ರಾಜತರಂಗಿಣಿ ಕಥಾವಳಿ

ಪುಸ್ತಕದ ಲೇಖಕ/ಕವಿಯ ಹೆಸರು
ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ ಕನ್ನಡಕ್ಕೆ: ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು
ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೩೫.೦೦ ಮೊದಲ ಮುದ್ರಣ: ೨೦೨೦

ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಾಶ್ಮೀರದ ಕಲ್ಹಣನು ೧೨ ನೇ ಶತಮಾನದಲ್ಲಿ ರಚಿಸಿದ ‘ರಾಜತರಂಗಿಣಿ' ಸಂಸ್ಕೃತ ಕವಿಗಳು ಇತಿಹಾಸಕ್ಕೂ ಮಹತ್ವ ನೀಡಿದುದಕ್ಕೆ ಒಂದು ಉಜ್ವಲ ನಿದರ್ಶನ. ಎಂಟು ‘ತರಂಗ'ಗಳಲ್ಲಿ ಹತ್ತಿರ ಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ ಪ್ರಾಚೀನ ಕಾಲದ ಘಟನೆಗಳನ್ನು ಇತಿಹಾಸ ಮರ್ಯಾದೆಯಿಂದ ದಾಖಲೆ ಮಾಡಿಕೊಂಡಿರುವ ಅಪೂರ್ವ ಗ್ರಂಥ ಇದು. 

ಪುಸ್ತಕನಿಧಿ - 3.ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ

301 ವರ್ಷಗಳ ಹಿಂದೆ 1719 ರಲ್ಲಿಡೇನಿಯಲ್ ಡೇಫೋ ಎಂಬಾತನು ಬರೆದ  ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ ಪ್ರಕಟವಾಯಿತು. ಅದರಲ್ಲಿ ಸಮುದ್ರಯಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ರಾಬಿನ್ಸನ್ ಕ್ರುಸೋ ಎಂಬ ಮನುಷ್ಯ ಸಮುದ್ರಯಾನ ಮಾಡುವಾಗ ಅವನ ನೌಕೆ ಅಪಘಾತಕ್ಕೆ ಸಿಲುಕಿ ಒಂದು ನಿರ್ಜನ ದ್ವೀಪದಲ್ಲಿ ಎಷ್ಟೋ  ವರ್ಷಗಳ ಕಾಲ ಏಕಾಕಿಯಾಗಿ ಬದುಕುವ ಪರಿಸ್ಥಿತಿ ಒದಗುತ್ತದೆ. ಆ ಕಾಲದಲ್ಲಿ ಅವನು ತನ್ನ ಅಗತ್ಯಗಳನ್ನು ಹೇಗೆ ಪೂರೈಸಿಕೊಂಡು ಬದುಕಿದನು ಎಂಬ ಸಾಹಸದ ಕಥೆ ಇದೆ. ಅದು ತುಂಬಾ ಜಗತ್ಪ್ರಸಿದ್ಧವಾದ ಕಾದಂಬರಿ.

ಕರೆಯದೆ ಬಂದ ಅತಿಥಿಗಳು

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಅವಳು ಕರುಣಾಮಯಿ. ಹಾಗಾಗಿ ಹಳ್ಳಿಯ ಮಕ್ಕಳಿಗೆಲ್ಲ ಅಜ್ಜಿಯೆಂದರೆ ಅಚ್ಚುಮೆಚ್ಚು.

ಅದೊಂದು ದಿನ, ಸೂರ್ಯ ದಿಗಂತದಲ್ಲಿ ಕಣ್ಮರೆಯಾದೊಡನೆ ಅವಳು ದೀಪ ಹಚ್ಚಿ ಅದನ್ನು ಕಿಟಕಿಯ ಪಕ್ಕ ಇಟ್ಟಳು. ಅನಂತರ ತನ್ನ ಮುಖವನ್ನು ಶಾಲಿನಿಂದ ಮುಚ್ಚಿಕೊಂಡು, ತಾಜಾ ಗಾಳಿ ಸೇವನೆಗಾಗಿ ಮತ್ತು ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡಲಿಕ್ಕಾಗಿ ಅವಳು ಮನೆಯಿಂದ ಹೊರಬಂದಳು.

