ಶಂಕರಾನಂದ ಹೆಬ್ಬಾಳರ 'ಗಝಲ್'
ಚೆಲುವಿನ ಸಿರಿಯಾಗಿ ವದನದಲಿ
ನಗುವನು ಹರಿಸುವೆ |
ಒಲವಿನ ಬುಗ್ಗೆಯಾಗಿ ನಯನದಲಿ
ಕಾಂತಿಯನು ಹೊಮ್ಮಿಸುವೆ ||
ಬಳಿಯಲ್ಲಿ ನೀನಿರಲು ಸುರಲೋಕವೆ
- Read more about ಶಂಕರಾನಂದ ಹೆಬ್ಬಾಳರ 'ಗಝಲ್'
- Log in or register to post comments
ಚೆಲುವಿನ ಸಿರಿಯಾಗಿ ವದನದಲಿ
ನಗುವನು ಹರಿಸುವೆ |
ಒಲವಿನ ಬುಗ್ಗೆಯಾಗಿ ನಯನದಲಿ
ಕಾಂತಿಯನು ಹೊಮ್ಮಿಸುವೆ ||
ಬಳಿಯಲ್ಲಿ ನೀನಿರಲು ಸುರಲೋಕವೆ
ಅಜಮಿಳ ಎಂಬ ಪಾತ್ರವು ನೇರವಾಗಿ ಮಹಾಭಾರತದ ಕತೆಗೆ ಸಂಬಂಧಿಸಿದಲ್ಲದೇ ಇದ್ದರೂ ವೇದವ್ಯಾಸರು ರಚಿಸಿದ ಭಾಗವತ ಪುರಾಣಗಳಲ್ಲಿ ಅದರ ಉಲ್ಲೇಖವಿದೆ. ಅಜಮಿಳ ಎಂಬ ಪಾತ್ರವು ನಮಗೆ ನಮ್ಮ ಜೀವನದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು, ಸತ್ಕರ್ಮಗಳನ್ನು ಮಾಡಬೇಕು, ಭಗವಂತನ ನಾಮಸ್ಮರಣೆಯ ಪುಣ್ಯ ಫಲದ ಬಗ್ಗೆ ಹೇಳಿಕೊಡುತ್ತದೆ.
ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ. ಅದರ ಹೆಸರು ವೃಂದಾವನ. ಅವೂ ವ್ಯಕ್ತಿ ಚಿತ್ರಗಳದ್ದೇ ಕಥನ,
ಬದುಕಿಗೆ
ಕಣ್ಣನಿತ್ತೆ ಬೆಳಕನಿತ್ತೆ
ಬಣ್ಣ ಬೆಡಗು ಸಂಭ್ರಮ!
ಬೆರೆಸಿ ಮಣ್ಣ ನೀರು ಗಾಳಿ
ಹೂವು ಹಣ್ಣು ಘಮಘಮ!
ಅರ್ಜುನ ಮತ್ತು ನಾಗ ಕನ್ಯೆ ಉಲೂಪಿಯ ಮಗನೇ ಇರಾವಣ್. ಇವನಿಗೆ ಐರಾವಣ, ಅರಾವಣ ಎಂಬ ಹೆಸರುಗಳೂ ಇವೆ. ನೀವು ಈಗಾಗಲೇ ಅರ್ಜುನ ಮತ್ತು ಉಲೂಪಿಯ ವಿವಾಹದ ಕತೆಯನ್ನು (ಭಾಗ ೭) ಓದಿರುತ್ತೀರಿ. ಅವರ ಮಗನೇ ಇರಾವಣ್. ಇವನು ಅತ್ಯಂತ ಸಮರ್ಥ ವೀರ ಯೋಧ ಹಾಗೂ ಅರ್ಜುನನಂತೆ ಸುಂದರ ಯುವಕನಾಗಿದ್ದ. ತನ್ನ ತಾಯಿಯಾದ ಉಲೂಪಿಯಿಂದ ಸಮರ ಕಲೆಯನ್ನು ಕಲಿತಿದ್ದ. ಪಾಂಡವರ ಹಾಗೂ ಕೌರವರ ನಡುವೆ ಕುರುಕ್ಷೇತ್ರ ಯುದ್ಧ ಪ್ರಾರಂಭವಾದಾಗ ತನ್ನ ತಂದೆಯಾದ ಅರ್ಜುನನಿಗೆ ಸಹಾಯ ಮಾಡಲು ಇರಾವಣ್ ಯುದ್ಧ ಭೂಮಿಗೆ ಹೋಗುತ್ತಾನೆ. ಇರಾವಣ್ ಯುದ್ಧದಲ್ಲಿ ಕೌರವರ ಅಸಂಖ್ಯಾತ ಸೈನಿಕರನ್ನು ಕೊಂದು ಪಾಂಡವರಿಗೆ ಸಹಾಯ ಮಾಡುತ್ತಾನೆ.
ಇಲಕಲ್ಲ ಸೀರಿ ಉಟ್ಕೊಂಡ ನಾರೀರು
ಮದುವಿ ಛತ್ರಕ ಹೊಂಟಾರ
ಹೆಣ್ಣಿನ ಕಡಿ ಮಂದಿಯೆಲ್ಲ
ಕಣ್ ಕಣ್ ಬಿಟ್ಕಂಡ ನೋಡ್ಯಾರ
ಮದುವಣಗಿತ್ತಿ ಮೊಗದಾ ನಾಚಿಕಿ
ಟುನಾ ಮತ್ತು ಟುನಿ ಎಂಬ ಹೆಸರಿನ ಎರಡು ಟುವ್ವಿ ಹಕ್ಕಿಗಳಿದ್ದವು. ಅವು ಹಲಸು ಮರದಿಂದ ಪೇರಲೆ ಮರಕ್ಕೆ, ಅಲ್ಲಿಂದ ನೇರಳೆ ಮರಕ್ಕೆ - ಹೀಗೆ ಮರದಿಂದ ಹಾರುತ್ತಾ ದಿನಗಳೆಯುತ್ತಿದ್ದವು. ಯಾವಾಗಲೂ “ಫ್ರುಟ್ ಫ್ರುಟ್, ಫ್ರುಟ್ ಫುಟ್" ಎಂದು ಹಾಡುತ್ತಿದ್ದವು.
