ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 2)

ಒಂದು ಬೇಸಿಗೆಯಲ್ಲಿ ನನ್ನ ವ್ಯಾಪ್ತಿಯ ಜೇನು ಹುಡುಕಾಟ ಮುಗಿಸಿ ಎಲ್ಲೂ ತುಪ್ಪ ರೆಡಿ ಇರುವ ಜೇನು ಇಲ್ಲವೆಂದಾಗ  ಈ ಬಂಡೆ ಸಮೀಪ  ಜೇನು ಹುಡುಕಲು ಹೋಗಿದ್ದೆ. ಹಲವು ವರ್ಷಗಳ ಹಿಂದೆ ಕಾಲ ಕಳೆದ ಸವಿನೆನಪುಗಳ ಸ್ಮರಿಸುತ್ತಾ  ಆ ಸಾಲಿನಲ್ಲಿ ಹಾಗೆ ಹೋಗುತ್ತಿದ್ದಾಗ ಆ ಕತ್ತಾಳೆ ಗುಮ್ಮಿಯಲ್ಲಿ ನೆಲಕ್ಕೆ ಬಿಲ್ಲಿನಂತೆ ಬಾಗಿರುವ ಒಣಗಿದ ಕತ್ತಾಳಿಗರಿಯಲ್ಲಿ ಒಂದು ಅಡಿ ಉದ್ಧದ ಎರಡು ಅಡಿ ಅಗಲದ ಜೇನು ನೋಡಿದೆ.

Image

ಇವಿಎಂ ಕುರಿತ ಗೊಂದಲ, ಶಂಕೆ ಇನ್ನಾದರೂ ನಿಲ್ಲಲಿ

ಎಲೆಕ್ಟ್ರಾನಿಕ್ ಮತಯಂತ್ರಗಳ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಲ ಸಂಸ್ಥೆಗಳು, ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿವಿಪ್ಯಾಟ್ ಸ್ಲಿಪ್ ಹಾಗೂ ಇವಿಎಂ ನ ಮತಗಳನ್ನು ತಾಳೆ ಹಾಕುವ ಅಗತ್ಯವಿಲ್ಲ ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ.

Image

ಒಂದು ಪೆನ್ ಡ್ರೈವ್ ಸುತ್ತಾ...

ಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು. ಸಾಮಾನ್ಯವಾಗಿ ಇತ್ತೀಚಿನ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಇನ್ನೂ ಘಟನೆಗಳು ಘಟಿಸುವುದಕ್ಕೆ ಮುನ್ನವೇ ಊಹಾಪೋಹ, ಗಾಳಿ ಮಾತುಗಳ ಆಧಾರದ ಮೇಲೆ ಬ್ರೇಕಿಂಗ್ ನ್ಯೂಸ್ ಮಾಡುವುದನ್ನು ಗಮನಿಸಿದ್ದೇವೆ.

Image

ಸ್ಟೇಟಸ್ ಕತೆಗಳು (ಭಾಗ ೯೪೮)- ಹನಿ

ನಿಮಗೆಷ್ಟು ಸಲ ಹೇಳೋದು, ಕಣ್ಣಾ ಮುಚ್ಚಾಲೆ ಆಡಬೇಡಾ ಅಂತ. ಮೋಡದೆಡೆಯಲ್ಲಿ  ಕುಳಿತು ಭೂಮಿಗೆ ಬರುವುದ್ದಕ್ಕೆ ಕಾಯುತ್ತಿರುವ ಮಳೆಯ ಹನಿಗಳೇ ಯಾಕೆ ನಮ್ಮ ಮೇಲೆ ಕನಿಕರವಿಲ್ಲವೆ ಅಥವಾ ಸಮಯ ಬರಲೀ ಎಂದೇ. ನೀವು ನೆಲಕ್ಕಿಳಿಯದೇ ಸಮಯ ತುಂಬಾ ಆಯಿತು.‌ ಅವತ್ತು ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಓಡಿದವರು ಕೈಗೆ ಸಿಗುವ ಲಕ್ಷಣವೇ ಇಲ್ಲ.ನಾನು ಸೋತಿದ್ದೇನೆ. ನೀವೇ ಸರ್ವ ಶ್ರೇಷ್ಠ.

Image

ಹಳದಿ ಟಿಟ್ಟಿಭದ ಕಥೆ ಗೊತ್ತೇ?

ನಾನು ವಾಸವಾಗಿರುವ ಬಾಡಿಗೆ ಮನೆಯ ಹಿಂದೆ ಒಂದು ಗದ್ದೆ ಇತ್ತು. ಹಲವಾರು ವರ್ಷಗಳಿಂದ ಅದರಲ್ಲಿ ಬೇಸಾಯ ಮಾಡಿರಲಿಲ್ಲ. ಅದರಲ್ಲಿ ಗಿಡಗಂಟಿಗಳು, ಮುಳ್ಳು ಮತ್ತು ಹುಲ್ಲು ಬೆಳೆದಿತ್ತು. ಜನವರಿ ತಿಂಗಳಿನಲ್ಲಿ ಪೂರ್ತಿ ಒಣಗಿದ‌ ಆ ಜಾಗ ಮರಳುಗಾಡಿನಂತೆ ಕಂದು ಬಣ್ಣ ಕಾಣುತ್ತಿತ್ತು. ಆ ಗದ್ದೆಯ ಬದಿಯಲ್ಲೇ ನಾನು ದಿನವೂ ಹಾಲು ತರಲು ಹೋಗುತ್ತಿದ್ದೆ.

Image

ವಚನಬಿಂದು

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೪

ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು ಇವರು. ಇವರು ಮೂಲತಃ ಕವಿಗಳ ವಂಶದವರು. ಆದುದರಿಂದ ಹುಟ್ಟುತ್ತಲೇ ಕವಿತ್ವ ಇವರ ರಕ್ತದಲ್ಲಿ ಸಂಚರಿಸುತ್ತಲೆ ಇತ್ತು. ಅದು ಈ ಹಿರಿಯ ಪ್ರಾಯದಲ್ಲಿ ಹೊರಹೊಮ್ಮಿದೆ.

ಸಂಪತ್ತಿನ ಸಮಾನ ಹಂಚಿಕೆ...

ಈ ಪರಿಕಲ್ಪನೆಯ ವಾಸ್ತವಿಕ ಅರ್ಥವೇನು ? ಇದು ಸಾಧ್ಯವೇ ? ಇದರ ಅಗತ್ಯತೆ ಏನು ?  ಇದು ಅನಿವಾರ್ಯವೇ ? ಇದನ್ನು ಒಪ್ಪಿಕೊಳ್ಳಬೇಕೆ ? ಅಥವಾ ತಿರಸ್ಕರಿಸಬೇಕೆ ? ಅಥವಾ  ಇದಕ್ಕೆ ಪರ್ಯಾಯ ಮಾರ್ಗಗಳಿವೆಯೇ ?  ಈ ಬಗೆಯ ಚರ್ಚೆಗಳು ರಾಜಕೀಯ ಪಕ್ಷಗಳಲ್ಲಿ, ವಿಚಾರವಾದಿಗಳಲ್ಲಿ  ಮತ್ತು  ಮಾಧ್ಯಮಗಳಲ್ಲಿ ನಡೆಯುತ್ತಿದೆ. ಬಹಳ ಹಿಂದಿನಿಂದಲೂ ಈ ಬೇಡಿಕೆ ಇದೆ. ಈಗ ಮತ್ತೆ ಚರ್ಚೆಯಾಗುತ್ತಿದೆ.

Image