ವಿಧ: ಬ್ಲಾಗ್ ಬರಹ
October 16, 2006
(ಬೊಗಳೂರು ಓಟ್ ಬ್ಯಾಂಕ್ ಬ್ಯುರೋದಿಂದ)
ಬೊಗಳೂರು, ಅ.16- ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಭಾರತದ ಪರಮೋನ್ನತ ಅಧಿಕಾರ ಕೇಂದ್ರವಾದ ಸಂಸತ್ತಿನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಜೈಶ್ ಎ ಮಹಮ್ಮದ್ ಉಗ್ರಗಾಮಿ ಮತ್ತು ಭಯೋತ್ಪಾದಕರ ಗುರುವೇ ಆಗಿಬಿಟ್ಟಿರುವ ಮಹಮದ್ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ದೇಶದ ಸರ್ವೋನ್ನತ ನ್ಯಾಯಾಲಯವು ಆದೇಶ ನೀಡಿದ್ದರೂ, ಈ…
ವಿಧ: ಬ್ಲಾಗ್ ಬರಹ
October 15, 2006
ನಿಮಗೆಲ್ಲ ವಿನಯ್ ಸ್ವಾಮಿ ಪುರಾನ ಮಥ ನ ದೀಪಾವಲ್ಲ್ಹಿಯ ಶುಭಾಶಯ.
ವಿಧ: ಬ್ಲಾಗ್ ಬರಹ
October 15, 2006
ಧಾರವಾಡದ ಇಂಜಿನೀಯರಿಂಗ್ ಕಾಲೇಜಿನವರ 'ಸ್ಪಂದನ' ಎಂಬ ಹೊತ್ತಿಗೆಗೆ ಗುರು ಕುಲಕರ್ಣಿ ಎಂಬುವರು "ಲಿನಕ್ಸಿನಲ್ಲಿ ಕನ್ನಡದ ಕೆಲಸ" ಎಂಬ ಲೇಖನ ಬರೆದುಕೊಡಿ ಎಂದು ಕೇಳಿದ್ದರು. ಅದಕ್ಕಾಗಿ ಬರೆದ ಲೇಖನ ಇದು. ಸಂಪದದ ಓದುಗರಲ್ಲೂ ಇದರ ಬಗ್ಗೆ ಕುತೂಹಲ ಹಾಗೂ ಆಸಕ್ತಿಯಿಟ್ಟುಕೊಂಡಿರುವ ಹಲವರು ಇದ್ದಾರೆಂದು ತಿಳಿದು ಇಲ್ಲಿ ಹಾಕುತ್ತಿದ್ದೇನೆ.
(ಬರೆದಾದ ಮೇಲೆ ಮತ್ತೊಮ್ಮೆ ಲೇಖನ ಓದಿದಾಗ ನಾನಂದುಕೊಂಡಷ್ಟು ಚೆನ್ನಾಗಿ ಬಂದಿಲ್ಲ ಎನಿಸಿತು. ಆದರೆ ಅವಸರದಲ್ಲಿ ಬರೆದ ಲೇಖನದ ಮಟ್ಟಿಗೆ ತೆಗೆದುಹಾಕುವಂತಿಲ್ಲ…
ವಿಧ: Basic page
October 15, 2006
ರೇಖಾ ಜಗತ್ತಿನವರು:
"ನೇವ ಹೋಟೆಲಿನಲ್ಲಿ ಇಳಿದುಕೊ೦ಡಿದ್ದೀರ? ನಿಮಗೇನು ತಿಕ್ಕಲೆ? ಅಷ್ಟೊ೦ದು ರೊಕ್ಕವಿದೆಯೇ ಭಾರತೀಯ ಕಲಾವಿದರ ಬಳಿ! ಸಾಧ್ಯವಿಲ್ಲ. ನೀವು ಕಲಾವಿದರು. ಇದರಲ್ಲೇನೋ ಬೂರ್ಜ್ವಾ ಹುನ್ನಾರವಿದೆ. ನಮ್ಮ ಸ್ಟುಡಿಯೋಕ್ಕೆ ಬನ್ನಿ. ಒ೦ದು ಫ್ಯಾಕ್ಟರಿಯಷ್ಟು ದೊಡ್ಡದಾಗಿದೆ. ಒ೦ದು ತಿ೦ಗಳಕಾಲ ಉಳಿದುಕೊಳ್ಳಿ. ಬಿಟ್ಟಿಯಾಗಿ. ಬೇಕಾದರೆ ಆ ಫ್ಯಾಕ್ಟರಿಯನ್ನೇ ಕೊ೦ಡುಕೊಳ್ಳಿ" ಎ೦ದ ರಷ್ಯನ್ ಕೆ.ಟಿ.ಶಿವಪ್ರಸಾದ್-ಲೈಕ್ ಕಲಾವಿದ.
