ದುಪ್ಪಟ್ಟು (ಸೂಟು ಬೂಟಿನ ರೈತನ ಪರಿಚಯ)

ಪುಸ್ತಕದ ಲೇಖಕ/ಕವಿಯ ಹೆಸರು
ರಾಜಾರಾಂ ತಲ್ಲೂರು
ಪ್ರಕಾಶಕರು
ಬಹುರೂಪಿ ಬೆಂಗಳೂರು
ಪುಸ್ತಕದ ಬೆಲೆ
೧೩೦.೦೦ ಮುದ್ರಣ ೨೦೨೦

ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ ೨೦೧೭ರಲ್ಲಿ ಅಮ್ಮ ಪ್ರಶಸ್ತಿ ಮತ್ತು ೨೦೨೦ರಲ್ಲಿ ಶಿವರಾಮ ಕಾರಂತ ಪುರಸ್ಕಾರ ಸಂದಿದೆ.

‘ಬದುಕು' ಮುಗಿಸಿದ ಸಾಹಿತಿ ಗೀತಾ ನಾಗಭೂಷಣ

‘ವಚನಕಾರರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ನಿರಂತರ ಸಾವಿರಾರು ವರ್ಷಗಳ ಕಾಲ ಪಾಲಿಸಿಕೊಂಡು ಬಂದ ಜನ ಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿಕಾರಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತ ಕಾರ್ಯವನ್ನು ಇಂದಿನ ಸಾಹಿತಿಗಳು ಸಾಧಿಸಿತೋರಿಸಬೇಕಾಗಿದೆ. ಬರೀ ಶಬ್ದಗಳ ಆಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ. ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದಲ್ಲಿಯ ಅಭ್ಯುದಯಕ್ಕಾಗಿ ದುಡಿಯಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಅಗತ್ಯ ಬೇಕಾಗಿದೆ.

Image

ಆಪಾದಿತನಾಗಿ ನ್ಯಾಯಾಲಯದಲ್ಲಿ ನಿಲ್ಲುವುದು - ಕುಟುಂಬಕ್ಕೆ ಕಳಂಕ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಇಂಜಿನಿಯರಿಂಗ್ ಶಿಕ್ಷಣಕ್ಕೆ ವಿದಾಯ, ದೇಸಿ ಬೀಜರಕ್ಷಣೆ ದೀಕ್ಷೆ

ತಮಿಳ್ನಾಡಿನ ಡಿಂಡಿಗಲ್ ಜಿಲ್ಲೆಯ ಕುಟ್ಟಿಯ ಗೌಂಡನ್‍ಪುಡುರ್ ಗ್ರಾಮದಲ್ಲಿದೆ ಆಧಿಯಾಗೈ ಪರಮೇಶ್ವರನ್ ಅವರ ಆರು ಎಕ್ರೆ ಫಾರ್ಮ್.
ಅಲ್ಲಿ ನಿರಂತರವಾದ ನೀರಿನಾಸರೆಯಿಲ್ಲ. ಆದರ ಪರಮೇಶ್ವರನ್‍ಗೆ ತನ್ನ ಬೆಳೆಗಳು ಉಳಿದು ಬೆಳೆಯುತ್ತವೆಂಬ ವಿಶ್ವಾಸ. ಯಾಕೆಂದರೆ ಅವೆಲ್ಲವೂ ಒಣ ಪ್ರದೇಶಕ್ಕೆ ಸೂಕ್ತವಾದ ದೇಸಿ ಬೀಜಗಳಿಂದ ಬೆಳೆಸಿದವುಗಳು.

Image

ನಾಡ ಪ್ರಭು ಕೆಂಪೇಗೌಡ ಮತ್ತು ಕವಿ ಬಂಕಿಮ ಚಂದ್ರರಿಗೆ ನಮೋ ನಮಃ

ನಾವು ಈ ದಿನ (ಜೂನ್ ೨೭) ದಂದು ಇಬ್ಬರು ಮಹಾನ್ ವ್ಯಕ್ತಿಗಳನ್ನು ಸ್ಮರಿಸಲೇ ಬೇಕಾದ ದಿನ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹಾಗೂ ಭಾರತ ಸ್ವಾತಂತ್ರ್ಯ ಯೋಧರ ನರನಾಡಿಗಳಲ್ಲಿ ತಮ್ಮ ‘ವಂದೇ ಮಾತರಂ’ ಹಾಡಿನ ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದ ಕವಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನ. ನಾವು ಸದಾ ಸ್ಮರಿಸಬೇಕಾದ ಈ ಎರಡು ಮಹಾನ್ ವ್ಯಕ್ತಿಗಳಿಗೆ ಅಕ್ಷರ ನಮನ ಸಲ್ಲಿಸೋಣ.

Image

ಸ್ವಾಮಿ ಮತ್ತು ಅವನ ಸ್ನೇಹಿತರು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಆರ್.ಕೆ. ನಾರಾಯಣ್ ಕನ್ನಡಕ್ಕೆ: ಎಚ್.ವೈ.ಶಾರದಾ ಪ್ರಸಾದ್
ಪ್ರಕಾಶಕರು
ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
ಪುಸ್ತಕದ ಬೆಲೆ
ಬೆಲೆ: ೪೦.೦೦ ಮೊದಲ ಮುದ್ರಣ: ೧೯೯೫

ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ. ಹಿಂದಿಯಲ್ಲಿ ಬಹಳ ಹಿಂದೆ ಪ್ರಸಾರವಾದ ಮಾಲ್ಗುಡಿ ಡೇಸ್ ಈಗ ಮತ್ತೆ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. 

ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಕಥೆ

ಗೋವಾದ ವಿಮಾನ ನಿಲ್ದಾಣಕ್ಕೆ ಒಂದು ಟ್ಯಾಕ್ಸಿ ಬಂದು ನಿಲ್ಲುತ್ತೆ. ಅದರಿಂದ ಓರ್ವ ಮಧ್ಯ ವಯಸ್ಕ, ಸಾಧಾರಣ ಉಡುಪು ಧರಿಸಿದ ವ್ಯಕ್ತಿ ಸಣ್ಣ ಬ್ಯಾಗ್ ಹಿಡಿದುಕೊಂಡು ನೇರ ಒಳಗೆ ಬರುತ್ತಾರೆ. ಚೆಕ್ ಇನ್ ಮಾಡಿಸಿಕೊಂಡು ವಿಮಾನ ಏರಲು ಕುಳಿತುಕೊಂಡು ಬ್ಯಾಗ್ ಒಳಗಿನಿಂದ ಒಂದು ಪುಸ್ತಕ ತೆಗೆದು ಓದಲು ಶುರು ಮಾಡುತ್ತಾರೆ. ವಿಮಾನ ಏರಲು ಕರೆ ಬಂದಾಗಲೂ ಅಷ್ಟೇ ಸರದಿ ಸಾಲಿನಲ್ಲಿ ಹೋಗಿ ವಿಮಾನದಲ್ಲಿ ಕುಳಿತುಕೊಂಡು, ವಿಮಾನದಿಂದ ಇಳಿದಾಗಲೂ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬಸ್ ಮೂಲಕವೇ ಪ್ರಯಾಣಿಸಿ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಾರೆ. ಇವರು ಸಾಧಾರಣ ವ್ಯಕ್ತಿ ಎಂದು ತಿಳಿದಿರಾ?

Image

‘ಕಪಿಲ್ ಡೆವಿಲ್ಸ್’ ೧೯೮೩ರ ವಿಶ್ವಕಪ್ ವಿಜೇತರಾದದ್ದು ಹೇಗೆ ಗೊತ್ತಾ?

೧೯೮೩ರ ಕ್ರಿಕೆಟ್ ವಿಶ್ವಕಪ್ ಗಾಗಿ ಇಂಗ್ಲೆಂಡ್ ಗೆ ವಿಮಾನ ಹತ್ತುವ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವಿದೇಶಕ್ಕೆ ಪಿಕ್ ನಿಕ್ ಹೋಗೋದು, ಚೆನ್ನಾಗಿ ತಿನ್ನೋದು, ತಿರುಗಾಡೋದು,ಮಜಾ ಮಾಡಿ ಭಾರತಕ್ಕೆ ಬರೋದು ಎಂದು ಕೊಂಡೇ ಹೋಗಿದ್ದರು. ಯಾಕೆಂದರೆ ಹಿಂದೆ ನಡೆದ ೨ ವಿಶ್ವಕಪ್ ಗಳಲ್ಲಿ ಭಾರತದ ಸಾಧನೆ ಸೊನ್ನೆ.  ಆದರೆ ಮೂರನೇ ವಿಶ್ವಕಪ್ ನಲ್ಲಿ ನಡೆದದ್ದೇ ಬೇರೆ. ಯಾವ ತಂಡಗಳು ಅತ್ಯಂತ ದುರ್ಬಲ ಎಂದು ಎಣಿಸಿದ್ದರೋ ಅವುಗಳು ಬಲಿಷ್ಟ ತಂಡಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದವು. ನಾವು ಮೊದಲಿಗೆ ೧೯೮೩ರ ವಿಶ್ವಕಪ್ ಮತ್ತು ಅದರಲ್ಲಿ ಆಟವಾಡಿದ ತಂಡಗಳ ಬಗ್ಗೆ ಗಮನಿಸುವ.

Image

ಮಗುವಿನ ಮನಸ್ಸಿನ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ ಇಂದು ಜನ್ಮದಿನದ ಸಂಭ್ರಮ

ಸಾಹಿತ್ಯ ಲೋಕಕ್ಕೆ ಡಾ. ಎಚ್ಚೆಸ್ವಿ ಎಂದೇ ಚಿರಪರಿಚಿತರಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗಿಂದು ಜನ್ಮದಿನದ ಸಂಭ್ರಮ (ಜನನ: ೨೩-೦೬-೧೯೪೪). ಕವನಗಳು ನನ್ನಿಂದ ಮುನಿಸಿಕೊಂಡಿದ್ದರೂ ವೆಂಕಟೇಶಮೂರ್ತಿಯವರ ಬಗ್ಗೆ ಸ್ವಲ್ಪ ಸ್ವಲ್ಪ ಓದಿ ಕೊಂಡದ್ದಿದೆ. ನಾನಿಲ್ಲಿ ಅವರ ಕವನಗಳ ಬಗ್ಗೆ ಬರೆಯುದಿಲ್ಲ. ಆದರೆ ಅವರ ಬಗ್ಗೆ ಸ್ವಲ್ಪವಾದರೂ ಬರೆದರೆ ಅವರ ಜನ್ಮದಿನಕ್ಕೆ ಶುಭ ಕೋರಿದ ಹಾಗೆ ಆಗುತ್ತದೆ ಎಂಬ  ಕಿಂಚಿತ್ತು ನಂಬಿಕೆ ನನ್ನದು.

Image