ಒಂದು ಚಿತ್ರಕ್ಕೆ ಎರಡು ಕವನಗಳು

ವಯೋವೃದ್ದನ ಸ್ವಗತ

ನೋವಿನ ಅನುಭವ ನೋಡಿದೆ ಹೃದಯದಿ

ಸಾವದು ಬರದೆಯೆ ಕಾಯುತಲಿ|

ಬವಣೆಯ ಜೊತೆಯಲಿ ಬದುಕಿನ ಕಷ್ಟವ

ಸವಿಯುತ ಉಂಡೆನು ಗುಡಿಸಲಲಿ||

 

ಚಂದದ ನಗುವಿನ ಚಂದಣ್ಣ ಮೊಸಳೆ

ಚಂದಣ್ಣ ಮೊಸಳೆಯ ನಗು ಚಂದವೋ ಚಂದ. ಅದನ್ನು ಕಂಡ ವನ್ಯಮೃಗ ಫೋಟೋಗ್ರಾಫರರ ತಂಡದ ಸದಸ್ಯರು ಚಂದಣ್ಣ ಮೊಸಳೆಯ ನಗುವಿನ ಫೋಟೋ ತೆಗೆಯಲು ಬಂದರು.

“ಎಲ್ಲಿ ನೋಡೋಣ, ಚೆನ್ನಾಗಿ ನಗು" ಎಂದ ತಂಡದ ಮುಂದಾಳು. ಚಂದಣ್ಣ ಮೊಸಳೆ ಚಂದವಾಗಿ ನಗುತ್ತಿದ್ದಂತೆ ಲೈಟುಗಳು ಮಿನುಗಿದವು ಮತ್ತು ಕೆಮರಾಗಳು ಫೋಟೋ ಕ್ಲಿಕ್ಕಿಸಿದವು.

Image

ಮಾನವೀಯತೆಯ ಹಿಂದೆ…

ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಅವರು ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು ಹಾಗೂ ಅವರು ಒಂದು ಸಣ್ಣ ಕೈಚೀಲ ಹಿಡಿದು ಕೊಂಡಿದ್ದರು. ಅವರನ್ನು ಗಮನಿಸಿದರೆ, ದೂರದಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವ ಹಾಗನಿಸಿತು. ಅವರ ಕೈಯಲ್ಲಿ ಹಿಡಿದಿದ್ದ ಒಂದು ಚೂರು ಕಾಗದ ನೋಡುತ್ತಾ, *"ಇದು ಆನಂದ್ ಅವರ ಮನೇನಾ, ಯೋಗಾನಂದ ರಸ್ತೇನಾ"* ಅಂತ ಕೇಳಿದರು. 

Image

ಬದುಕ ದಾರಿಗೆ ಬೆಳಕಿತ್ತ ದೇವರು

ಬದುಕ ದಾರಿಗೆ ಬೆಳಕ ದೇವನು

ಪದವಿ ಗಳಿಸಲು ದಾರಿದಾತನು

ಕದಕವನಳಿಸುತಲೀ ಜ್ಞಾನದ ದೀಪ ಹಚ್ಚುವನು

ಕುಧರ ಹತ್ತುವ ಸಾಸ ಮಾಡುತ

ಗುದುಕಿ ನಿಂತಿಹ ದೇವ ಮಂದಿರ

ನಮ್ಮ ಹೆಮ್ಮೆಯ ಭಾರತ (7 - 8)

೭.ಜಗತ್ತಿನ ಅಪ್ರತಿಮ ಧಾರ್ಮಿಕ ಸಮಾವೇಶ ಭಾರತದ ಕುಂಭಮೇಳ
ಕುಂಭಮೇಳ ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶ ಎಂದು ದಾಖಲಾಗಿದೆ. ಇದರಲ್ಲಿ ಲಕ್ಷಗಟ್ಟಲೆ ಹಿಂದೂಗಳೂ ಪ್ರವಾಸಿಗಳೂ ಭಾಗವಹಿಸುತ್ತಾರೆ.

ಹಿಂದೂ ಧಾರ್ಮಿಕ ಪ್ರತೀತಿಯ ಪ್ರಕಾರ, ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧವಾದಾಗ, ಅಮರತ್ವದ ಪಾನೀಯ ಅಮೃತದ ಕೆಲವು ಬಿಂದುಗಳು ನಾಲ್ಕು ಸ್ಥಳಗಳಿಗೆ ಬಿದ್ದವು: ಪ್ರಯಾಗ ಅಥವಾ ಅಲ್ಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ. ಈ ನಾಲ್ಕು ಪವಿತ್ರ ಸ್ಥಳಗಳಲ್ಲಿ ಪರ್ಯಾಯವಾಗಿ ಕುಂಭಮೇಳ ಜರಗುತ್ತದೆ.

