ಒಂದು ಚಿತ್ರ - ಎರಡು ಗಝಲ್ ಗಳು
ಗಝಲ್ ೧
ಬಡತನದ ಕೌಶಲ್ಯದೊಳಗೆ
ಅರಳಿಸುತಿದೆ ಪ್ರತಿಮೆ
ಕುಸುರಿಯ ಚಿತ್ತಾರವನು
ಮೆರಸುತಿದೆ ಪ್ರತಿಮೆ||
- Read more about ಒಂದು ಚಿತ್ರ - ಎರಡು ಗಝಲ್ ಗಳು
- Log in or register to post comments
ಗಝಲ್ ೧
ಬಡತನದ ಕೌಶಲ್ಯದೊಳಗೆ
ಅರಳಿಸುತಿದೆ ಪ್ರತಿಮೆ
ಕುಸುರಿಯ ಚಿತ್ತಾರವನು
ಮೆರಸುತಿದೆ ಪ್ರತಿಮೆ||
*ಮೌನ ಕವಿತೆ*
ನೂರಾರು ಕವಿತೆಗಳ ಬರೆಯಬೇಕೆಂಬಾಸೆ
ಶಬ್ದಗಳ ಕೊರತೆಯದು ಒಮ್ಮೊಮ್ಮೆ ನನಗೆ
ಅಂತರಂಗದ ಭಾಷೆ ಅಕ್ಷರದ ರೂಪದಲಿ
ಬಿಳಿ ಹಾಳೆಗಳ ಮೇಲೆ ಬೀಳಲಾರವು ಕೊನೆಗೆ
ತುಸು ಕೋಪ ಬೇಸರವು ಕೆಲವೊಮ್ಮೆ ಆದಾಗ
ಲೇಖನಿಯು ಮೌನವನೆ ವಹಿಸುವುದು ನಿಜಕು
ಅನಿಸುವುದು ನನಗಾಗ ಯಾಕೆ ಈ ರೀತಿಯಲಿ
ಭಾವನೆಯ ಪಯಣದಲಿ ಆಗುವುದು ತೊಡಕು
ಉತ್ತರವೆ ಸಿಗದಂಥ ಪ್ರಶ್ನೆಗಳು ಹಲವಾರು
ಹುಡುಕಾಡಿ ಸೋತಾಗ ಗೆಲ್ಲುವುದು ಏನು
ಮನದೊಳಗೆ ರೋಷಾಗ್ನಿ ಉರಿದುರಿದು ಭಸ್ಮವನು
ಹೊರಚೆಲ್ಲಿದರೆ ಸಾಕು ಶಾಂತವಾಗುವೆ ನಾನು
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುವತಾರೆ ಪಂಡಿತ್ ಜಸರಾಜ್ ೨೦೨೦ ರ ಆಗಸ್ಟ್ ೧೭ ರಂದು ತಮ್ಮ ಬದುಕಿನ ಗಾಯನ ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ೯೦ ವರ್ಷಗಳ ಜೀವಿತಾವಧಿಯ ೮೦ ವರ್ಷಗಳನ್ನು ಸಂಗೀತ ಕಲಾದೇವಿಯ ಆರಾಧನೆಯಲ್ಲೇ ಕಳೆದ ಹೆಗ್ಗಳಿಕೆ ಪಂಡಿತ್ ಜಸರಾಜ್ ಅವರದ್ದು. ದೇಶ-ವಿದೇಶಗಳಲ್ಲಿ ಅಪಾರವಾದ ಸಂಗೀತ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಪಂಡಿತ್ ಜಸರಾಜ್ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.
