ಮೌನ ಮೀರಲಿಲ್ಲ!

ಕಡಲಾಳದಂತಿರುವ ಬಡತನದ ಬವಣೆಯಲಿ,
ಈಜಲೆಂದು ದೂಡಿದೆ ನೀನು.
ನಾ ಮಾತಾಡಲಿಲ್ಲ| ಮೌನವ ಮೀರಲಿಲ್ಲ |
ಬಡತನದ ಬೇಗೆಯನು ಸಹಿಸುತಲಿ,
ಸಿರಿತನದ ಆಸೆಗಳ ಮರೆಯುತಲಿ, ಈಜಿ ದಡ ಸೇರಿದೆ ನಾನು.
ನಾ ಮುಳುಗಲಿಲ್ಲ| ಬಡತನ ಎನಗೆ ಹೊರೆಯಾಗಲಿಲ್ಲ |

ಜೀವನ ಯಾನದ ಪ್ರತಿಹಂತದಲು,
ದುಃಖದ ಬಾಣಗಳ ಮಳೆಗರೆದೆ ನೀನು.
ನಾ ದೂಷಿಸಲಿಲ್ಲ| ಮೌನವ ಮೀರಲಿಲ್ಲ |
ನೋವುಗಳ ನುಂಗುತಲಿ, ಮುಂಬರುವ
ನಲಿವುಗಳ ನೆನೆಯುತಲಿ, ಯಾನವ ಬೆಳೆಸಿದೆ ನಾನು.
ನಾ ಹೆದರಲಿಲ್ಲ| ದುಃಖದ ಬಾಣಗಳ ಇರಿತಕ್ಕೆ, ನಾ ಮಣಿಯಲಿಲ್ಲ |

ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ

“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ ತೆನೆಗಳನ್ನು ತಂದು ನಮ್ಮ ಮನೆಯನ್ನು ತುಂಬಿಸಿಕೊಳ್ಳುತ್ತೇವೆ. ಖುಷಿ ಪಡುತ್ತೇವೆ. ಯೋಚಿಸಿ ನೋಡಿ, ಇದರಲ್ಲಿ ನಿಜವಾಗಿಯೂ ಖುಷಿ ಇದೆಯಾ? ಬದಲಿಗೆ ಮನೆ ತುಂಬಿಸಲೆಂದೇ ಅಂಗಳದ ಬದಿಯಲ್ಲಿ ಸ್ವಲ್ಪ ಭತ್ತ ಬೆಳೆಯಿರಿ,” ಎನ್ನುವ ಕಿವಿಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ ಅಮೈ ದೇವರಾವ್ ಹೇಳುತ್ತಾರೆ. ಇವರಲ್ಲಿ ನೂರೈವತ್ತು ಭತ್ತದ ತಳಿಗಳು ಸಂರಕ್ಷಣೆಯಾಗತ್ತಿವೆ.

Image

ಮಂಗಳೂರಿನ ಮಣ್ಣಗುಡ್ಡೆ ಗುರ್ಜಿ – ೧೫೦ನೇ ವರುಷದ ಸಂಭ್ರಮ

ಮಂಗಳೂರಿನ ಜನಪ್ರಿಯ ಉತ್ಸವ “ಮಣ್ಣಗುಡ್ಡೆ ಗುರ್ಜಿ”. ಇದರ ೧೫೦ನೇ ವರುಷದ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಕ್ತಾಯವಾದದ್ದು ೨೪ ನವಂಬರ್ ೨೦೧೯ರ ಭಾನುವಾರದಂದು. ಆ ದಿನ ಸಂಜೆಯಿಂದ ಮಣ್ಣಗುಡ್ಡೆ ಪರಿಸರದಲ್ಲಿ ಜನಸಾಗರ.
ಗುರ್ಜಿಯ ೧೫೦ನೇ ವರ್ಷಾಚರಣೆ ಅಂಗವಾಗಿ, ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಸಂಗೀತ ಕಚೇರಿ, ಉಚಿತ ಆರೊಗ್ಯ ಶಿಬಿರ, ಆಯುರ್ವೇದ ಮತ್ತು ಮಳೆನೀರು ಕೊಯ್ಲು ಬಗ್ಗೆ ಉಪನ್ಯಾಸಗಳು, ಕ್ರಿಕೆಟ್ ಪಂದ್ಯಾಟ , ಕ್ರೀಡೋತ್ಸವ ಇತ್ಯಾದಿ ಜನೋಪಯೋಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ ೨೦೧೯ರಿಂದ ತಿಂಗಳಿಗೊಂದರಂತೆ ಸಂಭ್ರಮದಿಂದ ಜರಗಿಸಲಾಯಿತು.

