ನಮ್ಮ ಹೆಮ್ಮೆಯ ಭಾರತ (3 - 4)

೩.ಯೋಗ - ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ
ಸಂಸ್ಕೃತದ “ಯುಜ್" ಎಂಬ ಮೂಲಶಬ್ದದಿಂದ “ಯೋಗ" ಪದ ಮೂಡಿ ಬಂದಿದೆ. ಇದರ ಅರ್ಥ “ಜೊತೆಗೂಡುವುದು”. ಇದು ವ್ಯಕ್ತಿಯ ಶರೀರ ಮತ್ತು ಆತ್ಮದ ಸಂಯೋಗವನ್ನು ಸಂಕೇತಿಸುತ್ತದೆ.

ಯೋಗವೆಂದರೆ ಕೇವಲ ಯೋಗಾಸನಗಳ ಸಾಧನೆಯಲ್ಲ; ಯೋಗದಲ್ಲಿ ಎಂಟು ಭಾಗಗಳಿವೆ. ಇದುವೇ ಅಷ್ಟಾಂಗ ಯೋಗ. ಯೋಗದ ಅಭ್ಯಾಸದಿಂದ ದೇಹಕ್ಕೆ ಚೈತನ್ಯ ಮತ್ತು ಮನಸ್ಸಿಗೆ ಶಾಂತತೆ ಲಭ್ಯವಾಗುತ್ತದೆ. ನೂರಾರು ಯೋಗಾಸನಗಳಿವೆ. ಇವನ್ನು ಯೋಗಗುರುಗಳಿಂದ ಕಲಿತು ದಿನದಿನವೂ ಅಭ್ಯಾಸ ಮಾಡಿದರೆ, ಪ್ರತಿಯೊಂದು ಯೋಗಾಸನದಿಂದ ನಿರ್ದಿಷ್ಟ ಪ್ರಯೋಜನಗಳು ಲಭಿಸುತ್ತವೆ.

Image

ಸ್ವರ್ಣಗೌರಿಗೆ ನಮನ

ಶಿವನ ಪ್ರಿಯಳು ಅರ್ಧನಾರಿಶ್ವರಿಯು

ದವನ ಸೇಚನ ಜಗದೀಶ್ವರಿ

ಭವದಿ ನೆಲೆಸುತ ಜನರ ಪೋಷಿಸಿ

ಪವನದಂತೆಯೆ ಪರಮೇಶ್ವರಿ...

 

ವರವ ನೀಡುತ ಜಗವ ಪೊರೆಯುತ

ನೀಲಿ ಕಪ್ಪೆಗಳೆಂಬ ವಿಷಕಾರಿ ಜೀವಿ

ಮಳೆಗಾಲ ಪ್ರಾರಂಭವಾದೊಡನೆಯೇ ನಮಗೆ ಕಪ್ಪೆಗಳ ದನಿ ಕೇಳಲು ಪ್ರಾರಂಭವಾಗುತ್ತದೆ. ಮಳೆ ಬಂತೆಂದರೆ ಕಪ್ಪೆಗಳಿಗೆ ಹರ್ಷವೋ ಹರ್ಷ. ನಮ್ಮ ದೇಶದ ಬಹುತೇಕ ಕಪ್ಪೆಗಳು ಅಪಾಯಕಾರಿಯಲ್ಲ, ಬದಲಿಗೆ ಹಲವಾರು ಕೀಟಗಳನ್ನು ಭಕ್ಷಿಸಿ ನಮಗೆ ಉಪಕಾರವನ್ನು ಮಾಡುತ್ತವೆ. ಆದರೆ ನಾವು ಹೊರ ಜಗತ್ತಿನ ಕಪ್ಪೆಗಳ ಬಗ್ಗೆ ಗಮನಿಸುತ್ತಾ ಹೋದರೆ ನಮಗೆ ಅತ್ಯಂತ ಅಪಾಯಕಾರಿ ಕಪ್ಪೆಯ ಪ್ರಭೇಧಗಳು ಕಾಣ ಸಿಗುತ್ತವೆ. ಅವುಗಳಲ್ಲಿ ಒಂದು ನೀಲಿ ಕಪ್ಪೆ. 

