ಕಥಾ ಲೋಕ:ಮತ್ತೆ ನೆನಪಾದಳು ಕಪ್ಪು ಹುಡುಗಿ

ಯಾವುದೋ ಪತ್ರಿಕಾ ವರದಿ ಮಾಡಲು ನಾನು ಆ ದಿನ ದಾವಣಗೆರೆಯಲ್ಲಿದ್ದೆ. ಪ್ರಗತಿಪರ ಕೃಷಿಕರೊಬ್ಬರ ಸಂದರ್ಶನ ಮುಗಿಸಿ ಅಲ್ಲೇ ಸೈಬರ್‍ನಲ್ಲಿ ಕುಳಿತು ವರದಿಯನ್ನು ಬರೆದು ಫೋಟೋ ವರದಿ ಎಲ್ಲಾ ಕಚೇರಿಗೆ ಮೇಲ್ ಮಾಡಿದೆ. ನನಗೆ ರಾತ್ರಿ ಬಸ್‍ಗೆ ಟಿಕೆಟ್ ಬುಕ್ ಆಗಿತ್ತು. ಸಮಯ ನೋಡಿದೆ ಬೆಳಿಗ್ಗೆ 11 ಗಂಟೆ. ಇನ್ನೂ ತುಂಬಾ ಸಮಯವಿದೆ ಎಂದು ನಮ್ಮ ಪತ್ರಿಕಾ ಏಜೆಂಟ್ ಅಣ್ಣಪ್ಪನವರಿಗೆ ಫೋ ಮಾಡಿದೆ. ಬಿಡುವಾಗಿದ್ರೆ ಒಮ್ಮೆ ಗಾಂಧಿ ಸರ್ಕಲ್ ಕಡೆ ಬರ್ತೀರಾ ಅಂದೆ. ಮಧ್ಯರಾತ್ರಿಯಲ್ಲೂ ಎಬ್ಬಿಸಿ ಹೊರಡೋಣ್ವಾ ಎಂದರೆ ಎಲ್ಲಿಗೆ ಎಂದು ಕೇಳದೇ ಹೊರಟು ಬಿಡುವ ಆಸಾಮಿ ಅವನು.

Image

“ಭಾರತ ಬಿಟ್ಟು ತೊಲಗಿ": ಆಗಸ್ಟ್ ೧೯೪೨ರ ಕ್ರಾಂತಿ ಕಹಳೆ

"ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ ಘೋಷಣೆ, ೮ ಆಗಸ್ಟ್ ೧೯೪೨ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು ಕಾರಣವಾಯಿತು.

ಅಲ್ಲಿಯ ವರೆಗೆ, ಭಾರತೀಯರಿಗೆ ಆಡಳಿತದಲ್ಲಿ ಭಾಗಶಃ ಸ್ವಾತಂತ್ರ್ಯ ನೀಡುವ ಪ್ರಸ್ತಾಪಗಳನ್ನು ಚರ್ಚಿಸಲಾಗುತ್ತಿತ್ತು. ಆದರೆ, “ಕ್ವಿಟ್ ಇಂಡಿಯಾ" ಅಥವಾ “ಭಾರತ್ ಛೋಡೋ” ಆಂದೋಲನ ಭಾರತೀಯರಿಗೆ ಬೇಕಾದ್ದು ಸಂಪೂರ್ಣ ಸ್ವಾತಂತ್ರ್ಯ ಎಂಬುದನ್ನು ಇಡೀ ಜಗತ್ತಿಗೆ ಘೋಷಿಸಿ, ೧೫ ಆಗಸ್ಟ್ ೧೯೪೭ರಂದು ಭಾರತ ಸ್ವತಂತ್ರವಾಗಲು ಕಾರಣವಾಯಿತು.  

Image

ಶಿಕ್ಷಣದ ಬಗ್ಗೆ ಎರಡು ಕವನಗಳು

ವಿದ್ಯಾಗಮ

ವಿದ್ಯಾಗಮದಲಿ ನಡೆದಿದೆ ತರಗತಿ

ವದ್ಯಾ ಭಾಷೆಯ ಬಿತ್ತುತಲಿ

ಸದ್ಯದಿ ನೂತನ ಯೋಜನೆ ಬಂದಿದೆ

ಮದ್ಯೆಯೆ ಪಾಠವ ಹೇಳುತಲಿ..||

 

ಹಾಸ್ಯ ಅಂದರೆ ಇದು . .

ಒಂದು ಸಲ ಒಬ್ಬ ಹುಡುಗಿ ವಯಸ್ಸಾದ ತನ್ನ ತಾಯಿಯ ಜೊತೆ ವರಾಂಡಾ ದಲ್ಲಿ ಕುಳಿತಿದ್ದಳು. ಆವಾಗ ಅಲ್ಲಿಯೇ ಅವಳ ಬಾಯ್ ಫ್ರೆಂಡ್ ಬಂದು ಬಿಟ್ಟ.

ಆ ಹುಡುಗಿ ತನ್ನ ಬಾಯ್ ಫ್ರೆಂಡ್ ಗೆ ಹೀಗೆ ಹೇಳಿದಳು . .

 

" ನೀವು ರಾಮ್ ಪಾಲ್ ಯಾದವ್ ಅವರ ಪುಸ್ತಕ, " Dad is at Home " ತಂದಿದ್ದೀರಾ ? "

 

Image

ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?

