ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ-೬) -ಏಕಲವ್ಯ

ಮಹಾಭಾರತದ ಕಥೆಯಲ್ಲಿ ಪಾಂಡು ಪುತ್ರ ಅರ್ಜುನನಿಗೆ ಸರಿಸಾಟಿಯಾಗಿದ್ದ ವ್ಯಕ್ತಿಗಳಲ್ಲಿ ಓರ್ವ ಕರ್ಣ. ಈ ಸಂಗತಿ ಎಲ್ಲರಿಗೂ ಗೊತ್ತು. ಮತ್ತೊರ್ವ ಅತಿರಥನೆಂದರೆ ಏಕಲವ್ಯ. ಈಗಿನಂತೆಯೇ ಅಂದಿನ ಕಾಲದಲ್ಲೂ ಬೇರೂರಿದ್ದ ಜಾತಿಯ ಅಸಮಾನತೆಯು ಓರ್ವ ಅತ್ಯಂತ ಪರಾಕ್ರಮಿ ಯೋಧನನ್ನು ಬಲಹೀನನನ್ನಾಗಿಸಿತು. ಏಕಲವ್ಯನ ಗುರು ಭಕ್ತಿಯ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೂ ಅವನ ಬಗ್ಗೆ, ಅವನ ಅಂತ್ಯದ ಬಗ್ಗೆ ಸ್ವಲ್ಪ ನಾನು ಸಂಗ್ರಹಿಸಿದ ಸ್ವಲ್ಪ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುವೆ.

Image

ಪುಸ್ತಕನಿಧಿ: 5. ರಸ್ಕಿನ್ ಬಾಂಡ್ ಅವರ the Blue umbrella

ಹಿಂದೆ ಯಾವಾಗಲೋ ನಮ್ಮ ಹರಿಪ್ರಸಾದ್  ನಾಡಿಗರು ಈ ಕಿರು ಕಾದಂಬರಿಯ ಬಗ್ಗೆ ಹೇಳಿದ್ದರು. ರಸ್ಕಿನ್ ಬಾಂಡ್ ತುಂಬಾ ಒಳ್ಳೆಯ ಬರಹಗಾರ.  ತುಂಬಾ  ಸರಳ ಭಾಷೆ ಬಳಸುತ್ತಾರೆ.  ಅವರು ಬರಹದ ಓದು ತುಂಬಾ ಸುಖಕರ. ಆರ್ ಕೆ ನಾರಾಯಣ್ ಅವರ ಬರಹಗಳ ತರಹ ಹೇಳಬಹುದು . 

(ಅವರ  ' ರಸ್ಟಿಯ   ಸಾಹಸಗಳು' ಎಂಬ ಪುಸ್ತಕ ಕನ್ನಡದ ಅನುವಾದದಲ್ಲಿ ಓದಿದ್ದೆ.  Digital library of India ದಿಂದ ನಾನು ಇಳಿಸಿಕೊಂಡಿದ್ದ ಅದು ನನ್ನ ಬಳಿ pdf ರೂಪದಲ್ಲಿ ಇದೆ. ಬೇಕಾದವರು ನನ್ನನ್ನು  9920759710 ಸಂಖ್ಯೆಗೆ ಒಂದು message ಕಳಿಸುವ ಮೂಲಕ ಪಡೆಯಬಹುದು.)

ನಗರದ ಇಲಿ ಮತ್ತು ಹಳ್ಳಿಯ ಇಲಿ

ನಗರದ ಇಲಿ ಮತ್ತು ಹಳ್ಳಿ ಇಲಿ ದಾಯಾದಿಗಳು. ಅದೊಂದು ದಿನ ಹಳ್ಳಿ ಇಲಿಯ ಮನೆಗೆ ನಗರದ ಇಲಿ ಬಂತು. ಅವುಗಳ ಸಂಭಾಷಣೆ ಕೇಳೋಣ.

ಹಳ್ಳಿ ಇಲಿ: ನನ್ನ ಪುಟ್ಟ ಮನೆಗೆ ಬಾ. ಇಲ್ಲಿ ಕತ್ತಲು. ಆದರೆ, ನನ್ನ ಹಿತ್ತಿಲು ದೊಡ್ಡದು. ಹಿಂಬದಿಯಲ್ಲಿರುವ ಭತ್ತದ ಹೊಲಗಳು ವಿಶಾಲವಾಗಿವೆ ಮತ್ತು ಬಯಲುಗಳು ಶುಚಿಯಾಗಿವೆ.

