ಗಝಲ್ ಸೊಬಗು
ಒಂಬತ್ತು ತಿಂಗಳ ಹೆತ್ತು ಹೊತ್ತು
ಸಾಕಿ ಬೆಳಸ್ಯಾಳ ನನ್ನಮ್ಮ|
ನಂಬಿದವರಿಗೆ ಮೋಸ ಮಾಡಬ್ಯಾಡ
ಅಂತ ತಿಳಿಸ್ಯಾಳ ನನ್ನಮ್ಮ||
ಉಪವಾಸ ಇದ್ದು ನನ್ನನ್ನು
- Read more about ಗಝಲ್ ಸೊಬಗು
- Log in or register to post comments
ಒಂಬತ್ತು ತಿಂಗಳ ಹೆತ್ತು ಹೊತ್ತು
ಸಾಕಿ ಬೆಳಸ್ಯಾಳ ನನ್ನಮ್ಮ|
ನಂಬಿದವರಿಗೆ ಮೋಸ ಮಾಡಬ್ಯಾಡ
ಅಂತ ತಿಳಿಸ್ಯಾಳ ನನ್ನಮ್ಮ||
ಉಪವಾಸ ಇದ್ದು ನನ್ನನ್ನು
ಹಾಡುಗಳಿಗೆ ಯಾವತ್ತೂ ಸಾವಿಲ್ಲ. ಎಷ್ಟು ಹಳೆಯದಾಗುತ್ತದೆಯೋ ಅದಕ್ಕೆ ನೂರು ಪಟ್ಟು ಅಧಿಕ ಬೇಡಿಕೆ ಇರುತ್ತದೆ. ಹಳೆಯ ಹಾಡುಗಳನ್ನು ಕೇಳುತ್ತಾ ನೀವು ನಿಮ್ಮ ಹಳೆಯ ನೆನಪುಗಳಿಗೆ ಜಾರಿ ಕೊಳ್ಳುವಿರಿ. ಕನ್ನಡವಾಗಲಿ, ಹಿಂದಿಯಾಗಲಿ ಅಥವಾ ಯಾವುದೇ ಭಾಷೆಯ ಹಾಡುಗಳಾಗಿರಲಿ, ಅವುಗಳಿಗೆ ಅದರದ್ದೇ ಆದ ಮಹತ್ವ ಇದೆ. ಹಿಂದಿ ಚಿತ್ರರಂಗದ ಹಿನ್ನಲೆ ಗಾಯಕರಾದ ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಮುಕೇಶ್, ಮನ್ನಾಡೇ, ಲತಾ ಮಂಗೇಷ್ಕರ್, ಆಶಾ ಮಂಗೇಷ್ಕರ್ ಹೀಗೆ ಹತ್ತು ಹಲವಾರು ಗಾಯಕರು ತಮ್ಮ ಮಧುರ ಮಾದಕ ಕಂಠದಿಂದ ನಮ್ಮ ಬಾಳಿನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಅವರ ಸಾಲಿಗೇ ಸೇರುವ ಇನ್ನೊರ್ವ ಅದ್ಭುತ ಗಾಯಕ, ಗಝಲ್ ಗಳ ರಾಜ ತಲತ್ ಮೆಹಮೂದ್.
ನಮ್ಮ ಜೀವನ ಎನ್ನುವುದು ವರ್ತಮಾನ ಪತ್ರಿಕೆ ಇದ್ದಂತೆ. ಅದನ್ನು ಜಾಗೃತೆಯಿಂದ ಬಿಡಿಸಿ ಅಥವಾ ತೆರೆದು ಓದಬೇಕು. ಹೆಚ್ಚಾಗಿ ಅದರಲ್ಲಿ ಮೊದಲು ನಮ್ಮ ಕಣ್ಣಿಗೆ ಬೀಳುವುದು ದಪ್ಪಕ್ಷರಗಳಲ್ಲಿರುವ ಶೀರ್ಷಿಕೆಗಳು. ನಮ್ಮ ಅಭಿರುಚಿಗೆ ತಕ್ಕಂತೆ ನಾವು ಓದಬೇಕು. ಅನಗತ್ಯ ವಿಷಯಗಳನ್ನು ಓದಿ, ತಲೆಯಲ್ಲಿ ತುಂಬಿಕೊಂಡರೆ, ಅದೇ ವಿಷಯ ಕೊರೆಯುತ್ತಿರುತ್ತದೆ. ನಾಳೆಗೆ ಅದು ಹಳೆಯ ಪತ್ರಿಕೆಯಾಗುತ್ತದೆ. ಹಾಗೆಯೇ ಓದಿ ಮರೆತು ಬಿಡಬೇಕು.