ಕೆಲವು ಮಕ್ಕಳೊಂದಿಗೆ ಅಜ್ಜಿ ಮಾತನಾಡುತ್ತಿದ್ದಾಗ ಸಣ್ಣಗೆ ಮಳೆ ಹನಿಯಲು ಶುರುವಾಯಿತು. ಮಳೆ ಹನಿಗಳಿಂದ ಒದ್ದೆಯಾದ ಮನೆಗಳ ಮಣ್ಣಿನ ಗೋಡೆಗಳ ಹಿತವಾದ ವಾಸನೆ ಅಲ್ಲೆಲ್ಲ ತುಂಬಿಕೊಂಡಿತು.

Image

ಸ್ವಲ್ಪ ಇಲ್ಲಿ ಕೇಳಿ ಮನುಜರೇ..

ನಾನು ಯಾರೆಂದು ತಿಳಿದಿರಬೇಕಲ್ಲ! ಹೇಗೆ ಮರೆಯೋಕೆ ಸಾಧ್ಯ ಅಲ್ವಾ? ನಿಮ್ಮೊಂದಿಗೆ ಸದಾ ಇರುವವಳು ನಾನೇ ತಾನೇ? ಹೇಗಿದ್ದೀರಾ? ಆರಾಮವಾಗಿದ್ದೀರಾ?ಅಥವಾ ಚಿಂತಾಕ್ರಾಂತರಾಗಿ ಉಸಿರುಗಟ್ಟಿದ ವಾತಾವರಣದಲ್ಲಿ ಇದ್ದೇವೆ ಅಂತ ಅನಿಸುತ್ತಿದೆಯಾ? ಹುಂ... ಗೊತ್ತು ಬಿಡಿ. ನಿಮ್ಮ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂತ.

ಹಿಂದಿನಿಂದಲೇ "ಸಂಸ್ಕ್ರತಿ, ಸಂಪ್ರದಾಯ, ಆಚಾರ-ವಿಚಾರ, ಕೃಷಿಯೇ ಪ್ರಧಾನ ಕಾಯಕ" ಅಂತ ನಂಬಿಕೊಂಡು ಬಂದ ಪದ್ಧತಿ ನಮ್ಮದು. "ಪ್ರಕೃತಿಯೇ ದೇವರು"ಯಾಕೆಂದರೆ ಸಕಲ ಚರಾಚರ ಜೀವರಾಶಿಗಳಿಗೆ ನನ್ನ ಮಡಿಲಲ್ಲಿ ಸಮಾನವಾಗಿ ಬಾಳಲು ಅವಕಾಶ ಮಾಡಿಕೊಟ್ಟೆ.ಕಾಲಕಾಲಕ್ಕೆ ಮಳೆ, ಬೆಳೆ ಸರಿಯಾಗಿ ಬರುವಂತೆ ಮಾಡುತ್ತಿದ್ದೆ. ಆಗೆಲ್ಲ ನನ್ನ ಮನಸ್ಸು ತುಂಬಿ ಬರುತ್ತಿತ್ತು.ಹಾಗಾಗಿ ನೀವು ನನ್ನನ್ನು ದೇವರು ಎಂದು ಕರೆದಿರಿ.

