ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೇಮದ ಕಡಲು

ಈ ಪ್ರಪಂಚವು ಪ್ರೇಮದ ಮೇಲೆಯೇ ನಿಂತಿದೆ. ಮತ್ತೆ ನಾವು ನೀವೆಲ್ಲ ಪ್ರೇಮವನ್ನೆ ಬಲವಾಗಿ ತಬ್ಬಿ ಬದುಕುತ್ತಿದ್ದೇವೆ. ಪ್ರೇಮವೆಂದರೆ ಮೊಗೆದಷ್ಟೂ ಮುಗಿಯದ ಭರವಸೆ, ಹಾಗೆಯೇ ಸೂರ್ಯ, ಚಂದ್ರ ಇರುವವರೆಗೂ ವಿಶ್ವವನ್ನೆ ವ್ಯಾಪಿಸಿರುವ ಮೌಲ್ಯಯುತ ಸಾಧನ, ಇಂದಿಗೂ ಎಲ್ಲರಿಂದಲೂ ಬೊಗಸೆ ತುಂಬ ಪ್ರಾಂಜಲ ಪ್ರೀತಿಯನ್ನು ಅಪೇಕ್ಷಿಸಿ ಬದುಕು ನೂಕುತ್ತಿದ್ದೇವೆ. ಈ ಪ್ರೀತಿ ಪ್ರೇಮದ ಆಳ ಅಗಲವನ್ನು ಹುಡುಕುವುದು ಸುಲಭದ ಕೆಲಸವಲ್ಲ, ಹುಡುಕಲೂ ಹೋಗಬಾರದು.

Image

ಮನೆಯಂಗಳದ ಮಿತ್ರರು

ಪುಸ್ತಕದ ಲೇಖಕ/ಕವಿಯ ಹೆಸರು
ಪರಂಜ್ಯೋತಿ
ಪ್ರಕಾಶಕರು
ಇಂಚರ ಪ್ರಕಾಶನ, ವಿವೇಕ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. 130/-

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”.  ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗಳು, ನೀಳ್ಗತೆಗಳು, ಮಕ್ಕಳ ಕತೆಗಳು, ಹಾಗೂ ಲೇಖನ ಸಂಕಲನಗಳು. “ಬೆಟ್ಟದ ಗಾಲಿ” ಇವರು ಬರೆದ ಕಾದಂಬರಿ ಮತ್ತು “ನೀಲಗಿರಿ: ಸಾಮಾಜಿಕ - ಸಾಂಸ್ಕೃತಿಕ ಕಣ್ಣೋಟ” ಕ್ಷೇತ್ರ ಅಧ್ಯಯನ ಆಧಾರಿತ ಬೃಹತ್ ಕೃತಿ.

ಕ್ಯಾನ್ಸ‌ರ್ ತಡೆಯಲು ‘ಇರೋಳ್’ ಸೇವಿಸಿ !

ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ‘ಇರೋಳ್’ ಎಂದು ಕರೆಯಲ್ಪಡುವ ತಾಳೆ ಹಣ್ಣು, ತಾಟಿ ನುಂಗು ಬೇಸಿಗೆ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆ. ಇಂಗ್ಲೀಷ್ ನಲ್ಲಿ ಐಸ್ ಆಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ರುಚಿಯನ್ನು ತಿಂದವನೇ ಬಲ್ಲ. ಮಂಜುಗಡ್ಡೆಯಂತೆ ಬಿಳುಪಾಗಿರುವ ತಿರುಳನ್ನು ಹೊರ ತೆಗೆಯುವುದೇ ಒಂದು ಸಾಹಸ. ಅದಕ್ಕೆಂದು ತಯಾರಾದ ಹರಿತ ಚೂರಿ ಮತ್ತು ನಿಪುಣತೆ ಅತ್ಯಗತ್ಯ.

Image

ಕಟ್ಟುನಿಟ್ಟಿನ ಕ್ರಮ ಅಗತ್ಯ

ಮನರಂಜನೆ ಹೆಸರಿನಲ್ಲಿ ಡಿಜಿಟಲ್ ಮಾಧ್ಯಮಗಳು, ಒಟಿಟಿ ವೇದಿಕೆಗಳು ಅಶ್ಲೀಲ ಹಾಗೂ ಕೆಟ್ಟ ಅಭಿರುಚಿಯ ಕಂಟೆಂಟ್ ಪ್ರಸಾರ ಮಾಡುತ್ತಿರುವುದು ಅಕ್ಷಮ್ಯ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹದಿಹರೆಯದ ವಯಸ್ಸಿನವರು ಮತ್ತು ಯುವಕ-ಯುವತಿಯರು ಇಂಥ ಕಂಟೆಂಟ್ ವೀಕ್ಷಿಸಿ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಕೆಲವರು ದಾರಿ ತಪ್ಪಿರುವ ನಿದರ್ಶನಗಳೂ ಇವೆ.

