ನಾಟಕ, celtx, latex ಕುರಿತಾಗಿ.

celtx ಎಂಬ ಬರಹದ ಸಾಫ್ಟ್‌ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ. ಸುಮಾರು ವರ್ಷದಿಂದ ಅದರ ಜತೆ ಆಟವಾಡುತ್ತಾ ಇದ್ದರೂ ಕೂಡ, ಪೂರ್ತಿ ಕೃತಿಯನ್ನು ಅದರಲ್ಲಿ ಈ ಹಿಂದೆ ಬರೆದಿರಲಿಲ್ಲ.

ಮೊದಲಿಗೆ ಕನ್ನಡ ಬರೆಯಲು ಆಗುತ್ತಾ ಇರಲಿಲ್ಲ. ಆಮೇಲೆ, ಆದರೂ ಕೂಡ ಅದನ್ನು ಉಳಿಸಲು ಆಗುತ್ತಿರಲಿಲ್ಲ. ಆಮೇಲೆ ಅದನ್ನು ಮುದ್ರಿಸಲು ಆಗುತ್ತಿರಲಿಲ್ಲ. ಆದಾಗಲೂ ಕೆಲವು ಸಣ್ಣ ಪುಟ್ಟ ತೊಡಕುಗಳು ಇದ್ದೇ ಇದ್ದುವು. ಈಗಲೂ ಕೆಲವು ತೊಡಕು ಇದೆ. ಆದರೆ ಅದಕ್ಕೊಂದು ದಾರಿ ಕಂಡು ಕೊಂಡು celtx ಅನ್ನೇ ಬಳಸಿ ಒಂದು ನಾಟಕವನ್ನು ಬರೆಯಲು ಕೂತೆ. ಈಗ ಒಂದು ವಾರದ ಕೆಳಗೆ ಅದನ್ನು ಬರೆದು ಮುಗಿಸಿದೆ. ಈ ಬರಹ ಆ ನಾಟಕದ ಬಗ್ಗೆ ಅಲ್ಲ. ಅದಕ್ಕಿನ್ನೂ ತುಸು ಮರುಬರವಣಿಗೆಯ ಕೆಲಸವಿದೆ. ಆದರೆ ಇಲ್ಲಿ ಹೇಳ ಹೊರಟಿದ್ದು - ಬರೆದು ಮುಗಿಸಿದ ಮೇಲೆ ಅದನ್ನು ಪಿಡಿಎಫ್ ಆಗಿ ಮಾರ್ಪಡಿಸಲು ನಾನು ಇಟ್ಟ ಹೆಜ್ಜೆಗಳ ಬಗ್ಗೆ.

ನಿನ್ನ ನೆನಪೊಂದೇ ಶಾಶ್ವತ !

ನಿನ್ನೆಗಳ ಸವಿ ನೆನಪಿನೊಂದಿಗೆ
ನಾಳೆಯ ನಿರೀಕ್ಷೆಗಳೆಲ್ಲ
ಮೌನದಾಳಕ್ಕೆ ಜಾರತೊಡಗಿದಾಗ...
ಬರಡೆನಿಸುವ ಬದುಕಲ್ಲಿ
ಬರಿಯ ಕಂಬನಿ ಧಾರೆ!
ಸುತ್ತ ನಿರ್ಮಲತೆ ಹರಡಿದ್ದರೂ
ಮತ್ತೆ ಕುರೂಪತೆ ಕಾಡಿ,
ಮರುಕಳಿಸುವ ನೋವಿಗೆ
ಒಂದಾಗಿ ನಾಂದಿ ಹಾಡಿ,
ಕೃಶವಾಗಿಸುವುದು  ಕನಸ!

ರಾಷ್ಟ್ರೀಯ ಸ್ವಯಂಸೇವಕ ಸಂಘ 6

ಓ.ಟಿ.ಸಿ.

    ೧೯೨೭ರ ಮೇ ತಿಂಗಳಲ್ಲಿ ಕೆಲವು ಆಯ್ದ ತರುಣರಿಗೆ ವಿಶೇಷ ಶಿಕ್ಶ್ಜಣವನ್ನು ನೀಡುವ ವರ್ಗವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರು ಎಲ್ಲಿಬೇಕಾದರೂ ಹೋಗಿ ತಮ್ಮ ತಮ್ಮ ಸ್ವ ಕರ್ತೃತ್ವದಿಂದ ಸಂಘಕಾರ್ಯವನ್ನು ನಡೆಸಲು ಸಮರ್ಥರಾಗಬೇಕು. ಅಲ್ಲದೆ ಅವರು ಶಾಖೆಯಲ್ಲಿ ಅಧಿಕಾರಿಗಳಾಗಿ ಕಾರ್ಯಮಾಡಲೂ ಅರ್ಹರಾಗಬೇಕು ಎಂಬುದೇ ಈ ವರ್ಗದ ಉದ್ದೇಶವಾಗಿತ್ತು. ಇಂತಹ ವರ್ಗಕ್ಕೆ ಅಧಿಕಾರಿ ಶಿಕ್ಷಣ ವರ್ಗ (officers' Training Camp - OTC) ಎಂಬ ಹೆಸರು ಅನೇಕ ವರ್ಷಗಳಕಾಲ ರೂಢಿಯಲ್ಲಿತ್ತು. ೧೯೨೭ರ ಮೊದಲನೇ ವರ್ಗದಲ್ಲಿ ೧೭ ಮಂದು ಆರಿಸಿದ ಸ್ವಯಂಸೇವಕರಿಗೆ ಮಾತ್ರ ಪ್ರವೇಶ ಕೊಡಲಾಗಿತ್ತು.

01&02

01

ಬರಿದಾದ ಎದೆನೆಲದಲ್ಲಿ ಪ್ರೀತಿ

ಚಿಗುರು ಒಡೆದಾಗಲೆಲ್ಲ ವಲಸೆ

ಹಕ್ಕಿಗೆ ಗೂಡು ಕಟುವ ಬಯಕೆ

ಅಲೆಮಾರಿ ಬದುಕಿಗೆ ಕಾಲನ ಪೊರಕೆ

02

ವಲಸೆ ಹಕ್ಕಿಯ ಹಾಡು ಕೇಳಿ

ಹಳಿಯದಿರಿ ಗೆಳೆಯರೇ

ಗೂಡು ಬಿಟ್ಟು ಹೊರಡುವಾಗ

ಯಾರಾದರೂ ಬರುವಿರೆ ?

 

ಅನುಭವ

ಇಲ್ಲ
ಬದಲಾಗಿಲ್ಲ
ದಾರಿ
ಗಮ್ಯವೂ
ಬದಲಾಗಿಲ್ಲ
ಇಕ್ಕೆಲಗಳು
ಪಕ್ಕದ
ಜನರು
ಸುತ್ತಲಿನ
ಪರಿಸರ
ಇಲ್ಲವೇ
ಇಲ್ಲ

ಆದರೂ
ಬದಲಾಗಿದ್ದು
ನಿಜ
ದೃಷ್ಟಿ
ಮತ್ತು
....

ಬಳಿ ಬಂದವರಿಗೆಲ್ಲ ಗಂಧವನ್ನು ಹಂಚಿದವನು - ಕಿ.ರಂ

ಗಂಧದವನೊಡನೆ ಗುದ್ದಾಡಿದವನು ನಾನು!

ಇಂದು ಅವರು ಇಲ್ಲ.

ನನ್ನಂತೆಯೇ ಅನೇಕ ಜನರು ಈ ಗಂಧದವನೊಡನೆ ಗುದ್ದಾಡಿ ಪುನೀತರಾಗಿದ್ದರು. ಎಲ್ಲರನ್ನೂ ಪುನೀತರಾಗಿಸಿ, ಯಾರಿಗೂ ಹೆಚ್ಚು ತೊಂದರೆಯನ್ನು ಕೊಡದೆ ಗಂಧದವನು ಸದ್ದಿಲ್ಲದೇ ತನ್ನ ವ್ಯಾಪಾರವನ್ನು ಮುಗಿಸಿ ಇಂದು ಹೊರಟುಹೋಗಿಹನು.

ಹೌದು. ನಾನು ಮಾತನಾಡುತ್ತಿರುವುದು ನಿನ್ನೆ ರಾತ್ರಿ ನಮ್ಮನ್ನು ಬಿಟ್ಟು ಹೋದಂತದ ಕಿತ್ತಾನಿ ರಂಗಣ್ಣ ನಾಗರಾಜ್ ಅವರ ಬಗ್ಗೆಯೆ.

------------

ಮುಂಗೈಯಲ್ಲಿ ಒಪ್ಪುವ ಶ್ರಿಂಗಾರದ ಬಳೆ

ಮುತ್ತೈದೆತನದ ಹಿರೆಮೆ,  ಹೆಂಗಳೆಯರ ಅಚ್ಚು ಮೆಚ್ಚು ರಮಣಿಯರನ್ನು ರಮಿಸುವುದಿ ಬಳೆ.


