ಪಾಂಡು ಟೆಡ್ದಿ ಕರಡಿಯ ಗೊಣಗಾಟ

ಅಲಾರಮ್ ಸದ್ದು ಮಾಡಿದೊಡನೆ ಸರಸು ಸರಕ್ಕನೆ ಹಾಸಿಗೆಯಿಂದ ಎದ್ದಳು. ಅವಳ ಪಕ್ಕದಲ್ಲಿದ್ದ ಪಾಂಡು ಟೆಡ್ಡಿ ಕರಡಿ ತನ್ನ ಒಂದು ಕಣ್ಣನ್ನು ತೆರೆದು ನೋಡಿತು. ಯಾಕೆಂದರೆ ಅದರ ಇನ್ನೊಂದು ಕಣ್ಣು ವರುಷಗಳ ಮುಂಚೆ ಕುರುಡಾಗಿತ್ತು.

Image

ವಾಸ್ತು ಪ್ರಕಾರ...

ಕೆಲವರಿಗೆ ವಾಸ್ತು ಎಂದರೆ ಅಪಾರ ನಂಬಿಕೆ. ತಮ್ಮ ಮನೆಯಾ ಮುಖ್ಯ ಬಾಗಿಲಿನಿಂದ ಹಿಡಿದು ಅಡಿಗೆ ಮನೆಯವರೆಗೂ ಎಲ್ಲವೂ ವಾಸ್ತು ಪ್ರಕಾರವೇ ಇರಬೇಕೆಂದು ಹಠ. ಆದರೆ ಇನ್ನು ಕೆಲವರಿಗೆ ವಾಸ್ತು ಎಂದರೆ ವಾಸ್ತವವಲ್ಲ. ಬರೀ ಬೊಗಳೆ ಎಂಬ ನಂಬಿಕೆ. ಅವರವರ ನಂಬಿಕೆಗಳಿಗೆ ನಾವೇನೂ ಮಾಡುವಂತಿಲ್ಲ.

Image

ಸಮಾಜವಾದಿ ಪತ್ರಕರ್ತ, ‘ಸಂಗಾತಿ'ಯ ಮ.ನವೀನಚಂದ್ರ ಪಾಲ್

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ಕನ್ನಡ ಸಂಘ ಕಾಂತಾವರ (ರಿ) ಕಾಂತಾವರ, ಕಾರ್ಕಳ
ಪುಸ್ತಕದ ಬೆಲೆ
ರೂ. ೪೫.೦೦ ಮುದ್ರಣ: ೨೦೧೮

ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಯೋಜನೆಯ ಅಡಿಯಲ್ಲಿ ಪ್ರಕಟಿಸಿದ ೨೪೮ನೇ ಕುಸುಮ. ಈ ಕೃತಿಯನ್ನು ಪತ್ರಕರ್ತರೇ ಆಗಿರುವ ಉಡುಪಿಯ ಶ್ರೀರಾಮ ದಿವಾಣ ಇವರು ಬರೆದಿದ್ದಾರೆ.

ದೃಷ್ಟಿ ಬದಲಾದರೆ ದೃಶ್ಯವೂ ಬದಲು !

ಬದುಕಿನಲ್ಲಿ ಯಾವಾಗಲೂ ಸಕಾರಾತ್ಮಕ ದೃಷ್ಟಿ ಮುಖ್ಯ. ತಾವರೆ ಅರಳುವುದು ಕೆಸರು ತುಂಬಿದ ಕೆರೆಯಲ್ಲಿಯೇ ಹೊರತು ಸ್ವಚ್ಛವಾದ ಕೊಳದಲ್ಲಿ ಅಲ್ಲ. ನಾವು ಗಮನಿಸಿಸಬೇಕಾದದ್ದು ತಾವರೆಯನ್ನೇ ಹೊರತು, ಅದು ಹುಟ್ಟಿದ ಜಾಗವಲ್ಲ. ಏಕೆಂದರೆ ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇಧಭಾವವಿಲ್ಲ. ಅದು ಯಾರದ್ದೂ ಸ್ವತ್ತಲ್ಲ. ನಾವು ಹೇಗೆ ಈ ಪ್ರಪಂಚವನ್ನು ನೋಡುತ್ತೇವೆಯೋ ಹಾಗೆಯೇ ಬದುಕುತ್ತೇವೆ.

Image