ಹಾಸ್ಯ ಅಂದರೆ ಇದು . .

ಒಂದು ಸಲ ಒಬ್ಬ ಹುಡುಗಿ ವಯಸ್ಸಾದ ತನ್ನ ತಾಯಿಯ ಜೊತೆ ವರಾಂಡಾ ದಲ್ಲಿ ಕುಳಿತಿದ್ದಳು. ಆವಾಗ ಅಲ್ಲಿಯೇ ಅವಳ ಬಾಯ್ ಫ್ರೆಂಡ್ ಬಂದು ಬಿಟ್ಟ.

ಆ ಹುಡುಗಿ ತನ್ನ ಬಾಯ್ ಫ್ರೆಂಡ್ ಗೆ ಹೀಗೆ ಹೇಳಿದಳು . .

 

" ನೀವು ರಾಮ್ ಪಾಲ್ ಯಾದವ್ ಅವರ ಪುಸ್ತಕ, " Dad is at Home " ತಂದಿದ್ದೀರಾ ? "

 

Image

ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?

ದಿನವಿಡೀ ಶ್ರಮ ವಹಿಸಿ ದುಡಿದು ಮನೆಗೆ ಮರಳುವ ನೀವು ಸುಖವಾದ ನಿದ್ರೆಯ ಆಶೆಯಲ್ಲಿರುತ್ತೀರಿ. ಆದರೆ ನೀವು ಹಾಸಿಗೆಯಲ್ಲಿ ಮಲಗಿದಾಗ ಎಷ್ಟು ಸಮಯವಾದರೂ ನಿದ್ರಾದೇವಿ ನಿಮ್ಮನ್ನು ಆವರಿಸದೇ ಇದ್ದಾಗ, ಇಡೀ ರಾತ್ರಿ ಹೊರಳಾಡಿ ಹಾಗೂ ಹೀಗೂ ಬೆಳಿಗ್ಗೆ ಆದಾಗ ನಿಮ್ಮ ದೇಹದ ಚೈತನ್ಯ ಮಾಯವಾಗಿರುತ್ತದೆ. ದಣಿದ ದೇಹಕ್ಕೆ ನಿದ್ರೆ ಅತ್ಯವಶ್ಯಕ. ವಯಸ್ಕರಿಗೆ ಕನಿಷ್ಟ ೬ ಗಂಟೆ ನಿದ್ರೆ ಅಗತ್ಯ ಎನ್ನುತ್ತದೆ ವೈದ್ಯಶಾಸ್ತ್ರ. ನಿದ್ರೆಯೇ ಬಾರದೇ ನಿದ್ರಾ ಮಾತ್ರೆಗೆ, ಕುಡಿತಕ್ಕೆ ಶರಣಾದವರ ಸಂಖ್ಯೆ ಕಮ್ಮಿಯೇನಿಲ್ಲ. ಹಲವು ಮಂದಿಗೆ ರಾತ್ರಿ ಮದ್ಯ ಕುಡಿಯದೇ ನಿದ್ರೆ ಬರುವುದೇ ಇಲ್ಲ. ಇದು ಒಂದು ಚಟವಾಗಿ ಮಾರ್ಪಟ್ಟಿರುತ್ತದೆ. ನಮಗೆ ನೆಮ್ಮದಿ ನೀಡುವ ನಿದ್ರೆಯೇ ಸಮಸ್ಯೆಯಾದರೆ? ಈ ಬಗ್ಗೆ ನೀವು ಯೋಚಿಸಿರಲಿಕ್ಕಿಲ್ಲ.

Image

ಮಳೆ ಬಿಸಿಲಿ‌ನ ಇದು ನಾಟಕ

ಕಡು ದುಗುಡದ ಬಿರು ಬೇಗೆಗೆ

   ಕುದಿಯಿತು ಎದೆಗಡಲು!

