ಬೇಟೆಗಾರ ಮೃಗಾರಿಯ ಪರಿವರ್ತನೆ

ದೇವರ್ಷಿ ನಾರದರು ತ್ರಿಲೋಕ ಸಂಚಾರಿಗಳು. ಒಮ್ಮೆ ಅವರು ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗಕ್ಕೆ ಹೊರಟಿದ್ದರು. ಪರಿಶುದ್ದ ಭಕ್ತರಾದ ನಾರದರು ಕೃಷ್ಣನನ್ನು ಸ್ಮರಿಸುತ್ತಾ ಕಾಡಿನಲ್ಲಿ ಹೋಗುತ್ತಿರುವಾಗ ಬಾಣದಿಂದ ಗಾಯಗೊಂಡು ನರಳುತ್ತಾ ಬಿದ್ದಿದ್ದ ಜಿಂಕೆಯೊಂದನ್ನು ನೋಡಿದರು. ಮುಂದೆ ಹೋದಂತೆ ಹಲವಾರು ಪ್ರಾಣಿಗಳು ಬಾಣಗಳ ಏಟಿನಿಂದ ಅರೆ ಜೀವವಾಗಿ ಒದ್ದಾಡುತ್ತಿದ್ದುದನ್ನು ಕಂಡು ಮರುಗಿದರು. ಗಾಯಗೊಂಡಿದ್ದ ಪ್ರಾಣಿಗಳ ನೋವನ್ನು ತನ್ನ ನೋವೆಂದು ಪರಿಗಣಿಸಿದ ನಾರದ ಮುನಿಗಳು ಬಾಣದಿಂದ ಪ್ರಾಣಿಗಳನ್ನು ಘಾಸಿಗೊಳಿಸಿದವರು ಯಾರು ಎಂದು ಹುಡುಕತೊಡಗಿದರು. ಆಗ ನಾರದರಿಗೆ ಮರವೊಂದರ ಹಿಂದೆ ಅಡಗಿ ಕುಳಿತಿದ್ದ ಬೇಟೆಗಾರ ಕಾಣಿಸಿದನು.

Image

ಸಮಾಜ ಸೇವೆ ಎಂದರೇನು ?

ನಿಸ್ವಾರ್ಥವೇ ? ತ್ಯಾಗವೇ ? ಸ್ವಾರ್ಥದ ಮುಖವಾಡವೇ ? ವೃತ್ತಿಯೇ ? ಹವ್ಯಾಸವೇ ? ಕರ್ತವ್ಯವೇ ? ವ್ಯಾಪಾರ ವ್ಯವಹಾರವೇ ? ಅಧಿಕಾರ ಹಣ ಪ್ರಚಾರದ ಮೋಹವೇ ? ಪಲಾಯನ ಮಾರ್ಗವೇ ? ನಾಯಕತ್ವದ ಪ್ರದರ್ಶನವೇ ? ಕೆಲಸವಿಲ್ಲದವರ ಅನವಶ್ಯಕ ಓಡಾಟವೇ ? ಹೊಟ್ಟೆ ಪಾಡಿನ ದಾರಿಯೇ ? ಬುದ್ದಿಯ ತೋರ್ಪಡಿಕೆಯೇ ? ಮನಸ್ಸಿನ ಅಹಂನ ತಣಿಸುವಿಕೆಯೇ ? ಜೀವನದ ಸಾಧನೆಯೇ ? ಅನುಭವದ ವಿಸ್ತರಣೆಯೇ ? ಜ್ಞಾನದ ಹಂಚಿಕೆಯೇ ? ಅಧ್ಯಾತ್ಮಿಕ ಧಾರ್ಮಿಕ ಉದ್ದೇಶವೇ ? ಬದುಕಿನ ಸಾರ್ಥಕತೆಯೇ ? ನಿರ್ಭಾವುಕ ಮನಸ್ಥಿತಿಯೇ ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ.

Image

ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ

ಕೆಡು ಮತ್ತು ಪಡು ಧಾತುಗಳನ್ನು ಭಾವನಾಮವಾಗಿ ಪರಿವರ್ತನೆಯಾಗುವಾಗ ಮೊದಲಿನ ಸ್ವರಗಳು ದೀರ್ಘವಾಗುತ್ತವೆ. ಕೆಡು->ಕೇಡು=ಅವನತಿ. ಪಡು->ಪಾಡು=ಅನುಭವ

ಉದಾಹರಣೆಗೆ: ಬೇಱೆಯವರಿಗೆ ಕೇಡು ಮಾಡಬೇಡ. ನಿನಗೇನು ಕೇಡುಗಾಲ ಬಂತೇ?

ಅವನು ಪಟ್ಟ ಪಾಡು ದೇವರೇ ಬಲ್ಲ. 

