ಮಲೆನಾಡಿನಲ್ಲಿ ಸುತ್ತಾಡಿದಾಗ
*ಆರ್. ರಂಗಸ್ವಾಮಿಯವರ "ಮಲೆನಾಡಿನಲ್ಲಿ ಸುತ್ತಾಡಿದಾಗ"*
- Read more about ಮಲೆನಾಡಿನಲ್ಲಿ ಸುತ್ತಾಡಿದಾಗ
- Log in or register to post comments
*ಆರ್. ರಂಗಸ್ವಾಮಿಯವರ "ಮಲೆನಾಡಿನಲ್ಲಿ ಸುತ್ತಾಡಿದಾಗ"*
ಮರಳುಗಾಡಿನಲ್ಲಿ ತನ್ನ ಗೆಳೆಯರ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ ಮರಳು. ದಾರಿ ಕಾಣದಾದ ಅಲೆದು ಅಲೆದು ಸುಸ್ತಾದ. ಆತನ ಬಳಿ ಇದ್ದ ಕ್ಯಾನ್ ಗಳಲ್ಲಿ ನೀರೂ ಖಾಲಿ ಆಗಿತ್ತು. ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದ. ಕೆಳಗೆ ಮರಳು ಕಾದ ಕೆಂಡವಾಗಿತ್ತು ನಡೆದು ನಡೆದು ಮೈಯಿಂದ ಬೆವರು ಇಳಿದು ಆ ವ್ಯಕ್ತಿ ನಿತ್ರಾಣನಾದ. ಇನ್ನು ತನಗೆ ನೀರು ಸಿಗದಿದ್ದರೆ ತನ್ನ ಜೀವ ಹೋಗುವುದು ಖಚಿತ ಎಂಬುದನ್ನು ಮನಗಂಡ.
ಈ ಭೂಮಿಯ ಬೆಳಕನ್ನು ಕಂಡ ಮೇಲೆ ಪುನಃ ಭೂಮಿಗೆ ಸೇರುವಲ್ಲಿಯವರೆಗೆ ನಾವು *ಬದುಕಿನ ಹಾದಿಯಲಿ*ನಾನಾ ರೀತಿಯ ಪರೀಕ್ಷೆಗಳಿಗೆ, ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗಿ ಬರುತ್ತದೆ. ಆ ಪರೀಕ್ಷೆಗಳಲ್ಲಿ ಉತ್ತೀರ್ಣವೋ, ಅನುತ್ತೀರ್ಣವೋ ಆಗಬಹುದು. ಅದು ನಾವು ಮಾಡುವ ಕೆಲಸಗಳು, ವ್ಯವಹಾರಗಳನ್ನು ಹೊಂದಿಕೊಂಡು ನಿರ್ಣಯಿಸಲ್ಪಡುತ್ತದೆ.
*ಉ-ದರ!*
*ದಿನದಿಂದ*
*ದಿನಕ್ಕೆ*
*ಏರುತ್ತಲೇ ಇದೆ...*
*ಈರುಳ್ಳಿ ದರ..!*
ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ ಮಾನವನ ಆಶೆಗೆ ಮಿತಿಯೇ ಇರುವುದಿಲ್ಲ. ನಾನೀಗ ಹೇಳ ಹೊರಟಿರುವುದು ಟೀ ಮಾರುತ್ತಾ ಅದರಲ್ಲಿ ಉಳಿಸಿದ ಹಣದಿಂದ ವಿದೇಶ ಪ್ರವಾಸ ಮಾಡುವ ದಂಪತಿಯ ಬಗ್ಗೆ.
ಸಂಜೆಯ ಹೊತ್ತು. ಕೆರೆಯ ದಡದಲ್ಲಿ ಕುಳಿತಿದ್ದ ಗುರು-ಶಿಷ್ಯರ ಮಾತುಕತೆ ನಡೆದಿತ್ತು.
ಅಲ್ಲೇ ದೂರದಲ್ಲಿ ಬಹಳ ಹೊತ್ತಿನಿಂದ ಹಕ್ಕಿಯೊಂದು ನೀರನ್ನು ನೋಡುತ್ತಾ ಕುಳಿತಿತ್ತು. ಅದನ್ನು ಗಮನಿಸಿದ ಶಿಷ್ಯನೊಬ್ಬನ ಉದ್ಗಾರ, “ನೋಡಿ, ಅಲ್ಲೊಂದು ಹಕ್ಕಿ, ನಾವು ಇಲ್ಲಿಗೆ ಬಂದಾಗಿನಿಂದ ಸುಮ್ಮನೆ ಕುಳಿತಿದೆ!” ಮತ್ತೊಬ್ಬ ಶಿಷ್ಯ ತಕ್ಷಣ ಪ್ರತಿಕ್ರಿಯಿಸಿದ, “ಹಾಗಲ್ಲ, ಆ ಹಕ್ಕಿ ಧ್ಯಾನ ಮಾಡುತ್ತಿದೆ.”
