‘ವೃಕ್ಷ ದೇವತೆ' ತುಳಸಿ ಗೌಡ

ಸಾಲು ಮರದ ತಿಮ್ಮಕ್ಕನವರ ಹೆಸರನ್ನು ನೀವು ಕೇಳಿಯೇ ಇರುತ್ತೀರಿ, ತನಗೆ ಮಕ್ಕಳಿಲ್ಲ ಎಂಬ ಕೊರತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಗಿಡವನ್ನು ನೆಡುವುದರ ಮೂಲಕ ತೀರಿಸಿಕೊಂಡ ಮಹಾನ್ ಜೀವ ಇದು. ಇವರಂತೆಯೇ ಇನ್ನೊರ್ವ ವೃಕ್ಷ ಪ್ರೇಮಿ ಮಹಿಳೆಯೇ ತುಳಸಿ ಗೌಡ. ಹಾಲಕ್ಕಿ ಜನಾಂಗಕ್ಕೆ ಸೇರಿದ ಇವರು ಈಗಾಗಲೇ ಒಂದು ಲಕ್ಷಕ್ಕೂ ಸಸಿಗಳನ್ನು ನೆಟ್ಟು ಮರಗಳನ್ನಾಗಿಸಿದ್ದಾರೆ ಎಂದರೆ ಇದು ಸಣ್ಣ ಮಾತಲ್ಲ.

Image

ಸಣ್ಣ ಕಥೆ - ಕಡಲು

ಗೋವಿಂದರಾಯರು ಮೂವತ್ತ್ಯೆದು ವರ್ಷಗಳ ಕಾಲ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನವನ್ನು ತಮ್ಮ ಹಳ್ಳಿಯಲ್ಲಿ ಪತ್ನಿಯೊಂದಿಗೆ ಕಳೆಯುತ್ತಿದ್ದರು. ಇದ್ದ ಒಬ್ಬನೇ ಮಗ, ಸೊಸೆಯ ಜೊತೆ ಆಫ್ರಿಕಾದಲ್ಲಿ ನೆಲೆಸಿದ್ದ. ರಾಯರ ಪತ್ನಿ ಆಕಸ್ಮಿಕವಾಗಿ ಹೃದಯಾಘಾತವಾಗಿ ಮರಣ ಹೊಂದಿದಾಗ, ತನ್ನ ಕರ್ತವ್ಯ ಎಂಬ ಹಾಗೆ ಮಗ ಬಂದು ಕ್ರಿಯಾವಿಧಿಗಳನ್ನು ಪೂರೈಸಿ, 'ಅಪ್ಪಾ, ನೀವು ಆಸ್ತಿಯೆಲ್ಲ ಮಾರಿ, ನನ್ನೊಂದಿಗೆ ಬಂದಿರಿ' ಎಂದ.

Image

ಪಾಲ್ಗಡಲ ಮುತ್ತುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ : ಧನಂಜಯ ಕುಂಬ್ಳೆ
ಪ್ರಕಾಶಕರು
ನವೀನ ಪ್ರಕಾಶನ, ಆರಿಕ್ಕಾಡಿ, ಕುಂಬಳೆ- ೬೭೧೩೨೧, ಕಾಸರಗೋಡು
ಪುಸ್ತಕದ ಬೆಲೆ
ರೂ. ೧೦.೦೦, ಮುದ್ರಣ : ೧೯೯೪

೧೯೯೪ರಲ್ಲಿ ಮುದ್ರಿತವಾದ ‘ಪಾಲ್ಗಡಲ ಮುತ್ತುಗಳು' ಎಂಬ ಹನಿ ಕವನಗಳ ಸಂಗ್ರಹ ಪುಸ್ತಕದಲ್ಲಿ ಹನಿಗವನಗಳನ್ನು ರಚಿಸಿರುವ ಹಲವಾರು ಕವಿಗಳು ಈಗ ಬಹಳಷ್ಟು ಖ್ಯಾತನಾಮರಾಗಿದ್ದಾರೆ. ಈ ಪುಸ್ತಕವನ್ನು ತಮ್ಮದೇ ಆದ ನವೀನ ಪ್ರಕಾಶನದಿಂದ ಸಂಪಾದನೆ ಮಾಡಿರುವ ಧನಂಜಯ ಕುಂಬ್ಳೆಯವರೂ ಈಗ ಉತ್ತಮ ಕವಿ, ಉಪನ್ಯಾಸಕರಾಗಿದ್ದಾರೆ.

