ಪುಸ್ತಕ ಪರಿಚಯ
ಲೇಖಕರು: Ashwin Rao K P
July 04, 2025

ಜಗತ್ತಿನ ಅತ್ಯಂತ ಪ್ರಾಚೀನ ಕತೆಯಾದ 'ಗಿಲ್ಗಮೆಶ್ ಮಹಾಗಾಥೆ' ಹೊಸ ಗದ್ಯರೂಪದ ಅನುವಾದ ಪ್ರಕಾರದಲ್ಲಿ ಪ್ರಕಟವಾಗಿದೆ . ಮೆಸೊಪೊಟೇಮಿಯಾದ ಈ ಮಹಾಗಾಥೆ ಎಲ್ಲ ಕಾಲ, ದೇಶ, ಭಾಷೆಗಳನ್ನು ಮೀರಿದ ವಿಚಾರಗಳಾದ ಗೆಳೆತನ, ಹುಟ್ಟು ಸಾವಿನ ನಡುವಿನ ಬದುಕಿನ ಅರ್ಥ ಅರಸುವ ಹಂಬಲ, ಸಾವಿನ ಅಂಜಿಕೆ ಹಾಗೂ ಸಾವನ್ನು ಗೆಲ್ಲಬೇಕೆನ್ನುವ ನಿರಂತರ ಪ್ರಯತ್ನಗಳ ಸುಂದರ ಕಾವ್ಯಾತ್ಮಕ ನಿರೂಪಣೆಯಾಗಿದೆ. ಸಾವಿನ ಹೆದರಿಕೆ ಹಾಗೂ ಹೇಗಾದರೂ ಅದನ್ನು ಗೆಲ್ಲಬೇಕು, ಅಮರತ್ವ ಸಾಧಿಸಬೇಕೆಂದು ಹೊರಡುವ ಗಿಲ್ಗಮೆಶ್ನ ಚಡಪಡಿಕೆ…
ಲೇಖಕರು: Ashwin Rao K P
July 03, 2025

‘ಜೀವರತಿ’ ಎನ್ನುವ ಸುಮಾರು ೪೦೦ ಪುಟಗಳ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ ಜ ನಾ ತೇಜಶ್ರೀ. ಇವರು ತಾವು ಬರೆದ ಕಾದಂಬರಿಯ ಬಗ್ಗೆ, ಅದನ್ನು ಬರೆಯಲು ಸಿಕ್ಕ ಪ್ರೇರಣೆಯ ಬಗ್ಗೆ ತಮ್ಮ ಮಾಹಿತಿನಲ್ಲಿ ಬರೆದಿರುವುದು ಹೀಗೆ…
“ಇದೆಲ್ಲ ಎಲ್ಲಿಂದ ಶುರುವಾಯಿತು ಹೇಳುವುದು ಕಷ್ಟ. ಹಿಂತಿರುಗಿ ನೋಡಿದರೆ ಇದೊಂದು ಅನಂತಯಾನದ ಹಾಗೆ ಭಾಸವಾಗುತ್ತದೆ. ಹಳೆಯ ಕಸ ತೆಗೆಯುತ್ತಿದ್ದಾಗ ನನ್ನ ದಿನಚರಿಯೊಂದರಲ್ಲಿ ೧೯೯೬ನೇ ಇಸವಿಯಲ್ಲಿ ಬರೆದ ಮೂರು-ನಾಲ್ಕು ಪುಟಗಳ ಬರಹ ಸಿಕ್ಕಿತು. ಅದರಲ್ಲೇನೋ ಕತೆ ಇರುವಂತೆ…
ಲೇಖಕರು: addoor
July 02, 2025

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಪ್ರತಿಭಾವಂತ ಸಾಹಿತಿ ದೇವುಡು ನರಸಿಂಹ ಶಾಸ್ತ್ರಿ. ತಮ್ಮ ಮೂರು ಬೃಹತ್ ಕಾದಂಬರಿಗಳಾದ “ಮಹಾ ಬ್ರಾಹ್ಮಣ”, “ಮಹಾ ಕ್ಷತ್ರಿಯ” ಮತ್ತು “ಮಹಾ ದರ್ಶನ”ಗಳಿಂದ ಮೇರು ಸದೃಶ ಸಾಹಿತಿಗಳಾಗಿ ಕನ್ನಡದ ಓದುಗರಿಗೆ ಪರಿಚಿತರು.
ಬಹುಮುಖ ಪ್ರತಿಭೆಯ ದೇವುಡು ಅವರು ಮಕ್ಕಳ ಸಾಹಿತ್ಯಕ್ಕೆ ಕೂಡ ಸುಮಾರು 85 ವರುಷಗಳ ಹಿಂದಿನಿಂದಲೂ ಕೊಡುಗೆ ಇತ್ತವರು. ಅವರು ಬರೆದ 49 ಮಕ್ಕಳ ನೀತಿಕತೆಗಳು ಈ ಸಂಕಲನದಲ್ಲಿವೆ. ತೆನಾಲಿ ರಾಮಕೃಷ್ಣನ ವಿಚಾರವಾಗಿ ಜನಜನಿತವಾಗಿರುವ ಒಂದು…
ಲೇಖಕರು: Ashwin Rao K P
June 30, 2025

“ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು ಬೆಸೆಯುತ್ತದೆ. ಈ ಕಥನವು ಮುಂದಕ್ಕೆ ಚಲಿಸಿದಂತೆ, ಕಮರಿ ಹೋಗಿರುವ ಮಿಜೋರಾಮ್ನ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆಗಳು ಶೋಧಗೊಳ್ಳುತ್ತವೆ. ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಈ ನಾಡು ಅಸ್ಸಾಮಿನ ಭಾಗವಾಗಿತ್ತು; ಆಗ ಅಸ್ಸಾಮ್ ರೈಫಲ್ಸ್…
ಲೇಖಕರು: Ashwin Rao K P
June 27, 2025

“ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ.
ಖ್ಯಾತ ಲೇಖಕರು, ವಿಮರ್ಶಕರಾದ ಟಿ. ಎ. ಎನ್. ಖಂಡಿಗೆ ಪ್ರಕಾರ “ ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ…
ಲೇಖಕರು: Ashwin Rao K P
June 25, 2025

ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು…
“ಆಧುನಿಕ ಕನ್ನಡ ಸಾಹಿತ್ಯದ ಅರುಣೋದಯ ಕಾಲದಲ್ಲಿ ಹುಟ್ಟಿದ ರಮ್ಯ ದಾಂಪತ್ಯದ ತುಣುಕೊಂದು ಮುದ್ದಣ ಮನೋರಮೆಯರ ಸಲ್ಲಾಪದಲ್ಲಿ ಸಿಗುತ್ತದೆ. ಮುದ್ದಣ, ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿಯೆಂದೇ…