ಮೂಕ ಹಕ್ಕಿಯ ಹಾಡು (ಪಾಕಿಸ್ತಾನದ ಹೆಣ್ಣು ಮಗಳು ಮುಖ್ತಾರ್ ಮಾಯಿಯ ಆತ್ಮಕತೆ)

ಪುಸ್ತಕದ ಲೇಖಕ/ಕವಿಯ ಹೆಸರು
ಇಂಗ್ಲಿಷ್ ಮೂಲ : ಮುಖ್ತಾರ್ ಮಾಯಿ ಕನ್ನಡಕ್ಕೆ : ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ಬೆಲೆ : ರೂ 110/-

 “ಮೂಕ ಹಕ್ಕಿಯ ಹಾಡು” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. 

ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

ಕೂಡಿ ಹಾಕುವ ಬುದ್ಧಿ

ಸಾಮಾನ್ಯವಾಗಿ ಧಾರ್ಮಿಕರು ಆಧ್ಯಾತ್ಮಿಕ ಜೀವಿಗಳು ಸಂಗ್ರಹ ಬುದ್ಧಿ ಅಂದರೆ ಕೂಡಿಹಾಕುವ  ಬುದ್ಧಿಯು ಒಳ್ಳೆಯದಲ್ಲ ಅಂತ ಹೇಳುತ್ತಾರೆ. ಅವರು ಹೇಳುತ್ತಿರುವುದು ಆಸ್ತಿಪಾಸ್ತಿ ಹಣ ಮುಂತಾದವುಗಳ ಬಗ್ಗೆ ಇರಬೇಕು. 

ಆದರೆ ಒಳ್ಳೆಯ ಸಂಗತಿಗಳನ್ನು, ವಿಚಾರಗಳನ್ನು, ನೆನಪುಗಳನ್ನು, ಹೇಳಿಕೆಗಳನ್ನು, ಹಾಡುಗಳನ್ನು, ಕಥೆಗಳನ್ನು, ಮತ್ತೆ ಅಂತಹ ಇನ್ನಾವುದೇ ಸಂಗತಿಗಳನ್ನು ಸಂಗ್ರಹಿಸುವುದು ಒಳ್ಳೆಯದೇನೋ. ಅಂತಹ ಸಂಗ್ರಹವನ್ನು ನಮ್ಮ ಸಂತೋಷಕ್ಕೂ, ಬೇರೆಯವರ ಸಂತೋಷಕ್ಕೂ , ಬಳಸಬಹುದು. 
ಒಳ್ಳೆಯ ವಿಚಾರಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು 
ನಮ್ಮ ಬುದ್ಧಿಯನ್ನು ಸಂಸ್ಕರಿಸಬಹುದು. ನಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು.  ಬೇರೆಯವರ ಜೀವನವನ್ನು ಉತ್ತಮಪಡಿಸಬಹುದು. ಅಲ್ಲವೆ?