ಈ ಸಂವಾದ ಕೇಳಿಸಿಕೊಂಡ ಗುರು ಎತ್ತಿದ ಪ್ರಶ್ನೆ: “ಧ್ಯಾನ, ಏನು ಅದರರ್ಥ?” ಎಲ್ಲ ಶಿಷ್ಯರ ಒಕ್ಕೊರಲ ಉತ್ತರ, “ನಮಗೆ ಚೆನ್ನಾಗಿ ಗೊತ್ತಿದೆ.”
ಅಯೋಧ್ಯಾ ಪ್ರಕಾಶನದ ೧೪ ನೇ ಪುಸ್ತಕವಾಗಿ ಹೊರಬಂದಿರುವ ‘ಗಣಿತಜ್ಞರ ರಸಪ್ರಸಂಗಗಳು' ಬರೆದಿರುವವರು ಸ್ವತಃ ಗಣಿತ ಬೋಧಕರಾದ ರೋಹಿತ್ ಚಕ್ರತೀರ್ಥ ಇವರು. ಗಣಿತ ಬಹುತೇಕ ಮಂದಿಗೆ ಕಬ್ಬಿಣದ ಕಡಲೆಯೇ. ಪಿಯುಸಿಯಿಂದ ಪದವಿಯವರೆಗೆ ನಾನೂ ಗಣಿತವನ್ನೇ ಒಂದು ವಿಷಯವಾಗಿ ಕಲಿತರೂ ನನಗಿನ್ನೂ ಗಣಿತ ಅರ್ಥವೇ ಆಗಿಲ್ಲ. ಇದು ನನ್ನ ವೈಯಕ್ತಿಕ ಸಮಸ್ಯೆ. ಆದರೆ ಗಣಿತದಲ್ಲಿ ಬರೆದದ್ದು ಸರಿಯಾದರೆ ನೂರಕ್ಕೆ ನೂರು ಅಂಕ ಗ್ಯಾರಂಟಿ ಎಂದು ಆಗ ಪ್ರಚಲಿತವಾಗಿದ್ದ ಮಾತು. (ಆದರೆ ಈಗ ಭಾಷಾ ವಿಷಯದಲ್ಲೂ ಶೇಕಡಾ ನೂರು ಅಂಕಗಳನ್ನು ಕೊಡುತ್ತಾರೆ). ಸುಮಾರು ೫೦ಕ್ಕೂ ಮಿಕ್ಕಿದ ಖ್ಯಾತ ಗಣಿತಜ್ಞರ ರಸನಿಮಿಷಗಳನ್ನು ಕಟ್ಟಿಕೊಡುವ ಕೆಲಸ ರೋಹಿತ್ ಮಾಡಿದ್ದಾರೆ.
ಕನ್ನಡ ನಾಡಿನ,ಚಿನ್ನದ ಬೀಡಿನ
ರನ್ನದ ರಾಮನು ಗಂಡುಗಲಿ||
ಕನ್ನವ ಹಾಕುವ,ನನ್ನಿಯ ನಾಡುವ
ಕುನ್ನಿಗೆ ಸಿಂಹ ಸ್ವಪ್ನದಲಿ ||೧||
ಪರನಾರಿಯಣ್ಣ,ಶಿರಕಾಯೊವಣ್ಣ
ಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು....
*ದೋಷ*ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಸಂದರ್ಭಕ್ಕೆ ಸರಿಯಾಗಿ ನಾವು ಅದನ್ನು ಬಳಸಲು, ಅರ್ಥ ಮಾಡಿಕೊಳ್ಳಲು ಕಲಿಯುವುದೇ ಜಾಣತನ. 'ಆ ಹುಡುಗ ಅಥವಾ ಹುಡುಗಿಯ ಜಾತಕದಲ್ಲಿ ದೋಷವಿದೆ' ಹೇಳುವುದು ಕೇಳಿದ್ದೇವೆ. ರಾಹು, ಕೇತು, ಕುಜ ದೋಷಗಳು ಅಥವಾ ಇನ್ನಾವುದೋ. ನಂತರ ಅದಕ್ಕೆ ಪರಿಹಾರ ಮಾಡುವುದರಲ್ಲಿಯೇ ನಮ್ಮ ಅರ್ಧ ಆಯುಷ್ಯ ಕಳೆದು ಹೋಗುವುದು ಅರಿವಿಗೆ ಬರುವುದೇ ಇಲ್ಲ.