು ಪಾರ್ವತಿ ಸ್ವತಃ ಈಶ್ವರನಲ್ಲಿ  ‘ಸ್ವಾಮಿ ನನಗೆ ಬಂಗಾರ ಹಾಕಿಕೊಳ್ಳುವ ಬಯಕೆಯಾಗಿದೆ. ನನಗೆ ಅನುಗ್ರಹಿಸಿ' ಎಂದು ಕೇಳಿಕೊಂಡಾಗ ಈಶ್ವರ ಒಂದು ಚಿಟಿಕೆ ಭಸ್ಮ (ವಿಭೂತಿ) ವನ್ನು ತೆಗೆದು ಪಾರ್ವತಿ ಕೈಗೆ ಕೊಡುತ್ತಾನೆ.

Image

ತನ್ನನ್ನೇ ಹೊಗಳುವ ಡೋಲಣ್ಣ ಕರಡಿ ಗೊಂಬೆ

ಡೋಲಣ್ಣ ಕರಡಿ ಗೊಂಬೆಯ ಚಟ ತನ್ನನ್ನೇ ತಾನು ಹೊಗಳುವುದು. "ನನ್ನ ಮೃದುವಾದ ರೋಮ ನೋಡಿದಿರಾ? ಹೇಗೆ ಹೊಳೆಯುತ್ತಿದೆ ನೋಡಿ” ಎಂದು ಇತರ ಗೊಂಬೆಗಳೊಂದಿಗೆ ಹೇಳುತ್ತಲೇ ಇರುತ್ತಿತ್ತು ಡೋಲಣ್ಣ ಕರಡಿ ಗೊಂಬೆ.

“ಈ ಮನೆಯಲ್ಲಿ ನಾನೇ ಅತಿ ಬುದ್ಧಿವಂತ ಗೊಂಬೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ” ಎಂದು ತನ್ನ ಬಗ್ಗೆ ಮಾತನಾಡುವುದೆಂದರೆ ಡೋಲಣ್ಣ ಕರಡಿ ಗೊಂಬೆಗೆ ಖುಷಿಯೋ ಖುಷಿ. ಆಗೆಲ್ಲ ಇತರ ಗೊಂಬೆಗಳು ತನ್ನ ಬೆನ್ನ ಹಿಂದೆ ನಗುತ್ತಿವೆ ಎಂಬುದು ಡೋಲಣ್ಣ ಕರಡಿ ಗೊಂಬೆಗೆ ಗೊತ್ತಿರಲಿಲ್ಲ.

Image

ತಾಷ್ಕೆಂಟ್ ಡೈರಿ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಉಮೇಶ್
ಪ್ರಕಾಶಕರು
ಧಾತ್ರಿ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ.೧೭೦.೦೦ ಮೊದಲ ಮುದ್ರಣ : ಜೂನ್ ೨೦೨೦

ಪ್ರಾಮಾಣಿಕತೆ ಮತ್ತು ಸರಳತೆ ಎಂಬ ವಿಷಯ ಮನಸ್ಸಿಗೆ ಬಂದಾಗಲೆಲ್ಲಾ ನೆನಪಾಗುವುದು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ತಮ್ಮ ಬದುಕಿನ ಉದ್ದಕ್ಕೂ ಅವರು ನಂಬಿದ ತತ್ವ ಸಿದ್ಧಾಂತದಂತೆಯೇ ಬಾಳಿ ಬದುಕಿದರು. ಆದರೆ ಅವರ ಸಾವು ಅವರ ಬದುಕಿನಷ್ಟು ಸರಳವಾಗಿರಲಿಲ್ಲ. ಭಾರತ-ಪಾಕಿಸ್ತಾನದ ನಡುವೆ ರಷ್ಯಾದ ತಾಷ್ಕೆಂಟ್ ಎಂಬಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ರಾತ್ರಿಯೇ ಶಾಸ್ತ್ರೀಜಿಯವರ ಮರಣವಾಗುತ್ತದೆ. ಆದರೆ ಇದು ಸಹಜ ಮರಣ ಅಲ್ಲವೆಂದೇ ಬಹುತೇಕರ ಸಂಶಯ. ಈ ಎಲ್ಲಾ ಸಂಶಯಗಳನ್ನು ನಿವಾರಿಸಲು ಎಸ್.ಉಮೇಶ್ ಅವರು ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕವನ್ನು ಬರೆದು ಕನ್ನಡದ ಓದುಗರಿಗಾಗಿ ಹೊರತಂದಿದ್ದಾರೆ. 

ಮಹಾಭಾರತದಲ್ಲಿ ಪಾಂಡವರ ವಂಶಾವಳಿಯ ಬಗ್ಗೆ... (ಭಾಗ ೧೫)

ಮಹಾಭಾರತದ ಸಮಯದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲಾ ನೂರು ಮಂದಿ ಕೌರವರು ಮರಣ ಹೊಂದುತ್ತಾರೆ. ಐದು ಜನ ಪಾಂಡವರು ಮಾತ್ರ ಬದುಕಿ ಉಳಿಯುತ್ತಾರೆ. ಯುದ್ಧದ ನಂತರ ಹಸ್ತಿನಾಪುರದ ರಾಜನಾಗಿದ್ದ ಧೃತರಾಷ್ಟ್ರನು ತನ್ನ ಸಿಂಹಾಸನವನ್ನು ತನ್ನ ತಮ್ಮನಾದ ಪಾಂಡುವಿನ ಹಿರಿಯ ಪುತ್ರ ಯುಧಿಷ್ಟಿರನಿಗೆ ವಹಿಸಿ ವಾನಪ್ರಸ್ತಕ್ಕೆ ತೆರಳುತ್ತಾನೆ. ಅವನ ಜೊತೆ ಅವನ ಪತ್ನಿ ಗಾಂಧಾರಿ ಹಾಗೂ ಪಾಂಡುವಿನ ಪತ್ನಿಯಾದ ಕುಂತಿಯೂ ತೆರಳುತ್ತಾರೆ ಎಂದು ಪುರಾಣದ ಕಥೆಗಳು ಹೇಳುತ್ತವೆ.

Image

ಜೀವನದಲ್ಲಿ ಬೆಳಕು ತೋರುವ ಎರಡು ಹಿತನುಡಿಗಳು

ಪುಸ್ತಕ ಮಿತ್ರ

ಸ್ನೇಹಿತರೇ,ಸಮುದ್ರದಲ್ಲಿ ಎಷ್ಟು ನೀರಿದ್ದರೇನು ಬಾಯಾರಿದಾಗ ಕುಡಿಯಲು ಯೋಗ್ಯವಲ್ಲ.ನೀರು ಬಾವಿಯದು,ಸುರಂಗದ ನೀರು,ಇತ್ತೀಚೆಗೆ ಬೋರ್ವೆಲ್ ನೀರು ಬೇಕೇ ಬೇಕು.ಹಳ್ಳ ,ಹೊಳೆ,ಕೆರೆ ನೀರನ್ನೂ ಕುಡಿಯುವವರೂ ಇದ್ದಾರೆ, ಅನಿವಾರ್ಯವಾಗಿ.

Image