ನಗರದ ಇಲಿ: ನಿನ್ನ ಮನೆಯಲ್ಲಿ ಬಹಳ ಕತ್ತಲು. ನಿನ್ನ ಮನೆಯಲ್ಲಿ ವಿದ್ಯುದ್ದೀಪಗಳು ಇಲ್ಲವೇ?
ಹಳ್ಳಿ ಇಲಿ: ಇಲ್ಲ, ಇಲ್ಲ. ಆದರೆ ಸೂರ್ಯ ಚೆನ್ನಾಗಿ ಬೆಳಗುತ್ತಾನೆ. ಬಾ, ಭತ್ತ ತಿನ್ನು. ಅಥವಾ  ನಿನಗೆ ಜೋಳ ಇಷ್ಟವೇ?

Image

ಹಲಸಿನ ಹಣ್ಣಿನ ಗಾರಿಗೆ

Image

ಅಕ್ಕಿಯನ್ನು ೨ ಗಂಟೆ ನೆನೆಸಿ ತೆಗೆದಿಡಿ. ಅದನ್ನು ಹಲಸಿನ ಹಣ್ಣಿನ ಸೊಳೆ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿ ದಪ್ಪನೆ ಬರುವಂತೆ ನೀರು ಹಾಕದೇ ರುಬ್ಬಿ. ಅದಕ್ಕೆ ಎಳ್ಳು ಸೇರಿಸಿ. ಒಂದು ಕಾವಲಿಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ಬಳಿಕ ರುಬ್ಬಿದ ಹಿಟ್ಟನ್ನು ಗೋಲಿಯಾಕಾರದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಸರಿಯಾಗಿ ಕರಿದ ಮೇಲೆ ಗಾರಿಗೆಯನ್ನು ಹೊರ ತೆಗೆದು ಬಿಸಿ ಬಿಸಿಯಾಗಿ ತಿನ್ನಿರಿ. ಇದಕ್ಕೆ ಹಲಸಿನ ಹಣ್ಣಿನ ಮುಳಕ ಎಂದೂ ಕರೆಯುತ್ತಾರೆ.

ಬೇಕಿರುವ ಸಾಮಗ್ರಿ

ಹಲಸಿನ ಹಣ್ಣಿನ ಸೊಳೆ ೧ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ಎಳ್ಳು, ರುಚಿಗೆ ಉಪ್ಪು, ಸ್ವಲ್ಪ ತೆಂಗಿನ ಕಾಯಿಯ ತುರಿ, ರುಚಿಗೆ ತಕ್ಕಷ್ಟು ಬೆಲ್ಲ, ಕರಿಯಲು ಎಣ್ಣೆ

 

ಆಮೆಗೊಂದು ಮಂದಿರ- ಶ್ರೀ ಕೂರ್ಮನಾಥ ಸ್ವಾಮಿ ದೇವಸ್ಥಾನ

ಮಹಾವಿಷ್ಣು ಲೋಕದ ಕಲ್ಯಾಣಾರ್ಥ ಹಾಗೂ ಧರ್ಮವನ್ನು ಪುನಃ ಸ್ಥಾಪಿಸಲು ಆಗಾಗ ಭಿನ್ನ ಭಿನ್ನ ಅವತಾರಗಳ ಮೂಲಕ ಅವತರಿಸಿರುವುದು ನಿಮಗೆಲ್ಲಾ ತಿಳಿದೇ ಇದೆ. ಇವುಗಳು ದಶಾವತಾರಗಳೆಂದೇ ಖ್ಯಾತಿ ಹೊಂದಿದೆ. ವಿಷ್ಣುವಿನ ಎರಡನೇ ಅವತಾರವಾದ ಕೂರ್ಮಾವತಾರ ಅಂದರೆ ಆಮೆಯ ಅವತಾರದ ಕತೆ ನಿಮಗೆಲ್ಲಾ ಗೊತ್ತಿರಬಹುದು. ದೇವ-ದಾನವರು ಸೇರಿ ಅಮೃತದ ಆಶೆಗೆ ಸಮುದ್ರವನ್ನು, ಮಂದಾರ ಪರ್ವತವನ್ನು ಕಡಗೋಲಾಗಿಯೂ, ವಾಸುಕಿ ಎಂಬ ನಾಗನನ್ನು ಹಗ್ಗವನ್ನಾಗಿಯೂ ಮಾಡಿ ಕಡೆಯುತ್ತಿರುವಾಗ ಪರ್ವತವು ನೀರಿನಲ್ಲಿ ಮುಳುಗಲು ಪ್ರಾರಂಭವಾದಾಗ ವಿಷ್ಣುವು ಆಮೆಯ ರೂಪದಲ್ಲಿ ಪರ್ವತವನ್ನು ಎತ್ತಿ ಹಿಡಿಯುತ್ತಾರೆ. ಇದರಿಂದ ಸಮುದ್ರವನ್ನು ಕಡೆಯಲು ಅನುಕೂಲವಾಗುತ್ತದೆ.