Image

ಬಸವ ಜಯಂತಿಯಂದು ಒಂದಿಷ್ಟು ಮನಃಪರಿವರ್ತನೆಯಾಗಲಿ

ನಾಳೆ ಬಸವ ಜಯಂತಿ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲವಾಯಿತು. ಆ ಘೋಷಣೆಯಿಂದ ಏನಾದರೂ ಬದಲಾವಣೆ ಕರ್ನಾಟಕದ ಜನಮಾನಸದಲ್ಲಿ ಉಂಟಾಗಿದೆಯೇ ಎಂಬುದನ್ನು ವಿಮರ್ಶಿಸಿಕೊಳ್ಳಬೇಕಾದ ಸಮಯ.

Image

ಸ್ಟೇಟಸ್ ಕತೆಗಳು (ಭಾಗ ೧೩೦೬) - ಕೈಗಳು ಹೇಳಿವೆ

ನನಗೆ ವ್ಯವಧಾನವಿಲ್ಲ ಗೆಳೆಯಾ... ನನ್ನ ಸುತ್ತ ಇವತ್ತು ಕಂಡ ಕೈಗಳನ್ನ ಗಮನಿಸದೇ ಹೋದೆನಲ್ಲಾ...

Image

ಪಾಲಕ್ ಸೊಪ್ಪಿನ ಗೊಜ್ಜು

Image

ಪಾಲಕ್ ಸೊಪ್ಪು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಓಮ್ ಕಾಳು, ಎಳ್ಳು ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ - ಇಂಗಿನ ಒಗ್ಗರಣೆ ಮಾಡಿ ನಂತರ ರುಬ್ಬಿದ ಮಿಶ್ರಣ ಸೇರಿಸಿ ಬಾಡಿಸಿ. ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಕೊತ್ತಂಬರಿ ಸೊಪ್ಪು ಸೇರಿಸಿದರೆ, ರುಚಿಯಾದ ಪಾಲಕ್ ಸೊಪ್ಪಿನ ಗೊಜ್ಜು ತಯಾರು.

 

ಬೇಕಿರುವ ಸಾಮಗ್ರಿ

ಕತ್ತರಿಸಿದ ಪಾಲಕ್ ಸೊಪ್ಪು - ೩ ಕಪ್, ತೆಂಗಿನ ತುರಿ - ಅರ್ಧ ಕಪ್, ಒಣ ಮೆಣಸಿನಕಾಯಿ - ೫-೬, ಹುಣಸೆ ರಸ - ಕಾಲು ಕಪ್, ಬೆಲ್ಲದ ತುರಿ - ೪ ಚಮಚ, ಎಳ್ಳು ಹುಡಿ - ೨ ಚಮಚ, ಓಮ್ ಕಾಳಿನ ಹುಡಿ - ೧ ಚಮಚ, ಸಾಸಿವೆ - ೧ ಚಮಚ, ಎಣ್ಣೆ - ೪ ಚಮಚ, ಇಂಗು - ೧ ಚಮಚ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಕೃತಕ ಮಳೆ: ಏನಿದರ ಗುಟ್ಟು?

ಈ ಮಳೆಯನ್ನೂ ಕೃತಕವಾಗಿ ಬರಿಸಬಹುದು ಎಂಬ ಸತ್ಯ ಈ ಆಧುನಿಕ ಯುಗದಲ್ಲಿ ಆಶ್ಚರ್ಯಕರ ವಿಷಯವೇನಲ್ಲ. ಇದನ್ನು ಕ್ಲೌಡ್ ಸೀಡಿಂಗ್ ಎಂದೂ ಕರೆಯುತ್ತಾರೆ; ಅಂದರೆ ಮಳೆ ಬಿತ್ತನೆ. ಇಲ್ಲಿ ಇಡೀ ವಾತಾವರಣದ ಕೃತಕ ಬದಲಾವಣೆ. ಇದು ವಾತಾವರಣದಲ್ಲಿ ಕೃತಕವಾಗಿ ಬದಲಾಯಿಸಿ ಮಳೆ ಬರುವಂತೆ ಮಾಡುವ ವಿಧಾನ.

Image

ಎರಡು ರೂಪಾಯಿಯ ಹಸು !

ದೇವರು ಮಾನವನನ್ನು ಸೃಷ್ಟಿಸಿದ್ದಾನೆ ಎಂದು ಹೇಳುತ್ತಾರೆ. ಆದರೆ ಮಾನವನು ದೇವರಿಗಿಂತಲೂ ಚಾಲಾಕಿ. ಕೆಲವೊಮ್ಮೆ ಅವನು ಈ ದೇವರನ್ನೇ ಯಾಮಾರಿಸುತ್ತಾನೆ. ದೇವರನ್ನು ಮಾನವ ಯಾಮಾರಿಸಿದ ಒಂದು ಪ್ರಸಂಗ ಹೀಗಿದೆ. ಒಬ್ಬ ರೈತನ ಹಸು ಕಳೆದುಹೋಯಿತು.

Image