ಜೀವನದಲ್ಲೂ ಅಷ್ಟೆ, ಬೇಕಾದ್ದನ್ನು ತೆಗೆದುಕೊಳ್ಳೋಣ, ಬೇಡವಾದ್ದನ್ನು ಬಿಟ್ಟು ಮುಂದೆ ಹೋಗೋಣ.
ಮೂಡಬಿದರೆ ಸಮೀಪದ ಊರಿನಲ್ಲಿ ಹುಟ್ಟಿದ ಎಸ್.ಸುರೇಂದ್ರನಾಥ್ ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಭೇತಿ. ಹುಲಗೂರ ಹುಲಿಯವ್ವ, ಸಂಕ್ರಮಣ, ಜನತೆಯ ಶತ್ರು, ಆತಂಕವಾದಿಯ ಆಕಸ್ಮಿಕ ಸಾವು ಮುಂತಾದ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ನಾಗಮಂಡಲ, ಕಾನೂರು ಹೆಗ್ಗಡತಿ, ಕೆಂಡಸಂಪಿಗೆ ಮೊದಲಾದ ಕೆಲವು ಚಲನ ಚಿತ್ರಗಳಿಗೆ ಕತೆ/ಚಿತ್ರಕತೆ/ಸಂಭಾಷಣೆ ಬರೆದಿದ್ದಾರೆ. ಹದಿಮೂರು ವರ್ಷಗಳ ಕಾಲ ಈಟಿವಿಯಲ್ಲಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಟ್ಟು ಕತೆಗಳು, ತಾಪತ್ರಯಗಳು ಇವರ ಕಥಾ ಸಂಕಲನಗಳು. ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ರಂಗ ಶಂಕರದಲ್ಲಿ ಕಾರ್ಯಕ್ರಮದ ಉಸ್ತುವಾರಿ.
ಧರಣಿಯ ತಾಳ್ಮೆಗೆ ಮೆಚ್ಚಿದ ಮನವಿದು
ಮರೆಯದೆ ನಿನಿಗಿದೊ ನಮನವಿದೊ
ಕರೆಯನು ನೀಡುತ ನಿನ್ನನ್ನು ಉಳಿಸಲು
ಜರಿಯದೆ ಮಾಡುವ ವಂದನೆಯೊ..
ಭಾದೆಯ ಮಾಡುತ ಮನುಜನು ನಿತ್ಯವು
ಶಬ್ದಗಳ ಬಳಕೆಯಲ್ಲಿ ನಮ್ಮ ಆಯ್ಕೆಯು ನಮ್ಮ ಯೋಚನೆಗಳ ಗುಣಮಟ್ಟವನ್ನು ತೋರಿಸುತ್ತದಂತೆ. ಹಾಗಾಗಿ ನಾವು ಜಾಣತನದಿಂದ ಸರಿಯಾದ ಶಬ್ದಗಳನ್ನು ಆಯ್ದುಕೊಳ್ಳಬೇಕಿದೆ.
ಸತ್ತರು ಅಂತ ಹೇಳಕೂಡದು . ಬದುಕಿ ಉಳಿಯಲಿಲ್ಲ ಅನ್ನಬೇಕು .
'ಸಾಯೋತನಕ ' ಅನ್ನಬಾರದು - ' ಇರೋತನಕ' ಅನ್ನಬೇಕು .
ಒಬ್ಬರು ಬೆಂಕಿಕಡ್ಡಿಗೆ ದೀಪದ ಕಡ್ಡಿ ಎನ್ನುವುದನ್ನು ನೋಡಿದ್ದೇನೆ.
ಕನ್ನಡದ ಬಗ್ಗೆ ಮಾತನಾಡುವಾಗ 'ಉರ್ದು/ ತಮಿಳು ಹಿನ್ನೆಲೆಯಿಂದ ' ಅನ್ನುವ ಬದಲು 'ಕನ್ನಡ ವಲ್ಲದ ಹಿನ್ನೆಲೆಯಿಂದ ' ಎನ್ನಬೇಕು .
