ಭಾವ-ಸಮರ

ಅಂಜದಿರು ಮನವೇ ನೀ ಯೋಚನೆಗಳ ಸಮರಕ್ಕೆ 
ವಜ್ರಕವಚವ ತೊಟ್ಟುಬಿಡು ನೀ ಭಾವನೆಗಳ ಹೊಡೆತಕ್ಕೆ 
ನಿಸ್ವಾರ್ಥಿ ನೀನೆಂಬ ಹುಂಬತನ ನಿನಗೇಕೆ 
ನಾವು ನಮ್ಮವರೆಂಬುದು ಅವರವರ ಸ್ವಾರ್ಥಕ್ಕೆ

ಅಂದು ಮಾತುಗಳ ರಭಸಕ್ಕೆ ಮನದಲ್ಲಿ ಕಂಪನ 
ಇಂದು ನೂರು ಮಾತಿದ್ದರೂ ಆವರಿಸಿದೆ ಮೌನ
ಅಂದು ಸಂತಸದಿ ಮನದೊಳಗೆ ಮೂಡಿದ ಚಿತ್ರ 
ಇಂದು ಬಿರುಗಾಳಿಗೆ ಸಿಕ್ಕಿ ಕಣ್ಣ ಕುಕ್ಕಿದೆ ಎಂಥ ವಿಚಿತ್ರ

ಏನಾದರೂ ಅವರವರ ಚಿತ್ತದಂತೆ ಅವರವರ ಬದುಕಲ್ಲವೇ

ಅವರವರ ಕರ್ಮದಂತೆ ಅವರವರ ಜೀವನಕ್ರಮ ಎಂಬುದು ನಿಜವೇ ಆದರೂ ಕೆಲವೊಮ್ಮೆ ಕೆಲವರ ಸ್ಥಿತಿ ನೋಡುವಾಗ ಅಯ್ಯೋ ಈ ತರಹದ್ದೂ ಒಂದು ಬದುಕು ಇರುತ್ತದಾ ಎಂದು ಖೇದವಾದರೆ, ಇನ್ನೂ ಕೆಲವರ ಬದುಕು ಕಂಡಾಗ ಹೀಗೂ ಬದುಕುತ್ತಾರ ಎಂದು ಅಸಹ್ಯ ಪಡುವುದು ಕೂಡಾ ಇದೆ. ಒಂದು ರೀತಿಯಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಿಕ್ಷುಕರೇ ಸರಿ, ಆದರೂ ಭಿಕ್ಷುಕರನ್ನು ಕಂಡಾಗ ಅಸಹ್ಯ ಪಟ್ಟುಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ.

ಚಿಕ ಚೊಕ್ಕ ವರದಿ:

 ಹೊಸದಾಗಿ ಸೇರಿದ ವರದಿಗಾರನಿಗೆ  ಸಂಪಾದಕರು ಮುಖ್ಯ ಸೂಚನೆ ನೀಡುತ್ತಿದ್ದರ್ರು

"ನಿನ್ನ ವರದಿಗಳು ವಸ್ತುನಿಷ್ಟವಾಗಿರಬೇಕು. ಚಿಕ್ಕದೂ ಚೊಕ್ಕದೂ ಮತ್ತು ಹೇಳುವದೆಲ್ಲವನ್ನೂ ಒಂದೆರಡು ವಾಕ್ಯಗಳಲ್ಲಿ ಹೇಳುವಂಥಹದೂ ಆಗಿರಬೇಕು. . . . ."

ವರದಿಗಾರ ತನ್ನ ಮೊದಲ ವರದಿ ಸಲ್ಲಿಸಿದ -

ನಾರಾಯಣಪುರದ ನರಸಿಂಹ ರಾಯರು ಎಂಬುವರು ರಸ್ತೆ ತಿರುವಿನಲ್ಲಿ, ನಡುಬೀದಿಯಲ್ಲಿ ಬಂದು, ಬಸ್ ಬಂತೇ ಎಂದು ನೋಡಿದರು. ಬಸ್ ಬಂತು. ಮೃತರ ವಯಸ್ಸು ಅರವತ್ತೈದು. . . .

 

ಕೃಕ

ನಾಟಕ, celtx, latex ಕುರಿತಾಗಿ.

celtx ಎಂಬ ಬರಹದ ಸಾಫ್ಟ್‌ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ. ಸುಮಾರು ವರ್ಷದಿಂದ ಅದರ ಜತೆ ಆಟವಾಡುತ್ತಾ ಇದ್ದರೂ ಕೂಡ, ಪೂರ್ತಿ ಕೃತಿಯನ್ನು ಅದರಲ್ಲಿ ಈ ಹಿಂದೆ ಬರೆದಿರಲಿಲ್ಲ.

