ಗುಂಡೂಪಂತನ ದುಬಾರಿ ಸಲಹೆಗಳು

ಒಂದೂರಿನಲ್ಲೊಬ್ಬ ಗುಂಡೂಪಂತನೆಂಬ ನೀಚ ಬುದ್ಧಿಯ ಜಿಪುಣನಿದ್ದ. ಸೇವಕರಿಂದ ಕೆಲಸ ಮಾಡಿಸಿ, ಅವರಿಗೆ ಮಜೂರಿ ಕೊಡದಿರುವುದು ಅವನ ನೀಚಬುದ್ಧಿಗೊಂದು ನಿದರ್ಶನ. ಸುತ್ತಮುತ್ತಲಿನ ಹಳ್ಳಿಗಳ ಹಲವಾರು ಯುವಕರು ಅವನ ಬಳಿಗೆ ಬಂದು ಕೆಲಸ ಮಾಡಿ, ಮಜೂರಿ ಸಿಗದೆ ಮೋಸ ಹೋಗಿದ್ದರು.

ಒಮ್ಮೆ ಗುಂಡೂಪಂತ ಪಕ್ಕದ ಪಟ್ಟಣಕ್ಕೆ ಹೋಗಿ ಮನೆಗೆ ಬೇಕಾದ ಹಲವು ವಸ್ತುಗಳನ್ನು ಖರೀದಿಸಿದ. ಅವನ್ನು ಸಾಗಿಸಲು ಯಾರಾದರೂ ಸಿಗುತ್ತಾರೆಯೇ ಎಂದವನು ಅತ್ತಿತ್ತ ನೋಡುತ್ತಿದ್ದಾಗ, ಯುವಕನೊಬ್ಬ ಹತ್ತಿರ ಬಂದ. "ಬಾಬೂಜಿ, ನಿಮಗೆ ಕೂಲಿ ಬೇಕಾಗಿದೆಯೇ?" ಎಂದು ಕೇಳಿದ.

Image

ಪತ್ರೊಡೆ

ತುಳುನಾಡಿನ ವಿಶೇಷ ಖಾದ್ಯಗಳಲ್ಲಿ ಇದು ಕೂಡ ಒಂದು. ನಮ್ಮ ಸುತ್ತಮುತ್ತಲಿನ ಪ್ರಕೃತಿಯು ಔಷಧಿಯ ಗುಣಗಳನ್ನು ಹೊಂದಿರುವುದು 
ನಮಗೆ ತಿಳಿದೇ ಇದೆ.ತುಂಬೆ ಗಿಡದಿಂದ ಹಿಡಿದು ಆಲದ ಮರದವರೆಗೂ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳಿಗೆ 
ಉಪಯೋಗಿಸುವಂತವುಗಳಾಗಿವೆ. ಹಾಗೆಯೇ ಕಾಡು ಕೆಸುವಿನ ಎಲೆ. ಇದನ್ನು ತುಳುವರ ಆಟಿ ತಿಂಗಳಿನಲ್ಲಿ ಹೆಚ್ಚಾಗಿ ಆಟಿ ಅಮಾವಾಸ್ಯೆಯ
 ದಿನದಂದು ಹಾಲೆಮರದ ತೊಗಡೆಯಲ್ಲಿ ತಯಾರಿಸಿದ ಕಷಾಯವನ್ನು ಕುಡಿಯುವುದರ ಜೊತೆಗೆ, ಕಾಡು ಕೆಸುವಿನ ಎಲೆಯಿಂದ 

Image

ಯಜ್ಞಸೇನಿ

ಮೊನ್ನೆ ರಾತ್ರಿ ೮ ಗಂಟೆಗೆ ಸುವರ್ಣಚಾನಲ್ ನಲ್ಲಿ ಮಹಾಭಾರತ ಧಾರವಾಹಿ ನೋಡುತ್ತಿದ್ದೆ. ಅಂದಿನ ಸಂಚಿಕೆಯಲ್ಲಿ ಪಾಂಡವರೆಲ್ಲ ದ್ಯೂತಕ್ರೀಡೆಯಲ್ಲಿ ಪರಾಜಿತಗೊಂಡು, ಕೊನೆಗೆ ಪಾಂಚಾಲಿಯನ್ನು ಪರಾಜಿತಗೊಂಡಾಗ, ಆಕೆಯ ಮೇಲೆ ನಡೆಯುವ ದೌರ್ಜನ್ಯವನ್ನು ನೋಡಿ ಮನಕಲಕಿತು.ಈ ಹಿಂದೆ ತ್ರೇತಾಯುಗದ ರಾಮಾಯಣ  ಕಾಲದಲ್ಲಿ ಸೀತೆಯನ್ನು ರಾವಣನು ಲಂಕೆಗೆ ಹೊತ್ತೊಯ್ಯಬೇಕಾದರೂ ಆಕೆ ನಿಂತ ಭೂಮಿಯ ಅಷ್ಟಗಲ ಭಾಗ ಮಾತ್ರ ಎತ್ತಿ ಹೊತ್ತ್ಯೊದ. ಆಕೆಯನ್ನು ಸ್ಪರ್ಶಿಸಲಿಲ್ಲ. ಪರ ಸ್ತ್ರೀಯನ್ನು ಕಣ್ಣೆತ್ತಿ ನೋಡಿದ್ದು ಮತ್ತು ಮೋಹಿಸಿದ್ದು ಆತನ ಜೀವಕ್ಕೆ ಕಂಟಕವಾಯಿತು.

Image

‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿಯ ಸುತ್ತ..

