ಹಿರೋಷಿಮಾ ಅಣುಬಾಂಬ್ ಧಾಳಿಗೆ ೭೫ ವರುಷ

ಅವತ್ತು, ೬ ಆಗಸ್ಟ್ ೧೯೪೫ರಂದು ಇಡೀ ಜಗತ್ತೇ ತತ್ತರಿಸಿತ್ತು. ೧,೪೦,೦೦೦ ಜನರು ಸತ್ತಿದ್ದರು - ಜಪಾನಿನ ಹಿರೋಷಿಮಾದ ಮೇಲೆ ಅಮೇರಿಕಾದ ಯುಎಸ್‌ಎ ದೇಶ ಅಣುಬಾಂಬ್ ಧಾಳಿ ನಡೆಸಿದಾಗ. ಹಲವರು ಅಣು ವಿಕಿರಣದಿಂದಾಗಿ ತಕ್ಷಣವೇ ಸತ್ತಿದ್ದರೆ, ಉಳಿದವರು ವಿಕಿರಣದ ಭಯಾನಕ ರೋಗಗಳಿಂದಾಗಿ, ದೇಹದ ಚರ್ಮ ಕಿತ್ತು ಬಂದ ಸುಟ್ಟ ಗಾಯಗಳಿಂದಾಗಿ, ಇತರ ಭಯಂಕರ ಘಾತಗಳಿಂದಾಗಿ ಅನಂತರ ಕೆಲವೇ ವಾರಗಳಲ್ಲಿ ಸಾವಿಗೆ ಬಲಿಯಾಗಿದ್ದರು.

ಮೂರು ದಿನಗಳ ನಂತರ, ಜಪಾನಿನ ನಾಗಸಾಕಿಯ ಮೇಲೆ ಯುಎಸ್‌ಎ ಇನ್ನೊಂದು ಅಣುಬಾಂಬ್ ಧಾಳಿ ನಡೆಸಿತು. ಇದರಿಂದಾಗಿ ಅದೇ ರೀತಿಯ ಚಿತ್ರಹಿಂಸೆ ಅನುಭವಿಸುತ್ತಾ ಇನ್ನೂ ೭೪,೦೦೦ ಜನರು ಪ್ರಾಣ ಕಳಕೊಂಡರು.

Image

ಮ್ಯಾಜಿಕ್ ಹಸುರು ಕನ್ನಡಕ

ಒಂದು ಹಳ್ಳಿಯಲ್ಲಿ ಒಬ್ಬ ಮುದುಕ ಗುಡಿಸಲಿನಲ್ಲಿ ತನ್ನ ಆಡಿನೊಂದಿಗೆ ವಾಸ ಮಾಡುತ್ತಿದ್ದ. ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಕಾರಣ ಅವನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.

ಒಮ್ಮೆ ಅವನು ಅನಾರೋಗ್ಯದಿಂದ ಎದ್ದೇಳಲು ಆಗಲಿಲ್ಲ. ಆಗ ಅವನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅವನ ಮುದ್ದಿನ ಆಡು ಜಾನು ಅವನಿಗೆ ಸಹಾಯ ಮಾಡುತ್ತಿತ್ತು. ಅದು ಹಳ್ಳಿ ವೈದ್ಯರ ದವಾಖಾನೆಗೆ ಹೋಗಿ ಔಷಧಿ ತಂದು ಕೊಡುತ್ತಿತ್ತು. ಮಾತ್ರವಲ್ಲ, ಒಮ್ಮೆ ಆ ವೈದ್ಯರನ್ನೇ ಮುದುಕನ ಮನೆಗೆ ಕರೆ ತಂದಿತು. ಹಾಗಾಗಿ ಮುದುಕನಿಗೆ ಜಾನು ಎಂದರೆ ಅಚ್ಚುಮೆಚ್ಚು.