ನಮೀಬಿಯಾದ ನಿಗೂಢ ವೃತ್ತಗಳು

ನಾವು ವಾಸಿಸುತ್ತಿರುವ ಭೂಮಿಯು ಒಂದು ಅದ್ಬುತವಾದ ಗ್ರಹ. ಈ ಗ್ರಹದಲ್ಲಿ ವಿಜ್ಞಾನದ ಊಹೆಗೂ ನಿಲುಕದ ಹಲವಾರು ಸಂಗತಿಗಳನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಈಗಾಗಲೇ ನಾನು ‘ಸಂಪದ'ದಲ್ಲಿ ಡೆವಿಲ್ಸ್ ಕೆಟಲ್, ಕಲಾಚಿಯ ನಿದ್ರಾನಗರ, ಮರದ ಮೇಲೆ ಒಂದು ಮರ ಬೆಳೆದ ಪ್ರಸಂಗ, ಹೆಸ್ಡಾಲೆನ್ ಲೈಟ್ಸ್ ಗಳು ಎಂಬ ಅಪರೂಪದ ಊಹೆಗೂ ನಿಲುಕದ ಕೆಲವು ಸಂಗತಿಗಳನ್ನು ಬರೆದಿರುವೆ. ಈ ಸಾಲಿಗೆ ಸೇರುವ ಇನ್ನೊಂದು ಸಂಗತಿಯೆಂದರೆ ನಮೀಬಿಯಾ ದೇಶದ ನಿಗೂಢ ವೃತ್ತಗಳು.

Image

ಸಿಹಿ ಗೋಧಿ ರೊಟ್ಟಿ

Image

ಮೊದಲಿಗೆ ಗೋಧಿಯನ್ನು ೧-೨ ಗಂಟೆ ನೆನೆಸಿ. ಹೆಚ್ಚು ಮೆದುವಾಗುವುದು ಬೇಡ. ನೆನೆದ ಮೇಲೆ ಅದಕ್ಕೆ ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿರಿ. ನಯವಾಗಿ ರುಬ್ಬ ಬಾರದು. ಗೋಧಿ ತುಂಡು ಕೈಗೆ ಸಿಗುವಂತಿರಬೇಕು. ರುಬ್ಬಿದ ಬಳಿಕ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಕಾಯಿತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಒಂದು ಕಾವಲಿಯನ್ನು ಬಿಸಿಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ. ರುಬ್ಬಿದ ಮಿಶ್ರಣವನ್ನು ಕೈಯಿಂದಲೇ ಕಾವಲಿಯ ಮೇಲೆ ತಟ್ಟಬೇಕು. ಕಾಯುವಾಗ ರೊಟ್ಟಿಯ ಮೇಲೆ ಸ್ವಲ್ಪ ತುಪ್ಪ ಹಾಕಿದರೆ ರುಚಿ ಮತ್ತು ಪರಿಮಳ ಚೆನ್ನಾಗಿರುತ್ತದೆ.

ಬೇಕಿರುವ ಸಾಮಗ್ರಿ

ಗೋಧಿ ಕಾಳು ೧ ಕಪ್, ಸಿಹಿಗೆ ಬೇಕಾದಷ್ಟು ಬೆಲ್ಲ, ಕಾಯಿ ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ

ಬಾಳಿಗೊಂದು ಚಿಂತನೆ (11) - ದೈವತ್ವ

ಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವುಗಳು. ಆದರೆ ಒಮ್ಮೊಮ್ಮೆ ಈ ಪ್ರಕೃತಿ ಇರುವುದೇ ನಮಗಾಗಿ ಎಂಬ ಭ್ರಮೆಯಿಂದ, ಅದರ ನಾಶಕ್ಕೆ ಹೆಜ್ಜೆಯಿಟ್ಟುಬಿಡುತ್ತೇವೆ. ಹೀಗೆ ಒಬ್ಬೊಬ್ಬರಾಗಿ ಅಧಿಕಾರ ಚಲಾಯಿಸಿ *ದೈವತ್ವ* ಹೋಗಿ ಇಂದು ವಿನಾಶದತ್ತ ಬಂದು ನಿಂತಿದೆ. ಗಾಳಿ ನಮ್ಮ ಉಸಿರು, ಉಸಿರೇ ದೇವರು, ಉಸಿರು ನಿಂತಾಗ ಏನಿದೆ, ಏನಾಗುತ್ತದೆ, ಎಲ್ಲವನ್ನೂ ಬಲ್ಲವರು ನಾವು.ಆದರು ಗೊತ್ತಿದ್ದು ಗೊತ್ತಿದ್ದೂ ಉಸಿರಿಗೆ ಸಂಚಕಾರ ತರುವ ಕೆಲಸಕ್ಕೆ ಕೈ ಹಾಕಿದ್ದೇವೆ. ನೀರು, ಆಕಾಶ, ಭೂಮಿ ಎಲ್ಲವೂ ನಮಗೆ ಬೇಕು, ಎಲ್ಲದರಲ್ಲಿಯೂ ಆ ಭಗವಂತನನ್ನು ಕಾಣುವವರು ನಾವು.

