ಹಣ್ಣು ತರಕಾರಿಗಳ ಕಟಾವು, ಸಾಗಾಟ ಮತ್ತು ತೂಕದಲ್ಲಿ ಎಚ್ಚರ ಅಗತ್ಯ

ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಿ ಮಾರಾಟ ಮಾಡುವಾಗ ಕಳೆದುಕೊಳ್ಳುವ ತೂಕ ನಷ್ಟ ಶೇ. ೫ ರಿಂದ ೧೦.  ಕಾರಣ ಸರಿಯಾದ ಸಮಯದಲ್ಲಿ ಕಟಾವು ಮತ್ತು ಸಾಗಾಣಿಕೆ  ಮಾಡದೆ ಇರುವುದು. ಸಾಮಾನ್ಯವಾಗಿ ಕೃಷಿಕರು ತಮ್ಮ ಉತ್ಪನ್ನವನ್ನು ಕಟಾವು ಮಾಡುವುದು ಹೊತ್ತು ಏರಿದ ನಂತರ. ೯ ಗಂಟೆಗೆ ಕೆಲಸದವರು ಬಂದರೆ, ಅವರು ಸುಧಾರಿಸಿಕೊಂಡು ಬಿಸಿಲು ನೆತ್ತಿಗೇರುತ್ತಿರುವಾಗ ಕೆಲಸ ಪ್ರಾರಂಭವಾಗಿ ಸಂಜೆ ೫ ಗಂಟೆ ತನಕ ಕೆಲಸ ಮಾಡುತ್ತಾರೆ. ಕಟಾವು ಮಾಡಿ ತಂದು ರಸ್ತೆ ಅನುಕೂಲವಿರುವ ಕಡೆ ಪೇರಿಸಿಟ್ಟು ಅದಕ್ಕೆ ಬಿಸಿಲು ಬೀಳುವುದಿದ್ದರೆ ಪ್ಲಾಸ್ಟಿಕ್ ಮುಚ್ಚುತ್ತಾರೆ. ಗೊನೆ ಕಟಾವು ಮಾಡುವಾಗಲೂ ಗೊನೆ ಬುಡವನ್ನು ಹೆಣಿಗೆಯ ಹತ್ತಿರದಿಂದಲೇ ಕತ್ತರಿಸುತ್ತಾರೆ.

Image

ನಾಟ್ಯಮಯೂರಿ

ಮೇದಿನಿ ಹಸಿರಲಿ ಮಿಂಚುವ ಮಾಟಕೆ

ರಾಧೆಯ ನೃತ್ಯವ ನೋಡಿ

ಮೇದುರ ಲಲನೆಯ ಮನಸಿನ ಭಾವಕೆ

ಕೇದಿಗೆ ಘಮವದು ಕಾಡಿ..

 

ಕಂಗಳ ನೋಟದ ಬಾಣಕೆ ಸೋತಿದೆ

ಬದುಕಿನ ‘ಇನ್ನಿಂಗ್ಸ್’ ಮುಗಿಸಿದ ಚೇತನ್ ಚೌಹಾಣ್

ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಅರ್ಥಾತ್ ಚೇತನ್ ಚೌಹಾಣ್ ತಮ್ಮ ಬದುಕಿನಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಎಂಬ ಎರಡೂ ಇನ್ನಿಂಗ್ಸ್ ಮುಗಿಸಿ ಮರಳಲಾಗದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ ೧೬, ೨೦೨೦ ರಂದು ನಿಧನ ಹೊಂದಿದ ಈ ಮಾಜಿ ಕ್ರಿಕೆಟಿಗ ಒಂದು ಕಾಲದಲ್ಲಿ ಕ್ರಿಕೆಟ್ ದಂತ ಕತೆ ಸುನಿಲ್ ಗಾವಾಸ್ಕರ್ ಜೊತೆ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಆಟವಾಡಿದ್ದರು. ಸುನಿಲ್ ಗಾವಾಸ್ಕರ್ ಅವರ ಜೊತೆ ಹಲವಾರು ಶತಕಗಳ ಜೊತೆಯಾಟವಾಡಿದ ಕ್ರಿಕೆಟ್ ಆಟಗಾರ ಚೇತನ್ ಚೌಹಾಣ್. ಕ್ರಿಕೆಟ್ ಬದುಕಿನಿಂದ ನಿವೃತ್ತಿ ಪಡೆದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರಾಗಿ ಲೋಕಸಭಾ ಸದಸ್ಯ, ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಸಚಿವರಾಗಿದ್ದರು.

