ಮ್ಯಾಜಿಕ್ ಮಾವು

ಒಂದಾನೊಂದು ಕಾಲದಲ್ಲಿ ಬಹಳ ಎತ್ತರವಾದ ಮಾವಿನ ಮರದ ತುದಿಯಲ್ಲಿ ಒಂದು ಮಾವು ದೊಡ್ಡದಾಗಿ ಬೆಳೆಯಿತು. ಅದು ಬೇರೆ ಮಾವಿನ ಹಣ್ಣುಗಳಂತೆ ಇರಲಿಲ್ಲ. ಓ, ಅದು ಮ್ಯಾಜಿಕ್ ಮಾವು. ಯಾಕೆಂದರೆ ಅದು ಯೋಚಿಸುತ್ತಿತ್ತು, ಮಾತಾಡುತ್ತಿತ್ತು.

ಗುಡ್ಡದಲ್ಲಿದ್ದ ಆ ಎತ್ತರದ ಮಾವಿನ ಮರದ ತುದಿಯಿಂದ ಈ ಮ್ಯಾಜಿಕ್ ಮಾವಿಗೆ ಕೆಳಗಿನ ಹಳ್ಳಿ, ನದಿ, ದೂರದ ಬೆಟ್ಟಗಳು ಕಾಣುತ್ತಿದ್ದವು. "ನಾನು ಈ ಮಾವಿನ ಮರದಿಂದ ಕೆಳಗಿಳಿದರೆ ಎಷ್ಟು ಚೆನ್ನಾಗಿರುತ್ತಿತ್ತು. ಅಲ್ಲೆಲ್ಲ ಅಡ್ಡಾಡ ಬಹುದಾಗಿತ್ತು" ಎಂದು ಯೋಚಿಸಿತು ಮಾವು.

Image

ಬದುಕಿನ ನೃತ್ಯ ನಿಲ್ಲಿಸಿದ ‘ಮಾಸ್ಟರ್ ಜೀ’ ಸರೋಜ್ ಖಾನ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ‘ತೇಜಾಬ್' ಚಿತ್ರದಲ್ಲಿನ ಏಕ್ ದೋ ತೀನ್ ಎಂಬ ಹಾಡಿನ ನೃತ್ಯಕ್ಕೆ ಮನಸೋತಿರುವಿರಾ? ನಟಿ ಶ್ರೀದೇವಿಯ ಮಿ.ಇಂಡಿಯಾ ಚಿತ್ರದಲ್ಲಿನ ‘ಹವಾ ಹವಾಯಿ’ ಎಂಬ ನೃತ್ಯ ನಿಮ್ಮನ್ನೂ ನರ್ತಿಸುವಂತೆ ಮಾಡಿದೆಯಾ? ಆ ನೃತ್ಯ ಕಲಿಸಿದವರು ಯಾರಿರಬಹುದು ಎಂದು ಕುತೂಹಲ ನಿಮ್ಮನ್ನು ಕಾಡಿರಬಹುದಲ್ವೇ? ಆ ಸೂಪರ್ ನೃತ್ಯಗಳ ನಿರ್ದೇಶಕಿಯ ಹೆಸರೇ ಸರೋಜ್ ಖಾನ್. ಸರೋಜ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ ‘ಮಾಸ್ಟರ್ ಜೀ’ ಎಂದೇ ದೊಡ್ಡ ಹೆಸರು ಪಡೆದವರು. ಇಂದು, ಜುಲೈ ೩, ೨೦೨೦ರಂದು ತಮ್ಮ ೭೨ನೇ ವಯಸ್ಸಿನಲ್ಲಿ ಬದುಕಿನ ‘ನೃತ್ಯ'ವನ್ನು  ನಿಲ್ಲಿಸಿದರು.

Image

ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ- ಸರ್ ಎವರ್ಟನ್ ವೀಕ್ಸ್

ಸರ್ ಎವರ್ಟನ್ ಡಿ'ಕೊರ್ಸಿ ವೀಕ್ಸ್ ಇನ್ನಿಲ್ಲ ಎಂಬ ಮಾಹಿತಿಯೊಂದನ್ನು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಂತರ್ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಯಾರಿದು ಎವರ್ಟನ್ ವೀಕ್ಸ್? ಈಗಿನ ಕ್ರೀಡಾಭಿಮಾನಿಗಳಿಗೆ ಅವರ ಗೊತ್ತಿರುವುದು ಕಮ್ಮಿ.  ಇವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹಿಟ್ಟರ್ ಬ್ಯಾಟ್ಸ್ ಮನ್ ಆಗಿದ್ದರು. ಆಗ ಇನ್ನೂ ಕ್ರಿಕೆಟ್ ಅಷ್ಟೊಂದು ಹುಚ್ಚು ಹಿಡಿಸುವ ಆಟವಾಗಿರಲಿಲ್ಲ. ಪಂದ್ಯಾಟಗಳ ವಿವರಗಳೂ ಸರಿಯಾಗಿ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಖ್ಯಾತರಾಗಿದ್ದ ಕ್ರಿಕೆಟ್ ನ ಮೂರು ‘W’ ಗಳು ( The three W’s) ಎಂದು ಹೆಸರಾಗಿದ್ದ ಫ್ರಾಂಕ್ ವಾರೆಲ್ (Frank Worrel), ಕ್ಲೈಡ್ ವಾಲ್ಕಾಟ್ (Clyde Walcott) ಎವರ್ಟನ್ ವೀಕ್ಸ್ (Everton Weekes) ಆಗಿದ್ದರು.

