ಮಹಾಭಾರತದಲ್ಲಿ ಮರೆತುಹೋದ ಪಾತ್ರಗಳು (ಭಾಗ-೧೨) ಉಡುಪಿ ರಾಜ

ಪಾಂಡವರು ಮತ್ತು ಕೌರವರ ನಡುವೆ ಹದಿನೆಂಟು ದಿನಗಳ ಕಾಲ ಭೀಕರ ಕುರುಕ್ಷೇತ್ರ ಯುದ್ಧ ನಡೆದ ಸಂಗತಿ ನಿಮಗೆ ಗೊತ್ತೇ ಇದೆ. ಲಕ್ಷಾಂತರ ಸೈನಿಕರು, ಅತಿರಥ ಮಹಾರಥ ರಾಜರು ಎಲ್ಲಾ ಈ ಯುದ್ಧದಲ್ಲಿ ಭಾಗವಹಿಸಿದ್ದರು. ವಿಧರ್ಭದ ರಾಜ ರುಕ್ಮಿ ಹಾಗೂ ಕೃಷ್ಣನ ಅಣ್ಣ ಬಲರಾಮ ಮಾತ್ರ ಈ ಯುದ್ಧದಲ್ಲಿ ಭಾಗಿಯಾಗಿರಲಿಲ್ಲ. ಶ್ರೀಕೃಷ್ಣ ತಾನು ಶಸ್ತ್ರವನ್ನು ಹಿಡಿಯುವುದಿಲ್ಲ ಎಂಬ ಶರತ್ತಿನ ಮೇಲೆ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆದರೆ ಇವರಿಗೆಲ್ಲಾ ಯುದ್ಧದ ಸಮಯದಲ್ಲಿ ಊಟೋಪಚಾರ ಯಾರು ಮಾಡುತ್ತಿದ್ದರು ನಿಮಗೆ ಗೊತ್ತೇ? ಆ ಸಮಯ ಊಟದ ನಿರ್ವಹಣೆ ಹೊತ್ತಿದ್ದವರು ಉಡುಪಿಯ ರಾಜ. ಇವರ ಬಗ್ಗೆ ಮಾಹಿತಿ ಇರುವುದು ಕಮ್ಮಿ.

Image

ಚಿತ್ರಕಲಾ ಪ್ರತಿಭೆ - ಶ್ರೀರಕ್ಷಾ ಗುಂಡಿಬೈಲು

ಸ್ವಯಂಸ್ಪೂರ್ತಿಯೇ ಗುರುವಾಗಿ ಮೈ ಮನಸ್ಸುಗಳನ್ನು ಆವರಿಸಿದ ಫಲವಾಗಿ ಉಡುಪಿಯ ಶ್ರೀರಕ್ಷಾ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಇಂದು ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪೆನ್ಸಿಲ್ ಆರ್ಟ್ ಮತ್ತು ಪೈಂಟಿಂಗ್ ನಲ್ಲಿ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಈಗಾಗಲೇ ಸಾಕಷ್ಟು ಬಹುಮಾನಗಳನ್ನೂ ಪಡೆದುಕೊಂಡಿರುವ ಶ್ರೀರಕ್ಷಾ, ಉಡುಪಿ ನಗರದ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ. ಇಲ್ಲಿ ಕಾಣಿಸುತ್ತಿರುವ ಸುಂದರವಾದ ಚಿತ್ರಗಳಲ್ಲಿರುವ ಜೀವಾಳವೇ ಶ್ರೀರಕ್ಷಾಳ ಪ್ರತಿಭೆಗೆ ಸಾಕ್ಷಿ.