ದಿನವಿಡೀ ಶ್ರಮ ವಹಿಸಿ ದುಡಿದು ಮನೆಗೆ ಮರಳುವ ನೀವು ಸುಖವಾದ ನಿದ್ರೆಯ ಆಶೆಯಲ್ಲಿರುತ್ತೀರಿ. ಆದರೆ ನೀವು ಹಾಸಿಗೆಯಲ್ಲಿ ಮಲಗಿದಾಗ ಎಷ್ಟು ಸಮಯವಾದರೂ ನಿದ್ರಾದೇವಿ ನಿಮ್ಮನ್ನು ಆವರಿಸದೇ ಇದ್ದಾಗ, ಇಡೀ ರಾತ್ರಿ ಹೊರಳಾಡಿ ಹಾಗೂ ಹೀಗೂ ಬೆಳಿಗ್ಗೆ ಆದಾಗ ನಿಮ್ಮ ದೇಹದ ಚೈತನ್ಯ ಮಾಯವಾಗಿರುತ್ತದೆ. ದಣಿದ ದೇಹಕ್ಕೆ ನಿದ್ರೆ ಅತ್ಯವಶ್ಯಕ. ವಯಸ್ಕರಿಗೆ ಕನಿಷ್ಟ ೬ ಗಂಟೆ ನಿದ್ರೆ ಅಗತ್ಯ ಎನ್ನುತ್ತದೆ ವೈದ್ಯಶಾಸ್ತ್ರ. ನಿದ್ರೆಯೇ ಬಾರದೇ ನಿದ್ರಾ ಮಾತ್ರೆಗೆ, ಕುಡಿತಕ್ಕೆ ಶರಣಾದವರ ಸಂಖ್ಯೆ ಕಮ್ಮಿಯೇನಿಲ್ಲ. ಹಲವು ಮಂದಿಗೆ ರಾತ್ರಿ ಮದ್ಯ ಕುಡಿಯದೇ ನಿದ್ರೆ ಬರುವುದೇ ಇಲ್ಲ. ಇದು ಒಂದು ಚಟವಾಗಿ ಮಾರ್ಪಟ್ಟಿರುತ್ತದೆ. ನಮಗೆ ನೆಮ್ಮದಿ ನೀಡುವ ನಿದ್ರೆಯೇ ಸಮಸ್ಯೆಯಾದರೆ? ಈ ಬಗ್ಗೆ ನೀವು ಯೋಚಿಸಿರಲಿಕ್ಕಿಲ್ಲ.

Image

ಮಳೆ ಬಿಸಿಲಿ‌ನ ಇದು ನಾಟಕ

ಕಡು ದುಗುಡದ ಬಿರು ಬೇಗೆಗೆ

   ಕುದಿಯಿತು ಎದೆಗಡಲು!

‌ಸದ್ದಿಲ್ಲದೆ ಮೇಲೆದ್ದಿತು

   ನಿಟ್ಟುಸಿರಿನ ಮುಗಿಲು

 

ಹನಿ ಗೂಡಿತು ಮಳೆ ಮೂಡಿತು

ಪ್ರತಿಭಾವಂತ ಶಿಲ್ಪ ಕಲಾವಿದ -ಗಣೇಶ್ ವಿಶ್ವಕರ್ಮ

ಇಲ್ಲಿರುವ ಮಣ್ಣಿನ ಶಿಲ್ಪಗಳನ್ನು ನೋಡಿದಾಗ ನಿಮಗೆ ಇದರ ಕಲಾವಿದ ಯಾರೆಂದು ತಿಳಿಯುವ ಕುತೂಹಲ ಇರಬಹುದಲ್ಲವೇ? ಮಣ್ಣಿನಲ್ಲಿ ಶಿಲ್ಪವನ್ನು ಮಾಡುವುದೊಂದು ಅಪರೂಪದ ಕಲೆ. ಈ ಕಲೆಗಳ ಕಲಾವಿದ ಗಣೇಶ್ ವಿಶ್ವಕರ್ಮ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ್ ಜಿಲ್ಲೆಯ ಯಬರಟ್ಟಿ ಎಂಬ ಊರಿನವರಾದ ಇವರು ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವರು. 

Image

ಶ್ರೀಕೃಷ್ಣ ಜನ್ಮಾಷ್ಟಮಿ- ಎರಡು ಕವನಗಳು

ಕೃಷ್ಣನ ತುಂಟಾಟ

 

ಅಷ್ಟಮಿ ದಿನದಲಿ ವಾಸುಕಿಯೊಡಲಲಿ

ಭ್ರಷ್ಟವ ದೂಡಲು ಧರೆಗಿಳಿದ

ಶಿಷ್ಟತೆ ಮಾರ್ಗದಿ ನಡೆದನು ಕೃಷ್ಣನು

ಕಷ್ಟವ ಮೆಟ್ಟುತ ಬಂದಿಳಿದ!!!

 

ಕರೋನೋತ್ತರ ಸಂಕ್ರಮಣ

                ವರ್ಷ 2020ರ ಸಂಕ್ರಾಂತಿ ಪುರುಷನಾಗಿ  ಬಂದವನು ಈ ಕರೋನಾ.  ಸಾಮಾನ್ಯತಃ  ಪಂಚಾಂಗಗಳಲ್ಲಿ  ಈತನ ವರ್ಣನೆ ಇರುತ್ತಾದರೂ, ಈ ಕಣ್ಣಿಗೆ ಕಾಣದ ವೈರಸ್, ಕರೋನಾದ ಸ್ವರೂಪವನ್ನು  ಕಣ್ಣಿಗೆ ಕಟ್ಟುವಂತೆ  ಹಾಗೂ ಮನಸ್ಸಿನಲ್ಲಿ ಖಾಯಂ ಆಗಿ ಇರುವಂತೆ  ಅಚ್ಚೊತ್ತಿವೆ,  ನಮ್ಮ  ದೃಶ್ಯ ಮಾಧ್ಯಮಗಳು.