ಲಕೋಟೆಯ ರಹಸ್ಯ
ಪತ್ತೇದಾರಿ ಕಾದಂಬರಿಗಳಿಗೆ ಹೊಸ ಭಾಷ್ಯ ಬರೆದವರು ಎನ್.ನರಸಿಂಹಯ್ಯನವರು. ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದರೂ ೬೦-೭೦ರ ದಶಕದಲ್ಲಿ ಓದುಗರಿಗೆ ಪತ್ತೇದಾರಿಯ ಚಟ ಹಿಡಿಸಿಬಿಟ್ಟಿದ್ದರು. ಆ ಸಮಯದ ಸೀಮಿತ ಸಂಪನ್ಮೂಲಗಳಿಂದ ತಮ್ಮ ಮನದ ಶಕ್ತಿಯಿಂದ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಅವರ ಪತ್ತೇದಾರಿಯ ಪಾತ್ರಗಳಾದ ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಇವರೆಲ್ಲಾ ನಮ್ಮ ನಡುವೆಯೇ ಇದ್ದ ವ್ಯಕ್ತಿಗಳಂತೆ ಆಗಿ ಹೋಗಿದ್ದರು. ಆ ಸಮಯದಲ್ಲಿ ಬರೆದ ನೂರಾರು ಕಾದಂಬರಿಗಳು ಮರು ಮುದ್ರಣ ಕಾಣದೇ ಈಗಿನ ಕಾಲದ ಓದುಗರನ್ನು ತಲುಪಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಸಪ್ನ ಬುಕ್ ಹೌಸ್ ಇವರು ಎನ್. ನರಸಿಂಹಯ್ಯನವರ ಬಹುತೇಕ ಕಾದಂಬರಿಗಳನ್ನು ಮತ್ತೆ ಮುದ್ರಿಸಿದ್ದಾರೆ.
- Read more about ಲಕೋಟೆಯ ರಹಸ್ಯ
- Log in or register to post comments