ಶ್ರೀಕೃಷ್ಣ ಜನ್ಮಾಷ್ಟಮಿ- ಎರಡು ಕವನಗಳು
ಕೃಷ್ಣನ ತುಂಟಾಟ
ಅಷ್ಟಮಿ ದಿನದಲಿ ವಾಸುಕಿಯೊಡಲಲಿ
ಭ್ರಷ್ಟವ ದೂಡಲು ಧರೆಗಿಳಿದ
ಶಿಷ್ಟತೆ ಮಾರ್ಗದಿ ನಡೆದನು ಕೃಷ್ಣನು
ಕಷ್ಟವ ಮೆಟ್ಟುತ ಬಂದಿಳಿದ!!!
- Read more about ಶ್ರೀಕೃಷ್ಣ ಜನ್ಮಾಷ್ಟಮಿ- ಎರಡು ಕವನಗಳು
- Log in or register to post comments
ಕೃಷ್ಣನ ತುಂಟಾಟ
ಅಷ್ಟಮಿ ದಿನದಲಿ ವಾಸುಕಿಯೊಡಲಲಿ
ಭ್ರಷ್ಟವ ದೂಡಲು ಧರೆಗಿಳಿದ
ಶಿಷ್ಟತೆ ಮಾರ್ಗದಿ ನಡೆದನು ಕೃಷ್ಣನು
ಕಷ್ಟವ ಮೆಟ್ಟುತ ಬಂದಿಳಿದ!!!
ವರ್ಷ 2020ರ ಸಂಕ್ರಾಂತಿ ಪುರುಷನಾಗಿ ಬಂದವನು ಈ ಕರೋನಾ. ಸಾಮಾನ್ಯತಃ ಪಂಚಾಂಗಗಳಲ್ಲಿ ಈತನ ವರ್ಣನೆ ಇರುತ್ತಾದರೂ, ಈ ಕಣ್ಣಿಗೆ ಕಾಣದ ವೈರಸ್, ಕರೋನಾದ ಸ್ವರೂಪವನ್ನು ಕಣ್ಣಿಗೆ ಕಟ್ಟುವಂತೆ ಹಾಗೂ ಮನಸ್ಸಿನಲ್ಲಿ ಖಾಯಂ ಆಗಿ ಇರುವಂತೆ ಅಚ್ಚೊತ್ತಿವೆ, ನಮ್ಮ ದೃಶ್ಯ ಮಾಧ್ಯಮಗಳು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತವರು ಹಲವಾರು ಮಂದಿ. ಕ್ರಾಂತಿಕಾರಿಗಳ ಪ್ರತಾಪಕ್ಕೆ ಯಾವಾಗಲೂ ಬ್ರಿಟೀಷ್ ಸರಕಾರ ಅಂಜುತ್ತಲೇ ಇತ್ತು. ತನ್ನ ೧೮ನೇ ವಯಸ್ಸಿನಲ್ಲೇ ಬ್ರಿಟೀಷರ ನಿದ್ರೆ ಕೆಡಿಸಿದ ಕ್ರಾಂತಿಕಾರಿಯೇ ಖುದೀರಾಮ ಭೋಸ್. ಹದಿಹರೆಯದ, ಆಟವಾಡಿಕೊಂಡು ಇರಬೇಕಾದ ಪ್ರಾಯದಲ್ಲಿ ಭಾರತ ಮಾತೆ ಪರಕೀಯರ ಆಳ್ವಿಕೆಯಿಂದ ಸ್ವತಂತ್ರಳಾಗಬೇಕೆಂಬ ಹಂಬಲದಿಂದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿ ಗಲ್ಲು ಶಿಕ್ಷೆಗೆ ಗುರಿಯಾದ ಮಹಾನ್ ಚೇತನವೇ ಖುದೀರಾಮ ಭೋಸ್.