ಗಜ಼ಲ್

     ಗಜಲ್ 

ಹಾದಿಯಲಿ ನಡೆವಾಗ ಕರೆಯುತ್ತಾರೆ ಯಾರೋ
ಎದೆಯಲ್ಲಿ ಪಿಸುನುಡಿಯ ಬರೆಯುತ್ತಾರೆ ಯಾರೋ

ತಿರುವುಗಳು, ಹಳ್ಳ- ತಿಟ್ಟು ದಾರಿಯದೆಷ್ಟು ಕಠಿಣ
ಕೈಹಿಡಿದು ಕರೆದೊಯ್ದು ಹರಸುತ್ತಾರೆ ಯಾರೋ

ಅನುಬಂಧಗಳು ಹೇಗೆಲ್ಲ ಕಳಚಿಹೋಗುತ್ತವೆ
ಹಾಲಲ್ಲಿ ಹುಳಿಯನ್ನು ಬೆರೆಸುತ್ತಾರೆ ಯಾರೋ

ಊರುಗೋಲಾಗಿ ಆಧರಿಸಿದ ಸಂದರ್ಭಗಳೆಷ್ಟು
ಮಾತಿನ ಆವೇಶದಲ್ಲಿ ಮರೆಯುತ್ತಾರೆ ಯಾರೋ

ಕನಸುಗಣ್ಣಿನ ಹುಡುಗ ಕಳೆದೇ ಹೋದನೇನು
ಕವಿತೆಗಳಿಗೆ ಕೆಂಡವ ಸುರಿಯುತ್ತಾರೆ ಯಾರೋ

ಹಾಲಿನದು ಹಾಲಿಗೆ ನೀರಿನದು ನೀರಿಗೆನ್ನುತ್ತಾರೆ
ಹಾಲೆಂದು ಸುಣ್ಣದ ನೀರು ಕುಡಿಸುತ್ತಾರೆ ಯಾರೋ

ಕಾಣೆಯಾಗಿ ಪತ್ತೆಯಾದ ನಾಯಿಮರಿ ಟಾಮಿ

ನಡುರಾತ್ರಿಯಲ್ಲಿ ಟಾಮಿ ನಾಯಿಮರಿ ನಡುಗುತ್ತ ಹೇಳಿತು, “ಬಹಳ ಚಳಿಯಾಗುತ್ತಿದೆ." ಆಗ "ನನಗೆ ಒತ್ತಿಕೊಂಡು ಮಲಗು” ಎಂದಿತು ತಾಯಿ ನಾಯಿ.

“ಇದು ನ್ಯಾಯವಲ್ಲ. ನಾವ್ಯಾಕೆ ಮನೆಯ ಹೊರಗೆ ಚಳಿಯಲ್ಲಿ ಮಲಗಬೇಕು? ಬೆಕ್ಕುಗಳಿಗೆ ಮನೆಯೊಳಗೆ ಬೆಚ್ಚಗೆ ಬುಟ್ಟಿಯಲ್ಲಿ ಮಲಗಲು ಬಿಡುತ್ತಾರೆ” ಎಂದು ಗೊಣಗುಟ್ಟಿತು ಟಾಮಿ ನಾಯಿಮರಿ. “ನನ್ನ ಮುದ್ದಿನ ಮರಿ, ನಾವು ಮನೆ ಕಾಯುವ ನಾಯಿಗಳು. ನಾವು ಈ ಮನೆಯಲ್ಲಿ ಇರಬೇಕೆಂದರೆ ಗಟ್ಟಿಮುಟ್ಟಾಗಿದ್ದು, ಕಷ್ಟಪಟ್ಟು ಕೆಲಸ ಮಾಡಬೇಕು” ಎಂದು ಸಮಾಧಾನ ಪಡಿಸಿತು ತಾಯಿ ನಾಯಿ.

Image

ಗಝಲ್ ಸೊಬಗು

ಒಂಬತ್ತು ತಿಂಗಳ ಹೆತ್ತು ಹೊತ್ತು 

ಸಾಕಿ ಬೆಳಸ್ಯಾಳ ನನ್ನಮ್ಮ|

ನಂಬಿದವರಿಗೆ ಮೋಸ ಮಾಡಬ್ಯಾಡ

ಅಂತ ತಿಳಿಸ್ಯಾಳ ನನ್ನಮ್ಮ||

 

ಉಪವಾಸ ಇದ್ದು ನನ್ನನ್ನು

ಗಝಲ್ ಹಾಡುಗಳ ಸಾಮ್ರಾಟ : ತಲತ್ ಮೆಹಮೂದ್

ಹಾಡುಗಳಿಗೆ ಯಾವತ್ತೂ ಸಾವಿಲ್ಲ. ಎಷ್ಟು ಹಳೆಯದಾಗುತ್ತದೆಯೋ ಅದಕ್ಕೆ ನೂರು ಪಟ್ಟು ಅಧಿಕ ಬೇಡಿಕೆ ಇರುತ್ತದೆ. ಹಳೆಯ ಹಾಡುಗಳನ್ನು ಕೇಳುತ್ತಾ ನೀವು ನಿಮ್ಮ ಹಳೆಯ ನೆನಪುಗಳಿಗೆ ಜಾರಿ ಕೊಳ್ಳುವಿರಿ. ಕನ್ನಡವಾಗಲಿ, ಹಿಂದಿಯಾಗಲಿ ಅಥವಾ ಯಾವುದೇ ಭಾಷೆಯ ಹಾಡುಗಳಾಗಿರಲಿ, ಅವುಗಳಿಗೆ ಅದರದ್ದೇ ಆದ ಮಹತ್ವ ಇದೆ. ಹಿಂದಿ ಚಿತ್ರರಂಗದ ಹಿನ್ನಲೆ ಗಾಯಕರಾದ ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಮುಕೇಶ್, ಮನ್ನಾಡೇ, ಲತಾ ಮಂಗೇಷ್ಕರ್, ಆಶಾ ಮಂಗೇಷ್ಕರ್ ಹೀಗೆ ಹತ್ತು ಹಲವಾರು ಗಾಯಕರು ತಮ್ಮ ಮಧುರ ಮಾದಕ ಕಂಠದಿಂದ ನಮ್ಮ ಬಾಳಿನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಅವರ ಸಾಲಿಗೇ ಸೇರುವ ಇನ್ನೊರ್ವ ಅದ್ಭುತ ಗಾಯಕ, ಗಝಲ್ ಗಳ ರಾಜ ತಲತ್ ಮೆಹಮೂದ್.

