ಮೌನ ಕವಿತೆ

*ಮೌನ ಕವಿತೆ*

ನೂರಾರು ಕವಿತೆಗಳ ಬರೆಯಬೇಕೆಂಬಾಸೆ
ಶಬ್ದಗಳ ಕೊರತೆಯದು ಒಮ್ಮೊಮ್ಮೆ ನನಗೆ
ಅಂತರಂಗದ ಭಾಷೆ ಅಕ್ಷರದ ರೂಪದಲಿ
ಬಿಳಿ ಹಾಳೆಗಳ ಮೇಲೆ ಬೀಳಲಾರವು ಕೊನೆಗೆ

ತುಸು ಕೋಪ ಬೇಸರವು ಕೆಲವೊಮ್ಮೆ ಆದಾಗ
ಲೇಖನಿಯು ಮೌನವನೆ ವಹಿಸುವುದು ನಿಜಕು
ಅನಿಸುವುದು ನನಗಾಗ ಯಾಕೆ ಈ ರೀತಿಯಲಿ
ಭಾವನೆಯ ಪಯಣದಲಿ ಆಗುವುದು ತೊಡಕು

ಉತ್ತರವೆ ಸಿಗದಂಥ ಪ್ರಶ್ನೆಗಳು ಹಲವಾರು
ಹುಡುಕಾಡಿ ಸೋತಾಗ ಗೆಲ್ಲುವುದು ಏನು
ಮನದೊಳಗೆ ರೋಷಾಗ್ನಿ ಉರಿದುರಿದು ಭಸ್ಮವನು
ಹೊರಚೆಲ್ಲಿದರೆ ಸಾಕು ಶಾಂತವಾಗುವೆ ನಾನು

ಬದುಕಿನ ಗಾಯನ ನಿಲ್ಲಿಸಿದ ಪಂಡಿತ್ ಜಸರಾಜ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುವತಾರೆ ಪಂಡಿತ್ ಜಸರಾಜ್ ೨೦೨೦ ರ ಆಗಸ್ಟ್ ೧೭ ರಂದು ತಮ್ಮ ಬದುಕಿನ ಗಾಯನ ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ೯೦ ವರ್ಷಗಳ ಜೀವಿತಾವಧಿಯ ೮೦ ವರ್ಷಗಳನ್ನು ಸಂಗೀತ ಕಲಾದೇವಿಯ ಆರಾಧನೆಯಲ್ಲೇ ಕಳೆದ ಹೆಗ್ಗಳಿಕೆ ಪಂಡಿತ್ ಜಸರಾಜ್ ಅವರದ್ದು. ದೇಶ-ವಿದೇಶಗಳಲ್ಲಿ ಅಪಾರವಾದ ಸಂಗೀತ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಪಂಡಿತ್ ಜಸರಾಜ್ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

Image

ಅಭಿಜ್ಞಾ ಗೌಡ ಅವರ ಭಾವಗೀತೆ

ಮನದಭಾವದ ಮಿಳಿತ

ಭಾವದ ವೀಣೆಯು ಮೀಟಿದೆ ಹೃದಯದಿ

ಜೀವದ ತಾಣದ ಅಂಗಳದಿ

ತಾಯಿಯ ಮಡಿಲಲಿ ಕುಣಿದಿಹ ಬಂಧದಿ

ನಾನಾ ನೀನಾ ಗೊಂದಲದಿ||

 

ಸಂಸ್ಕಾರವೆಂದರೇನು?

  • ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..

 

  • ರಾತ್ರಿಯೆಲ್ಲಾ ಗಂಡನ ಜೊತೆ ಇದ್ದರು ಹಗಲೊತ್ತು ಗಂಡ ಕಂಡೊಡನೆ ತಲೆಮೇಲೆ ಸೆರಗಾಕಿಕೊಳ್ಳೋದು ಸಂಸ್ಕಾರ..!

 

  • ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!

 

