ನಾಲಗೆ ಗೆಲ್ಲಬಲ್ಲ ಪುಲಾಸಾನ್

ಉಜಿರೆ ಎಸ್.ಡಿ.ಎಂ.ಕಾಲೇಜಿನ ಉಪ ಪ್ರಾಂಶುಪಾಲ ಕೇಶವ ಟಿ.ಎನ್.ಫೋನಿಸಿದ್ದರು -“ಗಿಡ ತುಂಬಾ ಪುಲಾಸಾನ್ ಹಣ್ಣಿದೆ. ತಕ್ಷಣ ಬಂದರೆ ನೋಡಲು ಸಿಗಬಹುದು.”     ಜುಲೈ ಮಧ್ಯಭಾಗ ಇರಬೇಕು, ಅಂಗಳ ಮುಂದಿರುವ ಪುಲಾಸಾನ್ ಗಿಡದಲ್ಲಿ ತೊನೆಯುವ ಹಣ್ಣುಗಳು. ಬಹುಶಃ ಒಂದೆರಡು ಕೊಯಿಲಿನಲ್ಲಿ ಪೂರ್ತಿ ಖಾಲಿಯಾಗುವ ಹಂತಕ್ಕೆ ತಲುಪಿತ್ತು. ಕಪ್ಪು ಮಿಶ್ರಿತ ಕಡು ನೇರಳೆ ವರ್ಣದ ಹಣ್ಣುಗಳ ನೋಟ ಸೆಳೆಯುವಂತಹುದಲ್ಲವಾದರೂ ಆಕರ್ಷಕ.  

Image

ಬಂಪರ್ ಅಲಸಂಡೆ ಬೆಳೆ: ಯುವ ಕೃಷಿಕರಿಬ್ಬರ ಸಾಧನೆ

ಕೇರಳದ ವಯನಾಡಿನ ಮೀನನ್‍ಗಾಡಿ ಪಂಚಾಯತಿನ ಮೈಲಂಬಾಡಿ ಗ್ರಾಮದ ಬಿನು ಮತ್ತು ಬೆನ್ನಿ ಬಾಲ್ಯಕಾಲದ ಗೆಳೆಯರು. ಇಬ್ಬರೂ ಕೃಷಿ ಕುಟುಂಬದವರು.
ವಿದ್ಯಾಭ್ಯಾಸ ಮುಗಿಸಿದ ನಂತರ, ಅವರಿಬ್ಬರೂ ಕೃಷಿ ಬದುಕಿಗೆ ಹೆಜ್ಜೆಯಿಡಲಿಲ್ಲ. ಬದಲಾಗಿ, ಬಿನು ಚಿನ್ನದೊಡವೆ ಮಳಿಗೆಯಲ್ಲಿ ದುಡಿದರು. ಬೆನ್ನಿ ಸ್ವಂತ ಟ್ಯಾಕ್ಸಿ ಸೇವೆ ಶುರು ಮಾಡಿದರು. ವರುಷಗಳು ಉರುಳಿದವು. ಇಬ್ಬರಿಗೂ ನೆಮ್ಮದಿಯಿಲ್ಲ.

Image

ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ.

ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ. ಅದಕ್ಕಾಗಿ ಈ ಎರಡು ಸಾಲುಗಳು.

"ಅನುಭವ"

" ಮೈ

ಸೋಕಿದಾಗ

ಅವಳೇ

ಎಂದು 

ಭಾವಿಸಿಕೊಂಡರೆ,

ಚಳಿಯೂ ಸಹ,

ಬೆಚ್ಚನೆಯ

ಅನುಭವ

ನೀಡುತ್ತದೆ"

ಬಳಕೆದಾರರ ಕೋರ್ಟಿನ ತೀರ್ಪು: ರೈತರೇ ನೀರಾವರಿ ಇಲಾಖೆಯ ಬಳಕೆದಾರರು

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆ. ಕಣಬೂರು ಗ್ರಾಮದಲ್ಲಿದೆ ಕೊರಲುಕೊಪ್ಪ. ಅಲ್ಲಿಯ ಜಮೀನಿಗೆ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆ ನೀರು ಒದಗಿಸಬೇಕಾಗಿತ್ತು. ಆದರೆ ಇಲಾಖೆ ನೀರು ಸರಬರಾಜು ಮಾಡಲೇ ಇಲ್ಲ. ಹಾಗಂತ ರೈತರಿಗೆ ನೀರಾವರಿ ಶುಲ್ಕ ವಿನಾಯ್ತಿ ಮಾಡಿದರೇ? ಅದನ್ನೂ ಮಾಡಲಿಲ್ಲ.

