ದುರಾಶೆಯ ಟೆಡ್ದಿ ಕರಡಿ

ಕಂದು ಟೆಡ್ಡಿ ಕರಡಿಗೆ ಈ ಜಗತ್ತಿನಲ್ಲಿ ಅತ್ಯಂತ ಇಷ್ಟದ ತಿನಿಸು ಎಂದರೆ ಬನ್. ಅದರೆ ಮೇಲೆ ಸಕ್ಕರೆಯ ಪಾಕ ಇದ್ದರಂತೂ ಕಂದು ಟೆಡ್ದಿ ಕರಡಿ ಅದನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿತ್ತು. ಅಂತಹ ಬನ್ ಎಷ್ಟು ಕೊಟ್ಟರೂ ಅದು ದುರಾಶೆಯಿಂದ ತಿನ್ನುತ್ತಿತ್ತು.

ಪುಟ್ಟಿ ಗೊಂಬೆ ಬಹಳ ರುಚಿಯಾದ ಬನ್ನುಗಳನ್ನು ಪುಟ್ಟ ಆಟಿಕೆ ಕುಕ್ಕರಿನಲ್ಲಿ ಬೇಯಿಸುತ್ತಿತ್ತು. ದೊಡ್ಡ ಬನ್, ಸಣ್ಣ ಬನ್, ಕ್ರೀಮ್ ಬನ್, ಹಾಟ್-ಕ್ರಾಸ್ ಬನ್ - ಇಂತಹ ಹಲವಾರು ವಿಧದ ಬನ್ನುಗಳನ್ನು ಅದು ಬೇಯಿಸುತ್ತಿತ್ತು. ಅವನ್ನು ಆಟದ ಕೋಣೆಯ ಎಲ್ಲ ಗೊಂಬೆಗಳಿಗೆ ಅದು ಹಂಚುತ್ತಿತ್ತು. ಉಳಿದ ಎಲ್ಲರಿಗಿಂತ ಜಾಸ್ತಿ ಇವನ್ನು ಇಷ್ಟ ಪಡುತ್ತಿದ್ದದ್ದು ಕಂದು ಟೆಡ್ಡಿ ಕರಡಿ.

Image

ಶತಮಾನದ ಸಂಭ್ರಮದಲ್ಲಿ ಕಾಶಿ ವಿದ್ಯಾಪೀಠ

ಮಹಾತ್ಮ ಗಾಂಧೀಜಿಯವರು ಬ್ರಿಟೀಷರ ವಿದೇಶೀ ವಸ್ತುಗಳಿಗೆ ಸಡ್ಡು ಹೊಡೆದು, ಸ್ವದೇಶೀ ವಸ್ತುಗಳನ್ನೇ ಉಪಯೋಗಿಸಿ ಎಂದು ಕರೆಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಈ ಹೊಸ ರೀತಿಯ ಹೋರಾಟಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ಪ್ರಾರಂಭವಾಗಿತ್ತು. ಗಾಂಧೀಜಿಯವರ ಒಂದು ಕರೆಗೆ ಜನರು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದರು. ಬ್ರಿಟೀಷರು ತಯಾರಿಸುತ್ತಿದ್ದ ವಸ್ತುಗಳ ಜೊತೆಗೆ ಅವರು ನಡೆಸುತ್ತಿದ್ದ ಶೈಕ್ಷಣಿಕ ಕೇಂದ್ರಗಳನ್ನೂ ಬಹಿಷ್ಕರಿಸಬೇಕೆಂದು ಹಲವಾರು ಮಂದಿ ಗಾಂಧೀಜಿಯವರಿಗೆ ಸಲಹೆ ನೀಡಿದರು. ಈ ಸಲಹೆ ಅವರಿಗೆ ಬಹಳ ಪ್ರಿಯವೆನಿಸಿತು. 

Image

ಕನ್ನಡಿಗರ ಹಾಡು

*ಹೊಂಗೆಯ ನಾಡು, ಹುಣಸೆಯ ಬೀಡು, ನಮ್ಮ ಕನ್ನಡ ನಾಡು*.

ಕನ್ನಡದ ಮಣ್ಣಿನಲಿ ಅದೇನೋ ಕಂಪು, ತಂಪು, ಕನ್ನಡಿಗರ ಮನದಲ್ಲಿ ನೆಮ್ಮದಿಯ ನೆಲೆ-ಸೆಲೆ, ಸಂಸ್ಕೃತಿಗೆ ಹೆಸರೇ ನಮ್ಮ ಕನ್ನಡ, ಕನ್ನಡದ ನೆಲದಿ ಹರಿಯುವ ಜಲದಿ ಕನ್ನಡ, ವನಸ್ಪತಿಯ ತೌರೂರು ನಮ್ಮ ಕನ್ನಡ ಎಂಬುದಾಗಿ ಕನ್ನಡದ ಮೇಲಿನ, ಭಾಷೆಯ ಮೇಲಿನ ಅಭಿಮಾನವನ್ನು ಕವನಗಳ ಮೂಲಕ ಬರೆದು, ಹಂಚಿ, ಓದುಗರಿಗೆ ನೀಡಿದ ಬಹಳಷ್ಟು ಹಿರಿಯ ಕವಿಗಳಿದ್ದಾರೆ, ಆಗಿ ಹೋದವರಿದ್ದಾರೆ.