Image

ನನ್ನೊಬ್ಬನಿಂದ ಏನೆಲ್ಲ ಆದೀತು!

ಸಮುದ್ರ ತೀರದಲ್ಲಿ ಒಬ್ಬ ವ್ಯಕ್ತಿ ನಡೆಯುತ್ತಿದ್ದ. ಆಗಾಗ ಬಗ್ಗಿ, ಹೊಯಿಗೆಯಲ್ಲಿ (ಮರಳಿನಲ್ಲಿ) ಸಿಲುಕಿದ್ದ ನಕ್ಷತ್ರ ಮೀನುಗಳನ್ನು ಹೆಕ್ಕಿ, ಸಮುದ್ರದ ನೀರಿಗೆ ಎಸೆಯುತ್ತಿದ್ದ.
ಅವನಿಗೆದುರಾಗಿ ನಡೆದು ಬರುತ್ತಿದ್ದ ಇನ್ನೊಬ್ಬ ವ್ಯಕ್ತಿ. ಮೊದಲನೆಯ ವ್ಯಕ್ತಿ ಹತ್ತಿರ ಬಂದಾಗ ಎರಡನೆಯಾತ ಕೇಳಿದ, “ಅದೇನು ಮಾಡುತ್ತಿದ್ದಿ?” ಮೊದಲನೆಯಾತ ಮುಗುಳ್ನಕ್ಕು ತನ್ನ ಕೆಲಸ ಮುಂದುವರಿಸಿದ. ಆತನನ್ನು ಹಿಂಬಾಲಿಸಿದ ಎರಡನೆಯಾತ ಪುನಃ ಅದೇ ಪ್ರಶ್ನೆ ಕೇಳಿದ. ಈಗ ಮೊದಲನೇ ವ್ಯಕ್ತಿ ಉತ್ತರಿಸಿದ: “ಕಾಣುತ್ತಿಲ್ಲವೇ? ನಕ್ಷತ್ರ ಮೀನುಗಳನ್ನು ಹೆಕ್ಕಿಹೆಕ್ಕಿ ನೀರಿಗೆ ಎಸೆಯುತ್ತಿದ್ದೇನೆ – ಅವು ಬದುಕಿಕೊಳ್ಳಲಿ ಎಂದು.”

Image

ಹಾರೋಗೇರಿ ಬಾಂದಾರ - ಗ್ರಾಮೀಣ ಸಮುದಾಯದಿಂದ ಜಲಸಂರಕ್ಷಣೆಯ ಮಾದರಿ

ಹಾರೋಗೇರಿ ಬಾಂದಾರದ ಮೇಲೆ ನಿಂತಿದ್ದೆವು. ಅಂದು (೧೮ ಜೂನ್ ೨೦೦೯) ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರ್ಧ ತಾಸಿನಲ್ಲಿ ವರೂರು ಮುಟ್ಟಿದ್ದೆವು. ಅಲ್ಲಿಂದ ಬಲಕ್ಕೆ ತಿರುಗಿ, ೬ ಕಿಮೀ ದೂರದ ಸೂರಶೆಟ್ಟಿಕೊಪ್ಪ ಹಾದು ಹಾರೋಗೇರಿ ತಲಪಿದ್ದೆವು. ಕಳೆದೆರಡು ವಾರಗಳಲ್ಲಿ ಬಿದ್ದ ಮಳೆಯ ನೀರು ಬಾಂದಾರದಲ್ಲಿ ಸಂಗ್ರಹವಾಗಿತ್ತು. ಸುತ್ತಲಿನ ಗುಡ್ಡಗಳಲ್ಲಿ ಹಸುರು ಚಿಗುರು ನಗುತ್ತಿತ್ತು.