ಮನದಭಾವದ ಮಿಳಿತ
ಭಾವದ ವೀಣೆಯು ಮೀಟಿದೆ ಹೃದಯದಿ
ಜೀವದ ತಾಣದ ಅಂಗಳದಿ
ತಾಯಿಯ ಮಡಿಲಲಿ ಕುಣಿದಿಹ ಬಂಧದಿ
ನಾನಾ ನೀನಾ ಗೊಂದಲದಿ||
*ರುಬಾಯಿ*
ಶಿಕ್ಷಕನ ಹೊಣೆ ನನಗೆ ಎಚ್ಚರದಿ ಕಲಿಸುವೆನು
ಕಲಿವ ಮನಸುಗಳಿಗೆ ಸರಿ ದಾರಿಯ ತಿಳಿಸುವೆನು
ಕಲಿಕೆಯದು ಕುಣಿಕೆಯಾದರೆ ಬದುಕುವುದು ಹೇಗೆ
ಏರಿಳಿತ ಇರಲೆನಗೆ ತಾಳ್ಮೆಯನು ಬಳಸುವೆನು
ಸಮುದ್ರ ಒಂದು ಅದ್ಭುತ ಕೌತುಕಗಳ ಆಗರ. ನೀವು ಸಾಗರದೊಳಗೆ ಹೊಕ್ಕರೆ ನಿಮಗೆ ಸಿಗುವ ಜಲಚರಗಳು ಒಂದೋ ಎರಡೋ, ಅವು ಕೋಟ್ಯಾಂತರ. ನಾವು ಸಮುದ್ರದ ಜಲಚರಗಳ ಬಗ್ಗೆ ತಿಳಿದುಕೊಂಡಿರುವುದು ಸ್ವಲ್ಪವೇ ಸ್ವಲ್ಪ. ಏಕೆಂದರೆ ನಮಗೆ ಸಮುದ್ರದ ಆಳಕ್ಕೆ ಹೋಗಲು ಆಗುವುದಿಲ್ಲ. ಅದಕ್ಕೆ ಅನೇಕ ವ್ಯವಸ್ಥೆಗಳು ಬೇಕು. ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿ, ಅನಿಮಲ್ ಪ್ಲಾನೆಟ್ ಮುಂತಾದ ಟಿವಿ ವಾಹಿನಿಗಳು ಸಮುದ್ರದಾಳದ ಹಲವಾರು ಅಪರೂಪದ ಸಂಗತಿಗಳನ್ನು ದಾಖಲಿಸಿ ನಮ್ಮ ಮುಂದೆ ತಂದಿಡುವ ಪ್ರಯತ್ನ ಮಾಡುತ್ತಿವೆ.
*ನಾಟ್ಯ ಸುಂದರಿ (ವನಮಂಜರಿ ವೃತ್ತ)*
ಫಾಲದಿ ನಲ್ಲೆಯು ಹಚ್ಚಿದ ಕುಂಕುಮ ಬಿಂದುವು ಕಂಗಳ ನೋಟವದೂ|
ಹಾಲಿನ ಕೆನ್ನೆಯ ಸಿಂಹದ ಟೊಂಕದಿ ಕಿಂಕಿಣಿ ನೃತ್ಯದ ಜಾದುವದೂ|
ಕಾಲಿನ ಗೆಜ್ಜೆಯು ಘಲ್ಲೆನಲಲ್ಲಿಯೆ ಕೃಷ್ಣನ ಹಾಗೆಯೆ ನಾಕುಣಿದೇ|
ಝೆನ್ ಗುರು ಮಕುಗೆನ್ ಮುಖದಲ್ಲಿ ನಗು ಮೂಡಿದ್ದೇ ಇಲ್ಲ. ಅವರು ನಕ್ಕದ್ದು ಒಂದೇ ಒಂದು ಸಲ. ಅದು ಯಾವಾಗ ಎಂಬುದೇ ಚಿಂತನೆಯ ಸಂಗತಿ.
ತನ್ನ ಬದುಕಿನ ಅಂತಿಮ ದಿನ, ದೇಹತ್ಯಾಗ ಮಾಡುವ ಸಮಯ ಹತ್ತಿರವಾದಂತೆ, ಗುರು ಮಕುಗೆನ್ ತಮ್ಮ ಶಿಷ್ಯರನ್ನು ಕರೆದು ಅಂತಿಮ ಸಂದೇಶ ನೀಡಿದರು: “ಹಲವಾರು ವರುಷಗಳಿಂದ ನೀವೆಲ್ಲ ನನ್ನ ಶಿಷ್ಯರಾಗಿದ್ದೀರಿ. ಈಗ ಹೇಳಿ ನೋಡೋಣ, ಝೆನ್ ಎಂದರೆ ಏನಂತ. ನಿಮ್ಮಲ್ಲಿ ಝೆನ್ನ ಸ್ಪಷ್ಟ ಅರ್ಥ ತಿಳಿಸುವವನೇ ಮುಂದಿನ ಗುರು. ಅವನಿಗೇ ಸಿಗುತ್ತದೆ ನನ್ನ ಕಾಷಾಯ ವಸ್ತ್ರ ಮತ್ತು ಭಿಕ್ಷಾಪಾತ್ರೆ.”
ಬನ್ನಿ ಹಾಡೋಣ ಇಂದು
ಈ ಬೆಳಕಿನುತ್ಸವಕೆ ಬಂದು|
ಮಗು ಮುಗ್ಧ ಬೆರಗಿನಲಿ
ಬಾಳ ನಿತ್ಯೋತ್ಸವಕೆ
ಎದೆಯ ತೆರೆಯೋಣ ಇಂದು