Image

ಮರದ ಮೇಲೊಂದು ಮರ ಬೆಳೆದ ಅಪರೂಪದ ಸಂಗತಿ

ನೀವು ದೊಡ್ಡ ದೊಡ್ಡ ಮರಗಳ ಮೇಲೆ ಸಣ್ಣ ಸಣ್ಣ ಬಳ್ಳಿಗಳಂತಹ ಪರಾವಲಂಬಿ ಗಿಡಗಳು ಬೆಳೆದದನ್ನು ನೋಡಿರಬಹುದು. ಅವುಗಳಿಗೆ ಸಾಮಾನ್ಯ ಭಾಷೆಯಲ್ಲಿ ಬದನಿಕೆ ಅಥವಾ ಬಂದಳಿಕೆ ಎನ್ನುತ್ತಾರೆ. ಅವುಗಳು ಮರದ ರೆಂಬೆಯ ಮೇಲೆ ಬೀಡು ಬಿಟ್ಟು ಆ ಮರದಿಂದಲೇ ಆಹಾರವನ್ನು ಹೀರಿಕೊಂಡು ಬದುಕುತ್ತವೆ. ಇವುಗಳಿಗೆ ಭೂಮಿಯ ಸಂಪರ್ಕದ ಅಗತ್ಯವಿಲ್ಲ. ತಮ್ಮ ಎಲ್ಲಾ ಅಗತ್ಯಗಳಿಗೆ ಆಶ್ರಯ ನೀಡಿದ ಮರವನ್ನೇ ಅವಲಂಬಿಸಿರುತ್ತದೆ. ಮರದ ಸಾರವನ್ನು ಹೀರಿ ಮರವಿಡೀ ಹಬ್ಬುತ್ತದೆ. ಕೊನೆಗೊಮ್ಮೆ ಮರದ ಸತ್ವವೆಲ್ಲಾ ನಾಶವಾಗಿ ಮರವೇ ಸತ್ತು ಹೋಗುತ್ತದೆ. ಇದು ಪರಾವಲಂಬಿ ಗಿಡದ ಕತೆಯಾಯಿತು.

Image

ಅಭಿಜ್ಞಾ ಗೌಡ ಇವರ ಕಂದಪದ್ಯಗಳು

ವಸುಧೆಯೊಳಗೆ ನುಗ್ಗಿದೆ ಮಾರಿ

ವಸುಧೆಯ ಮಡಿಲಲಿ ನಡೆದಿದೆ

ವಿಷಧರ ರೋಗಾಣು ಪರಿಷೆ ನಿಮಿಷದಿ ಚದುರೈ

ವಿಷಮಿಸುವಾಗುತ ಭೀಕರ

ವಿಷಮದಿ ವಿಶ್ವದೊಳು ರೌದ್ರ ರೂಪವ ನೋಡೈ||

 

ಸ್ಕೂಪ್

ಪುಸ್ತಕದ ಲೇಖಕ/ಕವಿಯ ಹೆಸರು
ಕುಲದೀಪ್ ನಯ್ಯರ್
ಪ್ರಕಾಶಕರು
ಪ್ರಜಾವಾಣಿ ಪ್ರಕಾಶನ, ನಂ೭೫, ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರು-೫೬೦೦೦೧
ಪುಸ್ತಕದ ಬೆಲೆ
ರೂ.೭೫.೦೦ ಮುದ್ರಣ: ೨೦೦೬

ಭಾರತ ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಬರೆದ ‘ಸ್ಕೂಪ್' ದೇಶದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಮಗ್ರವಾಗಿ ವಿಶ್ಲೇಷಿಸಿರುವ ಪುಸ್ತಕವೆಂದರೆ ತಪ್ಪಾಗಲಾರದು. ಕುಲದೀಪ್ ನಯ್ಯರ್ ಇವರ ಮೊದಲ ಕನ್ನಡಕ್ಕೆ ಭಾಷಾಂತರದೊಂಡ ಪುಸ್ತಕ ಇದು. ರಾಜಕೀಯ ವಿದ್ಯಮಾನಗಳ ಬೆನ್ನು ಹತ್ತಿದ ಅವರು ಆ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಮುಖ ಘಟನೆಗಳನ್ನು ಬೇರೆಲ್ಲರಿಗಿಂತ ಮೊದಲು ಗ್ರಹಿಸಿ ಬಹಿರಂಗಗೊಳಿಸಿದ ಕಥನವಿದು. ಮಹಾತ್ಮಾ ಗಾಂಧಿಯವರ ಹತ್ಯೆಯಿಂದ ಹಿಡಿದು ಮಾಜಿ ಪ್ರಧಾನಿ ವಾಜಪೇಯಿ ಲಾಹೋರಿಗೆ ಕೈಗೊಂಡ ಬಸ್ ಯಾತ್ರೆಯವರೆಗೆ ಸುಮಾರು ಅರ್ಧ ಶತಮಾನದ ನಮ್ಮ ಇತಿಹಾಸವೇ ಇಲ್ಲಿದೆ.