ಮೊದಲಿಗೆ ಕನ್ನಡ ಬರೆಯಲು ಆಗುತ್ತಾ ಇರಲಿಲ್ಲ. ಆಮೇಲೆ, ಆದರೂ ಕೂಡ ಅದನ್ನು ಉಳಿಸಲು ಆಗುತ್ತಿರಲಿಲ್ಲ. ಆಮೇಲೆ ಅದನ್ನು ಮುದ್ರಿಸಲು ಆಗುತ್ತಿರಲಿಲ್ಲ. ಆದಾಗಲೂ ಕೆಲವು ಸಣ್ಣ ಪುಟ್ಟ ತೊಡಕುಗಳು ಇದ್ದೇ ಇದ್ದುವು. ಈಗಲೂ ಕೆಲವು ತೊಡಕು ಇದೆ. ಆದರೆ ಅದಕ್ಕೊಂದು ದಾರಿ ಕಂಡು ಕೊಂಡು celtx ಅನ್ನೇ ಬಳಸಿ ಒಂದು ನಾಟಕವನ್ನು ಬರೆಯಲು ಕೂತೆ. ಈಗ ಒಂದು ವಾರದ ಕೆಳಗೆ ಅದನ್ನು ಬರೆದು ಮುಗಿಸಿದೆ. ಈ ಬರಹ ಆ ನಾಟಕದ ಬಗ್ಗೆ ಅಲ್ಲ. ಅದಕ್ಕಿನ್ನೂ ತುಸು ಮರುಬರವಣಿಗೆಯ ಕೆಲಸವಿದೆ. ಆದರೆ ಇಲ್ಲಿ ಹೇಳ ಹೊರಟಿದ್ದು - ಬರೆದು ಮುಗಿಸಿದ ಮೇಲೆ ಅದನ್ನು ಪಿಡಿಎಫ್ ಆಗಿ ಮಾರ್ಪಡಿಸಲು ನಾನು ಇಟ್ಟ ಹೆಜ್ಜೆಗಳ ಬಗ್ಗೆ.

ನಿನ್ನ ನೆನಪೊಂದೇ ಶಾಶ್ವತ !

ನಿನ್ನೆಗಳ ಸವಿ ನೆನಪಿನೊಂದಿಗೆ
ನಾಳೆಯ ನಿರೀಕ್ಷೆಗಳೆಲ್ಲ
ಮೌನದಾಳಕ್ಕೆ ಜಾರತೊಡಗಿದಾಗ...
ಬರಡೆನಿಸುವ ಬದುಕಲ್ಲಿ
ಬರಿಯ ಕಂಬನಿ ಧಾರೆ!
ಸುತ್ತ ನಿರ್ಮಲತೆ ಹರಡಿದ್ದರೂ
ಮತ್ತೆ ಕುರೂಪತೆ ಕಾಡಿ,
ಮರುಕಳಿಸುವ ನೋವಿಗೆ
ಒಂದಾಗಿ ನಾಂದಿ ಹಾಡಿ,
ಕೃಶವಾಗಿಸುವುದು  ಕನಸ!

ರಾಷ್ಟ್ರೀಯ ಸ್ವಯಂಸೇವಕ ಸಂಘ 6

ಓ.ಟಿ.ಸಿ.

    ೧೯೨೭ರ ಮೇ ತಿಂಗಳಲ್ಲಿ ಕೆಲವು ಆಯ್ದ ತರುಣರಿಗೆ ವಿಶೇಷ ಶಿಕ್ಶ್ಜಣವನ್ನು ನೀಡುವ ವರ್ಗವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರು ಎಲ್ಲಿಬೇಕಾದರೂ ಹೋಗಿ ತಮ್ಮ ತಮ್ಮ ಸ್ವ ಕರ್ತೃತ್ವದಿಂದ ಸಂಘಕಾರ್ಯವನ್ನು ನಡೆಸಲು ಸಮರ್ಥರಾಗಬೇಕು. ಅಲ್ಲದೆ ಅವರು ಶಾಖೆಯಲ್ಲಿ ಅಧಿಕಾರಿಗಳಾಗಿ ಕಾರ್ಯಮಾಡಲೂ ಅರ್ಹರಾಗಬೇಕು ಎಂಬುದೇ ಈ ವರ್ಗದ ಉದ್ದೇಶವಾಗಿತ್ತು. ಇಂತಹ ವರ್ಗಕ್ಕೆ ಅಧಿಕಾರಿ ಶಿಕ್ಷಣ ವರ್ಗ (officers' Training Camp - OTC) ಎಂಬ ಹೆಸರು ಅನೇಕ ವರ್ಷಗಳಕಾಲ ರೂಢಿಯಲ್ಲಿತ್ತು. ೧೯೨೭ರ ಮೊದಲನೇ ವರ್ಗದಲ್ಲಿ ೧೭ ಮಂದು ಆರಿಸಿದ ಸ್ವಯಂಸೇವಕರಿಗೆ ಮಾತ್ರ ಪ್ರವೇಶ ಕೊಡಲಾಗಿತ್ತು.

01&02

01

ಬರಿದಾದ ಎದೆನೆಲದಲ್ಲಿ ಪ್ರೀತಿ

ಚಿಗುರು ಒಡೆದಾಗಲೆಲ್ಲ ವಲಸೆ

ಹಕ್ಕಿಗೆ ಗೂಡು ಕಟುವ ಬಯಕೆ

ಅಲೆಮಾರಿ ಬದುಕಿಗೆ ಕಾಲನ ಪೊರಕೆ

02

ವಲಸೆ ಹಕ್ಕಿಯ ಹಾಡು ಕೇಳಿ

ಹಳಿಯದಿರಿ ಗೆಳೆಯರೇ

ಗೂಡು ಬಿಟ್ಟು ಹೊರಡುವಾಗ

ಯಾರಾದರೂ ಬರುವಿರೆ ?

 

ಅನುಭವ

ಇಲ್ಲ
ಬದಲಾಗಿಲ್ಲ
ದಾರಿ
ಗಮ್ಯವೂ
ಬದಲಾಗಿಲ್ಲ
ಇಕ್ಕೆಲಗಳು
ಪಕ್ಕದ
ಜನರು
ಸುತ್ತಲಿನ
ಪರಿಸರ
ಇಲ್ಲವೇ
ಇಲ್ಲ

ಆದರೂ
ಬದಲಾಗಿದ್ದು
ನಿಜ
ದೃಷ್ಟಿ
ಮತ್ತು
....