Image

ಉತ್ತರವಿಲ್ಲದ ಪ್ರಶ್ನೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೫) - ಉಲೂಕ

ಮಹಾಭಾರತದಲ್ಲಿ ಉಲೂಕ ಅಥವಾ ಉಲ್ಲೂಕ ಎಂಬ ವ್ಯಕ್ತಿಯ ಬಗ್ಗೆ ಮಾಹಿತಿ ಇರುವುದು ಕಮ್ಮಿ. ಆದರೆ ತಿಳಿದಿರುವ, ನಾನು ಸಂಗ್ರಹಿಸಿರುವ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇನೆ. ದುರ್ಯೋಧನನ ಸೋದರ ಮಾವ ಶಕುನಿಯ ಬಗ್ಗೆ ಯಾರಿಗೆ ತಿಳಿದಿಲ್ಲ? ಒಂದು ರೀತಿಯಲ್ಲಿ ಕುರುಕ್ಷೇತ್ರ ಯುದ್ಧವಾಗಲು ಶಕುನಿ ಮಾಮಾ ಕಾರಣ. ಸದಾ ಕಾಲ ಪಾಂಡವರ ಬಗ್ಗೆ ಇಲ್ಲ ಸಲ್ಲದ್ದನ್ನು ದುರ್ಯೋಧನನಿಗೆ ಹೇಳಿ ಅವನಿಗೆ ನಿರಂತರ ಅವರ ಮೇಲೆ ದ್ವೇಷ ಬೆಳೆಯಲು ಕಾರಣನಾದವನೇ ಶಕುನಿ. ನಾನಿಂದು ಪ್ರಸ್ತಾಪಿಸಿದ ಉಲೂಕನು ಇದೇ ಶಕುನಿಯ ಹಿರಿಯ ಮಗ.

Image

ಕ್ಯಾಬೇಜ್ ಖಾರ ದೋಸೆ

Image

ಅಕ್ಕಿ ಮತ್ತು ತೊಗರಿಬೇಳೆಯನ್ನು ನೀರಿನಲ್ಲಿ ೨ ಗಂಟೆ ನೆನೆಸಿ. ನಂತರ ಅದಕ್ಕೆ ಕೆಂಪು ಮೆಣಸು, ಉಪ್ಪು, ಇಂಗು ಸೇರಿಸಿ ಕಡೆಯಿರಿ. ಹಿಟ್ಟು ಹೆಚ್ಚು ನಯವಾಗದಂತೆ ಕಡೆದು ಅದಕ್ಕೆ ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್ ಹಾಗೂ ಈರುಳ್ಳಿಯನ್ನು ಸೇರಿಸಿ. ಕಾವಲಿಯನ್ನು ಒಲೆಯ ಮೇಲೆ ಕಾಯಿಸಿ ಅದಕ್ಕೆ ಈ ಮಿಶ್ರಣವನ್ನು ರೊಟ್ಟಿ ತಟ್ಟುವಂತೆ ಕೈಯಿಂದ ತಟ್ಟಿ. ಸರಿಯಾಗಿ ಕಾದ ಬಳಿಕ ಕಾವಲಿಯಿಂದ ತೆಗೆಯಿರಿ. ಬಿಸಿ ಬಿಸಿಯಾಗಿ ಊಟಕ್ಕೆ ಹಿತಕರವಾಗಿರುತ್ತದೆ.( ಖಾರ ಜಾಸ್ತಿ ಬೇಕಾದಲ್ಲಿ ಮೆಣಸನ್ನು ಜಾಸ್ತಿ ಹಾಕಿ) 