Image

ಸ್ವಸಹಾಯವೇ ಅತ್ಯುತ್ತಮ ಸಹಾಯ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ನಮ್ಮ ತರಕಾರಿಯಲ್ಲಿ ಔಷಧೀಯ ಗುಣಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಎಂ.ಎಚ್. ಸವಿತ
ಪ್ರಕಾಶಕರು
ಅರೀಡ್ಸ್, ಶಿವಮೊಗ್ಗ
ಪುಸ್ತಕದ ಬೆಲೆ
೧೦೦.೦೦ ರೂ. ಪ್ರಥಮ ಮುದ್ರಣ ೨೦೧೪

ಆರೋಗ್ಯವೇ ಭಾಗ್ಯ. ನಮ್ಮ ಸುತ್ತಮುತ್ತಲಿನ ತರಕಾರಿ, ಹಣ್ಣು ಹಂಪಲುಗಳಲ್ಲಿರುವ ರೋಗ ನಿವಾರಕ ಗುಣಗಳನ್ನು ಈ ಪುಸ್ತಕದ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ ಡಾ. ಎಂ.ಎಚ್. ಸವಿತ ಇವರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದುಕೊಂಡು ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಈ ಪುಸ್ತಕ ಬರೆದಿದ್ದಾರೆ.

ಕನ್ನಡ ಪತ್ರಿಕೆಗಳ ಪಿತಾಮಹ - ಮಂಗಳೂರ ಸಮಾಚಾರ

ಕನ್ನಡ ಪತ್ರಿಕೆಗಳನ್ನು ಓದುವ ಸೊಗಡೇ ಬೇರೆ. ಕನ್ನಡ ಭಾಷೆಯ ಘಮವನ್ನು ಮರೆಯಲಾಗದು. ಕನ್ನಡ ನುಡಿಯನ್ನು ಅಕ್ಷರ ರೂಪಕ್ಕೆ ತಂದು ಅದನ್ನು ಪ್ರಪ್ರಥಮವಾಗಿ ಪತ್ರಿಕೆಯ ರೂಪದಲ್ಲಿ ಹೊರ ತಂದದ್ದು ಯಾವಾಗ ಗೊತ್ತೇ? ೧೮೪೩ ಜುಲೈ ೧ ರಂದು. ಮಂಗಳೂರಿಗನಾದ ನನಗಂತೂ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ' ಮಂಗಳೂರಿನಲ್ಲೇ ಮುದ್ರಿತವಾಗಿ ನಮ್ಮ ಊರಿನ ಹೆಸರೇ ಹೊಂದಿರುವುದಂತೂ ಅತ್ಯಂತ ಆನಂದದ ಸಂಗತಿ. ಈ ಪತ್ರಿಕೆ ಯಾರು ಹೊರತಂದದ್ದು, ಎಲ್ಲಿ ಮುದ್ರಿತವಾಯಿತು ಎಂಬೆಲ್ಲಾ ವಿಷಯಗಳನ್ನು ನಾವು ಸ್ವಲ್ಪ ತಿಳಿದುಕೊಳ್ಳೋಣ.

Image

ಡಾ.ಬಿ.ಸಿ.ರಾಯ್ ನೆನಪಿನಲ್ಲಿ ‘ವೈದ್ಯರ ದಿನ'

ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ ೧ನ್ನು ‘ರಾಷ್ಟ್ರೀಯ ವೈದ್ಯರ ದಿನ' ಎಂದು ಆಚರಿಸುತ್ತಾರೆ. ಇದು ನಮ್ಮ ದೇಶದ ಹೆಮ್ಮೆಯ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ದಿನ. ಅವರು ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಅವರ ಜನ್ಮ ದಿನವನ್ನು ‘ವೈದ್ಯರ ದಿನ' ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ಪ್ರತಿಯೊಂದು ದಿನವೂ ವೈದ್ಯರ ದಿನವೇ. ಯಾಕೆಂದರೆ ವೈದ್ಯ ದೇವರ ಅವತಾರವೆಂದೇ ಒಂದು ಮಾತಿದೆ. ರೋಗಿಗಳು ವೈದ್ಯರಲ್ಲಿ ದೇವರನ್ನೇ ಕಾಣುತ್ತಾರೆ.