Image

ನಮ್ಮ ಹೆಮ್ಮೆಯ ಭಾರತ (23 - 24)

೨೩.ಪ್ರವಾಸಿಗಳ ಆಕರ್ಷಣೆಯ ತಾಣ ಭಾರತ
ವಿಶಾಲ ಭಾರತದ ಮನಮೋಹಕ ಪ್ರಾಕೃತಿಕ ತಾಣಗಳು ಮತ್ತು ವೈವಿಧ್ಯಮಯ ಪಾರಂಪರಿಕ ತಾಣಗಳು ವಿವಿಧ ದೇಶಗಳ ಲಕ್ಷಗಟ್ಟಲೆ ಪ್ರವಾಸಿಗಳನ್ನು ಪ್ರತಿ ವರುಷವೂ ಆಕರ್ಷಿಸುತ್ತವೆ.

ಹಿಮ ಆವರಿಸಿದ ಪರ್ವತಗಳು, ದೀರ್ಘ ಸಮುದ್ರ ತೀರಗಳು, ಹಿನ್ನೀರಿನ ಪ್ರದೇಶಗಳು, ಹಚ್ಚಹಸುರಿನ ಕಾಡುಗಳು, ನದಿದಡಗಳು, ಸರೋವರಗಳು - ಇವೆಲ್ಲ ಪ್ರಾಕೃತಿಕ ತಾಣಗಳು ಪ್ರವಾಸಿಗಳನ್ನು ದಂಗುಬಡಿಸುತ್ತವೆ. ವನ್ಯಜೀವಿ ರಕ್ಷಣಾ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಚಾರಿತ್ರಿಕ ಸ್ಥಳಗಳು, ಯುನೆಸ್ಕೋ ಪಾರಂಪರಿಕ ತಾಣಗಳು - ಇವೆಲ್ಲವೂ ಭಾರತದ ಆಕರ್ಷಣೆಯನ್ನು ಹಲವು ಪಟ್ಟು ಹೆಚ್ಚಿಸಿವೆ.

Image

ನೀವು ಬರೆದ ಮೊದಲ ಬರಹದ ನೆನಪಿದೆಯೇ?

ಪ್ರತಿಯೊಬ್ಬರ ಜೀವನದಲ್ಲಿ 'ಮೊದಲು' ಎಂಬ ಪದ ಆಗಾಗ ಬಂದೇ ಬರುತ್ತದೆ. ಮೊದಲ ಮಾತು, ಮೊದಲ ಅಕ್ಷರ, ಮೊದಲ ಹಲ್ಲು, ಮೊದಲ ಶಾಲೆ, ಮೊದಲ ಟೀಚರ್, ಮೊದಲ ಪ್ರೇಮ, ಮೊದಲ ಕೆಲಸ, ಮೊದಲ ಮಗು.. ಹೀಗೆ ಪಟ್ಟಿ ಎಂದೂ ಮುಗಿಯುದೇ ಇಲ್ಲ. ಕಥೆ, ಕವನ ಬರೆಯಲು ಅಥವಾ ಲೇಖಕನಾಗಲು ನೀವು ಚತುರ ಬರಹಗಾರರೇ ಆಗಬೇಕಿಲ್ಲ. ಹಲವರು ಮಂದಿ ಪ್ರತೀ ದಿನ ತಮ್ಮ ಚಟುವಟಿಕೆಗಳ ಬಗ್ಗೆ ಡೈರಿ ಬರೆಯುತ್ತಾರೆ. ಅದರಲ್ಲಿನ ಕೆಲವೊಂದು ಅಂಶಗಳು ನಿಜಕ್ಕೂ ಚೆನ್ನಾಗಿರುತ್ತದೆ. ಸತ್ಯವೆಂದರೆ ಅವರೆಲ್ಲಾ ಬರಹವನ್ನು ತಮ್ಮ ಉದ್ಯೋಗ ಅಥವಾ ಹವ್ಯಾಸವಾಗಿ ತೆಗೆದುಕೊಂಡಿಲ್ಲ ಅಷ್ಟೇ. ಅವರಿಗೆಲ್ಲಾ ಅವರದ್ದೇ ಆದ ಬೇರೆ ಬೇರೆ ಕೆಲಸ ಕಾರ್ಯಗಳು ಇರುತ್ತವೆ. ಆದರೂ ಡೈರಿ ಬರೆಯುವುದನ್ನು ತಪ್ಪಿಸಿಕೊಳ್ಳುವುದಿಲ್ಲ.

Image