Image

ದೇಶಭಕ್ತಿಯ ಎರಡು ಗಝಲ್ ಗಳು

ಗಝಲ್ ೧

ಫೀನಿಕ್ಸ್ ಹಕ್ಕಿಯಂತೆ ವೈರಿಗಳ ಹುಡುಕಿ

ಕೊಲ್ಲುವನು ವೀರಯೋಧ

ಗರುಡ ಪಕ್ಷಿಯಂತೆ ದೇಶದ ಗಡಿಗಳಲಿ

ಕಾವಲು ಕಾಯುವನು ವೀರಯೋಧ||

 

ಕಲ್ಲಂಗಡಿ ಹಂಚಿ ತಿಂದದ್ದು

ರಾಜು ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ. ಬಡವನಾದ ಅವನು ಚಿಂಚು ಎಂಬ ಒಂದು ಗಿಳಿ ಮತ್ತು ಪಂಚು ಎಂಬ ಆಡನ್ನು ಸಾಕುತ್ತಿದ್ದ. ಕಾಡಿನಿಂದ ಹುಲ್ಲು ಕತ್ತರಿಸಿ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದ ರಾಜುವಿಗೆ ಹೆಚ್ಚು ಆದಾಯ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಅವನು ರಾತ್ರಿ ಗಂಜಿಯೂಟ ಮಾಡಿ ಮಲಗುತ್ತಿದ್ದ.

ಬೇಸಗೆಕಾಲ ಆರಂಭವಾಯಿತು. ಕಾಡಿನಲ್ಲಿ ಹುಲ್ಲು ಒಣಗುತ್ತಾ ಬಂತು. ಒಂದು ಮೂಟೆ ಹುಲ್ಲು ಕತ್ತರಿಸಬೇಕಾದರೆ ರಾಜು ಹಲವು ಗಂಟೆ ಕೆಲಸ ಮಾಡಬೇಕಾಗುತ್ತಿತ್ತು. ಅದೊಂದು ದಿನ ಬೆಳಗ್ಗೆಯಿಂದ ಸಂಜೆಯ ವರೆಗೆ ಹುಲ್ಲು ಕತ್ತರಿಸಿದರೂ ರಾಜುವಿಗೆ ಸಿಕ್ಕಿದ್ದು ಒಂದು ಮೂಟೆ ಹುಲ್ಲು.

Image

ಹಲಸಿನ ಹಣ್ಣಿನ ಉಪ್ಪಿನಕಾಯಿ ರುಚಿ ನೋಡಿರುವಿರಾ?

ನಾವು ಮಳೆಗಾಲದ ಮಧ್ಯ ಭಾಗದಲ್ಲಿದ್ದೇವೆ. ಹಲಸಿನ ಹಣ್ಣುಗಳು ಇನ್ನೂ ಕೆಲವು ಮರಗಳಲ್ಲಿ ನೇತಾಡುತ್ತಿವೆ. ನಮ್ಮಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಹಣ್ಣು ಎಂದರೆ ಹಲಸಿನ ಹಣ್ಣು. ನಿಜಕ್ಕೂ ನೋಡಲು ಹೋದರೆ ಬಹು ಉಪಯೋಗಿಯಾದ ಈ ಹಣ್ಣು ಎಳೆಯದಾಗಿದ್ದರೆ ತರಕಾರಿಯಂತೆಯೂ ಬಳಕೆಗೆ ಯೋಗ್ಯ. ಹಲಸಿನ ಸೊಳೆಯನ್ನು ಉಪ್ಪು ನೀರಿನಲ್ಲಿ ಹಾಕಿಟ್ಟು ರುಚಿಕರವಾದ ಖಾದ್ಯವನ್ನೂ ತಯಾರಿಸ ಬಹುದು. ಹಲಸಿನ ಬೀಜವನ್ನು ಬೇಯಿಸಿ, ಕೆಂಡದಲ್ಲಿ ಸುಟ್ಟು ತಿನ್ನಲೂ ಬಹುದು. ಹಪ್ಪಳ, ಚಿಪ್ಸ್ ಮಾಡಿಟ್ಟು ಮಳೆಗಾಲದಲ್ಲಿ ತಿಂದರೆ ಅದರ ರುಚಿಯೇ ಬೇರೆ. ಇಷ್ಟೆಲ್ಲಾ ಬಹು ಉಪಯೋಗಿಯಾದ ಹಲಸು ಬೆಳೆಯುವಷ್ಟು ಬಳಕೆಯಾಗುತ್ತಿಲ್ಲ. ಅವಿಭಜಿತ ದಕ್ಷಿಣ ಕನ್ನಡದಾದ್ಯಂತ ಈಗಲೂ ಮರದಲ್ಲೇ ಹಲಸು ಹಣ್ಣಾಗಿ ಕೊಳೆಯುವುದನ್ನು ನೋಡಬಹುದು.

Image

ನಮ್ಮ ಹೆಮ್ಮೆಯ ಭಾರತ (1 - 2)

೧೫ ಆಗಸ್ಟ್ ಭಾರತದ ಸ್ವಾತಂತ್ರ್ಯ ದಿನ. ನಮ್ಮ ಹೆಮ್ಮೆಯ ಭಾರತದ ಬಗ್ಗೆ ನಮ್ಮಲ್ಲಿ ಪುಟಿದೇಳುತ್ತದೆ ಅಭಿಮಾನ. ಈ ಅಭಿಮಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ನಮ್ಮ ಮಾತೃಭೂಮಿಯ ಬಗ್ಗೆ ಕುತೂಹಲಕರ ಸಂಗತಿಗಳನ್ನು ತಿಳಿಯೋಣ.

Image