‌ಸದ್ದಿಲ್ಲದೆ ಮೇಲೆದ್ದಿತು

   ನಿಟ್ಟುಸಿರಿನ ಮುಗಿಲು

 

ಹನಿ ಗೂಡಿತು ಮಳೆ ಮೂಡಿತು

ಪ್ರತಿಭಾವಂತ ಶಿಲ್ಪ ಕಲಾವಿದ -ಗಣೇಶ್ ವಿಶ್ವಕರ್ಮ

ಇಲ್ಲಿರುವ ಮಣ್ಣಿನ ಶಿಲ್ಪಗಳನ್ನು ನೋಡಿದಾಗ ನಿಮಗೆ ಇದರ ಕಲಾವಿದ ಯಾರೆಂದು ತಿಳಿಯುವ ಕುತೂಹಲ ಇರಬಹುದಲ್ಲವೇ? ಮಣ್ಣಿನಲ್ಲಿ ಶಿಲ್ಪವನ್ನು ಮಾಡುವುದೊಂದು ಅಪರೂಪದ ಕಲೆ. ಈ ಕಲೆಗಳ ಕಲಾವಿದ ಗಣೇಶ್ ವಿಶ್ವಕರ್ಮ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ್ ಜಿಲ್ಲೆಯ ಯಬರಟ್ಟಿ ಎಂಬ ಊರಿನವರಾದ ಇವರು ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವರು. 

Image

ಶ್ರೀಕೃಷ್ಣ ಜನ್ಮಾಷ್ಟಮಿ- ಎರಡು ಕವನಗಳು

ಕೃಷ್ಣನ ತುಂಟಾಟ

 

ಅಷ್ಟಮಿ ದಿನದಲಿ ವಾಸುಕಿಯೊಡಲಲಿ

ಭ್ರಷ್ಟವ ದೂಡಲು ಧರೆಗಿಳಿದ

ಶಿಷ್ಟತೆ ಮಾರ್ಗದಿ ನಡೆದನು ಕೃಷ್ಣನು

ಕಷ್ಟವ ಮೆಟ್ಟುತ ಬಂದಿಳಿದ!!!

 

ಕರೋನೋತ್ತರ ಸಂಕ್ರಮಣ

                ವರ್ಷ 2020ರ ಸಂಕ್ರಾಂತಿ ಪುರುಷನಾಗಿ  ಬಂದವನು ಈ ಕರೋನಾ.  ಸಾಮಾನ್ಯತಃ  ಪಂಚಾಂಗಗಳಲ್ಲಿ  ಈತನ ವರ್ಣನೆ ಇರುತ್ತಾದರೂ, ಈ ಕಣ್ಣಿಗೆ ಕಾಣದ ವೈರಸ್, ಕರೋನಾದ ಸ್ವರೂಪವನ್ನು  ಕಣ್ಣಿಗೆ ಕಟ್ಟುವಂತೆ  ಹಾಗೂ ಮನಸ್ಸಿನಲ್ಲಿ ಖಾಯಂ ಆಗಿ ಇರುವಂತೆ  ಅಚ್ಚೊತ್ತಿವೆ,  ನಮ್ಮ  ದೃಶ್ಯ ಮಾಧ್ಯಮಗಳು.

ಖುದೀರಾಮ ಭೋಸ್ ಎಂಬ ಕ್ರಾಂತಿಕಾರಿಯ ಪುಣ್ಯಸ್ಮರಣೆ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತವರು ಹಲವಾರು ಮಂದಿ. ಕ್ರಾಂತಿಕಾರಿಗಳ ಪ್ರತಾಪಕ್ಕೆ ಯಾವಾಗಲೂ ಬ್ರಿಟೀಷ್ ಸರಕಾರ ಅಂಜುತ್ತಲೇ ಇತ್ತು. ತನ್ನ ೧೮ನೇ ವಯಸ್ಸಿನಲ್ಲೇ ಬ್ರಿಟೀಷರ ನಿದ್ರೆ ಕೆಡಿಸಿದ ಕ್ರಾಂತಿಕಾರಿಯೇ ಖುದೀರಾಮ ಭೋಸ್. ಹದಿಹರೆಯದ, ಆಟವಾಡಿಕೊಂಡು ಇರಬೇಕಾದ ಪ್ರಾಯದಲ್ಲಿ ಭಾರತ ಮಾತೆ ಪರಕೀಯರ ಆಳ್ವಿಕೆಯಿಂದ ಸ್ವತಂತ್ರಳಾಗಬೇಕೆಂಬ ಹಂಬಲದಿಂದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿ ಗಲ್ಲು ಶಿಕ್ಷೆಗೆ ಗುರಿಯಾದ ಮಹಾನ್ ಚೇತನವೇ ಖುದೀರಾಮ ಭೋಸ್.