ಕೋವಿಡ್ ೧೯ ಸಾಂಕ್ರಾಮಿಕ ಮಹಾಮಾರಿ ಭಾರತಕ್ಕೆ ಬಂದ ಮೇಲೆ ಎಲ್ಲರಿಗೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ಬಂದಿದೆ. ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಬೆಳೆಸಲು ಜನರು ಈಗ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಯಾವ ಕಷಾಯವಾದರೂ ಆಗಬಹುದು, ಯಾವುದೇ ಹುಲ್ಲು, ಯಾವುದೇ ಬೇರು ತಿನ್ನಲು ತಯಾರಿದ್ದಾರೆ. ಕೆಲವರು ಅಪರಿಮಿತ ಪ್ರಮಾಣದಲ್ಲಿ ಈ ಕಷಾಯಗಳನ್ನು ಕುಡಿದದ್ದರಿಂದ ಕೆಲವು ಅಡ್ಡ ಪರಿಣಾಮಗಳೂ ಆಗಿವೆ. ನಮ್ಮ ದೇಹ ಎಷ್ಟು ಅಗತ್ಯವೋ ಅಷ್ಟು ಮಾತ್ರ ತೆಗೆದುಕೊಳ್ಳುತ್ತೆ. ಆದುದರಿಂದ ನಿಗದಿತ ಪ್ರಮಾಣದಲ್ಲಿ ಮಾತ್ರ ಯಾವುದೇ ಮದ್ದು ತೆಗೆದುಕೊಳ್ಳುವುದು ಒಳಿತು.
ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ ತೆರೆದಿಟ್ಟ ತನ್ನ ಬದುಕಿನ ಬಡತನ, ಅಪಮಾನ, ಅತ್ಯಾಚಾರದಂತಹ ಸಂಗತಿಗಳು ಹಾಗೂ ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದಾಗಿ ಈ ಕೃತಿಯು ಓದುಗರನ್ನು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ. ಆಕೆ ಅನುಭವಗಳನ್ನು ದಾಖಲಿಸುವ ರೀತಿ ಅನನ್ಯವಾದುದು.
ಕಗ್ಗಂಟು
ನಾನೋರ್ವನೇ, ನನಗೆ ಯಾರೂ ಇಲ್ಲ, ನಾನು ಏಕಾಂಗಿ, ನನ್ನನ್ನು ಯಾರೂ ಗಮನಿಸುವುದಿಲ್ಲ, ಗುರುತವೇ ಇಲ್ಲ, ಪ್ರೀತಿ ಯಾರಿಗೂ ನನ್ನ ಮೇಲಿಲ್ಲ, ವಿಶ್ವಾಸ ಮೊದಲೇ ಇಲ್ಲ, ನನ್ನನ್ನು ಯಾರೂ ನಂಬುವುದಿಲ್ಲ ಎಂಬ ಕೀಳರಿಮೆ ಒಮ್ಮೊಮ್ಮೆ ಆವರಿಸಿಬಿಡುತ್ತದೆ.
೧೧. ಭಾರತದ ಅಪ್ರತಿಮ ಸಂವಿಧಾನ
ಭಾರತ ಸ್ವಾತಂತ್ರ್ಯ ಗಳಿಸಿದ್ದು ೧೯೪೭ರಲ್ಲಿ. ಅದಾಗಿ ಸುಮಾರು ಮೂರು ವರುಷಗಳಲ್ಲಿ ಭಾರತದ ಸಂವಿಧಾನವನ್ನು ಅಂತಿಮಗೊಳಿಸಲಾಯಿತು.
ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ ಮುಖ್ಯಸ್ಥರಾಗಿದ್ದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವು ೨೬ ಜನವರಿ ೧೯೫೬ರಂದು ಜ್ಯಾರಿಗೆ ಬಂತು. ಆ ದಿನವನ್ನು ಭಾರತದಲ್ಲಿ ಪ್ರತಿ ವರುಷ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲಾಗುತ್ತದೆ. ಅವತ್ತು ನವದೆಹಲಿಯಲ್ಲಿ ರಾಜಪಥದಲ್ಲಿ ನಡೆಯುವ ಪಥಸಂಚಲನವು ಭಾರತದ ವೈವಿಧ್ಯತೆಯನ್ನೂ ವಿರಾಟ್ ಮಿಲಿಟರಿ ಶಕ್ತಿಯನ್ನೂ ಇಡೀ ಜಗತ್ತಿಗೆ ಅನಾವರಣಗೊಳಿಸುತ್ತದೆ.