ಬೇಕಿರುವ ಸಾಮಗ್ರಿ

ಕ್ಯಾಬೇಜ್ ೧ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ತೊಗರಿಬೇಳೆ ಕಾಲು ಕಪ್, ಕೆಂಪು ಮೆಣಸು ೪-೫, ರುಚಿಗೆ ತಕ್ಕಷ್ಟು ಉಪ್ಪು. ಹದ ಗಾತ್ರದ ಈರುಳ್ಳಿ ೧, ಚಿಟಿಕೆಯಷ್ಟು ಇಂಗು

ಬಾಳೆ ಎಲೆಯಲ್ಲಿ ಹಲಸಿನ ಹಣ್ಣಿನ ಕಡುಬು

Image

ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಕಡಿಯುವ ಕಲ್ಲಿನಲ್ಲಿ ನೀರು ಹಾಕದೇ ರುಬ್ಬಬೇಕು. ರುಬ್ಬುವ ಹಿಟ್ಟು ನಯವಾದಾಗ ಒಂದು ಪಾತ್ರೆಯಲ್ಲಿ ತೆಗೆದು ಇಡಿ. ಬಾಳೆ ಎಲೆಯನ್ನು ಒಲೆಯಲ್ಲಿ ಬಾಡಿಸಿ ಅದರ ಮೇಲೆ ಮೊದಲು ರುಬ್ಬಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹರಡಿ, ಮಡಚಿ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ. ೪೦ ರಿಂದ ೪೫ ನಿಮಿಷ ಬೇಯಿಸಿ. ನಂತರ ಪಾತ್ರೆಯ ಮುಚ್ಚಳ ತೆಗೆದು ಬೆಂದಿದೆಯಾ ಎಂದು ಪರೀಕ್ಷಿಸಿ. ಸರಿಯಾಗಿ ಬೆಂದ ಬಳಿಕ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ತುಪ್ಪ ಹಾಗೂ ಉಪ್ಪಿನಕಾಯಿ ಜೊತೆ ತಿನ್ನಲು ಬಲು ರುಚಿಕರ. ಮಳೆಗಾಲದಲ್ಲಿ ಹಲಸಿನ ಹಣ್ಣು ದೊರೆತಾಗ ಈ ತಿಂಡಿಯನ್ನು ಮಾಡಬಹುದು.

ಬೇಕಿರುವ ಸಾಮಗ್ರಿ

ಹಲಸಿನ ಸೊಳೆ ೨ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ಬೆಲ್ಲ ರುಚಿಗೆ ತಕ್ಕಷ್ಟು, ತೆಂಗಿನ ತುರಿ ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಸ್ವಲ್ಪ ಏಲಕ್ಕಿ

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ- ಶ್ರೀ ಜಯಚಾಮರಾಜೇಂದ್ರ ಒಡೆಯರ್

ಜುಲೈ ೧೮, ೨೦೨೦ ಕ್ಕೆ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ನೂರು ವರ್ಷ ತುಂಬಿತು. ಮೈಸೂರು ಸಂಸ್ಥಾನದ ಕೊನೆಯ ಹಾಗೂ ೨೫ನೇ ಮಹಾರಾಜರು ಇವರಾಗಿದ್ದರು. ೧೯೧೯ರ ಜುಲೈ ೧೮ರಂದು ಜನಿಸಿದ ಇವರಿಗೆ ಈ ವರ್ಷ ೧೦೧ರ ಸಂಭ್ರಮ. ಹತ್ತು ವರ್ಷಗಳ ಕಾಲ ಇವರು ಮೈಸೂರು ರಾಜ್ಯವನ್ನು ಆಳಿದ್ದರು. ೧೯೪೦ರಿಂದ ೧೯೫೦ರ ವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ಹಿರಿಮೆ ಇವರದ್ದು. ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ ಇವರ ಅರಸೊತ್ತಿಗೆ ಕಳೆದು ಹೋದರೂ ೧೯೫೬ರವರೆಗೆ ಮೈಸೂರು ರಾಜ್ಯದ ಪ್ರಮುಖರಾಗಿ ಕಾರ್ಯ ನಿರ್ವಹಿಸಿದ್ದರು.

Image