Image

ಕರಣ ಕಾರಣ -೭

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಡಾ. ರಾಜಶೇಖರ ಜಮದಂಡಿ
ಪ್ರಕಾಶಕರು
ಅಲ್ಲಮಪ್ರಭು ಪೀಠ, ಕಾಂತಾವರ
ಪುಸ್ತಕದ ಬೆಲೆ
ರೂ.200.00, ಮುದ್ರಣ: 2020

ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೭ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೧೮ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೦ ಲೇಖನಗಳು ಈ ಪುಸ್ತಕದಲ್ಲಿವೆ. ತಮ್ಮ ಸಂಪಾದಕೀಯದಲ್ಲಿ ಜಮದಂಡಿಯವರು ಅಲ್ಲಮಪ್ರಭುಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಾರೆ. ಅವರು ಬರೆಯುತ್ತಾರೆ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ ಕುಲೋದ್ಧಾರದ ಮಹಾಚಿಂತಕ. ಭಾವುಕವಲ್ಲದ ವೈಚಾರಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಲೋಕವನ್ನೇ ಬೆರಗುಗೊಳಿಸಿದ ಅಪ್ರತಿಮ ಅನುಭಾವಿ.

ನಮ್ಮ ಹೆಮ್ಮೆಯ ಕನ್ನಡ ನಾಡು

ನಾವೆಲ್ಲರು ಕನ್ನಡಾಂಬೆಯ ಮಕ್ಕಳು. ತಾಯಿ ಭುವನೇಶ್ವರಿಯ ಹೆಮ್ಮೆಯ ಕುಡಿಗಳು, *ಕನ್ನಡ* ಎಂಬ ಪದದಲ್ಲೇ ಮೈ ರೋಮಾಂಚನವಾಗುವುದಲ್ಲವೇ? ನವೆಂಬರ ಮಾಸ ಬಂತೆಂದರೆ ಮಾತ್ರ ಕನ್ನಡದ ನೆನಪಾಗುವುದು ನಮಗೆ. ಇದು ಸಲ್ಲದು. ನಾವು ಹುಟ್ಟಿ ಬೆಳೆದ ಈ ಮಣ್ಣಿನ ಋಣವ ತೀರಿಸಲು ನಮ್ಮಿಂದಾಗದು. ಆದರೆ  *ಕನ್ನಡ* ಭಾಷೆಯ ಬಳಕೆ, ವ್ಯವಹಾರದಲ್ಲಿಯಾದರೂ ನಾಡು ನುಡಿಯ ಬಳಸಿ, ಹೊತ್ತ ತಾಯಿಯ ಕಿಂಚಿತ್ ಋಣವ ತೀರಿಸೋಣ.

Image

ಪೈಶಾಚದ 'ಗುಣಾಢ್ಯ' ಮತ್ತು ಕನ್ನಡದ ಗಂಗದೊರೆ 'ದುರ್ವಿನೀತ'

ಒಂದು ದಿನ ಕಪಾಲಿ(ಶಿವ)ಯು ತನ್ನ ಪತ್ನಿ ಪಾರ್ವತಿಯೊಂದಿಗೆ ವಿನೋದದಿಂದ ವಿಹರಿಸುತ್ತಿರುವಾಗ ಪಾರ್ವತಿಯು ಶಿವನಲ್ಲಿ ಕೇಳಲು ಸೊಗಸಾದ ರಂಜನೀಯವಾದ ಒಂದು ಕಥೆಯನ್ನು ಹೇಳು ಎಂದು ಕೇಳುತ್ತಾಳೆ. ಶಿವನು ಅದಕ್ಕೊಪ್ಪಿ ಅತ್ಯಂತ ಗುಟ್ಟಾದ "ಸಪ್ತ ವಿದ್ಯಾಧರಚರಿತೆ" ಎನ್ನುವ ಕಥೆಯನ್ನು ಹೇಳುತ್ತಾನೆ. ಶಿವನ ಗಣದಲ್ಲೊಬ್ಬನಾದ ಪುಷ್ಪದಂತ ಎನ್ನುವವನು ಈ ಕಥೆಯನ್ನು ಮರೆಯಲ್ಲಿ ನಿಂತು ಕೇಳಿಕೊಳ್ಳುತ್ತಾನೆ. ಕಥೆಯನ್ನು ತನ್ನ ಮಡದಿ ಜಯೆ ಎನ್ನುವವಳಿಗೆ ಹೇಳುತ್ತಾನೆ. ಜಯೆಯಲ್ಲಿ ಇದು ಬಹಲ ರಹಸ್ಯವಾದ ಕಥೆ ಯಾರಿಗೂ ಹೇಳಬೇಡ ಎಂದಿರುತ್ತಾನೆ. ಆದರೆ  ಜಯೆ ಎನ್ನುವವಳು ಇದು ತುಂಬಾ ರಹಸ್ಯವಾದ ಕಥೆ ಇದನ್ನು ಯಾರಿಗೂ ಹೇಳಕೂಡದು ಎಂದು ನೇರವಾಗಿ ಪಾರ್ವತಿಯಲ್ಲಿಯೇ ಹೇಳುತ್ತಾಳೆ.

Image

ನಮ್ಮ ಹೆಮ್ಮೆಯ ಭಾರತ (25 - 26)

೨೫.ಜಗತ್ತಿನ ಅತಿ ದೊಡ್ಡ ನದಿದ್ವೀಪ ಮಾಜುಲಿ
ಬ್ರಹ್ಮಪುತ್ರ ನದಿಯಲ್ಲಿರುವ ಮಾಜುಲಿ ಜಗತ್ತಿನ ಅತಿ ದೊಡ್ಡ ನದಿದ್ವೀಪ. ಅಸ್ಸಾಂ ರಾಜ್ಯದಲ್ಲಿರುವ ಮಾಜುಲಿ ಪರಿಸರ ಮಾಲಿನ್ಯವಿಲ್ಲದ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.

Image