ಪಪ್ಪಾಯಿ ಹಣ್ಣಿನ ಹಲ್ವ

Image

ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಸಿಪ್ಪೆ ಮತ್ತು ಬೀಜವನ್ನು ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ತುಂಡರಿಸಿ. ಅದರ ಜೊತೆ ಹಾಲು ಬೆರೆಸಿ ಒಲೆಯ ಮೇಲಿಟ್ಟು ತುಸು ಮೆದುವಾಗುವವರೆಗೆ ಬೇಯಿಸಿ. ಅದನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿರಿ. ನಂತರ ಟೊಮೆಟೊ ಹಣ್ಣನ್ನು ಮಿಕ್ಸಿಗೆ ಹಾಕಿ ರಸವನ್ನು ತೆಗೆದು ಇಟ್ಟುಕೊಂಡಿರಿ. ನಂತರ ಬಾಣಲೆಗೆ ರುಬ್ಬಿದ ಮಿಶ್ರಣ ಮತ್ತು ಟೊಮೆಟೋ ರಸವನ್ನು ಜೊತೆಯಾಗಿ ಹಾಕಿ ಕಲಡಿಸಿ.

ಬೇಕಿರುವ ಸಾಮಗ್ರಿ

ಹಣ್ಣಾದ ಹದಗಾತ್ರದ ಪಪ್ಪಾಯಿ ಹಣ್ಣು ೧, ಟೊಮೆಟೊ ೩-೪, ಹಾಲು ೨ ಕಪ್, ಸಕ್ಕರೆ ೨ ಕಪ್, ತುಪ್ಪ ೧/೨ ಕಪ್, ಏಲಕ್ಕಿ ಹುಡಿ ಸ್ವಲ್ಪ

 

ಬಾಳಿಗೊಂದು ಚಿಂತನೆ - 18

ಒಮ್ಮೊಮ್ಮೆ ನಮಗೆ ಅನಿಸುವುದು ನಾನೇ ಎಲ್ಲಾ ಗೊತ್ತಿದ್ದವ, ನನ್ನಿಂದಾಗಿಯೇ ಎಲ್ಲವೂ ಎಂಬುದಾಗಿ. ಈ ಹುಚ್ಚು ಮನಸ್ಸಿನ ಗೊಂದಲದಿಂದಾಗಿ ಅನಾಹುತಗಳು ಹುಟ್ಟಿಕೊಳ್ಳುತ್ತವೆ. ನನಗೆ ಯಾರೂ ಬೇಡ, ನಾನೇ ಎಲ್ಲಾ ಎಂಬುದನ್ನು ಬಿಟ್ಟು ಬಿಡೋಣ. ಇಂಥ ಅಭಿಮಾನ ಒಳ್ಳೆಯದಲ್ಲ. ನಾನು ಎಲ್ಲರಿಗೂ ಬೇಕೆಂಬ ಭ್ರಮೆಯೂ ಬೇಡ. ಆ ಭಗವಂತನ ಇಚ್ಛೆ ಏನಿದೆಯೋ ಅದರಂತೆ ಎಲ್ಲವೂ ನಡೆಯುವುದು.

Image

ಪ್ರತಾಪ್ ಆಚಾರ್ಯ ಕೈಯಲ್ಲಿ ಎಲೆಯೂ ಕಲೆಯಾಗಿ ಅರಳುವುದು

ಸಾಧಾರಣ ಹಲಸಿನ ಎಲೆಯು ಇವರ ಕೈಯಲ್ಲಿ ಸಿಕ್ಕಿದರೆ ಅದರಲ್ಲಿ ಗಣಪತಿ, ಶಿವ, ಸ್ವಾಮಿ ಕೊರಗಜ್ಜ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅಷ್ಟೇ ಯಾಕೆ? ನಮ್ಮ ಹೆಮ್ಮೆಯ ಅಬ್ದುಲ್ ಕಲಾಂ, ಕ್ರಿಕೆಟಿಗ ಧೋನಿ, ಸಂಗೀತ ಸಾಮ್ರಾಟ್ ಎಸ್. ಪಿ. ಬಾಲಸುಬ್ರಮಣ್ಯಂ ಎಲ್ಲರೂ ಅರಳುತ್ತಾರೆ. ನಮ್ಮ ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತನ ಬದುಕೂ ಈ ಒಂದು ಎಲೆಯಲ್ಲಿ ಚಿತ್ರವಾಗಿ ಪರಿವರ್ತನೆಯಾಗುತ್ತದೆ.

Image

ಝೆನ್ ಪ್ರಸಂಗ: ಚಾಚೂ ತಪ್ಪದೆ ಮಾತಿನ ಪಾಲನೆ

ಗುರು ಬಂಕೆಯ ಮಾತುಗಳು ಹೃದಯಸ್ಪರ್ಶಿ. ಆದ್ದರಿಂದ ಅವರ ಮಾತು ಕೇಳಲು ಜನಸಮೂಹ ಜಮಾಯಿಸುತ್ತಿತ್ತು. ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಪಂಥಗಳ ಜನರೂ ಬಂದು ಸೇರುತ್ತಿದ್ದರು.

