ಕವನಗಳು

ವಿಧ: ಕವನ
December 08, 2024
ಯಾರನ್ನೂ ಹತ್ತಿರ ಸೇರಿಸಬಹುದು , ಮತ್ತು ಸ್ನೇಹಿತರೆನ್ನಬಹುದು ಹೊಲಸು ತಿಂಬಂತೆ ನಟಿಸುವವರನ್ನು  ಜೀವನದಲ್ಲೇ ನಂಬಬಾರದು *** ಓದಿ ಓದಿ ಕೂಚು ಭಟ್ಟ  ನಮ್ಮಲ್ಲಿ ಗಾದೆ ಮಾತಿದೆ ಈಗೀಗ ಹಲವಾರು ಜನರ  ಪಾಡು ಅದೇ ಆಗಿದೆ *** ಹೊಗಳುವುದೇ ಕಾಯಕವಾದರೆ  ದುಡಿಮೆ ಎಲ್ಲಿ ಬೇಲಿಯೇ ಸುತ್ತಲೆಲ್ಲೂ ಇರಲೀಗ  ತಡಮೆ ಎಲ್ಲಿ *** ನುಡಿಹಾರ ಯಾವ ಭಾವನೆಯಲ್ಲಿ ಬರುವೆಯೋ ಈ ಜಗಕೆ ಜನರ ಸೇವೆಯ ಮಾಡೋ ನೀನು ಇಂದು | ಆ ನೋಟ ಈ ನೋಟ ಕಾಟ ಬೇಡವೋ ಎಂದೂ ಸವಿ ಮಾತನಾಡುತಿರು -- ರಾಮ ರಾಮ || *** ತ್ರಿಪದಿ ಮನ್ನಿಸು…
ವಿಧ: ಕವನ
December 07, 2024
ಜೀವನದಲಿ ಸೋತೆ ಮನ ಮುಂದೇ ಹೋಯಿತು ಬದುಕಿನಲಿ ಬಿದ್ದೆನು ತನುವು ಬೆಂದೇ ಹೋಯಿತು   ತಪ್ಪು ತೆಪ್ಪಗೇ ಕುಳಿತಿದೆಯಿಂದು ಹೃದಯದಾಳದಲಿ   ಒಪ್ಪವು ಸುಖವನ್ನು ಹೀಗೆಯೇ ತಂದೇ ಹೋಯಿತು    ಹಸಿರಾಗಿರುವ ಸುಂದರ ಭಾವನೆ ನಮ್ಮೊಳೆಂದಿರಲಿ ಒಲವೆಲ್ಲವು ಭಯಗಳ ಹೊಡೆತಕೆ ಹಿಂದೇ ಹೋಯಿತು   ಅಮೃತದಲಿಂದು ವಿಷವಿದೆ ಹೇಳುವರಿಂದ ದೂರವಿರು ಗುರಿಯಿರಲಿ ಮಹತ್ತಮ ವಿಚಾರವು ಸಂದೇ ಹೋಯಿತು   ಮಸಲತ್ತು ಮಾಡಿದರೂ ನ್ಯಾಯವು ಸಿಗಲಾರದು ಈಶಾ ಬಾಳಲ್ಲಿ ದೃಷ್ಟಾಂತವ ಕೊಡುವರೇ ಎಂದೇ ಹೋಯಿತು   -ಹಾ ಮ ಸತೀಶ ಬೆಂಗಳೂರು…
ವಿಧ: ಕವನ
December 06, 2024