‘ಲಿಜ್ಜತ್ ಪಾಪಡ್' ಎಂಬ ಗೃಹ ಉದ್ದಿಮೆಯ ವಿರಾಟ್ ಲೋಕ

ಹಪ್ಪಳ ಪಪ್ಪಡ ತಿನ್ನದವರೂ ಕೇಳಿರಬಹುದಾದ ಹೆಸರೆಂದರೆ ಲಿಜ್ಜತ್ ಪಾಪಡ್. ಬಹಳ ಹಿಂದಿನಿಂದಲೂ ಲಿಜ್ಜತ್ ಪಾಪಡ್ ಅವರ ಜಾಹೀರಾತು ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಒಂದು ಮೊಲದ ವೇಷ ಹಾಕಿದ ವ್ಯಕ್ತಿ ತನ್ನ ಎರಡೂ ಕೈಗಳಲ್ಲಿ ಪಾಪಡ್ ಹಿಡಿದುಕೊಂಡು ಲಿಜ್ಜತ್ ಪಾಪಡ್ ಎಂದು ಹೇಳುವ ದೃಶ್ಯವಂತೂ ಎಲ್ಲಾ ಮಕ್ಕಳಿಗೆ ಅಚ್ಚು ಮೆಚ್ಚು. ಇದೇನು ಲಿಜ್ಜತ್ ಪಾಪಡ್? ಏನಿದರ ಒಳಲೋಕ ಬನ್ನಿ ತಿಳಿದುಕೊಳ್ಳೋಣ.

Image

ನುಡಿ ಮುತ್ತು

ಈ ಭೂಮಿಯಲ್ಲಿ ಪ್ರತಿಯೊಬ್ಬನ ಅಗತ್ಯವನ್ನು ಪೂರೈಸಲು ಬೇಕಾದಷ್ಟು ಎಲ್ಲವೂ ಇದೆ; ದುರಾಸೆಗಳನ್ನು ಪೂರೈಸಲು ಸಾಕಾಗುವಷ್ಟಲ್ಲ- ಮಹಾತ್ಮಾ ಗಾಂಧೀಜಿ

 

ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್!

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ ‘ಆಟವಾಡದೇ ಬರೀ ವಿದ್ಯಾಭ್ಯಾಸ ಜಾಕ್ ನನ್ನು ಚುರುಕುತನವಿಲ್ಲದ ಹುಡುಗನನ್ನಾಗಿಸಿತು’ (All work and no play makes Jack a dull boy). ಇಲ್ಲಿ ಜಾಕ್ ಎಂಬ ಹುಡುಗನ ಹೆಸರು ಕೇವಲ ನಿಮಿತ್ತ ಮಾತ್ರ. ನಮ್ಮಲ್ಲೂ ಅಸಂಖ್ಯಾತ ಜಾಕ್ ಗಳಿದ್ದಾರೆ. ನಾವಿಂದು ನಮ್ಮ ಮಕ್ಕಳನ್ನು ಕೇವಲ ಯಶಸ್ಸಿನ ಹಿಂದೆ ಓಡಲೇ ಬೇಕಾದ ಕುದುರೆಗಳಂತೆ ತಯಾರು ಮಾಡುತ್ತಿದ್ದೇವೆ. ಮಗು ಹುಟ್ಟಿ ೩ ವರ್ಷವಾಗುವಾಗಲೇ ಅವರನ್ನು ನಾವು ಬೇಬಿ ಸಿಟ್ಟಿಂಗ್ ಎಂಬ ಕೂಪಕ್ಕೆ ದೂಡುತ್ತೇವೆ. ನಮ್ಮ ಸಮಾಜದಲ್ಲಿ ಅವಿಭಕ್ತ ಕೂಡು ಕುಟುಂಬಗಳು ಕಮ್ಮಿ ಆಗುತ್ತಿವೆ. ನಮ್ಮ ಮಕ್ಕಳಿಗೆ ಅಜ್ಜ ಅಜ್ಜಿ, ಚಿಕ್ಕಪ್ಪ-ದೊಡ್ಡಪ್ಪ, ಮಾವ-ಅತ್ತೆ ಹೀಗೆ ಸಂಬಂಧದ ಅರಿವೇ ಕಮ್ಮಿಯಾಗುತ್ತಿದೆ.

