ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 27

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ

ನನ್ನ ಅನುವಾದ : 
ಬಾಳಿನ ಪಯಣದಿ ಸಿಗುವಂಥ ಮಜಲುಗಳು
ಅವು ಮತ್ತೆ ಸಿಗುವುದಿಲ್ಲ
ಓ ಅವು ಮತ್ತೆ ಸಿಗುವುದಿಲ್ಲ

236) ಮೂಲ ಹಾಡು:- ಪೆಹಲೀ ಪೆಹಲೀ ಬಾರ್ ಮುಹಬ್ಬತ್ ಕೀ ಹೈ

ನನ್ನ ಅನುವಾದ : 
ಮೊದಲನೇ ಬಾರಿ ಪ್ರೀತಿ ನಾನು ಮಾಡಿರುವೆ
ಮಾಡಲಿ ಏನು ತೋಚದ ಹಾಗೆ ಆಗಿದೆ

237) ಮೂಲ ಹಾಡು:- ಘರ್ ಸೇ ನಿಕಲತೇ ಹೀ

ನನ್ನ ಅನುವಾದ : 
ಮನೆಯಿಂದ ಹೊರ ಬಿದ್ದು
ಸ್ವಲ್ಪೇ ದೂರ ಹೋದರೆ ಸಾಕು
ದಾರೀಲೇ  ಇಹುದು ಅವಳ ಮನೆ

ಸ್ಟೇಟಸ್ ಕತೆಗಳು (ಭಾಗ ೧೩೫೭) - ವಿಪರ್ಯಾಸ

ಶಿವಪ್ಪನ ಮನೆಯ ಬೆಕ್ಕು ಇತ್ತೀಚಿಗೆ ಹೊರಗೆ ಓಡಾಡಲು ಪ್ರಾರಂಭ ಮಾಡಿದೆ. ಊರು ತಿರುಗ್ತಾ ಇರೋದು ಬರಿಯ ಆಟಕ್ಕೆ ಮಾತ್ರವಲ್ಲ ತನ್ನೊಂದಿಗೆ ಬಳಗವನ್ನು ಒಟ್ಟುಗೂಡಿಸಬೇಕೆನ್ನುವ ಆಸೆಯಿಂದ. ಪ್ರತಿದಿನ ಮನೆಯಲ್ಲಿ ಅದಕ್ಕೆ ಹಾಕಿದ ಆಹಾರವನ್ನು ಸ್ವಲ್ಪ ತಿಂದು ತನ್ನ ಗೆಳೆಯರನ್ನ ಹತ್ತಿರ ಕರೆಯುತ್ತದೆ. ಅವರೆಲ್ಲರೂ ಸ್ವಲ್ಪ ಸ್ವಲ್ಪ ತಿಂದು ತಟ್ಟೆ ಖಾಲಿ ಮಾಡಿ ಇನ್ನೊಂದು ಮನೆಗೆ ಹೊರಡುತ್ತಾರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೧೦೫) - ಈಶ್ವರ ಬಳ್ಳಿ

ಶಾಲಾರಂಭ ಖುಷಿ ನೀಡಿರಬೇಕಲ್ಲವೇ? ನನಗೂ ತುಂಬಾ ಖುಷಿ... ಯಾಕೆ ಗೊತ್ತಾ? ಸಮಯಕ್ಕೆ ಮೊದಲೇ ಮಳೆ ಬಂದು ನನ್ನೆಲ್ಲ ಒಣಗಿದ್ದ ಶಾಖೆಗಳು ಚಿಗುರಿ ನಲಿಯುತ್ತಿವೆ!. ಈಗ ನಿಮಗೆ ನಾನ್ಯಾರೆಂದು ಅರ್ಥವಾಗಬೇಕೆಂದರೆ ನನ್ನ ಬಗ್ಗೆ ಸ್ವಲ್ಪ ಹೇಳಲೇ ಬೇಕಲ್ಲವೇ? ನಾನು ಬಹಳ ತೆಳ್ಳಗಿನ ಆದರೆ ಸ್ವಲ್ಪ ಗಟ್ಟಿಯಾದ ಬಳ್ಳಿ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 26

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

225) ಮೂಲ ಹಾಡು:- ದೇಖಾ ಹೈ ಪಹಲೀ ಬಾರ್

ನನ್ನ ಅನುವಾದ :  