ಏನು ಹೇಳಲಿ ನನ್ನ ಬಾಲ್ಯವ ಯಾರಿಗೆ ಹೇಳಲಿ ನನ್ನ ಬಾಲ್ಯವ ॥ಸ॥   ಕಳೆದುಕೊಂಡೆ ತಾಯಿಯ ಬಾಲ್ಯದಲ್ಲಿ ನುಚ್ಚುನೂರಾಗಿಸಿಕೊಂಡೆ ಬಂಗಾರ ಬಾಲ್ಯವ ಪರರ ಹಂಗಿನಲ್ಲಿ ಬೆಳೆದುಕೊಂಡೆ ದಿನದಿನವೂ ನೋವನ್ನೇ ಉಂಡೆ ॥೧॥   ಕನವರಿಸಿದೆ ಅಮ್ಮಾ ಅಮ್ಮಾ ಎನ್ನುತ  ಕನಸಿನಲ್ಲಿ ಹುಡುಕಿದೆ ಅಮ್ಮಾ ಅಮ್ಮಾ ಎನ್ನುತ ಹಗಲಿನಲ್ಲಿ ‘ತೀರಿ ಹೋದರೂ’ ಎನ್ನ ಅಮ್ಮ ಸಿಗಬಹುದೆಂಬ ಭ್ರಮೆಯಲಿ ಸೊರಗಿದೆ ದಿನದಿನವೂ ಅಮ್ಮನ ಕರೆಯಲ್ಲಿ ॥೨॥   ಸಾಕಿದಳು ಎನ್ನಯ ಅಜ್ಜಿಯೊಬ್ಬಳು ದೇವರೇ ಕಳುಹಿಸಿದೆನೋ ಎನ್ನ ತಾಯಿಯ ಈ ರೂಪದಲಿ ಎನ್ನಯ…
ವಿಧ: ಕವನ
December 05, 2024
ಮಾತುಗಳು ಮುಳ್ಳಾಗದಿರಲಿ ಗೆಳತಿ  ನೀ ನನ್ನ ಒಲವಿನೊಲವಿನ ಸವಿ ಸತಿ   ತೆರೆಯ ಎಳೆದರೆ ಪ್ರೀತಿಗೆ ಬೆಲೆಯೆಲ್ಲಿದೆ ಕೈಹಿಡಿಯದೆ ಹೋದರೆ ಸಿಗದೆ ದುರ್ಗತಿ   ಪ್ರೇಮ ಹೂವಿನ ತರಹ ಮೃದುವಾಗಿರಲಿ ಬಿಗಿತದ ನಡುವೆಯೂ ತಪ್ಪಿಸಿ  ಹೋಗುತಿ   ಸುಖವಿಲ್ಲದೆ ಹೋದರೆ ಬದುಕಲ್ಲಿ ಖುಷಿಯೇ ಸವಿಯಿಲ್ಲದೆ ಕಾಡಿದರೆ ಬಾಳಲ್ಲಿಯೆ ಸಾಯಿತಿ   ತೂಕ ತಪ್ಪಿದ ಮಾತುಗಳು ಹಿತವಾದವೇ ಈಶಾ ಎಲ್ಲೆಂದರಲ್ಲಿ ನಮ್ಮ ನಡುವೆ ತಲೆಯೆತ್ತಿದೆ ಜಾತಿ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
December 04, 2024
ಅಂಗವಿಕಲರು ಯಾರು? ಅಂಗವಿಕಲರು ಯಾರು ಗೆಳೆಯಾ? ಅಂಗ ಊನರಾ? ಅಂಗ ಊನರಾ ಹೇಳು ಗೆಳೆಯಾ? ॥ಪ॥   ಮಾಡರು ಆಕ್ಸಿಡೆಂಟ್ ಕಣ್ಣಿಲ್ಲದವರು । ಮಾಡುವರು ಆಕ್ಸಿಂಡೆಂಟ್ ಕಣ್ಣಿರುವವರು । ಕಿವಿ-ಮೂಗು ಊನರು ಒಳಿತಿಗೆ ತಲೆ ಬಾಗುವರಿವರು ಅಂಗವಿಕಲರು ಯಾರು ಗೆಳೆಯಾ? ॥೧॥   ಕಲೆಗಾರರು ‘ಕೈ’ ಊನರು ಕೊಲೆಗಾರರು ‘ಕೈ’ ಇರುವವರು ಜೀವನ ಜಯಿಸುವರು ‘ಕಾಲು’ ಊನರು ಜೀವನದಲ್ಲಿ ಜಾರುವರು ಕಾಲಿರುವವರು ಅಂಗವಿಕಲರು ಯಾರು ಗೆಳೆಯಾ? ॥೨॥   ಅಧಿಕಾರ ಎಂಬುದು ಬೆಳಕು, ಸೇವೆಯ ಬದುಕು ಇದನ್ನರಿತು ಕರ್ತವ್ಯ ಮಾಡುವರು ಅಂಗ…