"ಬಿಟ್ಟಿಯಾಗಿ ಕೊಳ್ಳಬಹುದೆ?"
"ಖ೦ಡಿತ!"
ಅವರುಗಳ ಕಾರ್ಖಾನೆ-…
ವಿಧ: ಬ್ಲಾಗ್ ಬರಹ
October 15, 2006
ಪ್ರಿಯ ಮಿತ್ರರೆ,
ನನಗೆ ಸಂಪದ ಗೊತ್ತಾದದ್ದೇ ಇವತ್ತು, ಇಲ್ಲದಿದ್ದರೆ ಇದರಲ್ಲೇ ನಾನು ಬ್ಲಾಗಿಸುತ್ತಿದ್ದೆ. ನಾನೀಗ ಬ್ಲಾಗಿಸುತ್ತಿರುವುದು www.kannada-nudi.blogspot.com ನಲ್ಲಿ. ನಾನು ಹೊಸದಾಗಿ ಬ್ಲಾಗಿಸಿದಂತೆಲ್ಲ, ಈ ಬ್ಲಾಗಿನಲ್ಲಿ ಅದಕ್ಕೆ link ಕೊಡುತ್ತೇನೆ. ನಿಮ್ಮಾ feedback ನನಗೆ ತುಂಬ ಮುಖ್ಯ, please...
ಕೇಶವ
ವಿಧ: Basic page
October 14, 2006
ಬಾಯಿ ಬಿಡುವ ಊರೆ೦ಬ ಮನೆ:
ಪೀಟರ್ಸ್ಬರ್ಗ್ ಒ೦ದು ಸುತ್ತು ಹಾಕುವ.
ಸುತ್ತು ಹಾಕುವ ಅ೦ದರೆ ದಿನದ ಕೊನೆಯಲ್ಲಿ ಸುಸ್ತಾಗುವ ಎ೦ದೂ ಅರ್ಥ. ಅಥವ ಸುಸ್ತಾದಾಗ ದಿನವನ್ನು ಮುಗಿಸುವ ಎ೦ದಾಗಬಹುದು. ಬಿಟ್ಟಿ ಮ್ಯಾಪನ್ನು ಒ೦ದೆರೆಡು ಡಾಲರ್ ಕೊಟ್ಟು ಕೊ೦ಡು, ಕೊ೦ಡೆವು. ಫಿನ್ಲೆ೦ಡಿನಲ್ಲಿ ಬೆಲೆಬಾಳುವುದನ್ನೂ ಬಿಟ್ಟಿಕೊಟ್ಟುಬಿಡುತ್ತಾರೆ. ಫಿನ್ಲೆ೦ಡ್ ಶ್ರೀಮ೦ತ ದೇಶ ಅನ್ನುವುದು ಎರಡನೇ ಕಾರಣ. ಅಲ್ಲಿನ ಜನರೂ ಉದಾರಿಗಳು, ಅಲ್ಲಿ 'ಉ'ಳಿದುಕೊಳ್ಳಲು ಹಲವು 'ದಾರಿ'ಗಳು! ಇದು ಮೊದಲ ಕಾರಣ. ಪೀಟರ್ಸ್…
ವಿಧ: ಬ್ಲಾಗ್ ಬರಹ
October 14, 2006
ನಾವೆಲ್ಲ ಹೆದರಿ ಹೋಗಿದ್ದೆವು.ಕೆಲವು ಅಧಿಕಾರಿಗಳಿರುತ್ತಾರೆ.ಅವರು ಯಾವ ಇಲಾಖೆಯಲ್ಲಿದ್ದರೂ ಆ ಇಲಾಖೆಗೆ ಒಂದು ಗೌರವ ಒಂದು ಘನತೆ ತಂದು ಕೊಡುತ್ತಾರೆ.ಉದಾಹರಣೆಗೆ ಚುನಾವಣಾ ಆಯೋಗದ ಟಿ.ಎನ್.ಶೇಷನ್,ಕೊಂಕಣ ರೈಲ್ವೆ,ದೆಹಲಿ ಮೆಟ್ರೋ ಖ್ಯಾತಿಯ ಶ್ರಿದರನ್,ಪೋಲಿಸ್ ಇಲಾಖೆಯ ಕಿರಣ್ ಬೇಡಿ,ದಕ್ಶಿಣ ಕನ್ನಡ ಜಿಲ್ಲೆ ಯಲ್ಲಿ ಮತ್ತು ಹಲವಾರು ಕಡೆ ಜಿಲ್ಲಾಧಿಕಾರಿಯಾಗಿದ್ದ ಮತ್ತು ಪ್ರಸ್ತುತ ವಿಧ್ಯುತ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಭರತ್ಲಾಲ್ ಮೀನ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ ಮೊದಲಾದವರು.…
ವಿಧ: ಬ್ಲಾಗ್ ಬರಹ
October 13, 2006
ಇವತ್ತು ಆಫೀಸಿಗೆ ಬರುವಾಗ ನನ್ನ ಮುಂದಿದ್ದ ಆಟೋ ಹಿಂಬದಿಯಲ್ಲಿ ಒಂದು ಸ್ವಾರಸ್ಯಕರವಾದ ಬರಹ ನೋಡಿದೆ.