ತುಂಗಾ ಏತ ನೀರಾವರಿ ಯೋಜನೆ ಕಾರ್ಯಗತವಾದದ್ದು ೧೯೭೨ರಲ್ಲಿ. ಕೆ. ಕಣಬೂರು ಗ್ರಾಮದ ೧೦೧೮ ಎಕ್ರೆ ಜಮೀನಿಗೆ ನೀರು ಒದಗಿಸಲಿಕ್ಕಾಗಿ. ಅಲ್ಲಿಂದ ೫ ಕಿ.ಮೀ. ದೂರದ ಕೊರಲುಕೊಪ್ಪದ ಜಮೀನಿಗೂ ಆಗ ನೀರು ಹರಿಸುವ ಯೋಜನೆ ಮಾಡಲಾಗಿತ್ತು. ಆದರೆ ಗದ್ದೆಗಳಿಗೆ ನೀರು ಹರಿಸಲು ಕಾಲುವೆ ನಿರ್ಮಿಸಲಿಲ್ಲ. ಇದರಿಂದಾಗಿ ಇಲ್ಲಿನ ತೋಟಗಳು ಒಣಗಿ ಹೋದವು ಎಂಬುದು ಗ್ರಾಮದ ಹಿರಿಯರ ದೂರು.

Image

ಕನ್ನಡಿಸಿದ ಹಿಂದಿ ಹಾಡು - ಅಬ್ ತೋ ಹೈ ತುಮ ಸೆ (ಅಭಿಮಾನ್ )

(ಅದೇ ಧಾಟಿಯಲ್ಲಿ ಹಾಡಬಹುದು)

ಈಗ ನನ್ನೆಲ್ಲಾ ಖುಷಿಯು ನಿನ್ನಿಂದ
ಜೀವ ಬಿಟ್ಟೇನೂ  ನಾನು ನಿನಗಾಗಿ

 

ನಿನ್ನ ಪ್ರೀತಿಯಲ್ಲಿ  ನಾನು ಮರುಳಾಗಿರೆ
ಯಾರೇ ಏನೇ ಹೇಳಲಿ ನಲ್ಲಾ ಈ ಲೋಕದಲ್ಲಿ
ಆಡಿಕೊಂಡರೇನು ಊರು ಎಷ್ಟು ಬೇಕಷ್ಟು

ಓಹೋ.. 
ಈಗ ನನ್ನೆಲ್ಲಾ ಖುಷಿಯು ನಿನ್ನಿಂದ
ಜೀವ ಬಿಟ್ಟೇನೂ  ನಾನು ನಿನಗಾಗಿ

 

 

ನಿನ್ನ ಪ್ರೀತಿಯಲ್ಲಿ  ಹೆಸರು  ಕೆಟ್ಟು ದೂರ ದೂರ
ನಿನ್ನ ಜತೆಯೇ  ನಾನೂ ನಲ್ಲಾ ಹೆಸರಾಂತಳು
ಎಲ್ಲಿ ತಲುಪಿಸೀತೋ  ಅರಿಯೆ ನನ್ನ ಈ ಹುಚ್ಚು
ಓಹೋ.. 
ಈಗ ನನ್ನೆಲ್ಲಾ ಖುಷಿಯು ನಿನ್ನಿಂದ
ಜೀವ ಬಿಟ್ಟೇನೂ  ನಾನು ನಿನಗಾಗಿ

 

ಸುಬಾಬುಲ್: ಮೇವು, ಸೌದೆ ಕೊರತೆಗೆ ಪರಿಹಾರ

ನಮ್ಮ ದೇಶದ ಉದ್ದಗಲದಲ್ಲಿ ಕಂಡು ಬರುವ ಸುಬಾಬುಲ್ ಗಿಡಗಳನ್ನು ಹವಾಯಿಯಿಂದ ತಂದು ಮೊದಲಾಗಿ ಇಲ್ಲಿ ಬೆಳೆಸಿದ್ದು ೧೯೮೦ರಲ್ಲಿ.

Image

ಮತ್ತೊಂದು ಕನ್ನಡಿಸಿದ ಹಾಡು - ಚಲತೆ ಚಲತೇ - ಪಾಕೀಜಾ ಚಿತ್ರದಿಂದ

ಈ ಹಿಂದಿ ಹಾಡು ನೀವು ಕೇಳಿರಬಹುದು . ತುಂಬ ಪ್ರಸಿದ್ಧ ವಾದದ್ದು.  ಯೂಟ್ಯೂಬ್ ನಲ್ಲಿ ಸಿಗುತ್ತದೆ. 