ವಿಧ: ಕವನ
December 03, 2024
ಹೆತ್ತವರಿಗೆ ಮಕ್ಕಳು ಹೇಗಿದ್ದರೂ ಚೆಂದ ಹಿತ್ತಲಿನ ಮರಗಳು ಬಾಗಿದ್ದರೂ ಚೆಂದ   ಮುತ್ತು ಸವಿವ ಹೊತ್ತು ಬೇಡವೆನ್ನುವರೇ ಕತ್ತದುವು ಉಳುಕಿ ಹೋಗಿದ್ದರೂ ಚೆಂದ   ಚಿತ್ತವನು ಕಲಕಿ ನಗುವ ಜನರೇ ಸುತ್ತಲೂ ಭಾಗ್ಯವಂತರು ಸುಮ್ಮನೆ ಸಾಗಿದ್ದರೂ ಚೆಂದ   ಜೀತದ ನಡುವೆಯೇ ಬೆಳಕು ಕಾಣುವುದೇ ಉಸಿರಿರುವ ಮಂದಿ ಸೊರಗಿದ್ದರೂ ಚೆಂದ   ಮತ್ಸರಿಗಳ ಎಂದಿಗೂ ದೂರವಿಡು ಈಶಾ ಕಷ್ಟ ಅರಿತವರ ನಡೆ ಬೀಗಿದ್ದರೂ ಚೆಂದ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
December 02, 2024
ಕಾಣೆ ನಾನು ಎಲ್ಲೂ ನಿನ್ನಂಥ ಮಾಯೆಯ ಆಣೆ ಮಾಡಿ ಹೇಳುವೆ ನೀನೊಂದು ವಿಸ್ಮಯ !   ನಿನ್ನ ಜಗದೊಳಗೆ ಬರೀ ಕತ್ತಲು ಅದೇ ಅನುಭವ ನಾ ಕಣ್ಮುಚ್ಚಿದಾಗಲೂ  ಆ ಕತ್ತಲೆಯ ಏಕಾಂತ ಬೇಕೆನಗೆ ನನ್ನೊಳಗೆ ನಾ ಕುಳಿತು ಕಳೆದು ಹೋಗಿರುವ ನನ್ನನೇ ಹುಡುಕಲು…!   ನಿನ್ನೊಳಗೆ ನೀ ತುಂಬಿಕೊಂಡಿರುವುದೆಲ್ಲಾ ಕಪ್ಪು ಆದರೂ ಅದೇನು ಮಾಯೆ ನಿನ್ನದು ನೀ ಹರಿದು ಹೋಗುವುದರೊಳಗೆ ಬಿಸಿ ಹನಿಗಳ ಸುರಿಸಿ ಮಂಜು ಕವಿದ ಕಣ್ಣುಗಳಿಗೆ ತುಂಬುವೆ ಭರವಸೆಯ ಹೊಸ ಬೆಳಕು…!   ಇಹದೊಡನೆ ಬಿಟ್ಟೂ ಬಿಡಲಾರದ ಸೆಳೆತ ನಿನ್ನ ಕತ್ತಲ…
ವಿಧ: ಕವನ
December 01, 2024
ಮದಿರೆಯ ಜೊತೆಗೇ ನಾಟ್ಯವಾಡಲು ನನ್ನವಳಿಲ್ಲ ಹೊತ್ತಿಲ್ಲದೇ ಬಾಗಿಲೆಳೆಯೇ ತೆಗೆಯಲು ನನ್ನವಳಿಲ್ಲ   ದೇಹದಲಿ ಮತ್ತೇರಿತ್ತು ಅವಳುಡುಗೆಯ ನೋಡಿ ಕಡಲಿನ ಭಾವನೆಗಳ  ಹಂಚಿಕೊಳ್ಳಲು ನನ್ನವಳಿಲ್ಲ   ತುಡಿತ ಇಲ್ಲದ ಚೆಲುವಿನಲಿ ಒಲವು ಮೂಡುವುದೆ ಅರಿವಿನ ಕಣ್ಣುಗಳ ತೆರೆದುಕೊಳ್ಳಲು ನನ್ನವಳಿಲ್ಲ    ಹೊರಗಿನ ಆಕರ್ಷಣೆ ಸಹಜವಾಗಿ ಬೆಳೆಯುತ್ತದೆ ಚಿಂತನೆಗೆ ಚಿಂತೆ ಸೇರಿದರೆ ಸಂತೈಸಲು ನನ್ನವಳಿಲ್ಲ   ಹೆಗಲ ಕೊಂಡಿ ಕಳಚಿ ಬಿದ್ದಿದೆ ನಡು ರಸ್ತೆಯಲಿ ಈಶಾ ಬರಡಾದ ದೇಹದಲಿ ಪ್ರೇಮ ಚಿಗುರಲು ನನ್ನವಳಿಲ್ಲ -ಹಾ ಮ…
ಲೇಖಕರು: shivanandajambagi71
ವಿಧ: ಕವನ
November 30, 2024
ಅಮ್ಮನ ಗುಣದವರು  ಪ್ರೀತಿಯಲ್ಲಿ ಶ್ರೇಷ್ಠರು  ಮಕ್ಕಳ ಜೊತೆ ಮಕ್ಕಳಾಗಿ ಬೆರತವರು ಅವರೇ ನನ್ನ ಶಿಕ್ಷಕರು! ಈ ಜಗದಲ್ಲಿ ತಲೆಯೆತ್ತಿ ನಡೆಯಲು ಕಳಿಸಿ ಅಜ್ಞಾನವ ಹೊಡೆದೋಡಿಸಿ ಜ್ಞಾನದ ಬೀಜ ಬಿತ್ತಿದವರು  ಅವರೇ ನನ್ನ ಶಿಕ್ಷಕರು! ನನ್ನ ಜೀವನದ ಬೆಳಕಾಗಿ ಪ್ರತಿನಿತ್ಯ ಪೂಜಿಸುವ ದೇವರ ಸ್ವರೂಪವಾಗಿ ಕಣ್ಣಿಗೆ ಕಾಣುವ ದೇವರಾದವರು  ಅವರೇ ನನ್ನ ಶಿಕ್ಷಕರು! ತಾಯಿಯಂತೆ ಪ್ರೀತಿಸುತ್ತಾ  ತಂದೆಯಂತೆ ಘರ್ಜಿಸುತ್ತಾ  ನನ್ನಲ್ಲಿ ಕನಸು ಕಾಣುವ ಹುಮ್ಮಸ್ಸನ್ನು ಹೆಚ್ಚಿಸುತ್ತಾ ಇರುವವರೇ  ಅವರೇ ನನ್ನ ಶಿಕ್ಷಕರು…
ವಿಧ: ಕವನ
November 30, 2024
ಮನದ ಸಮಸ್ಯೆ ಅದು ನನ್ನದಲ್ಲ ತಿಳಿ ಜನ ಹೇಳುವ ಹೇಳಿಕೆ ನಿನ್ನದಲ್ಲ ತಿಳಿ   ಹಸಿರಿನಂತಿದ್ದೂ ಒಡಲೇಕೆ ಸುಟ್ಟಿತೋ ಎಚ್ಚರಿಕೆಯ ನಡೆಗಳು ಇವನದಲ್ಲ ತಿಳಿ   ಜೀವನದ ಮೌಲ್ಯ ಗಳು ಈಗ ಎಲ್ಲಿದೆ ಮೌನದ ಮಾತುಗಳು ಅವನದಲ್ಲ ತಿಳಿ   ಗರ್ವದಿಂದಿರೆ ಗೌರವಿಸುವರೇ ಹೇಳು ನೀನು ಸೋತರೆ ಫಲ ಇವಳದಲ್ಲ ತಿಳಿ   ಗೆಲ್ಲದ ಕಹಿಯ ಕ್ಷಣ ಯಾರಿಹರು ಈಶಾ ದುಡಿದು ಗಳಿಸಿರುವುದು ಅವಳದಲ್ಲ ತಿಳಿ   -ಹಾ ಮ ಸತೀಶ ಬೆಂಗಳೂರು