ನೋಡಿರುವೆ ಮೊದಲ ಸಲ

ಪ್ರಿಯತಮನ ಕಣ್ಣಲ್ಲಿ ಪ್ರೇಮಾನ

226) ಮೂಲ ಹಾಡು:- ತೇರಾ ಹೋನೇ ಲಗಾ

ನನ್ನ ಅನುವಾದ :  

ನಾನೂ

ಆಗುತಿಹೆ ನಿನ್ನೋನೂ

ನಿನ ಭೇಟಿ

ಆದಾಗಿಂದ

227) ಮೂಲ ಹಾಡು:- ಕಿಸೀ ದಿನ ಬನೂoಗಿ

ನನ್ನ ಅನುವಾದ :  

ಆಗುವೆನು ರಾಣಿ

ಮುಂದೊಮ್ಮೆ ನಿನಗೆ

ಅಲ್ಪ ಇನ್ನೊಮ್ಮೆ ಹೇಳು

228) ಮೂಲ ಹಾಡು:- ಸುಖ ಮೆ ಸಬ ಸಾಥೀ

ನನ್ನ ಅನುವಾದ :  

ಸುಖದೇ ಎಲ್ಲಾರು ಜೊತೆಗೆ

ಚಂಪಾರಣ್ಯ ಸತ್ಯಾಗ್ರಹ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ: ೨೦೨೫

“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ ಇತ್ತು. ಗಾಂಧೀಜಿ ಚಂಪಾರಣ್ಯಕ್ಕೆ ಕಾಲಿಟ್ಟಾಗಲೇ ಅವರಿಗೆ ನಿಜವಾದ ಭಾರತದ ಸ್ಪಷ್ಟ ಚಿತ್ರಣ ಸಿಕ್ಕಿತು.

ವಿಚಿತ್ರ ಸ್ವಾರ್ಥದ ನ್ಯಾಯ ನೀತಿ

ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂಗಿ ಕರುಣಾಮಯಿ, ನನ್ನ ಗಂಡ ದಕ್ಷ ಪ್ರಾಮಾಣಿಕ, ನನ್ನ ಮಗ ಮಗಳು ಅತ್ಯಂತ  ಸಹೃದಯಿಗಳು, ಹೀಗೆ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮವರ ಬಗ

Image

ಸ್ಟೇಟಸ್ ಕತೆಗಳು (ಭಾಗ ೧೩೫೬) - ಸ್ವರ್ಗ

ನಿನಗೆ ಸ್ವರ್ಗ ಬೇಕಿದ್ದರೆ ನೀನೇ ಸತ್ತು ಸ್ವರ್ಗಕ್ಕೆ ತೆರಳಿಬಿಡು, ಯಾರೋ ಸತ್ತು ನಿನಗೆ ಸ್ವರ್ಗ ಪ್ರಾಪ್ತಿ ಆಗುವುದಿಲ್ಲ. ಹೀಗಂದ ಬಾಲಕೃಷ್ಣರ ಮಾತು ಸ್ವಲ್ಪ ಖಾರವಾಗಿತ್ತು. ನನಗೆ ಅದನ್ನು ಅಷ್ಟು ಬೇಗ ಜೀರ್ಣಿಸಿಕೊಳ್ಳಲಾಗಲಿಲ್ಲ. ಹಾಗೆ ಅವರ ಮಾತನ್ನು ಮನಸ್ಸಿನೊಳಗೆ ಮತ್ತೆ ಮತ್ತೆ ಕೇಳುವುದಕ್ಕೆ ಆರಂಭಿಸಿದೆ. ಆಗ ಅದರ ಅದ್ಭುತ ಒಳಾರ್ಥಗಳು ಕಣ್ಣ ಮುಂದೆ ಕಾಣಿಸುವುದಕ್ಕೆ ಪ್ರಾರಂಭ ಆದವು.

Image

ಪ್ರೇಮಪತ್ರ: ಮುನಿಸು ಬಿಟ್ಟು ಕವಿಯ ಕವಿತೆಯಾಗು ಬಾ...

ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ ಕಾಣುವೆ. ವಯಸ್ಸು ಕೇವಲ ನಶಿಸಿ ಹೋಗುವ ಈ ತನುವಿಗಿರಬಹುದು, ನಿನ್ನ ಪ್ರೀತಿಯ ನಶೆಗಲ್ಲ. ಪ್ರೀತಿ ಮೂಡಲು ಅದಾವ ಕಾರಣ ಬೇಕಿತ್ತು?