Image

ರಕ್ಷಾ ಬಂಧನ

ರಕ್ಷಾಬಂಧನದ ಕುರಿತು ಒಂದು ಗಝಲ್

ಭಾವಗಳ ಪ್ರೀತಿಯ ಉನ್ಮಾದದಲಿ

ತೇಲಿಸಿದೆ ಈ ರಕ್ಷಾ ಬಂಧನ|

ನೋವು ನಲಿವುಗಳ ಸಮ್ಮಿಲನದಲಿ

ಬೆರೆಸಿದೆ ಈ ರಕ್ಷಾ ಬಂಧನ||

 

ಕಲಾವಿದ ಹೆಬ್ಬಾರರ ರೇಖಾಲಾವಣ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ವ್ಯಾಸರಾಯ ಬಲ್ಲಾಳ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ
ಪುಸ್ತಕದ ಬೆಲೆ
ರೂ.೯೦.೦೦

ವಿಶ್ವಮಾನ್ಯತೆ ಪಡೆದ ಮಹಾನ್ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರನ್ನು ಆಪ್ತವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ ವ್ಯಾಸರಾಯ ಬಲ್ಲಾಳರು. ಇವರು, ಮುಂಬಯಿಯಲ್ಲಿ ಕಲಾನಗರದ ಹೆಬ್ಬಾರರ ಮನೆಯ ಹತ್ತಿರದಲ್ಲೇ ಸುಮಾರು ಎಂಟು ವರುಷ ಕಾಲ ನೆಲೆಸಿದ್ದರು. ಈ ಅವಧಿಯಲ್ಲಿ ಮತ್ತು ಅನಂತರವೂ ಇವರಿಬ್ಬರ ಒಡನಾಟ ನಿರಂತರ. ಅದುವೇ ಇಂತಹ ಅಪರೂಪದ ಪುಸ್ತಕ ರೂಪುಗೊಳ್ಳಲು ಕಾರಣವಾಯಿತು.

ಗುಂಡೂಪಂತನ ದುಬಾರಿ ಸಲಹೆಗಳು

ಒಂದೂರಿನಲ್ಲೊಬ್ಬ ಗುಂಡೂಪಂತನೆಂಬ ನೀಚ ಬುದ್ಧಿಯ ಜಿಪುಣನಿದ್ದ. ಸೇವಕರಿಂದ ಕೆಲಸ ಮಾಡಿಸಿ, ಅವರಿಗೆ ಮಜೂರಿ ಕೊಡದಿರುವುದು ಅವನ ನೀಚಬುದ್ಧಿಗೊಂದು ನಿದರ್ಶನ. ಸುತ್ತಮುತ್ತಲಿನ ಹಳ್ಳಿಗಳ ಹಲವಾರು ಯುವಕರು ಅವನ ಬಳಿಗೆ ಬಂದು ಕೆಲಸ ಮಾಡಿ, ಮಜೂರಿ ಸಿಗದೆ ಮೋಸ ಹೋಗಿದ್ದರು.

ಒಮ್ಮೆ ಗುಂಡೂಪಂತ ಪಕ್ಕದ ಪಟ್ಟಣಕ್ಕೆ ಹೋಗಿ ಮನೆಗೆ ಬೇಕಾದ ಹಲವು ವಸ್ತುಗಳನ್ನು ಖರೀದಿಸಿದ. ಅವನ್ನು ಸಾಗಿಸಲು ಯಾರಾದರೂ ಸಿಗುತ್ತಾರೆಯೇ ಎಂದವನು ಅತ್ತಿತ್ತ ನೋಡುತ್ತಿದ್ದಾಗ, ಯುವಕನೊಬ್ಬ ಹತ್ತಿರ ಬಂದ. "ಬಾಬೂಜಿ, ನಿಮಗೆ ಕೂಲಿ ಬೇಕಾಗಿದೆಯೇ?" ಎಂದು ಕೇಳಿದ.

Image

ಪತ್ರೊಡೆ

ತುಳುನಾಡಿನ ವಿಶೇಷ ಖಾದ್ಯಗಳಲ್ಲಿ ಇದು ಕೂಡ ಒಂದು. ನಮ್ಮ ಸುತ್ತಮುತ್ತಲಿನ ಪ್ರಕೃತಿಯು ಔಷಧಿಯ ಗುಣಗಳನ್ನು ಹೊಂದಿರುವುದು 
ನಮಗೆ ತಿಳಿದೇ ಇದೆ.ತುಂಬೆ ಗಿಡದಿಂದ ಹಿಡಿದು ಆಲದ ಮರದವರೆಗೂ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳಿಗೆ 
ಉಪಯೋಗಿಸುವಂತವುಗಳಾಗಿವೆ. ಹಾಗೆಯೇ ಕಾಡು ಕೆಸುವಿನ ಎಲೆ. ಇದನ್ನು ತುಳುವರ ಆಟಿ ತಿಂಗಳಿನಲ್ಲಿ ಹೆಚ್ಚಾಗಿ ಆಟಿ ಅಮಾವಾಸ್ಯೆಯ
 ದಿನದಂದು ಹಾಲೆಮರದ ತೊಗಡೆಯಲ್ಲಿ ತಯಾರಿಸಿದ ಕಷಾಯವನ್ನು ಕುಡಿಯುವುದರ ಜೊತೆಗೆ, ಕಾಡು ಕೆಸುವಿನ ಎಲೆಯಿಂದ 