Image

*ಕೃಷ್ಣ ಜನ್ಮಾಷ್ಟಮಿ* (ಭಕ್ತಿ ಗೀತೆ)

ಮುರಳಿ ಮಹಿಮೆಯ ಕೇಳಿ ಧರೆಯಲಿ

ನೆರದಿಹ ಮನುಜರು ಅರಿತಿಹರು|

ವರವ ಬೇಡುತ ಮಾಧವ ನಲ್ಲಿಯೆ

ಶಿರವನು ಬಾಗುತ ನಿಂತಿಹರು||

 

ಗೋಕುಲದಲ್ಲಿ ಜನುಮತಾಳಿದ

ತುಂಟ ಪೋರ

ಗೊಣ್ಣೆ ಸುರಿಸುತ ತಾಯ ಹಿಂದೆಯೆ

ಚಿಣ್ಣನೊಬ್ಬನು ಹೋಗುತಿರುವನು

ಕಣ್ಣ ಕಂಬನಿ ಕೆನ್ನೆಗಿಳಿಯುತ ಮುದ್ದು ಮಾಡುತಿದೆ

ಅಣ್ಣನೊಂದಿಗೆ ಜಗಳ ಮಾಡುವ

ಸಣ್ಣ ಹುಡುಗನು ಪುಟ್ಟ ತಮ್ಮನು

ಮಳೆಗಾಲದ ಈ ನೆರೆಯ ಅನಾಹುತಕ್ಕೆ ಕಾರಣ ಏನು?

ಕರ್ನಾಟಕ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಬಹುತೇಕ ಜಲಾಶಯಗಳು ತುಂಬಲು ತೊಡಗಿವೆ. ತುಂಬಿದ ನಂತರ ಅಧಿಕವಾದ ನೀರನ್ನು ಹೊರಗಡೆ ಬಿಡಲಾಗುತ್ತದೆ. ಅದರಿಂದ ಜಲಾನಯನ ಪ್ರದೇಶದ ಸಮೀಪ ಇರುವ ಮನೆಮಂದಿಗಳು ತಮ್ಮ ನೆಲೆಯನ್ನು ಬಿಟ್ಟು ಬೇರೆಡೆಗೆ ಹೋಗಬೇಕಾಗುತ್ತದೆ ಇಲ್ಲವೇ ಸರಕಾರವೇ ಅವರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುತ್ತದೆ. ಇದು ಪ್ರತೀ ವರ್ಷ ನಾವು ನೋಡುತ್ತಿರುವ ವಿದ್ಯಮಾನ. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ರಾಜ್ಯದ ಹಲವೆಡೆ ನೆರೆ ಎಂಬುವುದು ಮಾಮೂಲೀ ಸಂಗತಿಯಾಗಿದೆ. ಸ್ವಲ್ಪವೇ ನೀರು ಬಂದರೂ ಹಳ್ಳಕೊಳ್ಳಗಳು ತುಂಬುತ್ತವೆ. ರಸ್ತೆ ಕುಸಿಯುತ್ತದೆ. ಮನೆಗೆ ನೀರು ನುಗ್ಗುತ್ತದೆ. ಕಾರಣವೇನಿರಬಹುದು ಯೋಚಿಸಿರುವಿರಾ?

Image