Image

ಒಂದೊಳ್ಳೆಯ ನುಡಿ-2

ನಮ್ಮ ಜೀವನ ಎನ್ನುವುದು ವರ್ತಮಾನ ಪತ್ರಿಕೆ ಇದ್ದಂತೆ. ಅದನ್ನು ಜಾಗೃತೆಯಿಂದ ಬಿಡಿಸಿ ಅಥವಾ ತೆರೆದು ಓದಬೇಕು. ಹೆಚ್ಚಾಗಿ ಅದರಲ್ಲಿ ಮೊದಲು ನಮ್ಮ ಕಣ್ಣಿಗೆ ಬೀಳುವುದು ದಪ್ಪಕ್ಷರಗಳಲ್ಲಿರುವ ಶೀರ್ಷಿಕೆಗಳು. ನಮ್ಮ ಅಭಿರುಚಿಗೆ ತಕ್ಕಂತೆ ನಾವು ಓದಬೇಕು. ಅನಗತ್ಯ ವಿಷಯಗಳನ್ನು ಓದಿ, ತಲೆಯಲ್ಲಿ ತುಂಬಿಕೊಂಡರೆ, ಅದೇ  ವಿಷಯ ಕೊರೆಯುತ್ತಿರುತ್ತದೆ. ನಾಳೆಗೆ ಅದು ಹಳೆಯ ಪತ್ರಿಕೆಯಾಗುತ್ತದೆ. ಹಾಗೆಯೇ ಓದಿ ಮರೆತು ಬಿಡಬೇಕು.

ಜೀವನದಲ್ಲೂ ಅಷ್ಟೆ, ಬೇಕಾದ್ದನ್ನು ತೆಗೆದುಕೊಳ್ಳೋಣ, ಬೇಡವಾದ್ದನ್ನು ಬಿಟ್ಟು ಮುಂದೆ ಹೋಗೋಣ.

Image

ಬಂಡಲ್ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಸುರೇಂದ್ರನಾಥ್
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೪೦-೦೦, ಮೊದಲ ಮುದ್ರಣ ೨೦೨೦

ಮೂಡಬಿದರೆ ಸಮೀಪದ ಊರಿನಲ್ಲಿ ಹುಟ್ಟಿದ ಎಸ್.ಸುರೇಂದ್ರನಾಥ್ ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಭೇತಿ. ಹುಲಗೂರ ಹುಲಿಯವ್ವ, ಸಂಕ್ರಮಣ, ಜನತೆಯ ಶತ್ರು, ಆತಂಕವಾದಿಯ ಆಕಸ್ಮಿಕ ಸಾವು ಮುಂತಾದ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ನಾಗಮಂಡಲ, ಕಾನೂರು ಹೆಗ್ಗಡತಿ, ಕೆಂಡಸಂಪಿಗೆ ಮೊದಲಾದ ಕೆಲವು ಚಲನ ಚಿತ್ರಗಳಿಗೆ ಕತೆ/ಚಿತ್ರಕತೆ/ಸಂಭಾಷಣೆ ಬರೆದಿದ್ದಾರೆ. ಹದಿಮೂರು ವರ್ಷಗಳ ಕಾಲ ಈಟಿವಿಯಲ್ಲಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಟ್ಟು ಕತೆಗಳು, ತಾಪತ್ರಯಗಳು ಇವರ ಕಥಾ ಸಂಕಲನಗಳು. ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ರಂಗ ಶಂಕರದಲ್ಲಿ ಕಾರ್ಯಕ್ರಮದ ಉಸ್ತುವಾರಿ.