Image

ಯಜ್ಞಸೇನಿ

ಮೊನ್ನೆ ರಾತ್ರಿ ೮ ಗಂಟೆಗೆ ಸುವರ್ಣಚಾನಲ್ ನಲ್ಲಿ ಮಹಾಭಾರತ ಧಾರವಾಹಿ ನೋಡುತ್ತಿದ್ದೆ. ಅಂದಿನ ಸಂಚಿಕೆಯಲ್ಲಿ ಪಾಂಡವರೆಲ್ಲ ದ್ಯೂತಕ್ರೀಡೆಯಲ್ಲಿ ಪರಾಜಿತಗೊಂಡು, ಕೊನೆಗೆ ಪಾಂಚಾಲಿಯನ್ನು ಪರಾಜಿತಗೊಂಡಾಗ, ಆಕೆಯ ಮೇಲೆ ನಡೆಯುವ ದೌರ್ಜನ್ಯವನ್ನು ನೋಡಿ ಮನಕಲಕಿತು.ಈ ಹಿಂದೆ ತ್ರೇತಾಯುಗದ ರಾಮಾಯಣ  ಕಾಲದಲ್ಲಿ ಸೀತೆಯನ್ನು ರಾವಣನು ಲಂಕೆಗೆ ಹೊತ್ತೊಯ್ಯಬೇಕಾದರೂ ಆಕೆ ನಿಂತ ಭೂಮಿಯ ಅಷ್ಟಗಲ ಭಾಗ ಮಾತ್ರ ಎತ್ತಿ ಹೊತ್ತ್ಯೊದ. ಆಕೆಯನ್ನು ಸ್ಪರ್ಶಿಸಲಿಲ್ಲ. ಪರ ಸ್ತ್ರೀಯನ್ನು ಕಣ್ಣೆತ್ತಿ ನೋಡಿದ್ದು ಮತ್ತು ಮೋಹಿಸಿದ್ದು ಆತನ ಜೀವಕ್ಕೆ ಕಂಟಕವಾಯಿತು.

Image

‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿಯ ಸುತ್ತ..

ಪ್ರಪಂಚದಾದ್ಯಂತ ಮನುಷ್ಯನ ಆಲೋಚನೆಗೂ ನಿಲುಕದ ಹಲವಾರು ಸಂಗತಿಗಳಿವೆ. ಕೆಲವು ಸಂಗತಿಗಳು ನೋಡಲು ನಿಗೂಢವೆಂದು ಕಂಡರೂ ಅವುಗಳಿಗೆ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ. ಅದರೆ ವಿಜ್ಞಾನಕ್ಕೂ ಬಿಡಿಸಲಾಗದ ಒಗಟಾಗಿರುವ ಹಲವಾರು ಸಂಗತಿಗಳು ಈ ಲೋಕದಲ್ಲಿ ಸಾಕಷ್ಟಿದೆ. ನಿಸರ್ಗ ಮಾತೆಯ ಮಡಿಲಲ್ಲಿ ಅಡಗಿರುವ ಹಲವಾರು ಸಂಗತಿಗಳಿಗೆ ವೈಜ್ಞಾನಿಕ ಕಾರಣಗಳೇ ಸಿಗುವುದಿಲ್ಲ. ಅವುಗಳಲ್ಲಿ ಒಂದು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿ. ಇದೊಂದು ಸೈತಾನನ ಗುಂಡಿ ಎಂದೇ ಪ್ರಸಿದ್ಧವಾಗಿದೆ. 

Image