ನಿಸಾರ್ ಸತ್ತ ಸುದ್ದಿ
ನಿಸಾರ್ ಸತ್ತ ಸುದ್ದಿ,
ಮೀಡಿಯಾಗಳಲ್ಲಿ
ಬ್ರೇಕಿಂಗ್ ನ್ಯೂಸ್ ಆಗಿ
- Read more about ನಿಸಾರ್ ಸತ್ತ ಸುದ್ದಿ
- Log in or register to post comments
ನಿಸಾರ್ ಸತ್ತ ಸುದ್ದಿ,
ಮೀಡಿಯಾಗಳಲ್ಲಿ
ಬ್ರೇಕಿಂಗ್ ನ್ಯೂಸ್ ಆಗಿ
ಮಗಳು, 'ಅಮ್ಮ ಹೋಳಿಗೆ, ಮಾವಿನಹಣ್ಣಿನ ಸೀಕರಣಿ ಭಾಳ್ ಚಲೋ ಐತಿ!' ಅಂತ ಚಪ್ಪರಿಸಿಕೊಂಡು ತಿನ್ನುತ್ತಿರುವಾಗಲೇ, ಅಮಿತನಿಗೆ ಹೊರಗಡೆ ಏನೋ ಘೋಷಣೆ ಕೇಳಿಸಿದಂತೆ ಆಗಿ ಮಗಳಿಗೆ, 'ಒಂದ್ನಿಮಿಷ ಸುಮ್ಮನಿರು' ಎಂದು ಅತ್ತ ಕಿವಿಗೊಟ್ಟ.
ಕೆಲವೊಮ್ಮೆ ನನಗೆ ಪತ್ರಿಕೆಯಲ್ಲಿ ಯಾರಾದರೂ ಖ್ಯಾತ ವ್ಯಕ್ತಿಗಳು ನಿಧನ ಹೊಂದಿದ ಸುದ್ದಿ ತಿಳಿದಾಗ ಬೇಸರದ ಜೊತೆ ನಾಚಿಗೆಯೂ ಆಗುತ್ತದೆ. ಯಾಕೆಂದರೆ ಅವರ ಸಾಧನೆಗಳನ್ನು ಬದುಕಿರುವಾಗ ನಾವು ಗಮನಿಸಿರುವುದೇ ಕಮ್ಮಿ ಎಂದು ನಾಚಿಗೆ ಪಡುತ್ತೇನೆ. ಈಗ ನೋಡಿ ಇತ್ತೀಚೆಗೆ ನಮ್ಮ ಹಾಕಿಯ ಅಗ್ರಮಾನ್ಯ ಆಟಗಾರ, ಮಾಜಿ ನಾಯಕರಾದ ಬಲ್ಬೀರ್ ಸಿಂಗ್ ಸೀನಿಯರ್ ತಮ್ಮ ೯೬ನೇ ವರ್ಷದಲ್ಲಿ ನಿಧನ ಹೊಂದಿದರು.
ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ. ಆ ಶತಮಾನದ ಸಮಯದಲ್ಲಿದ್ದ ಸತಿ ಪದ್ಧತಿ, ಯಹೂದಿಗಳ ಹತ್ಯೆ, ಗುಲಾಮರ ಚಟುವಟಿಕೆಗಳು ಮತ್ತು ಅವರ ಯಾತನಾಮಯ ದಿನಗಳು ಓದುಗರ ನಿದ್ದೆಯನ್ನು ಕೆಡಿಸುತ್ತವೆ.
ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ.
ಮಾನವ ಭೂಮಿಗೆ ಬಂದ ಬಳಿಕ ಪರಿಚಯವಾಗುವ ಮೊದಲ ಆಹಾರವೇ ಹಾಲು. ತಾಯಿಯ ಹಾಲು ಅಮೃತವೆನ್ನುತ್ತಾರೆ. ಇದರಲ್ಲಿ ಅತಿಶಯೋಕ್ತಿ ಏನಿಲ್ಲ. ಸತ್ಯ ಸಂಗತಿ. ತಾಯಿಯ ಹಾಲನ್ನು ಕುಡಿದು ಬೆಳೆದ ಮಕ್ಕಳು ಬಾಟಲಿ ಹಾಲು ಕುಡಿದು ಬೆಳೆದ ಮಕ್ಕಳಿಗಿಂತ ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ.
ಪಟ ಚಿತ್ರಕಲೆ
ಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿಗಳಿಗೆ ಸಂಬಂಧಿಸಿದ ಚಿತ್ರಗಳೂ ಇರುತ್ತವೆ.
