ಲಲಿತ ರಗಳೆ- ವೃದ್ಧೆಯ ಶೃಣಿ

ಶೃಣಿಯೂರಿ ವೃದ್ಧೆಯೂ ಹಾದಿಯಲಿ ಬರುತಿಹಳು

ಮಣಭಾರ ಕಾಷ್ಟವನು ಬೆನ್ನಲ್ಲೆ ಹೊತ್ತಿರಲು|

ಕಷ್ಟದಲಿ ನೊಂದಿಹಳು ನೋಡುವವರಿಲ್ಲದೆಯೆ

ನಷ್ಟದಲಿ ಜೀವನವು ತುಷ್ಠಿಗುಣವಿಲ್ಲದಯೆ||

 

ಪ್ರಾಕೃತಿಕ ವಿಕೋಪಗಳು ಮತ್ತು ಬದಲಾಗುತ್ತಿರುವ ನಮ್ಮ ಪರಿಸರ

ಮನುಷ್ಯನ ನಾಗರಿಕತೆ ಬೆಳೆಯುತ್ತಿದ್ದಂತೆ ಪರಿಸರ ಅವನ ಮೇಲೆ ಮುನಿಸಿಕೊಳ್ಳುವುದು ಹೆಚ್ಚುತ್ತಿದೆ. ಪ್ರಾಕೃತಿಕ ಅವಘಡಗಳ ಮೂಲಕ ಮನುಷ್ಯನ ಮೇಲೆ ಗುದ್ದು ನೀಡುವ ಪ್ರಕೃತಿಯ ನಡೆ ಯಾಕೆ ಈ ರೀತಿ ರೌದ್ರವಾಗುತ್ತದೆ ಎಂಬ ಬಗ್ಗೆ ಕೆಲವೊಂದು ಊಹೆಗಳು ಇಲ್ಲಿವೆ.

Image

ಲತಾ ಬನಾರಿಯವರ ತುಳು ಕವನ

ಸತ್ಯೊದ ತುಳುನಾಡ್

ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ

ತೂಲೇ ತೂಲೇ ಉಂದು ಸತ್ಯೊದ ತುಳುನಾಡ್ ಗೆ

 

ಪರಶುರಾಮನಾ ಸೃಷ್ಟಿ 

ಬೂರುಂಡ್ ಕಣ್ಣ್ ದ ದಿಟ್ಟಿ

ಎರಡು ಗಝಲ್ ಗಳು

ಗಝಲ್ ೧

ದತ್ತಪದ:ಪಯಣ

ಪಯಣವೆಲ್ಲಿಗೋ ಯಾರಿಗೂ ತಿಳಿಯದು ಏಕಾಂಗಿ ನಾನು

ಬದುಕೆಲ್ಲಿಗೋ  ನನಸಿಗೂ ಅರಿಯದು ಏಕಾಂಗಿ ನಾನು

 

ಕನಸಿನ ಬುತ್ತಿಯೆನ್ನುವ ದೋಣಿಯಲಿ ಸಾಗುತಿರುವೆನೆಂದೂ

ಭೀಮರಾಜನೆಂಬ ರಾಕೆಟ್ ಬಾಲದ ಹಕ್ಕಿ

ನಾವು ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಕಾಣುತ್ತೇವೆ. ಕೆಲವು ಸಲ ಅಪರೂಪದ ಪಕ್ಷಿಗಳೂ ಕಾಣ ಸಿಗುವುದುಂಟು. ಕೆಲವು ಪಕ್ಷಿಗಳು ತನ್ನ ಧ್ವನಿಯಿಂದಲೂ, ಕೆಲವು ಮೈ ಬಣ್ಣದಿಂದಲೂ ಗಮನ ಸೆಳೆದರೆ ಈ ಭೀಮರಾಜನೆಂಬ ಹಕ್ಕಿಯು ತನ್ನ ಉದ್ದದ ಬಾಲದಂತಹ ಗರಿಯಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಈ ಹಕ್ಕಿಯು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಕಾಣ ಸಿಗುತ್ತದೆ. 

Image

ಹುಲಿಯಿಂದ ಪಾರಾದ ಸೌದೆ ಕಡಿಯುವವನು

ಹಲವಾರು ವರುಷಗಳ ಹಿಂದೆ ಹಿಮಪುರವೆಂಬ ಹಳ್ಳಿಯಲ್ಲಿ ಗೋಪಣ್ಣ ಎಂಬ ಸೌದೆ ಕಡಿಯುವವನಿದ್ದ. ಪರ್ವತದ ತಪ್ಪಲಿನಲ್ಲಿದ್ದ ಆ ಹಳ್ಳಿಯ ಅಂಚಿನಲ್ಲಿ ದಟ್ಟ ಕಾಡು. ಗೋಪು ದಿನದಿನವೂ ಕಾಡಿಗೆ ಹೋಗಿ ಕಟ್ಟಿಗೆ ತಂದು ಮಾರುತ್ತಿದ್ದ.