ಅದರ ಅನುವಾದವನ್ನುಅದೇ ಧಾಟಿಗೆ ಹೊಂದುವಂತೆ ಮಾಡಿದ್ದೇನೆ. ಹಾಡಲು ಯತ್ನಿಸಿ ಆನಂದಿಸಿ.

ನಡೀತ ನಡೀತ     ಅವನು ಸಿಕ್ಕಿ ಬಿಟ್ಟ
ನಡು ಹಾದಿಯಲ್ಲಿ ನನಗೆ
ಅಲ್ಲೇ ತಾನು ನಿಂತು ಬಿಟ್ತು
ನನ್ನ ರಾತ್ರಿ ಅಳೆದೂ ಸುರಿದೂ

ನಾ   ಏನ ಹೇಳದಾದೆ
ಅದ ಜಗವೆ ಹೇಳುತಿಹುದು
ಕತೆಯಾಗಿ ಹೋಯಿತಂತೆ 
ನನ ಮಾತು ಹಬ್ಬಿ ಹರಡಿ

ಅಗಲಿಕೆಯ  ಈ ದೀರ್ಘ ರಾತ್ರಿ 
ಆದೀತು ಎಂದು ಕಿರಿದು
ಈ ದೀಪ ಆರುತಿಹುದು 
ನನ್ನೊಡನೆ ಉರಿದು ಉರಿದು

 

ಜನತೆಯ‌‌ ನಿಲುವು ಯಾರೆಡೆಗೆ ?

ಮಂಗಳೂರು‌ ಮಹಾನಗರ ಪಾಲಿಕೆಯ‌ ಚುನಾವಣೆ  ನವಂಬರ್ 12 ಕ್ಕೆ ನಡೆಯಲಿದ್ದು ಈ ಬಾರಿ ಮತದಾರರ ಒಲವು ಯಾರ ಪರವಾಗಿ ಬರುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇತ್ತೀಚೆಗೆ ನಡೆದ ಲೋಕ ಸಭಾ ಚುನಾವಣೆಯ ಫಲಿತಾಂಶ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರ ಪಕ್ಷಾಂತರಿಗಳಿಂದಾಗಿ ಪತನವಾಗಿರುವ ಸಂಧರ್ಭದಲ್ಲಿ ಇದರ ಪರಿಣಾಮ ಜನತೆಯಲ್ಲಿ ಅಲ್ಪ ಮಟ್ಟಿಗಾದರೂ ಮನೋಸ್ಥಿತಿಗಳನ್ನು ಬದಲಾಯಿಸಬಲ್ಲುದು ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ. 

ಇಂಗುಗುಂಡಿಗಳ ಇಂದ್ರಜಾಲ, ಅಂತರ್ಜಲದ ಅಂತರ್ಜಾಲ

ಅಂದು ಪ್ರಸನ್ನರ ಮಾಗಡಿ ಮನೆಯಿಂದ ತೋಟಕ್ಕೆ ನಡೆದು ಹೊರಟಾಗ ಕತ್ತಲಾಗಲು ಇನ್ನೂ ಒಂದು ತಾಸಿತ್ತು. ಆಗಷ್ಟೇ ಕುಡಿದಿದ್ದ ಕಾಫಿಯ ಘಮದ ಗುಂಗಿನಲ್ಲಿ ಅವರ ಕಾಫಿ ತೋಟದತ್ತ ಹೆಜ್ಜೆ ಹಾಕಿದೆವು. ಮನೆಯೆದುರಿನ ಗೇಟು ದಾಟಿ, ಬೇಲೂರು ರಸ್ತೆಗೆ ಬಂದಾಗ ಪಕ್ಕದಲ್ಲಿರುವ ಹಲಸುಲಿಗೆ ಬಸ್‍ಸ್ಟಾಪ್ ತೋರಿಸುತ್ತಾ ಪ್ರಸನ್ನ ಹೇಳಿದರು, "ಇಲ್ಲಿಂದ ಸಕಲೇಶಪುರ ಬಹಳ ಹತ್ತಿರ, ಐದೇ ಕಿಲೋಮೀಟರ್". ಬೇಲೂರು ರಸ್ತೆ  ಹಾದು, ಅದರಾಚೆಗಿನ ಪ್ರಸನ್ನರ ಐದೆಕ್ರೆ ರೊಬಸ್ಟ ಕಾಫಿ ತೋಟ ತಲಪಿದೆವು.

Image