ನಿಚಿರೆನ್ ಪಂಥದ ಅರ್ಚಕನೊಬ್ಬನಿಗೆ ಬಂಕೆಯ ಬಗ್ಗೆ ವಿಪರೀತ ಕೋಪ. ಆ ಪಂಥದ ಹಲವಾರು ಅನುಯಾಯಿಗಳೂ ಗುರು ಬಂಕೆಯ ಮಾತು ಕೇಳಲು ಹೋಗುತ್ತಿದ್ದುದು ಈತನ ಮತ್ಸರಕ್ಕೆ ಕಾರಣವಾಗಿತ್ತು.

ಅದೊಂದು ದಿನ ಗುರು ಬಂಕೆ ಪ್ರವಚನ ನೀಡುತ್ತಿದ್ದ ಮಂದಿರಕ್ಕೆ ಈ ಅರ್ಚಕ ನುಗ್ಗಿದ. ಗುರು ಬಂಕೆಗೆ ಏರು ಧ್ವನಿಯಲ್ಲಿ ಸವಾಲೆಸೆದ, “ಏ ಝೆನ್ ಗುರುವೇ, ಇಲ್ಲಿ ಕೇಳು! ನಿನ್ನ ಮಾತನ್ನು ಯಾರು ಬೇಕಾದರೂ ಅನುಸರಿಸಲಿ, ಆದರೆ ನಾನು ಪಾಲಿಸಲಾರೆ. ಅದೇನು ಮಾಡುತ್ತಿ ನೋಡೋಣ. ನಿನ್ನ ಮಾತನ್ನು ನಾನು ಪಾಲಿಸುವಂತೆ ಮಾಡು ನೋಡೋಣ."

Image

ಬ್ರಿಟಿಷರು‌ ನಂಬಿ ಕರೆದರೆ‌ ಓ ಎನ್ನನೇ ಶಿವನು?

ವಿಸ್ಮಯದ ಶಿವಾಲಯವೊಂದು ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿದೆ. ವಿಸ್ಮಯವೇನೆಂದರೆ ಇದನ್ನು ಕಟ್ಟಿಸಿದವರು (ಪುನರ್ ನಿರ್ಮಾಣ) ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿ! ಇದರ ಹಿಂದಿನ ರೋಚಕ ಪ್ರಸಂಗ ಹೀಗಿದೆ. 

Image

ಆತ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ-೨೫೦.೦೦ ಮುದ್ರಣ: ೨೦೧೬

ಕನ್ನಡದ ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯ ಲೇಖನಿಯಿಂದ ಮೂಡಿ ಬಂದ ‘ಆತ್ಮ' ಕಾದಂಬರಿ ನಿಜಕ್ಕೂ ಕುತೂಹಲಕಾರಿ ಕಥಾ ಹಂದರವನ್ನು ಹೊಂದಿದೆ. ಬೆಳಗೆರೆಯವರೇ ಹೇಳುವಂತೆ ಇದು ವರ್ಷಗಟ್ಟಲೆ ಕಾದು ಕುಳಿತ ಕಾದಂಬರಿಯಂತೆ. ಇದರ ಕೆಲವು ಭಾಗಗಳು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಮೂಡಿಬಂದು ಓದುಗರ ಆಸಕ್ತಿಯನ್ನು ಕೆರಳಿಸಿದ್ದವು. ಪ್ರತೀ ವಾರ ‘ಮುಂದೇನಾಗುತ್ತೆ' ಎಂದು ಕೇಳುವಂತೆ ಮಾಡಿದ್ದವು.

ಚಿರನಿದ್ರೆಗೆ ಜಾರಿದ ಮಹಾನ್ ವಿದ್ವಾಂಸ - ಬನ್ನಂಜೆ ಗೋವಿಂದಾಚಾರ್ಯ

‘ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ ಎಂಬ ಸುದ್ದಿಯನ್ನು ಏಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ವಿದ್ವತ್ ಪೂರ್ಣ ನುಡಿಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆಯೋ ಎಂದು ಅನಿಸುತ್ತಿದೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಗೋವಿಂದಾಚಾರ್ಯರು ತಮ್ಮ ಪುತ್ರನನ್ನು ಕಳೆದುಕೊಂಡಿದ್ದರು. 'ಪುತ್ರ ಶೋಕಂ ನಿರಂತರಂ’ ಎನ್ನುತ್ತಾರೆ. ಬಹುಷಃ ಇದೂ ಬನ್ನಂಜೆಯವರ ನಿಧನಕ್ಕೆ ಕಾರಣವಾಯಿತೇ?

Image