ಅದೊಂದು ದಿನ ತಾನು ಕಡಿದಿದ್ದ ಸೌದೆಯನ್ನು ಗೋಪಣ್ಣ ಮೂಟೆ ಕಟ್ಟುತ್ತಿದ್ದ. ಆಗ ಹುಲಿಯ ಗರ್ಜನೆ ಕೇಳಿಸಿತು. ಆ ಹುಲಿ ನೆಗೆದು ಬಂದು ಅವನೆದುರು ನಿಂತಿತು. ಹುಲಿಯಿಂದ ಪಾರಾಗುವುದು ಹೇಗೆಂದು ಒಂದು ಕ್ಷಣ ಯೋಚಿಸಿದ ಗೋಪಣ್ಣ. ನಂತರ ಸೌದೆಯ ಹೊರೆಯನ್ನು ನೆಲದಲ್ಲಿ ಎಳೆಯ ತೊಡಗಿದ. ಅದು ಭಾರವಿರುವಂತೆ ನಟಿಸಿದ. ಇದನ್ನೆಲ್ಲ ನೋಡುತ್ತಿದ್ದ ಹುಲಿ ಅಬ್ಬರಿಸಿತು, “ಅದೊಂದು ಸಣ್ಣ ಮೂಟೆ. ಅದನ್ನು ನೀನು ಯಾಕೆ ತಲೆಯ ಮೇಲೆ ಎತ್ತಿಕೊಳ್ಳುತ್ತಿಲ್ಲ?"

Image

ಜನಗಳ ಮನ (ಭಾಗ ೩)

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-೫೬೦೦೦೯
ಪುಸ್ತಕದ ಬೆಲೆ
ರೂ. ೮೫.೦೦, ಮೊದಲ ಮುದ್ರಣ: ನವೆಂಬರ್ ೨೦೦೮

ಜನಗಳ ಮನ ಪತ್ರಕರ್ತ ವಿಶ್ವೇಶ್ವರ ಭಟ್ ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿರುವ ಸಮಯದಲ್ಲಿ ಬರೆದ ಅಂಕಣಗಳ ಸಂಗ್ರಹ. ಈಗಾಗಲೇ ೨ ಭಾಗ ಮಾರುಕಟ್ಟೆಗೆ ಬಂದಿದ್ದು, ಇದು ಆ ಸರಣಿಯ ಮೂರನೇ ಭಾಗ. ಅಂಕಣಕಾರನ ಒಂದು ಚೌಕಟ್ಟಿನಿಂದ ಹೊರಗೆ ಬಂದು ಯಾವ ವಿಷಯದ ಮೇಲಾದರೂ ಬರೆಯುವ ಸ್ವಾತಂತ್ರ್ಯದಿಂದ ಬರೆದ ಲೇಖನಗಳು ಇವು. ಇದರಲ್ಲಿ ಇಷ್ಟೇ ಬರೆಯ ಬೇಕೆಂಬ ಒತ್ತಾಯವಿಲ್ಲ, ಎಷ್ಟೇ ಬರೆದರೂ ಆಗಬಹುದು. ಹೀಗಾಗಿ ಈ ಪುಸ್ತಕದ ಬರಹಗಳಿಗೆ ಒಂದು ನಿರ್ದಿಷ್ಟ ಚೌಕಟ್ಟಿಲ್ಲ, ವೈವಿಧ್ಯಗಳಿಗೆ ಚೌಕಾಶಿಯೂ ಇಲ್ಲ. ದೀರ್ಘ ಪ್ರಯಾಣಕ್ಕೆ ಹೊರಟ ಅಲೆಮಾರಿ ಮಾಡಿಕೊಳ್ಳುವ ನೋಟ್ಸ್ ಗಳಂತೆ ಕೇಳಿದ್ದು, ಕಂಡದ್ದು ಎಲ್ಲಾ ಗೀಚಿದ್ದು ಇದರಲ್ಲಿ ಉಲ್ಲೇಖಿಸಿದ್ದಾರೆ. 

ವಿಘ್ನ ವಿನಾಶಕ ಗಣೇಶನ ಭಕ್ತಿಗೇತೆಗಳು

ಗಜಾನನ

ಮೂಷಿಕ ವಾಹನ ಪಾರ್ವತಿ ತನಯನೆ

ಕರಗಳ ಜೋಡಿಸಿ ವಂದಿಪೆನು

ಹರ್ಷದ ಹೊಳೆಯನು ಧರೆಯಲಿ ಹರಿಸುತ

ಭಕುತರ ರಕ್ಷಿಸು ಗಜಾನನ||