Image

ಅಗ್ನಿಪಥಿಕೆ ನಿವೇದಿತಾ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು
ರಾಷ್ಟೋತ್ಥಾನ ಸಾಹಿತ್ಯ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦ ಮೊದಲ ಮುದ್ರಣ: ೨೦೨೦

ಸ್ವಾತಂತ್ರ್ಯವೆಂಬುವುದು ಕೇವಲ ರಾಜಕೀಯ ಸ್ಥಿತ್ಯಂತರವಲ್ಲ. ಅದು ಎಲ್ಲ ಜೀವನ ಕ್ಷೇತ್ರಗಳನ್ನೂ ಸ್ವಾಭಿಮಾನದಿಂದ ಉಜ್ಜೀವಿಸಬಲ್ಲ ಸ್ವಧರ್ಮ ನಿಷ್ಠೆ- ಎಂಬ ಮನವರಿಕೆಯನ್ನು ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಭಾರತೀಯರಲ್ಲಿ ಮೂಡಿಸಿ ಸ್ವಾತಂತ್ರ್ಯ ಸಂಘರ್ಷಕ್ಕೆ ಅನುಪಮ ಯೋಗದಾನ ಮಾಡಿದವರು ಸಿಸ್ಟರ್ ನಿವೇದಿತಾ ಇವರು. ಈ ಸಂಘರ್ಷಕ್ಕೆ ಒಂದು ಆಯಾಮ ನೀದಲು ‘ಆಕ್ರಮಕ ಹಿಂದೂಧರ್ಮ' ಎಂಬ ಕಲ್ಪನೆಯನ್ನು ಹುಟ್ಟುಹಾಕಿದವರು ಇವರೇ. ಸ್ವಾಮೀ ವಿವೇಕಾನಂದರ ಶಿಷ್ಯೆಯಾಗಿದ್ದು ತಮ್ಮ ಗುರುಗಳ ಆಶಯದಂತೆ ರಾಷ್ಟ್ರ ದರ್ಶನಕ್ಕೆ ಸಮರ್ಥ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸೇವೆ-ತ್ಯಾಗಗಳ ಮೂಲಕ ತಮ್ಮ ಪದ ಚಿನ್ಹೆಯನ್ನು ಉಳಿಸಿ ಹೋದವರು ಇವರು.

ಶಿಕ್ಷಣದ ಸುಪ್ತ ಪರಿಣಾಮ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಬಟಾಟೆ ಅವಲಕ್ಕಿ ಒಗ್ಗರಣೆ

Image

ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ೧೦ ನಿಮಿಷ ನೆನೆಸಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಾಯಿಮೆಣಸು, ಕತ್ತರಿಸಿದ ನೀರುಳ್ಳಿ, ಕರಿಬೇವು ಹಾಕಿ ಹುರಿಯಿರಿ. ಅದಕ್ಕೆ ನೆನೆಸಿಟ್ಟ ಅವಲಕ್ಕಿ, ಬೇಯಿಸಿದ ಬಟಾಟೆ, ಉಪ್ಪು, ಅರಸಿನ ಹುಡಿ, ನೆಲಕಡಲೆ, ಸಕ್ಕರೆ ಹಾಕಿ ಒಂದೆರಡು ಚಮಚ ನೀರು ಹಾಕಿ ಬಾಣಲೆಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ಬಳಿಕ ಲಿಂಬೆ ರಸವನ್ನು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಅಲಂಕರಿಸಿ. ಬಿಸಿ ಬಿಸಿಯಾಗಿ ತಿನ್ನಲು ರುಚಿಕರ.

ಬೇಕಿರುವ ಸಾಮಗ್ರಿ

ದಪ್ಪ ಅವಲಕ್ಕಿ ೧ ಕಪ್, ಆಲೂಗಡ್ಡೆ ಮೀಡಿಯಂ ಗಾತ್ರ ೨, ದೊಡ್ಡ ನೀರುಳ್ಳಿ ೧, ಕಾಯಿಮೆಣಸು ೨, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಸಾಸಿವೆ, ಜೀರಿಗೆ ತಲಾ ೧ ಚಮಚ, ಕರಿಬೇವು ಸೊಪ್ಪು, ಎಣ್ಣೆ. ರುಚಿಗೆ ಉಪ್ಪು. ಚಿಟಿಕೆಯಷ್ಟು ಸಕ್ಕರೆ, ಅರ್ಧ ತುಂಡು ಲಿಂಬೆ ರಸ. ಅರಸಿನ ಹುಡಿ ೧ ಚಮಚ, ಹುರಿದ ನೆಲಕಡಲೆ ಸ್ವಲ್ಪ.