ಹಾಗೇ ಸುಮ್ಮನೆ - ೨. ಮುಕ್ತರಾಗುವುದು ಹೇಗೆ
ರಾಶಿಯವರು ವಿದ್ಯಾರ್ಥಿಯಾಗಿದ್ದಾಗ ಪಂಚ್ ಪತ್ರಿಕೆಯ ಸಂಚಿಕೆಗಳನ್ನು ಓದಿ ಆನಂದಿಸಿದರು. ಅವುಗಳಲ್ಲಿನ ಚುರುಕು, ಸ್ಪೂರ್ತಿ, ಸುಸಂಸ್ಕೃತ ದೃಷ್ಟಿ, ವಿಡಂಬನಾ ನೋಟ ಅವರನ್ನು ನಗಿಸಿ ಸಂತೋಷ ಕೊಟ್ಟವು. ಹಾಗಾಗಿ ಇಂಗ್ಲಿಷ್ನಲ್ಲಿನ ಈ ತರನ ಉಕ್ತಿಗಳನ್ನು ತಮ್ಮ ಸಮಾಜ ಜೀವನಕ್ಕೆ ಅಳವಡಿಸಿ ಸ್ನೇಹಿತರೊಡನೆ ಮಾತನಾಡುವಾಗ ಕನ್ನಡದಲ್ಲಿ ನುಡಿದರೆ ಜೊತೆಯವರು ಬಲು ಸಂತೋಷಪಡುತ್ತಿದ್ದರು.
ಅವರು ಹೇಳಿದರು - ಇಷ್ಟೆಲ್ಲಾ ಸುಖ ಸಂತೋಷಗಳನ್ನು ನನಗೆ ಒದಗಿಸಿಕೊಟ್ಟ ನಾನು ಋಣಿಯಾಗಿರಬೇಕು. ಇಂಥ ಸಾಂಸ್ಕೃತಿಕ ಋಣ ತೀರಿಸಬೇಕಾದರೆ ಅಲ್ಲಿ ಕಲಿತದ್ದನ್ನು ಇಲ್ಲಿ ನಮ್ಮವರಿಗೆ ಬಡಿಸಬೇಕು. ಆಗಲೇ ಋಣ ಮುಕ್ತನಾಗಲು ಸಾಧ್ಯ.
ಹೀಗೆಲ್ಲ ವಿಚಾರಿಸಿ ಅವರು ಮುಂದೊಂದು ದಿನ ಕೊರವಂಜಿ ಹಾಸ್ಯಪತ್ರಿಕೆಯನ್ನು ಕನ್ನಡದಲ್ಲಿ ಆರಂಭಿಸಿದರು.
- Read more about ಹಾಗೇ ಸುಮ್ಮನೆ - ೨. ಮುಕ್ತರಾಗುವುದು ಹೇಗೆ
- Log in or register to post comments