ಗುಂಡ ಮೊಲದಮರಿಯ ಉಪಟಳ

ಮೈಯಲ್ಲಿ ಮಚ್ಚೆಗಳಿದ್ದ ಮೊಲದ ಮರಿಯೊಂದರ ಹೆಸರು ಗುಂಡ. ಅದು ಇತರ ಪ್ರಾಣಿಗಳಿಗೆ ಬಹಳ ಉಪಟಳ ಕೊಡುತ್ತಿತ್ತು. ಯಾವತ್ತೂ ಅದು ಸಭ್ಯತೆಯಿಂದ ವರ್ತಿಸುತ್ತಿರಲಿಲ್ಲ. ಇತರ ಪ್ರಾಣಿಗಳು ಎದುರಾದಾಗೆಲ್ಲ ಅವನ್ನು ಅಡ್ಡಹೆಸರಿನಿಂದ ಕರೆದು ಗೇಲಿ ಮಾಡುತ್ತಿತ್ತು. ಬೇರೆಯವರು ಏನಾದರೂ ಹೇಳಿದರೆ ಯಾವಾಗಲೂ ಎದುರುತ್ತರ ಕೊಡುತ್ತಿತ್ತು.

ಮುಳ್ಳುಹಂದಿ ಎದುರಾದಾಗ “ಮುಳ್ಳಿನ ಮುದ್ದೆಯೇ” ಎಂದು ಜೋರಾಗಿ ಕರೆಯಿತು ಗುಂಡ ಮೊಲದಮರಿ. ಯಾರಾದರೂ ಹಾಗೆ ಕರೆದರೆ ಮುಳ್ಳುಹಂದಿಗೆ ಬಹಳ ಕಿರಿಕಿರಿಯಾಗುತ್ತಿತ್ತು. “ಏನೆಂದೆ? ತಾಳು, ನಿನ್ನ ಅಮ್ಮನಿಗೆ ನಾನು ದೂರು ಹೇಳ್ತೇನೆ” ಎಂದಿತು ಮುಳ್ಳುಹಂದಿ.

Image

ತ್ಯಾಗ, ಬಲಿದಾನವನ್ನು ನೆನಪಿಸುವ ಸೇನಾ ದಿನ

ಭಾರತೀಯ ಸಶಸ್ತ್ರ ಸೇನೆ ಎಂದೊಡನೆಯೇ ನಮ್ಮ ಮನಸ್ಸಿನಲ್ಲಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಚಿತ್ರ ಹಾದು ಹೋಗುತ್ತದೆ. ಮೂರೂ ಸೇನೆಗಳಿಗೆ ಪ್ರತ್ಯೇಕ ದಿನಗಳಿವೆ. ಜನವರಿ ೧೫ ಅನ್ನು ಸೇನಾ ದಿನ (Army Day) ವಾಗಿ ಆಚರಿಸುತ್ತೇವೆ. ಜನವರಿ ೧೫ ರಾಷ್ಟ್ರೀಯ ಸೇನಾ ದಿನಾಚರಣೆಯನ್ನಾಗಿ ಆಚರಣೆ ಮಾಡುವುದಕ್ಕೆ ಏನು ಕಾರಣ ಗೊತ್ತಾ?

Image

ರೈತ ಭಾರತ...

ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ..ಭಾರತದ ಜನಸಂಖ್ಯೆಯ ಶೇಕಡ ೮೦% ಕ್ಕೂ ಹೆಚ್ಚು ಜನ ಅವಲಂಬಿತವಾಗಿದ್ದ ಕೃಷಿ ದೇಶದ ಜೀವನಾಡಿಯಾಗಿತ್ತು. ಅಷ್ಟೇ ಏಕೆ ರೈತರನ್ನು ದೇವರ ಅಪರಾವತಾರವೆಂದೇ ಪರಿಗಣಿಸಲಾಗಿತ್ತು.
ರೈತ ನಮ್ಮ ಬೆನ್ನೆಲುಬು - ಅನ್ನದಾತ -  ಉಳುವ ಯೋಗಿ ಎಂದು ಹಾಡಿ ಹೊಗಳಲಾಗುತ್ತಿತ್ತು. 

Image