Image

ಪರಿಸರ ಸ್ನೇಹಿ ಗಣಪ

ಮಣ್ಣಲಿ ಗಣಪನ ಮಾಡುತ ನಲಿಯಿರಿ

ಬಣ್ಣವ ಬಳಿಯದೆ ಕುಣಿದಾಡಿ

ನುಣ್ಣಗೆ ಕಲೆಯಲಿ ಬೆರೆಯುತ ಕಲಿಯಿರಿ

ಕಣ್ಣಿಗೆ ತಂಪನು ಎರಚಾಡಿ....

 

ಪರಿಸರ ರಕ್ಷಿಸಿ ಸ್ವಚ್ಛತೆ ಹೆಚ್ಚಿಸಿ

ಬಹುಮುಖ ಬಾಲಪ್ರತಿಭೆ- ಶ್ರೀಕೃಷ್ಣ ಶೇಟ್

ಉಡುಪಿ ನಗರದ ವಳಕಾಡು ನಿವಾಸಿಯಾಗಿರುವ ಶ್ರೀಕೃಷ್ಣ ಎನ್. ಶೇಟ್ ಎಳವೆಯಲ್ಲಿಯೇ ವಿವಿಧ ಕಲೆ, ಸಂಸ್ಕೃತಿಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, ಗುರು ಹಿರಿಯರ, ಬಂಧು ಬಳಗದ, ಕಲಾಸಕ್ತರ ಮೆಚ್ಚುಗೆ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ. ಉದ್ಯಮಿ ನಾಗಭೂಷಣ ಶೇಟ್ ಹಾಗೂ ಚಂದ್ರಿಕಾ ಎನ್. ಶೇಟ್ ದಂಪತಿಗಳ ಮಗನಾದ ಶ್ರೀಕೃಷ್ಣ, ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಕಲಿಕೆಯಲ್ಲಿ ಮುಂದಿರುವಂತೆಯೇ, ಪಠ್ಯೇತರ ಚಟುವಟಿಕೆಯಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದು ಶ್ರೀಕೃಷ್ಣನ ಹೆಚ್ಚುಗಾರಿಕೆಯಾಗಿದೆ.

Image

ಸ್ವಯಂಕೃತ...!

ಎಲ್ಲಾ ನಾವೇ ಮಾಡಿ ತಂದುಕೊಂಡಿದ್ದು ಈ ರೋಗ ರುಜನೆ ಖಾಯಿಲೆ, ಕಷ್ಟ ಸಂಕೋಲೆ! ಈಗ ಇದು ಗಾಳಿ‌ಯ ಸೋಂಕಾಗಿ ವಿಶ್ವವ್ಯಾಪಕವಾಗಿ ಜಗದೆಲ್ಲವನು ತರಿದು ತುಳಿದು ಶೋಕತೆಯ ಜೊತೆಗೆ ಶೋಚನೀಯತೆಯ ಕಡೆಗೆ ನಮ್ಮ ನಿಮ್ಮನೆಲ್ಲಾ ತಳ್ಳಿ ಆಡಿಸಿ ಅಳಿಸಿ ನಗಿಸುತ್ತಿದೆ!! ನಡೆ ನುಡಿ ಶುದ್ಧವಿರದೆ ಊಟ ಉಪಚಾರ ಆಚಾರವಿರದೆ! ಎಲ್ಲ ಆಟವಾಡಿ ನಡೆಯುವಾಗ ಅಡ್ಡದಿಡ್ಡಿ ನಡೆದು , ಆಡುವಾಗ ಎದ್ವಾ ತದ್ವ ಮಾತನಾಡಿ, ನಡೆದ್ದೇ ದಾರಿ ನುಡಿದದ್ದೆ ಸತ್ಯವೆಂದು ಈಗ ಅದುರಿ ಅಲುಗಾಡಿ ವ್ಯಥೆಪಟ್ಟರೆ ಮೃತ್ಯು ದವಡೆಯಲ್ಲಿಂದ ಪಾರಾಗಲು ಪರದಾಡಿದರೆ ಹೇಗೆ ಸಾಧ್ಯ?!! ಗಾಳಿ ಬೆಳಕಿಗೆ ಜಾಗಬಿಡದೆ ಮನೆ ಕಟ್ಟಿ ಒಡಾಡಲು ಪಾದಚಾರಿಗಳಿಗೆ ಜಾಗಬಿಡದೆ ರಸ್ತೆಗಳ ನಿರ್ಮಾಣಮಾಡಿ!