ಅದೊಂದು ದಿನ ಟುನಾ ತನ್ನ ಮಡದಿ ಟುನಿಗೆ ಹೇಳಿತು, “ಪ್ರೀತಿಯ ಟುನಿ, ನನ್ನ ಹತ್ತಿರ ಸ್ವಲ್ಪ ಹಣವಿರಬೇಕಿತ್ತು. ನಿನಗೂ ನನಗೂ ಬಣ್ಣಬಣ್ಣದ ಪೋಷಾಕು ಖರೀದಿಸಬೇಕಾಗಿತ್ತು.”
ಆಗ ಟುನಿ ಉತ್ತರಿಸಿತು, “ಪ್ರೀತಿಯ ಟುನಾ, ಕಾಡಿನಲ್ಲಿ ಕೆಲವು ಕಡೆ ಚಿನ್ನದ ನಾಣ್ಯಗಳು ತುಂಬಿರುವ ಮಡಕೆಗಳು ಇರುತ್ತವೆ ಎಂದು ಕೇಳಿದ್ದೇನೆ. ಅವುಗಳಲ್ಲಿ ಒಂದನ್ನು ಪತ್ತೆ ಮಾಡಲು ನಮಗೆ ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿತ್ತು!”
ಮಲೆಯಾಳಂ ಭಾಷೆಯಲ್ಲಿ ಗಾಯಕ ಜೇಸುದಾಸ್ ಅವರ ಒಂದು ಇಂಪಾದ ಹಾಡು - 'ನೀರ್ಮಿಳಿ ಪೀಲಿಯಲ್ ನೀರ್ಮಣಿ ತುಳುಂಬಿ'. ಇದನ್ನು ಇಲ್ಲಿ ಕೇಳಿ - https://youtu.be/kgLN-Z_YhzI
ಇದರ ಅರ್ಥ ಇಂಗ್ಲೀಷಿನಲ್ಲಿ
https://lyricstranslate.com/en/neermizi-peeliyil-neermani-tears-spilling.html ಕೊಂಡಿಯಲ್ಲಿ ಸಿಕ್ಕಿತು. ಅದನ್ನು ಬಳಸಿಕೊಂಡು ನಾನು ಅದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ . ಮೂಲದ ಧಾಟಿಯಲ್ಲಿಯೇ ನನ್ನ ಅನುವಾದವನ್ನೂ ಹಾಡಬಹುದು.
ಉಲೂಪಿ ಜೊತೆ ಜೊತೆಯಲ್ಲೇ ಸಾಗಿ ಬರುವ ಇನ್ನೊಂದು ಮಹಾಭಾರತದ ಪಾತ್ರವೆಂದರೆ ಚಿತ್ರಾಂಗದ. ಅರ್ಜುನನ ಮೂರನೇ ಪತ್ನಿ. ಇವಳನ್ನೂ ಅರ್ಜುನ ಅವನ ದೇಶಾಂತರದ ತೀರ್ಥಯಾತ್ರೆಯ ಸಮಯದಲ್ಲೇ ಮದುವೆಯಾಗುತ್ತಾನೆ. ಇವಳಿಂದ ಭಬ್ರುವಾಹನ ಎಂಬ ಮಗನನ್ನೂ ಪಡೆಯುತ್ತಾನೆ. ಇವೆಲ್ಲದರ ವೃತ್ತಾಂತವನ್ನು ಓದೋಣ ಬನ್ನಿ,
ಡಾ. ಸರಜೂ ಕಾಟ್ಕರ್ ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.
ಇದೇ ಕಥೆಯ ಚಲನಚಿತ್ರವನ್ನು ನೀವು ಹಿಂದಿ ಭಾಷೆಯಲ್ಲಿ ನೋಡಿರಬಹುದು. ಮರಾಠ ಸಾಮ್ರಾಜ್ಯದ ಬ್ರಾಹ್ಮಣ ಪೇಶ್ವೆ ಬಾಜಿರಾಯನು ಶೂರ ಧೀರ. ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ಖಡ್ಗ ಹಿಡಿದು ಕ್ಷತ್ರಿಯ ಕರ್ಮವನ್ನು ಮಾಡುತ್ತಿರುವನು. ಈತನಿಗೆ ಈಗಾಗಲೇ ಮದುವೆಯಾಗಿದ್ದರೂ ಮುಸ್ಲಿಂ ನರ್ತಕಿಯಾದ ಮಸ್ತಾನಿಯ ಪ್ರೇಮದಲ್ಲಿ ಬಿದ್ದು ಅವಳನ್ನು ಮದುವೆಯಾಗುವನು. ಅವಳಿಗೆ ಒಂದು ಗಂಡು ಮಗುವಾಗುವುದು. ಅವಳನ್ನು ಪುಣೆಯ ಸಂಪ್ರದಾಯಸ್ಥ ಬ್ರಾಹ್ಮಣ ಸಮಾಜ ಸ್ವೀಕರಿಸುವುದಿಲ್ಲ.