ಮುರಳಿ ಮಹಿಮೆಯ ಕೇಳಿ ಧರೆಯಲಿ
ನೆರದಿಹ ಮನುಜರು ಅರಿತಿಹರು|
ವರವ ಬೇಡುತ ಮಾಧವ ನಲ್ಲಿಯೆ
ಶಿರವನು ಬಾಗುತ ನಿಂತಿಹರು||
ಗೋಕುಲದಲ್ಲಿ ಜನುಮತಾಳಿದ
ಗೊಣ್ಣೆ ಸುರಿಸುತ ತಾಯ ಹಿಂದೆಯೆ
ಚಿಣ್ಣನೊಬ್ಬನು ಹೋಗುತಿರುವನು
ಕಣ್ಣ ಕಂಬನಿ ಕೆನ್ನೆಗಿಳಿಯುತ ಮುದ್ದು ಮಾಡುತಿದೆ
ಅಣ್ಣನೊಂದಿಗೆ ಜಗಳ ಮಾಡುವ
ಸಣ್ಣ ಹುಡುಗನು ಪುಟ್ಟ ತಮ್ಮನು
ಕರ್ನಾಟಕ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಬಹುತೇಕ ಜಲಾಶಯಗಳು ತುಂಬಲು ತೊಡಗಿವೆ. ತುಂಬಿದ ನಂತರ ಅಧಿಕವಾದ ನೀರನ್ನು ಹೊರಗಡೆ ಬಿಡಲಾಗುತ್ತದೆ. ಅದರಿಂದ ಜಲಾನಯನ ಪ್ರದೇಶದ ಸಮೀಪ ಇರುವ ಮನೆಮಂದಿಗಳು ತಮ್ಮ ನೆಲೆಯನ್ನು ಬಿಟ್ಟು ಬೇರೆಡೆಗೆ ಹೋಗಬೇಕಾಗುತ್ತದೆ ಇಲ್ಲವೇ ಸರಕಾರವೇ ಅವರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುತ್ತದೆ. ಇದು ಪ್ರತೀ ವರ್ಷ ನಾವು ನೋಡುತ್ತಿರುವ ವಿದ್ಯಮಾನ. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ರಾಜ್ಯದ ಹಲವೆಡೆ ನೆರೆ ಎಂಬುವುದು ಮಾಮೂಲೀ ಸಂಗತಿಯಾಗಿದೆ. ಸ್ವಲ್ಪವೇ ನೀರು ಬಂದರೂ ಹಳ್ಳಕೊಳ್ಳಗಳು ತುಂಬುತ್ತವೆ. ರಸ್ತೆ ಕುಸಿಯುತ್ತದೆ. ಮನೆಗೆ ನೀರು ನುಗ್ಗುತ್ತದೆ. ಕಾರಣವೇನಿರಬಹುದು ಯೋಚಿಸಿರುವಿರಾ?
ಅವತ್ತು, ೬ ಆಗಸ್ಟ್ ೧೯೪೫ರಂದು ಇಡೀ ಜಗತ್ತೇ ತತ್ತರಿಸಿತ್ತು. ೧,೪೦,೦೦೦ ಜನರು ಸತ್ತಿದ್ದರು - ಜಪಾನಿನ ಹಿರೋಷಿಮಾದ ಮೇಲೆ ಅಮೇರಿಕಾದ ಯುಎಸ್ಎ ದೇಶ ಅಣುಬಾಂಬ್ ಧಾಳಿ ನಡೆಸಿದಾಗ. ಹಲವರು ಅಣು ವಿಕಿರಣದಿಂದಾಗಿ ತಕ್ಷಣವೇ ಸತ್ತಿದ್ದರೆ, ಉಳಿದವರು ವಿಕಿರಣದ ಭಯಾನಕ ರೋಗಗಳಿಂದಾಗಿ, ದೇಹದ ಚರ್ಮ ಕಿತ್ತು ಬಂದ ಸುಟ್ಟ ಗಾಯಗಳಿಂದಾಗಿ, ಇತರ ಭಯಂಕರ ಘಾತಗಳಿಂದಾಗಿ ಅನಂತರ ಕೆಲವೇ ವಾರಗಳಲ್ಲಿ ಸಾವಿಗೆ ಬಲಿಯಾಗಿದ್ದರು.