ಮೊದಲು ಬೇಕೆಂಬ, ಮಾರು ಹೋಗುವ, ಮಂಗಳದಾಯಕವಾದಂತಹ, ಮಧುರ ಧ್ವನಿಗೈಯುವ, ಮನಸ್ಸಿಗೆ ತಂಪನ್ನು ನೀಡುವ ಈ ಬಳೆಯನ್ನು ತೊಟ್ಟುಕೊಂಡರೆ ಎಲ್ಲರಿಗೂ  ಒಮ್ಮೆ  ತೋರಿಬರುವ ಆಸೆ .ಬಳೆಯಿಂದ ಆಕರ್ಷಿತರಾಗದ ಹೆಣ್ಣು ಮಕ್ಕಳೇ ಇಲ್ಲ.ಮುಂಗೈಯಿಯಲ್ಲೇ ವಪ್ಪುವಂತಹ ಇದು ತನ್ನ ಗಂಡನನ್ನು ಅವಳ ಹತ್ತ್ರ ಸೆಳೆಯುತ್ತದೆ. ಬಳೆಯಿಂದ  ಹೊರಹೊಮ್ಮುವ ತರಂಗವು  ತಾಯಿ ಕಂದಮ್ಮನಿಗಾಗಿ ಹಾಡುವ ಜೋಗುಳಕ್ಕೆ ತಾಳವಾಗುತ್ತದೆ , ಹೆಣ್ಣಿನ  ಸೌಂದರ್ಯವನ್ನು ಹೆಚ್ಚಿಸುತ್ತದೆ.  

ನೀನು ಏಷ್ಟೋಂದು ಸ್ಪೇಷಲ್ ಅಲ್ವಾ ಸಮುದ್ರಕ್ಕಿಂತ ಎಂದು ಹೇಳುವ ಮುನ್ನ. . .

ನಿಂಗೆ ಒಂದು ವಿಷಯ ಗೊತ್ತಾ ಮೊನ್ನೆ ನಾನು ಸಮುದ್ರ ಬೇಟಿಯಾಗಿದ್ದೆವು. ಸಮುದ್ರ ನನ್ನ ಹತ್ತಿರ ತನ್ನ ಬಗ್ಗೆ , ತನ್ನ ಘನತೆಯ ಬಗ್ಗೆ , ತನ್ನಲ್ಲಿ ಮುಳುಗಿರುವ ನಗರಗಳ ಬಗ್ಗೆ , ನಾಗರಿಕತೆಗಳ ಬಗ್ಗೆ ಏಲ್ಲಾ ಹೇಳುತ್ತಾ ಹೋಯಿತು. ನಾನು ಆಮೇಲೆ ಸಮುದ್ರಕ್ಕೆ ನಿನ್ನ ಬಗ್ಗೆ ಹೇಳಿದೆ you know ಸಮುದ್ರ ಮಾತೆ ಆಡದೇ ಸುಮ್ಮನಾಗಿ ಬಿಟ್ಟಿತು!! ನೀನು ಏಷ್ಟೋಂದು ಸ್ಪೇಷಲ್ ಅಲ್ವಾ ಸಮುದ್ರಕ್ಕಿಂತ.

ಹವ್ಯಾಸಗಳು

ಹವ್ಯಾಸಗಳು ಹಲವು. ಕೆಲವರಿಗೆ ಓದುವ ಹವ್ಯಾಸವಾದರೆ ಇನ್ನು ಕೆಲವರಿಗೆ ಹಳೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ. ಅಂಚೆ ಚೀಟಿ ಸಂಗ್ರಹ, ನಟ ನಟಿಯರ ಚಿತ್ರ ಸಂಗ್ರಹ, antique ಕಾರುಗಳು, ಇಲಿ ಸಾಕುವುದು, ಕ್ಯಾಲ್ಲಿಗ್ರಫಿ, ನಾಣ್ಯಗಳು ಹೀಗೆ ಸಾಗುತ್ತವೆ ಹವ್ಯಾಸಗಳ ಪಟ್ಟಿ. ಈಗಿನ rush rush ಯುಗದಲ್ಲಿ ಕೆಲವರಿಗೆ ಹವ್ಯಾಸಗಳ ಆಸಕ್ತಿ ಕಡಿಮೆಯಾದರೂ ಈಗಲೂ ಬಹಳಷ್ಟು ಜನ ತಮಗೆ ಇಷ್ಟವಾದ ವಿಷಯಗಳ ಮೇಲೆ ಕಾರ್ಯಮಗ್ನರಾಗಿರುತ್ತಾರೆ. ಚಿಕ್ಕವನಿದ್ದಾಗ ನನಗಿತ್ತು ಅಂಚೆಚೀಟಿಗಳ ಸಂಗ್ರಹದ ಗೀಳು. ನನ್ನ ಮಟ್ಟಿಗೆ ಹವ್ಯಾಸ ಸುಲಭವಾಗಿ ಚಟವಾಗಿ ಅಂಟಿ ಕೊಂಡು ಬಿಡುತ್ತದೆ. ರಣ ಬಿಸಿಲಿನಲ್ಲಿ ಬರುವ ಪೋಸ್ಟ್ ಮ್ಯಾನ್ ಹಿಂದೆ ಸುತ್ತಿ ಅಂಚೆ ಚೀಟಿಗಾಗಿ ಮನೆ ಮನೆಗಳಿಗೆ ತೆರಳಿ ಬೇಡುತ್ತಿದ್ದೆ.