ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೩
‘ಈ ಮರದ ನೆರಳಿನಲಿ’ ಕವನ ಸಂಕಲನದಿಂದ ಈ ವಾರ ಆಯ್ದ ಕವನಗಳು…
- Read more about ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೩
- Log in or register to post comments
‘ಈ ಮರದ ನೆರಳಿನಲಿ’ ಕವನ ಸಂಕಲನದಿಂದ ಈ ವಾರ ಆಯ್ದ ಕವನಗಳು…
ಸರ್ ಆರ್ಥರ್ ಕಾನನ್ ಡಾಯ್ಲ್ ತನ್ನ ಪತ್ತೇದಾರಿ ಕಾದಂಬರಿಗೋಸ್ಕರ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಎನ್ನುವ ಪತ್ತೇದಾರನ ಪಾತ್ರವನ್ನು ಕಾಲ್ಪನಿಕ ಪಾತ್ರ ಎಂದು ಓದುಗರು ನಂಬಲೇ ಇಲ್ಲ. ಅಂತಹ ಒಂದು ಕಾಲ್ಪನಿಕ ಪಾತ್ರ ಬಿಡಿಸಿದ ೭ ರೋಚಕ ಸಾಹಸ ಕಥೆಗಳು ಈ ಕೃತಿಯಲ್ಲಿವೆ.
ಯುದ್ಧವೆಂದರೆ, ಎದುರಿಗಿರುವವರನ್ನು ನಮ್ಮ ಶತ್ರುಗಳೆಂದು ಭಾವಿಸಿ ಹೊಡೆಯುವುದು, ಗಾಯಗೊಳಿಸುವುದು, ಶರಣಾಗಿಸುವುದು, ಕೊಲ್ಲುವುದು, ಆ ಜಾಗವನ್ನು ಆಕ್ರಮಿಸುವುದು, ವಶಪಡಿಸಿಕೊಳ್ಳುವುದು, ನಮ್ಮ ಪ್ರತಿಸ್ಪರ್ಧಿಯೂ ಸಹ ನಮ್ಮನ್ನು ಶತ್ರುವೆಂದು ಪರಿಗಣಿಸಿ ನಮ್ಮನ್ನೂ ಅದೇ ರೀತಿಯಲ್ಲಿ ಕೊಲ್ಲುವುದು ಮತ್ತು ವಶಪಡಿಸಿಕೊಳ್ಳುವುದು, ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು, ವಿರೋಧಿಯನ್ನು
ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ನದಿಯಿಂದಾಗಿ ಸಮಸ್ಯೆಗಳು ಉದ್ಭವಿಸಿದೆ ಎಂದು ಘಂಟಾಘೋಷವಾಗಿ ಘೋಷಣೆಗಳನ್ನು ಹೊರಡಿಸಿದ್ದಾರೆ. ಆ ನದಿಗಿಂತ ಸ್ವಲ್ಪ ದೂರದಲ್ಲಿ ಇನ್ನೊಂದು ನದಿಯು ಹರಿಯುತ್ತಾ ಇದೆ.
"ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿರುತ್ತೇವೆ. ಅತ್ಯಂತ ಸುಖಿಯೂ ಕಷ್ಟಗಳ ಬಗ್ಗೆ ಕರುಬುತ್ತಿರುತ್ತಾನೆ ಎಂದರೆ ಅತಿಶಯದ ಮಾತಾಗದು.
‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು. ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು.
ಈ ಪ್ರಪಂಚವು ಪ್ರೇಮದ ಮೇಲೆಯೇ ನಿಂತಿದೆ. ಮತ್ತೆ ನಾವು ನೀವೆಲ್ಲ ಪ್ರೇಮವನ್ನೆ ಬಲವಾಗಿ ತಬ್ಬಿ ಬದುಕುತ್ತಿದ್ದೇವೆ. ಪ್ರೇಮವೆಂದರೆ ಮೊಗೆದಷ್ಟೂ ಮುಗಿಯದ ಭರವಸೆ, ಹಾಗೆಯೇ ಸೂರ್ಯ, ಚಂದ್ರ ಇರುವವರೆಗೂ ವಿಶ್ವವನ್ನೆ ವ್ಯಾಪಿಸಿರುವ ಮೌಲ್ಯಯುತ ಸಾಧನ, ಇಂದಿಗೂ ಎಲ್ಲರಿಂದಲೂ ಬೊಗಸೆ ತುಂಬ ಪ್ರಾಂಜಲ ಪ್ರೀತಿಯನ್ನು ಅಪೇಕ್ಷಿಸಿ ಬದುಕು ನೂಕುತ್ತಿದ್ದೇವೆ. ಈ ಪ್ರೀತಿ ಪ್ರೇಮದ ಆಳ ಅಗಲವನ್ನು ಹುಡುಕುವುದು ಸುಲಭದ ಕೆಲಸವಲ್ಲ, ಹುಡುಕಲೂ ಹೋಗಬಾರದು.
ಗಝಲ್ ೧
ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”. ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗಳು, ನೀಳ್ಗತೆಗಳು, ಮಕ್ಕಳ ಕತೆಗಳು, ಹಾಗೂ ಲೇಖನ ಸಂಕಲನಗಳು. “ಬೆಟ್ಟದ ಗಾಲಿ” ಇವರು ಬರೆದ ಕಾದಂಬರಿ ಮತ್ತು “ನೀಲಗಿರಿ: ಸಾಮಾಜಿಕ - ಸಾಂಸ್ಕೃತಿಕ ಕಣ್ಣೋಟ” ಕ್ಷೇತ್ರ ಅಧ್ಯಯನ ಆಧಾರಿತ ಬೃಹತ್ ಕೃತಿ.
ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ‘ಇರೋಳ್’ ಎಂದು ಕರೆಯಲ್ಪಡುವ ತಾಳೆ ಹಣ್ಣು, ತಾಟಿ ನುಂಗು ಬೇಸಿಗೆ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆ. ಇಂಗ್ಲೀಷ್ ನಲ್ಲಿ ಐಸ್ ಆಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ರುಚಿಯನ್ನು ತಿಂದವನೇ ಬಲ್ಲ. ಮಂಜುಗಡ್ಡೆಯಂತೆ ಬಿಳುಪಾಗಿರುವ ತಿರುಳನ್ನು ಹೊರ ತೆಗೆಯುವುದೇ ಒಂದು ಸಾಹಸ. ಅದಕ್ಕೆಂದು ತಯಾರಾದ ಹರಿತ ಚೂರಿ ಮತ್ತು ನಿಪುಣತೆ ಅತ್ಯಗತ್ಯ.