Image

ನೀರಿನ ಸಮಸ್ಯೆಗೆ ಉತ್ತರ: ಪಾರಂಪರಿಕ ಜ್ನಾನ ಮತ್ತು ಸಂರಚನೆಗಳ ಬಳಕೆ

ಮೇ ೨೦೧೯ರಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್.ಡಿ.ಎ.) ಕೇಂದ್ರ ಸರಕಾರದಲ್ಲಿ ಅಧಿಕಾರ ವಹಿಸಿದಾಗ ಕೈಗೊಂಡ ಮೊದಲ ನಿರ್ಧಾರಗಳಲ್ಲೊಂದು: ನೀರಿಗೆ ಸಂಬಂಧಿಸಿದ ವಿವಿಧ ಮಂತ್ರಾಲಯ ಮತ್ತು ಇಲಾಖೆಗಳನ್ನು ಜಲಶಕ್ತಿ ಮಂತ್ರಾಲಯವಾಗಿ ಒಗ್ಗೂಡಿಸಿದ್ದು.
ಈ ಮಂತ್ರಾಲಯದ ಬಹು ದೊಡ್ಡ ಜವಾಬ್ದಾರಿ: ದೇಶದಲ್ಲಿ ಬಿಗಡಾಯಿಸುತ್ತಿರುವ ನೀರಿನ ಕೊರತೆ ನಿಭಾಯಿಸುವುದು ಮತ್ತು ೨೦೨೪ರೊಳಗೆ ದೇಶದ ಪ್ರತಿಯೊಂದು ಮನೆಗೂ ಕೊಳವೆಯಲ್ಲಿ ಕುಡಿಯುವ ನೀರು ಒದಗಿಸುವುದು. ಈ ಉದ್ದೇಶ ಸಾಧನೆಗಾಗಿ ಒಂದೇ ತಿಂಗಳಿನಲ್ಲಿ ಅದು “ಜಲಶಕ್ತಿ ಅಭಿಯಾನ” ರೂಪಿಸಿತು.

Image

ಮುದುಕ ಮತ್ತು ಮುದುಕಿ

ಒಂದಾನೊಂದು ಕಾಲದಲ್ಲಿ, ಒಂದು ಸಣ್ಣ ಮನೆಯಲ್ಲಿ ಒಬ್ಬ ಮುದುಕ ಮತ್ತು ಮುದುಕಿ ವಾಸ ಮಾಡುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರು ಯಾವುದೇ ಪ್ರಾಣಿಗಳನ್ನು ಸಾಕುತ್ತಿರಲಿಲ್ಲ. ಮುದುಕನಿಗೆ ಜೊತೆ ಮುದುಕಿ ಮತ್ತು ಮುದುಕಿಗೆ ಜೊತೆ ಮುದುಕ ಮಾತ್ರ.

ಅದೊಂದು ಮಧ್ಯಾಹ್ನ, ಯಾವಾಗಿನಂತೆ, ಮುದುಕ ಮತ್ತು ಮುದುಕಿ ಮನೆಯ ವರಾಂಡದಲ್ಲಿ ಕುಳಿತಿದ್ದರು. ಮುದುಕಿ ಹೊಲಿಯುತ್ತಿದ್ದಳು ಮತ್ತು ಮುದುಕ ಒಂದು ಮರದ ತುಂಡಿನಿಂದ ತಟ್ಟೆ ತಯಾರಿಸುತ್ತಿದ್ದ. ಅದನ್ನು ಕತ್ತರಿಸುತ್ತಾ ಮುದುಕ ಹೇಳಿದ, “ನಾವು ಬೇಸಾಯ ಮಾಡದಿರುವುದು ಎಷ್ಟು ಒಳ್ಳೆಯದಾಯಿತು! ಇಲ್ಲವಾದರೆ ನಮಗೆ ಯಾವಾಗಲೂ ಗದ್ದೆ ಉಳುವ ಮತ್ತು ಕೊಯ್ಲು ಮಾಡುವ ಚಿಂತೆ. ಯಾವಾಗಾದರೂ ನೆರೆ ಅಥವಾ ಬಿರುಗಾಳಿ ಬಂದರೆ ನಾವು ಬೆಳೆಸಿದ್ದನ್ನೆಲ್ಲ ಕಳೆದುಕೊಂಡು ನಮಗೆ ಬಹಳ ದುಃಖವಾಗುತ್ತಿತ್ತು.”

Image

ವ್ಯಾಕರಣ

ಮೂಱಱಿಂ ಎಂಟಱವರೆಗೆ ಹತ್ತರ್ಕೆ ಹದಿನುಂಟು

ಹದಿಮೂಱು, ಹದಿನಾಲ್ಕು, ಹದಿನೈದು, ಹದಿನಾಱು, ಹದಿನೇೞು ಹಾಗೂ ಹದಿನೆಂಟು. ಆದರೆ ಹನ್ನೊಂದು, ಹನ್ನೆರಡು ಹಾಗೂ ಹತ್ತೊಂಬತ್ತು