ಮದನಾರಿ

ಒಲವಿನ ನೋಟದಿ ನಲ್ಲನ ಕಾಯುತ

ಚೆಲುವಿನ ಬುಗ್ಗೆಯ ಮದನಾರಿ|

ಬಲೆಯನು ಹೆಣೆದಿಹ ಪ್ರೀತಿಯ ಬಂಧದಿ

ನಲುಮೆಯ ಕಿನ್ನರಿ ಬಳಿಸಾರಿ||

 

ಇಳೆಯಲಿ ಸೀತೆಯ ತೆರದಲಿ ಕಾಂಬಳು

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೪)- ಸುದಾಮ

ಗೆಳೆತನಕ್ಕೆ ಉತ್ತಮ ಉದಾಹರಣೆಯೆಂದರೆ ದುರ್ಯೋಧನ ಹಾಗೂ ಕರ್ಣ ಮತ್ತು ಕೃಷ್ಣ ಹಾಗೂ ಸುದಾಮ. ಮೊದಲ ಉದಾಹರಣೆಯಲ್ಲಿ ಉತ್ತಮ ಗೆಳೆತನವಿದ್ದರೂ ದುರ್ಯೋಧನನು ತನ್ನ ಸ್ವಾರ್ಥಕ್ಕಾಗಿ ಈ ಗೆಳೆತನವನ್ನು ಬಳಸಿಕೊಂಡ. ಕರ್ಣನಂಥಹ ವೀರಾಧಿವೀರ ಜೊತೆಗಿದ್ದರೂ ಅನ್ಯಾಯವನ್ನು ಅಪ್ಪಿಕೊಂಡದ್ದರಿಂದ ದುರ್ಯೋಧನನಿಗೆ ಕುರುಕ್ಷೇತ್ರ ಯುದ್ಧದಲ್ಲಿ ಜಯ ಒದಗಿ ಬರಲಿಲ್ಲ. ಧರ್ಮಕ್ಕೇ ಜಯವಾಯಿತು. ತನ್ನ ಗೆಳೆಯನಾಗಿ, ತನ್ನನ್ನು ಅಂಗ ದೇಶಕ್ಕೆ ರಾಜನನ್ನಾಗಿ ಮಾಡಿದ ದುರ್ಯೋಧನನ ಯೋಚನೆಗಳು ಅಧರ್ಮದಿಂದ ಕೂಡಿದೆ ಎಂದು ತಿಳಿದರೂ ಕರ್ಣ ಅವನ ಪಕ್ಷ ತ್ಯಜಿಸಲಿಲ್ಲ. ಮಹಾಭಾರತದಲ್ಲಿ ಕಂಡು ಬರುವ ಮತ್ತೊಂದು ಉದಾಹರಣೆ ಕೃಷ್ಣ ಮತ್ತು ಸುದಾಮರದ್ದು.

Image

ಝೆನ್ ಪ್ರಸಂಗ: ತೋಟ ಬೆಳೆಸುವ ಪಾಠ

ಅದೊಂದು ದಿನ ರಾಜನಿಗೊಂದು ಅಭಿಲಾಷೆ ಉಂಟಾಯಿತು: ಝೆನ್ ತತ್ವಗಳ ಅನುಸಾರ ತೋಟವೊಂದನ್ನು ಬೆಳೆಸಬೇಕೆಂಬಾಶೆ.

ಆತ ಹೆಸರುವಾಸಿ ಝೆನ್ ಗುರುವನ್ನು ಭೇಟಿಯಾಗಿ ತನ್ನ ಅಭಿಲಾಷೆ ತಿಳಿಸಿದ. ಆ ಗುರುಗಳು ಈ ವಿಚಾರದಲ್ಲಿ ರಾಜನಿಗೆ ಮಾರ್ಗದರ್ಶನ ಮಾಡಲು ಸಮ್ಮತಿಸಿದರು. ವಿಶಾಲವಾದ ಜಮೀನನ್ನು ತೋಟ ಬೆಳೆಸಲಿಕ್ಕಾಗಿ ಗುರುತಿಸಿದ ರಾಜ. ಅಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಅನುಭವಿ ಕೆಲಸಗಾರರನ್ನು ಕರೆ ತಂದ. ದಿನದಿನವೂ ತೋಟಕ್ಕೆ ಬಂದು ಕೆಲವು ತಿಂಗಳು ಆ ಗುರುಗಳಿಂದ ಮಾರ್ಗದರ್ಶನ.

Image