Image

ಒಂದಿಷ್ಟು ಹನಿಗಳು

*ರುಬಾಯಿ*

ಶಿಕ್ಷಕನ ಹೊಣೆ ನನಗೆ ಎಚ್ಚರದಿ ಕಲಿಸುವೆನು

ಕಲಿವ ಮನಸುಗಳಿಗೆ ಸರಿ ದಾರಿಯ ತಿಳಿಸುವೆನು

ಕಲಿಕೆಯದು ಕುಣಿಕೆಯಾದರೆ ಬದುಕುವುದು ಹೇಗೆ

ಏರಿಳಿತ ಇರಲೆನಗೆ ತಾಳ್ಮೆಯನು ಬಳಸುವೆನು

ಕಡಲಾಳದ ಕೌತುಕ - ವಿದ್ಯುತ್ ಮೀನುಗಳು

ಸಮುದ್ರ ಒಂದು ಅದ್ಭುತ ಕೌತುಕಗಳ ಆಗರ. ನೀವು ಸಾಗರದೊಳಗೆ ಹೊಕ್ಕರೆ ನಿಮಗೆ ಸಿಗುವ ಜಲಚರಗಳು ಒಂದೋ ಎರಡೋ, ಅವು ಕೋಟ್ಯಾಂತರ. ನಾವು ಸಮುದ್ರದ ಜಲಚರಗಳ ಬಗ್ಗೆ ತಿಳಿದುಕೊಂಡಿರುವುದು ಸ್ವಲ್ಪವೇ ಸ್ವಲ್ಪ. ಏಕೆಂದರೆ ನಮಗೆ ಸಮುದ್ರದ ಆಳಕ್ಕೆ ಹೋಗಲು ಆಗುವುದಿಲ್ಲ. ಅದಕ್ಕೆ ಅನೇಕ ವ್ಯವಸ್ಥೆಗಳು ಬೇಕು. ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿ, ಅನಿಮಲ್ ಪ್ಲಾನೆಟ್ ಮುಂತಾದ ಟಿವಿ ವಾಹಿನಿಗಳು ಸಮುದ್ರದಾಳದ ಹಲವಾರು ಅಪರೂಪದ ಸಂಗತಿಗಳನ್ನು ದಾಖಲಿಸಿ ನಮ್ಮ ಮುಂದೆ ತಂದಿಡುವ ಪ್ರಯತ್ನ ಮಾಡುತ್ತಿವೆ.

Image

ಶಂಕರಾನಂದ ಹೆಬ್ಬಾಳರ ಎರಡು ಕವನಗಳು

*ನಾಟ್ಯ ಸುಂದರಿ (ವನಮಂಜರಿ ವೃತ್ತ)*

ಫಾಲದಿ ನಲ್ಲೆಯು ಹಚ್ಚಿದ ಕುಂಕುಮ ಬಿಂದುವು ಕಂಗಳ ನೋಟವದೂ|

ಹಾಲಿನ ಕೆನ್ನೆಯ ಸಿಂಹದ ಟೊಂಕದಿ ಕಿಂಕಿಣಿ ನೃತ್ಯದ ಜಾದುವದೂ|

ಕಾಲಿನ ಗೆಜ್ಜೆಯು ಘಲ್ಲೆನಲಲ್ಲಿಯೆ ಕೃಷ್ಣನ ಹಾಗೆಯೆ ನಾಕುಣಿದೇ|

ಝೆನ್ ಪ್ರಸಂಗ: ಬದುಕಿನ ಏಕೈಕ ನಗು

ಝೆನ್ ಗುರು ಮಕುಗೆನ್ ಮುಖದಲ್ಲಿ ನಗು ಮೂಡಿದ್ದೇ ಇಲ್ಲ. ಅವರು ನಕ್ಕದ್ದು ಒಂದೇ ಒಂದು ಸಲ. ಅದು ಯಾವಾಗ ಎಂಬುದೇ ಚಿಂತನೆಯ ಸಂಗತಿ.

ತನ್ನ ಬದುಕಿನ ಅಂತಿಮ ದಿನ, ದೇಹತ್ಯಾಗ ಮಾಡುವ ಸಮಯ ಹತ್ತಿರವಾದಂತೆ, ಗುರು ಮಕುಗೆನ್ ತಮ್ಮ ಶಿಷ್ಯರನ್ನು ಕರೆದು ಅಂತಿಮ ಸಂದೇಶ ನೀಡಿದರು: “ಹಲವಾರು ವರುಷಗಳಿಂದ ನೀವೆಲ್ಲ ನನ್ನ ಶಿಷ್ಯರಾಗಿದ್ದೀರಿ. ಈಗ ಹೇಳಿ ನೋಡೋಣ, ಝೆನ್ ಎಂದರೆ ಏನಂತ. ನಿಮ್ಮಲ್ಲಿ ಝೆನ್‌ನ ಸ್ಪಷ್ಟ ಅರ್ಥ ತಿಳಿಸುವವನೇ ಮುಂದಿನ ಗುರು. ಅವನಿಗೇ ಸಿಗುತ್ತದೆ ನನ್ನ ಕಾಷಾಯ ವಸ್ತ್ರ ಮತ್ತು ಭಿಕ್ಷಾಪಾತ್ರೆ.”

Image