Image

ಈರೋಡಿನ ಅರಿಶಿನಕ್ಕೆ ಭೌಗೋಳಿಕ ಸೂಚಕದ ಹೆಗ್ಗಳಿಕೆ

ಅಲ್ಲಿ ಮೇಜುಗಳ ಸಾಲುಸಾಲುಗಳಲ್ಲಿ ಅರಿಶಿನದ ಗೆಡ್ಡೆಗಳು. ಸುತ್ತಲೂ ಅರಿಶಿನದ ಘಮ. ಮಾರಾಟಕ್ಕಿಟ್ಟ ಅರಿಶಿನವನ್ನು ಪರಿಶೀಲಿಸುತ್ತಿರುವ ಜನರು. ಇದು, ಪೂರ್ವಾಹ್ನ ೧೧ ಗಂಟೆಯ ಹೊತ್ತಿಗೆ ತಮಿಳ್ನಾಡಿನ ಈರೋಡಿನ ನಸಿಯನೂರಿನ ವಿಶಾಲ ಅರಿಶಿನ ಮಾರುಕಟ್ಟೆ ಪ್ರಾಂಗಣದ ನೋಟ.
ಈಗ ೬೫ನೇ ವರುಷಕ್ಕೆ ಕಾಲಿಟ್ಟಿರುವ ಅಲ್ಲಿನ ಅರಿಶಿನ ವರ್ತಕರ ಸಂಘಟನೆಯ ಸದಸ್ಯರ ಸಂಖ್ಯೆ ೩೫೭. ಈರೋಡಿನಿಂದ ೯ ಕಿಮೀ ದೂರದಲ್ಲಿರುವ ವಿಸ್ತಾರವಾದ ಮಾರುಕಟ್ಟೆ ಪ್ರಾಂಗಣವನ್ನು ಮಂಜಲ್ ಮಾನಗರಮ್ (ಅರಿಶಿನದ ರಾಜಧಾನಿ) ಎಂದು ಕರೆಯಲಾಗುತ್ತದೆ. ವರುಷವಿಡೀ ತೆರೆದಿರುವ ಆ ಮಾರುಕಟ್ಟೆಯಲ್ಲಿ ಶೇಖರಿಸಿಡಲಾಗಿದೆ ತಮಿಳ್ನಾಡು ಮತ್ತು ಪಕ್ಕದ ರಾಜ್ಯಗಳಿಂದ ಮಾರಾಟಕ್ಕೆ ತಂದ ಅರಿಶಿನದ ರಾಶಿರಾಶಿ.

Image

ಸತ್ಯಕ್ಕೆ ಒಂದೇ ಮುಖ

ಚಿತ್ರ ಕೃಪೆ : ಗೂಗಲ್

ಕೇಳ್ದೆ ಇದ್ರು ಯಾಕೇಳ್ಬೇಕೂ ಬಳ್ಳ ಸುಳ್ಳ
ಸಿಕ್ಕಿಬಿದ್ದಾಗ ಪೇಚಾಟ ಬೇಕಾ ಮಳ್ಳ
ಸತ್ಯವೆಂಬುದು ಕನ್ನಡಿ ತರ, ಒಂದೇ ಮುಖ
ಸುಳ್ಳಿನಿಂದ ಸಿಗೋದಿಲ್ಲ ಶಾಶ್ವತ ಸುಖ, ಎಂದ ನನ್ನ ಶಿವ.
                                                   ಬೋ.ಕು.ವಿ

ಬಟ್ಟೆ ಇಲ್ಲದ ಊರಿನಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಮಿರ್ಜಾ ಬಷೀರ್
ಪ್ರಕಾಶಕರು
ಅಂತಃಕರಣ ಪ್ರಕಾಶನ, ಶಿವಮೊಗ್ಗ
ಪುಸ್ತಕದ ಬೆಲೆ
ರೂ.110/-

ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಡಾ.ಮಿರ್ಜಾ ಬಷೀರ ಅವರ ಮೊದಲ ಕಥಾ ಸಂಕಲನ, ‘ಬಟ್ಟೆ ಇಲ್ಲದ ಊರಿನಲ್ಲಿ’. ಇದು ವಾಸ್ತವ ಮತ್ತು ಕಲ್ಪನೆಯನ್ನು ಅವಲಂಬಿಸಿದ ಸಾಮಾಜಿಕ ಚಿತ್ರಣ. ಪ್ರಶಸ್ತಿ ವಿಜೇತ ಕತೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕತೆಗಳನ್ನು ಒಳಗೊಂಡ ಸಂಗ್ರಹ. ತಮ್ಮ ವೃತ್ತಿ ಜೀವನದಲ್ಲಿ ಸಂಭವಿಸಿದ ಅಥವಾ ಸಂಭವಿಸಿರಬಹುದಾದ ಘಟನೆಗಳ ಸುತ್ತ ಹೆಣೆದಿರುವ ಕತೆಗಳಲ್ಲದೆ ಲೇಖಕರು ಕಲ್ಪನೆಯ ಲೋಕಕ್ಕೆ ನಮ್ಮನ್ನು ಒಯ್ಯುವ ಕತೆಗಳೂ ಇವೆ. ಈ ಕತೆಗಳ ಮೂಲಕ ಬಷೀರರು ನಮ್ಮ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತಾರೆ.