ಮೂರು ದಿನಗಳ ನಂತರ, ಜಪಾನಿನ ನಾಗಸಾಕಿಯ ಮೇಲೆ ಯುಎಸ್ಎ ಇನ್ನೊಂದು ಅಣುಬಾಂಬ್ ಧಾಳಿ ನಡೆಸಿತು. ಇದರಿಂದಾಗಿ ಅದೇ ರೀತಿಯ ಚಿತ್ರಹಿಂಸೆ ಅನುಭವಿಸುತ್ತಾ ಇನ್ನೂ ೭೪,೦೦೦ ಜನರು ಪ್ರಾಣ ಕಳಕೊಂಡರು.
*ಹ(ಅ)ಲ್ವ*
ಹಬ್ಬಕ್ಕೆ ಮಾಡಲೇ ಬೇಕೆಂದು
ಇವಳ ಹಠ...
ಅವಳಿಷ್ಟದ ಹಲ್ವ..!
ನಾನೇನು ಮಾಡ್ಲಿ...
ಒಂದು ಹಳ್ಳಿಯಲ್ಲಿ ಒಬ್ಬ ಮುದುಕ ಗುಡಿಸಲಿನಲ್ಲಿ ತನ್ನ ಆಡಿನೊಂದಿಗೆ ವಾಸ ಮಾಡುತ್ತಿದ್ದ. ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಕಾರಣ ಅವನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.
ಒಮ್ಮೆ ಅವನು ಅನಾರೋಗ್ಯದಿಂದ ಎದ್ದೇಳಲು ಆಗಲಿಲ್ಲ. ಆಗ ಅವನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅವನ ಮುದ್ದಿನ ಆಡು ಜಾನು ಅವನಿಗೆ ಸಹಾಯ ಮಾಡುತ್ತಿತ್ತು. ಅದು ಹಳ್ಳಿ ವೈದ್ಯರ ದವಾಖಾನೆಗೆ ಹೋಗಿ ಔಷಧಿ ತಂದು ಕೊಡುತ್ತಿತ್ತು. ಮಾತ್ರವಲ್ಲ, ಒಮ್ಮೆ ಆ ವೈದ್ಯರನ್ನೇ ಮುದುಕನ ಮನೆಗೆ ಕರೆ ತಂದಿತು. ಹಾಗಾಗಿ ಮುದುಕನಿಗೆ ಜಾನು ಎಂದರೆ ಅಚ್ಚುಮೆಚ್ಚು.
ನೀವು ದೊಡ್ಡ ದೊಡ್ಡ ಮರಗಳ ಮೇಲೆ ಸಣ್ಣ ಸಣ್ಣ ಬಳ್ಳಿಗಳಂತಹ ಪರಾವಲಂಬಿ ಗಿಡಗಳು ಬೆಳೆದದನ್ನು ನೋಡಿರಬಹುದು. ಅವುಗಳಿಗೆ ಸಾಮಾನ್ಯ ಭಾಷೆಯಲ್ಲಿ ಬದನಿಕೆ ಅಥವಾ ಬಂದಳಿಕೆ ಎನ್ನುತ್ತಾರೆ. ಅವುಗಳು ಮರದ ರೆಂಬೆಯ ಮೇಲೆ ಬೀಡು ಬಿಟ್ಟು ಆ ಮರದಿಂದಲೇ ಆಹಾರವನ್ನು ಹೀರಿಕೊಂಡು ಬದುಕುತ್ತವೆ. ಇವುಗಳಿಗೆ ಭೂಮಿಯ ಸಂಪರ್ಕದ ಅಗತ್ಯವಿಲ್ಲ. ತಮ್ಮ ಎಲ್ಲಾ ಅಗತ್ಯಗಳಿಗೆ ಆಶ್ರಯ ನೀಡಿದ ಮರವನ್ನೇ ಅವಲಂಬಿಸಿರುತ್ತದೆ. ಮರದ ಸಾರವನ್ನು ಹೀರಿ ಮರವಿಡೀ ಹಬ್ಬುತ್ತದೆ. ಕೊನೆಗೊಮ್ಮೆ ಮರದ ಸತ್ವವೆಲ್ಲಾ ನಾಶವಾಗಿ ಮರವೇ ಸತ್ತು ಹೋಗುತ್ತದೆ. ಇದು ಪರಾವಲಂಬಿ ಗಿಡದ ಕತೆಯಾಯಿತು.