Image

ಇಡ್ಲಿ ವಡ ಡೆಡ್ಲಿ ಮರ್ಡರ್

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೭೫.೦೦ ಮುದ್ರಣ: ಎಪ್ರಿಲ್ ೨೦೧೯

೨೦೦೧ರಲ್ಲಿ ಚೆನ್ನೈನ ಕೊಡೈಕೆನಾಲ್ ನಲ್ಲಿ ನಡೆದ ಒಂದು ಕೊಲೆಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ಕೋಟ್ಯಾಧೀಶ್ವರ, ಖ್ಯಾತ ಶರವಣ ಭವನದ ಮಾಲಕ ಅಣ್ಣಾಚ್ಚಿ ಪಿ. ರಾಜಗೋಪಾಲ್ ಮಾಡಿಸಿದ ಹೇಯ ಕೊಲೆಯ ಬಗ್ಗೆ ಈ ಪುಸ್ತಕ ಬಹಳ ಮಾಹಿತಿ ನೀಡುತ್ತದೆ. ಜ್ಯೋತಿಷ್ಯದ ಮೇಲೆ ರಾಜಗೋಪಾಲ್ ಗೆ ಬಹಳಷ್ಟು ನಂಬಿಕೆ. ಕೃಪಾನಂದ ವಾರಿಯರ್ ಸ್ವಾಮಿಗಳ್ ಭಕ್ತರಾಗಿದ್ದ. ಆದರೆ ಕುಳಂತೈ ಪಂಡಿಚ್ಚಿ ಎಂಬ ಜ್ಯೋತಿಷಿಯ ಮಾತು ಕೇಳಿಯೇ ಈ ಕೊಲೆ ಮಾಡಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಿದ. ಅತ್ಯಂತ ಕಡು ಬಡತನದ ಹಿನ್ನಲೆಯಿಂದ ಬಂದಿದ್ದ ರಾಜಗೋಪಾಲ್ ಸಣ್ಣವರಿದ್ದಾಗಲೇ ಹೋಟೇಲ್ ಒಂದರಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಎರಡು ಜಾನಪದ ಗೀತೆಗಳು

ಪ್ರೀತಿಯ ಅಕ್ಕ

ಅಕ್ಕನ ಗುಡಿಯದು ಬಕ್ಕುಡಿ ಕಂಡೈತಿ

ಪಕ್ಕದ ಮನೆಯ ಸೊಬಗು|ನೋಡುತ||

ಚಕ್ಕನೆ ಬಂದು ಹೋಗ್ಯಾಳಾ||

 

ತಂದಳು ಹೂವನು ಬಂದಳು ಕೇರಿಗೆ

ಶಂಕರಾನಂದ ಹೆಬ್ಬಾಳರ ಎರಡು ಹನಿಗಳು

*ಶಾಯರಿ ೧*

ನಿನ್ನ ನೆನಪನ್ಯಾಗ ಹಗಲು ರಾತ್ರಿ 

ಆಗಿದ್ದ ಗೊತ್ತಾಗವಲ್ದು

ಬಂಗಾರದಂತ ನಿನ್ನ ಮಾತ ಕೇಳಾಕತ್ರ 

ನಾ ಎಲ್ಲಿ ಅದಿನೆಂತನ ತಿಳಿವಲ್ದು

ಕೊಂಕಣಿ ಸಂಶೋಧಕ, ಲೇಖಕ ಪೌಲ್ ಮೊರಾಸ್ ನೆನಪಿನಲ್ಲಿ…

ಗೆಳೆಯ ಮನೋಜ್ ಮೊನ್ನೆ ಭಾನುವಾರ (ಆಗಸ್ಟ್ ೩೦, ೨೦೨೦)  ಫೋನ್ ಮಾಡಿ ಪೌಲ್ ಮೊರಾಸ್ ನಿಧನ ಹೊಂದಿದ್ದಾರೆ ಎಂದು ತಿಳಿಸಿದಾಗ ತುಂಬಾನೇ ದುಃಖವಾಯಿತು. ೬೮ ತೀರಾ ಸಾಯುವ ವಯಸ್ಸೇನಲ್ಲ. ಅವರು ಕೊಂಕಣಿ ಸಾಹಿತ್ಯ ಲೋಕಕ್ಕೆ ನೀಡ ಬೇಕಾದ ಕೊಡುಗೆಗಳು ಇನ್ನೂ ಅನೇಕ ಬಾಕಿಯಿದ್ದುವು. ಅವರ ಜೊತೆ ಕಳೆದ ಕೆಲವು ಸಮಯವನ್ನು ನಿಮ್ಮೆಲ್ಲರ ಜೊತೆ ನೆನಪಿಸಿಕೊಳ್ಳಲು ಬಯಸುತ್ತೇನೆ. 

Image

ಹರಿಣಾಕ್ಷಿಯ ನೃತ್ಯ ವೈಭವ

ಜಿಂಕೆಯ ಕಣ್ಣಿನ ಚಂದದ ಮೊಗದಲಿ

ಕಂಕರಿ ವಾದ್ಯವು ಮೊಳಗುತಿದೆ

ಕಂಕಣ ಕಟ್ಟಿದ ತೋಳಲಿ ಮಿಂಚಿದೆ

ಕಿಂಕಿಣಿ ನಾದವು ಮಿಂಚುತಿದೆ..

 

ದೃಷ್ಠಿಯ ಬಟ್ಟದು ಕದಪಿನ ನಡುವೆಯೆ