ಪ್ರಾಕೃತಿಕ ವಸ್ತುಗಳನ್ನೇ ಬಳಸಿ, ಕೆಂಪು, ಹಳದಿ ಮತ್ತು ಹಸುರು ಬಣ್ಣಗಳಲ್ಲಿ ಚಿತ್ರಗಳ ರಚನೆ. ಚಿತ್ರಗಳ ಮೂಲರೇಖೆಗಳು ಕಪ್ಪು ಬಣ್ಣದಲ್ಲಿರುತ್ತವೆ. ಚಿತ್ರಪಟದ ಅಂಚುಗಳು ಮತ್ತು ಮುಖ್ಯಚಿತ್ರದ ಹೊರತಾಗಿ ಉಳಿದ ಜಾಗವನ್ನು ಗಿಡಗಳು ಮತ್ತು ಹೂವಿನ ಚಿತ್ರಗಳು ತುಂಬುತ್ತವೆ. (ನೋಡಿ: ಕುದುರೆ ಚಿತ್ರ)
ಮರಿಕುದುರೆ ರೋರೋ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ. ಅದೊಂದು ದಿನ ಅದರ ತಾಯಿ ಸಿಟ್ಟಿನಿಂದ ಹೇಳಿತು, “ರೋರೋ, ನಿನ್ನ ತಂಗಿ ಕೆಳಗೆ ಬಿದ್ದು ಅವಳ ಕಾಲಿಗೆ ಏಟಾದಾಗಲೂ ನೀನು ಅವಳಿಗೆ ಸಹಾಯ ಮಾಡಲಿಲ್ಲ. ಇವತ್ತು ನೀನು ಈ ತೆಂಗಿನ ತೋಟದಲ್ಲಿ ಸುತ್ತಾಡಿ, ಯಾರೋ ಒಬ್ಬರಿಗಾದರೂ ಸಹಾಯ ಮಾಡಿ ಬಂದು ನನಗೆ ಹೇಳಬೇಕು. ಅನಂತರವೇ ನಿನಗೆ ಊಟ ಕೊಡುತ್ತೇನೆ.”
ಡಾ.ಕೆ.ಸಿ.ಶಶಿಧರ್ ಇವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ , ಶಿವಮೊಗ್ಗ ಇಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಶಿವಮೊಗ್ಗ ವಿಶ್ವ ವಿದ್ಯಾಲಯವು ನೇಗಿಲ ಮಿಡಿತ ಎನ್ನುವ ಕೃಷಿ ಮಾಸ ಪತ್ರಿಕೆಯನ್ನು ಹೊರ ತಂದಾಗ ಪ್ರಥಮ ಸಂಪಾದಕರಾಗಿದ್ದರು. ‘ಮಣ್ಣ ಮಡಿಲಲ್ಲಿ' ಎನ್ನುವ ಅಂಕಣವನ್ನು ಬಹುಕಾಲ ಕೆ.ಸಿ.ಶಶಿಧರ್ ಇವರು ಬರೆಯುತ್ತಾ ಬಂದರು.
ಮೊದಲಿಗೆ ಕರಿಬೇವನ್ನು ಚೆನ್ನಾಗಿ ತೊಳೆದು ಸ್ವಚ್ಚ ಗೊಳಿಸಿ. ಒಣ ಕೊಬ್ಬರಿಯನ್ನು ತುರಿದು ಇಡಿ. ಕರಿ ಬೇವು ಮತ್ತು ಮೆಣಸನ್ನು ಪ್ರತ್ಯೇಕವಾಗಿ ಹುರಿಯಿರಿ. ಕಡಲೇ ಬೇಳೆಯನ್ನು ಹುರಿದು ನಯವಾಗಿ ಹುಡಿಯಾಗುವಂತೆ ಮಿಕ್ಸಿಯಲ್ಲಿ ಹುಡಿ ಮಾಡಿರಿ. ಕೊಬ್ಬರಿ ತುರಿಯನ್ನು ತುಪ್ಪದಲ್ಲಿ ಹುರಿಯಿರಿ. ಇಂಗನ್ನು ಸ್ವಲ್ಪ ಎಣ್ಣೆಯಲ್ಲಿ ಬಿಸಿ ಮಾಡಿ. ಹುಣಸೇ ಹುಳಿಯ ಸಣ್ಣ ಸಣ್ಣ ತುಂಡು ಮಾಡಿ.
ಬೇಕಾಗುವ ವಸ್ತುಗಳು: ಒಣಗಿದ ಕೊಬ್ಬರಿ ೧, ಕಡಲೇ ಬೇಳೆ ೧ ಕಪ್, ೨೫-೩೦ ಕರಿಬೇವಿನ ಗರಿ, ಕೆಂಪು ಮೆಣಸಿನ ಕಾಯಿ ೨೦, ಹುಣಸೆ ಹುಳಿ, ರುಚಿಗೆ ಉಪ್ಪು, ಸ್ವಲ್ಪ ಇಂಗು, ತುಪ್ಪ ೨ ಚಮಚ