"ಪ್ರೇಯಸಿಯ ಮುಖವನ್ನೆ ಪುಸ್ತಕ ಮಾಡಿ
ಕೊಂಡವನಿಗೆ ಹುಚ್ಚಾಸ್ಪತ್ರೆಯೇ ಗ್ರಂಥಾಲಯ."
ಪಾಪ ಆಟೋ ಡ್ರೈವರ್ ವಿಫಲ ಪ್ರೇಮಿಯಾಗಿರ ಬಹುದು :)
ವಿಧ: ಬ್ಲಾಗ್ ಬರಹ
October 12, 2006
ಬೊಗಳೂರು, ಅ.12- ದೇಶ ವಿದೇಶಗಳಲ್ಲಿ ಮಹಿಳೆಯರು ಅದರಲ್ಲೂ ಹೆಚ್ಚು ತೂಕದ ಮಹಿಳೆಯರೇ ನಾಪತ್ತೆಯಾಗುತ್ತಿರುವ ಪ್ರಕರಣ ಬೆಚ್ಚಿ ಬೀಳಿಸುತ್ತಿದ್ದು, ಇದರ ಕುರಿತು ತನಿಖೆ ನಡೆಸುವಂತೆ ಮಾನ್ಯ ರಾಷ್ಟ್ರಪತ್ನಿಗಳ ಆದೇಶ ಪಡೆದ ಬೊಗಳೆ ರಗಳೆ ಬ್ಯುರೋ ಬಂದು ಬಿದ್ದದ್ದು ನ್ಯೂರೀ ಎಂಬ ಪುಟ್ಟ ಪಟ್ಟಣಕ್ಕೆ.
ಅದು ಹೇಗೋ ರೀ... ರೀ... ಎಂಬ ಧ್ವನಿ ನ್ಯೂರೀ ಎಂದು ಕೇಳಿಸಿಕೊಂಡ ಪರಿಣಾಮವಾಗಿ ತಕ್ಷಣ ಗೂಗಲ್ ಸರ್ಚ್ ಎಂಜಿನ್ನಲ್ಲಿ ಹುಡುಕಿದಾಗ ಈ ಪಟ್ಟಣ ಪತ್ತೆಯಾಗಿತ್ತು. ಅಲ್ಲಿಗೆ ಹೋದಾಗ ಮನೆ ಮನೆಗಳಲ್ಲಿ…
ವಿಧ: Basic page
October 12, 2006
ರೋರಿಕ್ಕೋ ರೋರಿಕ್ಕು:
ರೋರಿಕ್ ಸೈ೦ಟ್ ಪೀಟರ್ಸಬರ್ಗಿನವರು. ಅಪ್ಪ-ರೋರಿಕ್ ಮತ್ತು ಮಗ-ರೋರಿಕ್ ಇಬ್ಬರೂ ಅಲ್ಲಿನವರೆ. ಆದರೆ ಅವರನ್ನು ಅಲ್ಲಿ ಯಾರೂ ಸ್ಮರಿಸರು, ಸ್ಮರಿಸಲು ಅವಶ್ಯಕವಿರುವ ಸ್ಮೃತಿಯೂ ಅವರಿಗಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆ ಹೂ ಹೇಗೆ ಸಾಧ್ಯ? ನಾನು ಹೇಳುತ್ತಿರುವುದು ರೇಡಿಯೋ ಎಫ್.ಎ೦ 'ಹಿಟ್ಟ್ಮೇಲೆ ಹಿಟ್ಮೇಲೆ ಹಿಟ್'ಅನ್ನುತ್ತದಲ್ಲ ಆ ಹಿಟ್ಟಲ್ಲ. ಅದು 'ಹಿಟ್ಮೇಲೆ ಅವ್ರೇಕಾಳಿ'ನ ವಿಷಯ!
ಕಪೋಲಕಲ್ಪಿತ ಕಥೆಯೊ೦ದನ್ನು ಆಧರಿಸಿ ಹೇಳುವುದಾದರೆ ತ್ಸಾರ್ (Tsar-…