ನಮ್ಮ ನಾಡು

ಹಸಿರ ರಾಶಿ ಚೆಲ್ಲಿರುವ ಗಿರಿವನ,
ಪ್ರಕೃತಿಯ ರಂಗೇರಿಸಿಹ ಜಲಪಾತಗಳ ಮಿಶ್ರಣ,
ಭೂಸ್ವರ್ಗವಾಗಿಸಿಹ ಮಲೆನಾಡ ಚಿತ್ರಣ,
ಪಾವನವಾಗಿಸಿವೆ ಈ ಐಸಿರಿ ತುಂಬಿಸಿ, ನಮ್ಮ ಕಣ್ಮನ.

ಮಕ್ಕಳ ತೊದಲಲಿ ಸರಿಗಮ ಗಾನ,
ತಾಯಿಯ ನುಡಿಯಲಿ ಜೋಗುಳ ಗಾನ,
ಮಂದಿಯ ನುಡಿಯಲಿ ಜನಪದ ಗಾನ,
ನುಡಿ ಇದು ನುಡಿದರೆ, ಅಮೃತಪಾನ.

ಕವಿತಾಲೋಕಕೆ ಎಲ್ಲರ ಕೊಂಡೊಯ್ಯುತ,
ಕಾವ್ಯರಸಧಾರೆಯ ಹೊನಲನು ಹರಿಸುತ,
ನುಡಿಯನು ಕಾವ್ಯಮಾಲೆಯಿಂದಲಂಕರಿಸಿ ಶ್ರೀಮಂತವಾಗಿಸಿಹ,
ಶಾರದೆ ಪೀಠವಿದು, ಕವಿಗಳ ತಾಣ.

ನೀತಿಗಳ ಸಾರುವ ವಚನಾಮೃತವು,
ಭಕ್ತಿಯ ಪಾಡುವ ದಾಸರ ಪದವು,
ಸಂತರು ತೋರಿದ ಮುಕ್ತಿಯ ನಿಲುವು,
ಮಾರ್ಗವ ತೋರಿದವು ಗುರಿ ಸೇರಲು ಮನವು.

ಎರಡು ವರುಷ ಮುಂಚೇನೇ ಮಾಡ್ಬೇಕಿತ್ತು !

"ಮುಂಚೆ ನಾವೆಲ್ಲ ಹೊಲದಲ್ಲಿ ಅಲ್ಲಲ್ಲಿ ಬದುಗಳನ್ನ ಮಾಡ್ತಿದ್ವಿ. ಒಂದೆಕ್ರೆಗೆ ನಾಲ್ಕು ಬದು ಆದ್ರೂ ಇರೋದು. ಈವಾಗ ನಾವೆಲ್ಲ ಸೋಮಾರಿಗಳಾಗಿದ್ದೀವಿ. ನಮ್ ಹೊಲ ಉಳುಮೆಗೆ ಎತ್ತುಗಳೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಉಳುಮೆ ಮಾಡ್ಬೇಕಲ್ಲ? ಅದಕ್ಕೆ ಟ್ರಾಕ್ಟರ್ ತರಿಸ್ತೀವಿ. ಟ್ರಾಕ್ಟರ್‍ನೋನು ಉಳುಮೆ ಮಾಡ್ಬೇಕಾರೆ ಈ ಬದುಗಳು ಅಡ್ಡ ಬರ್ತವೆ. ಅದಕ್ಕೆ ಬದುಗಳ್‍ನೆಲ್ಲ ಕಿತ್ ಹಾಕ್ತೀವಿ. ಹಿಂಗಾಗಿ ಈಗ ಒಂದೆಕ್ರೆಯೊಳ್ಗೆ ಒಂದ್ ಬದೂನೂ ಇರಲ್ಲ. ಅಡ್ಡ ಮಳೆ ಬಂದ್ರೆ ನೀರು ಹಂಗೇ ಕೊಚ್‍ಕೊಂಡು ಹೋಗ್‍ತೈತೆ. ಹಿಂಗಾದ್ರೆ ನಮ್ ಹೊಲದಾಗೆ ನೀರಿಂಗೋದು ಹೆಂಗೆ?" ಎಂದು ಲಕ್ಯದ ಹಿರಿಯರಾದ ಮರಿಗೌಡರು ಪ್ರಶ್ನಿಸಿದಾಗ ಅಲ್ಲಿ ಮೌನ ನೆಲೆಸಿತ್ತು.

Image