ಮಾರುತಿಯ ಲಂಕಾ ಪ್ರಯಾಣ

ಲಂಕೆಗೆ ಹಾರಿದ ಹನುಮನು

ಶಂಕೆಯ ಪಡುತಿರದೆ ಸೀತೆಯನು ತಾ ನೋಳ್ಪಂ|

ರಂಕದಿ ಕೃಶದಲಿ ಕೊರಗುತ

ಲಂಕಿಣಿ ಕಾಯುತಲಿ ಮಾತೆ ರಾಮನ ಸತಿಯಂ||

 

ಬಳಿಯಲಿ ಬರುತಿಹ ರಾವಣ

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೧೩) ಊರ್ವಶಿ

ಊರ್ವಶಿ ಅಥವಾ ಉರ್ವಶಿಯು ಇಂದ್ರಲೋಕದ ಓರ್ವ ಅಪ್ಸರೆ. ಇಂದ್ರನ ಅಮರಾವತಿಯ ನೃತ್ಯಗಾತಿಯರಾದ ರಂಭೆ, ತಿಲೋತ್ತಮ, ಮೇನಕೆ ಮೊದಲಾದವರ ಜೊತೆಗಾರ್ತಿ. ಇವಳಿಗೂ ಮಹಾಭಾರತಕ್ಕೂ ಏನು ಸಂಬಂಧ ಎಂದು ಯೋಚಿಸುವಿರಾ? ಮಹಾಭಾರತದ ಕಥೆಗಳಲ್ಲಿ ಊರ್ವಶಿಯದ್ದೂ ಒಂದು ಸಣ್ಣದಾದರೂ ಪ್ರಮುಖ ಪಾತ್ರವಿದೆ. ಅದೇನೆಂದು ತಿಳಿದುಕೊಳ್ಳುವ ಮೊದಲು ಊರ್ವಶಿಯ ಹುಟ್ಟಿನ ಬಗ್ಗೆ ಗಮನಿಸುವ.

Image

ಅಂತರಾತ್ಮದ ಕೂಗು

ಪರಿಪರಿಯ ನೋವುಂಡು ಸೋತು ಸೊರಗಿದ ದೇಹ

ಕೊನೆಗೊಮ್ಮೆ ಸಾಯುವುದೇ ಮೇಲೆಂದುಕೊಂಡಿತು

ಅಂತರಾತ್ಮದ ಕೂಗು ಕಿವಿಗೆ ಕೇಳಿಸಿತಾಗ

ಮುಂದೆ ಸಾಗಲು ದಾರಿ ನೂರಾರು ಇದೆ ಎಂದು

 

ಬದುಕಿನುದ್ದಕೂ ಕವಲು ದಾರಿಗಳೇ ವಿನಹ

‘ಹೆಸ್ಡಾಲನ್ ಲೈಟ್ಸ್' ಎಂಬ ಬೆಳಕಿನ ರಹಸ್ಯವೇನು ಗೊತ್ತಾ ?

ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಇನ್ನೂ ಈ ಆಧುನಿಕ ಪ್ರಪಂಚದಲ್ಲಿ ವಿಜ್ಞಾನಿಗಳ ನಿಲುಕಿಗೆ ಸಿಗದ ಹಲವಾರು ವಿಷಯಗಳು ಅಡಗಿವೆ. ಈಗಾಗಲೇ ನೀವು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಬಗ್ಗೆ ಓದಿರುವಿರಿ. ಅದೇ ಸಾಲಿಗೆ ಸೇರುವ ಇನ್ನೊಂದು ರಹಸ್ಯ ‘ಹೆಸ್ಡಾಲನ್ ಲೈಟ್ಸ್' (Hessdalen Lights). ಈ ಹೆಸ್ಡಾಲನ್ ಬೆಳಕು ಏನು? ಎಲ್ಲಿ, ಯಾವಾಗ ಕಂಡು ಬರುತ್ತದೆ? ಎಂಬುವುದರ ಬಗ್ಗೆ ನಾವು ತಿಳಿದುಕೊಳ್ಳೋಣ.

Image