ಪ್ರಪಂಚದಾದ್ಯಂತ ಮನುಷ್ಯನ ಆಲೋಚನೆಗೂ ನಿಲುಕದ ಹಲವಾರು ಸಂಗತಿಗಳಿವೆ. ಕೆಲವು ಸಂಗತಿಗಳು ನೋಡಲು ನಿಗೂಢವೆಂದು ಕಂಡರೂ ಅವುಗಳಿಗೆ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ. ಅದರೆ ವಿಜ್ಞಾನಕ್ಕೂ ಬಿಡಿಸಲಾಗದ ಒಗಟಾಗಿರುವ ಹಲವಾರು ಸಂಗತಿಗಳು ಈ ಲೋಕದಲ್ಲಿ ಸಾಕಷ್ಟಿದೆ. ನಿಸರ್ಗ ಮಾತೆಯ ಮಡಿಲಲ್ಲಿ ಅಡಗಿರುವ ಹಲವಾರು ಸಂಗತಿಗಳಿಗೆ ವೈಜ್ಞಾನಿಕ ಕಾರಣಗಳೇ ಸಿಗುವುದಿಲ್ಲ. ಅವುಗಳಲ್ಲಿ ಒಂದು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿ. ಇದೊಂದು ಸೈತಾನನ ಗುಂಡಿ ಎಂದೇ ಪ್ರಸಿದ್ಧವಾಗಿದೆ. 

Image

ಒಂದು ಚಿತ್ರ - ನೋಟ ಮೂರು !

ಚಿತ್ರವೊಂದಕ್ಕೆ ಮೂರು ಮಂದಿ ಕವಿಗಳು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಓದಿ ಆಸ್ವಾದಿಸಿ.

ಕವನ ೧

ಕಪಿಯ ಚೇಷ್ಠೆ

(ಪರಿವರ್ಧಿನಿ ಷಟ್ಪದಿ)

ಗಡಣವ ತೊರೆಯುತ ಬೀದಿಗೆ ಬಂದಿಹ

ಗಡವವು ಕುಳಿತಿದೆ ಪತ್ರಿಕೆಯೋದುತ

ಬಾಂಧವ್ಯ

ನನ್ನ ನಿನ್ನ ಸ್ನೇಹಕ್ಕೆ ಹೊಸ ಭಾಷ್ಯ ಬರೆಯಲು

ಈ ಮನುಜನಿಂದ ಎಂದೂ ಆಗದು

 

ನಾವಿಬ್ಬರೂ ಬೇರೆ ಬೇರೆ ಜಾತಿ ಆದರೂ ಒಗ್ಗಟ್ಟಿನಿಂದ ಆಡುವೆವು

ಮನುಜನೇಕೆ ಜಾತಿ ಒಂದಾದರು ದ್ವೇಷದಿಂದ ಸಾಯುವನು

 

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೧) ವೃಶಾಲಿ ಹಾಗೂ ಸುಪ್ರಿಯಾ

ನಿಮಗೆಲ್ಲಾ ಮಹಾಭಾರತದಲ್ಲಿ ಕರ್ಣ ಗೊತ್ತು. ಆದರೆ ಅವನ ಪತ್ನಿಯರ ಬಗ್ಗೆ ಗೊತ್ತಾ? ಪಾಂಡವರ ಪತ್ನಿ ದ್ರೌಪದಿ, ಅರ್ಜುನನ ಪತ್ನಿಯರಾದ ಸುಭದ್ರ, ಉಲೂಪಿ, ಚಿತ್ರಾಂಗದ ಹಾಗೂ ಭೀಮನ ಪತ್ನಿಯಾದ ಹಿಡಿಂಬೆಯ ಬಗ್ಗೆ ಎಲ್ಲಾ ಕೇಳಿ ಅಥವಾ ಚಿತ್ರಗಳಲ್ಲಿ ನೋಡಿ ತಿಳಿದಿರುತ್ತೀರಿ. ಆದರೆ ಕುಂತಿಯ ಮಗನಾದ ಕರ್ಣನ ಹುಟ್ಟು, ಅವನ ಸಾಕು ತಂದೆ ತಾಯಿಯರು, ಅವರ ಹಾಗೂ ದುರ್ಯೋಧನನ ಜೊತೆಗಿನ ಮಿತ್ರತ್ವ ಎಲ್ಲಾ ಗೊತ್ತು. ಆದರೆ ಕರ್ಣನ ಪತ್ನಿಯರ ಬಗ್ಗೆ ಹಾಗೂ ಮಕ್ಕಳ ಬಗ್ಗೆ ತಿಳಿದಿದೆಯಾ? ಬನ್ನಿ ಸ್ವಲ್ಪ ಆ ಬಗ್ಗೆ ಮಾಹಿತಿ ಪಡೆಯೋಣ.

Image

ಚಿತ್ರ ಒಂದು ; ಕವನಗಳು ಎರಡು

ಒಂದೇ ಚಿತ್ರಕ್ಕೆ ಎರಡು ಕವನಗಳನ್ನು ಕವಯತ್ರಿ ಶ್ರೀಮತಿ ಲತಾ ಬನಾರಿ ಹಾಗೂ ಶ್ರೀ ಶಂಕರಾನಂದ ಹೆಬ್ಬಾಳ ಇವರು ರಚಿಸಿದ್ದಾರೆ. ಚಿತ್ರ ಒಂದೇ ಆದರೂ ಕವನಗಳ ಭಾವಗಳು ಬೇರೆ ಬೇರೆ.

ಕವನ ೧ *ಕುಂಬಾರನ ಬದುಕು*

ಖಂಡ ಪರಶುವ ಮನದಿ ನೆನೆಯುತ

ಮಂಡಿಯೂರುತ ಕುಳಿತನೊಬ್ಬನು