ಸ್ಟೇಟಸ್ ಕತೆಗಳು (ಭಾಗ ೧೩೭೫) - ನಂಬಿಕೆ

ಆತನ ಗೆಲುವಿನ ನಿರೀಕ್ಷೆ ಅದ್ಭುತವಾಗಿತ್ತು. ಆತನಿಗೆ ನೂರು ಪ್ರತಿಶತಃ ಗೆಲುವಿನ‌ ನಂಬಿಕೆ ಇತ್ತು. ನಗರಸಭಾ ಸದಸ್ಯನಾಗುವುದು ಅಷ್ಟು ಸುಲಭದ ಮಾತೇನಲ್ಲ, ಪರಿಚಯವಿಲ್ಲದ ಊರಿನಲ್ಲಿ ಒಂದು ವರ್ಷಗಳ ಕಾಲ ಅವಿರತವಾಗಿ ಶ್ರಮವಹಿಸಿ ದುಡಿದ. ಎಲ್ಲರ ಮನೆ ಮಗನಾದ. ಚುನಾವಣೆ ಪ್ರಚಾರಕ್ಕೆ ಪ್ರತಿ‌ಮನೆಯ ಕದ ತಟ್ಟಿದ. ಈಗಾಗಲೇ ಅವರ ಹೃದಯ ಮುಟ್ಟಿದ ಕಾರಣ ಅದೇನು ಕಷ್ಟ ಅನ್ನಿಸಲೇ ಇಲ್ಲ.

Image

ನೋಟ್ ಬುಕ್

ಪುಸ್ತಕದ ಲೇಖಕ/ಕವಿಯ ಹೆಸರು
ಡಾ, ಕೆ.ಶಿವಲಿಂಗಪ್ಪ ಹಂದಿಹಾಳು
ಪ್ರಕಾಶಕರು
ಕವನ ಪ್ರಕಾಶನ, ಬಳ್ಳಾರಿ
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೫

ಮಕ್ಕಳಿಗಾಗಿ ಪುಸ್ತಕಗಳು ಬರುವುದು ಅಪರೂಪವೇ ಆಗಿರುವ ಸಮಯದಲ್ಲಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಇವರು ಮಕ್ಕಳ ಕಥಾ ಸಂಕಲನ ‘ನೋಟ್ ಬುಕ್’ ಹೊರತಂದಿದ್ದಾರೆ. ಈ ಕಥಾ ಸಂಕಲನಕ್ಕೆ ತಮ್ಮ ಅನಿಸಿಕೆಗಳನ್ನು ಬರೆದ್ದಾರೆ ಕಿರಣ್ ಭಟ್. ಅವರು ತಮ್ಮ ಅನಿಸಿಕೆಯಲ್ಲಿ “ಬಹುಷ: ನಾವು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ.

ಯಾವುದು ಮುಖ್ಯ - ಯಾವುದು ತಪ್ಪು ದಾರಿ?

ಆಗಬೇಕಾದ ಕೆಲಸಗಳು - ನಾವು ಸದಾ ಚರ್ಚಿಸುತ್ತಿರುವ ವಿಷಯಗಳು. ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು.

Image

ಸಂತ ಬೈಜೀದ್

ಇಂದು ಸಂತ ಬೈಜೀದ್ ನ ಬಗ್ಗೆ ತಿಳಿದುಕೊಳ್ಳೋಣ. ಇದು ಒಂದು ನಡೆದ ಘಟನೆ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದರು. 

Image

ವಿದ್ಯೆಯ ಉಪಯೋಗ

ಒಂದು ರಾಜ್ಯದ ರಾಜ ವಿಹಾರಾರ್ಥವಾಗಿ ಮಲೆನಾಡಿನ ಕಡೆಗೆ ಹೊರಟಿದ್ದ. ಪರಿವಾರದಲ್ಲಿ ರಾಜನೊಂದಿಗೆ ಆತನ ಮಗ, ಅವನ ಗುರುಗಳು, ರಾಜಭಟರು, ಆಗಷ್ಟೇ ಸೇನೆಗೆ ಸೇರಿದ್ದ ಕೆಲವು ಸೈನಿಕರು, ಸೇವಕರು ಇದ್ದರು.

Image

ಇದು ಸಾಧ್ಯವೇ…?

ಮೊನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ ( Shadow Cabinet ) ಸಭೆಯಲ್ಲಿ ತೆಗೆದುಕೊಂಡ ಕೆಲವು ಬಹುಮುಖ್ಯ ತೀರ್ಮಾನಗಳು.

Image

ಸ್ಟೇಟಸ್ ಕತೆಗಳು (ಭಾಗ ೧೩೭೪) - ಇರುವೆ

ದಾರಿ ತೋರಿಸಿದವರಾರು? ಇದನ್ನು ನಾನು ತಿಳಿದುಕೊಳ್ಳಲೇಬೇಕು. ಯಾಕೆಂದರೆ ನನ್ನ ಮನೆಯ ಒಳಗೆ ನನ್ನ ಅನುಮತಿ ಇಲ್ಲದೆ ಪ್ರವೇಶಿಸುವುದಕ್ಕೆ ಧೈರ್ಯವಾದರೂ ಹೇಗೆ ಬಂತು? ಅದಲ್ಲದೆ ನಾನು ಅವರನ್ನು ನನ್ನ ಮನೆಯೊಳಕ್ಕೆ ಬರುವುದಕ್ಕೆ  ಕರೆದೂ ಇಲ್ಲ. ಆದರೂ ಮನೆಯೊಳಕ್ಕೆ ಬಂದು ಅವರದೇ ಮನೆ ಎಂಬಂತೆ ಬದುಕುವ ರೀತಿ ನನಗೆ ಇಷ್ಟವಾಗುತ್ತಿಲ್ಲ. ಅವರೀಗ ನಮ್ಮ ಮನೆಯವರಾಗಿ ಬಿಟ್ಟಿದ್ದಾರೆ.

Image