ಗೀತಾಮೃತ - 2

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕ:/

ನ ಚೈನಂ ಕ್ಲೇದಯಂತ್ಯೋಪೋ ನ ಶೋಷಯತಿ ಮಾರುತ://೨೩//

  ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು.ಇದನ್ನು ಬೆಂಕಿಯು ಸುಡಲಾರದು.ಇದನ್ನು ಜಲವು ನೆನೆಯಿಸಲಾರದು ಮತ್ತು ವಾಯುವು ಒಣಗಿಸಲಾರದು.

     ಅಚ್ಛೇದ್ಯೋಯಮದಾಹ್ಯೋ ಯಮಕ್ಲೇದ್ಯೋ ತೋಷ್ಣ ಏವ/

Image

ಝೆನ್ ಪ್ರಸಂಗ: ಚಾಳಿ ಬಿಡಿಸುವ ದಿಢೀರ್ ತಂತ್ರ

ಗುರು ಸೆನ್‌ಗೈಯ ಆಶ್ರಮದಲ್ಲಿ ಧ್ಯಾನ ಕಲಿಯಲು ಸೇರಿಕೊಂಡಿದ್ದರು ಹಲವು ಶಿಷ್ಯರು. ಯೌವನದ ಸಹಜ ಪ್ರವೃತ್ತಿಗಳ ಸೆಳೆತ ಅವರಲ್ಲಿ ಕೆಲವರಿಗೆ. ಒಬ್ಬನಿಗಂತೂ ಪೇಟೆಗೆ ಹೋಗಿ ಸುತ್ತಾಡುವ ಚಾಳಿ. ರಾತ್ರಿ ಎಲ್ಲರೂ ಮಲಗಿದ ನಂತರ ಆಶ್ರಮದ ಗೋಡೆ ಹಾರಿ ಪೇಟೆಗೆ ಹೋಗುತ್ತಿದ್ದ; ಮರುದಿನ ಮುಂಜಾವ ಮೆತ್ತಗೆ ಮರಳುತ್ತಿದ್ದ.

ಅದೊಂದು ದಿನ ರಾತ್ರಿ ಗುರು ಸೆನ್‌ಗೈ ಆಶ್ರಮದ ಗೋಡೆಗೆ ಐದು ಮೆಟ್ಟಲುಗಳ ಪುಟ್ಟ ಏಣಿ ತಗಲಿಸಿ ಇಟ್ಟದ್ದನ್ನು ನೋಡಿದ. ಶಿಷ್ಯರನ್ನೆಲ್ಲ ಗಮನಿಸಿದಾಗ ಒಬ್ಬ ಶಿಷ್ಯ ನಾಪತ್ತೆ ಎಂಬುದು ಪತ್ತೆ. ಸೆನ್‌ಗೈಗೆ ಎಲ್ಲವೂ ಅರ್ಥವಾಯಿತು.

Image

ಅಪರೂಪದ ಮೀನುಗಳು ಹಾಗೂ ಅವುಗಳ ದೇಹರಚನೆ

ನೀವು ಈಗಾಗಲೇ ವಿದ್ಯುತ್ ಮೀನು ಬಗ್ಗೆ ಓದಿರುತ್ತೀರಿ. ಸಮುದ್ರದಾಳದಲ್ಲಿ ಸಾವಿರಾರು ಬಗೆಯ ಅಪರೂಪದ ಜಲಚರಗಳಿವೆ. ಅವುಗಳನ್ನು ಕೆಲವೊಂದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇನೆ. ಓದುವ ಕೌತುಕ ನಿಮ್ಮದಾಗಲಿ.

Image

ತುಷಾರಿಣಿ

ತಮವನ್ನು ಓಡಿಸುತ
ತರತರದಿ ಬೆಳಕಿನವಳು
ತುಷಾರವಾಗಿ ಮನವ
ತಂಗಾಳಿಯಲಿ ಅಪ್ಪಿದಳು||

ತಳಮಳದ ಹೃದಯವನು
ತಪ್ಪಿಲದೆ ಒಪ್ಪಿದಳು
ತರಂಗದ ಅಲೆಯಂತೆ
ತೆವಂಗದಿ ಕಾಣುವಳು||

ತನುವನು ಬಯಸುತ
ತಪಸಿಯಾಗಿ ನಿಂತಳು
ತಮಟೆಯನು ಬಾರಿಸಿ
ತಳಕಿತ್ತದೆ ಕುಳಿತಳು||

ತಂಗುತಲಿ ಹೃದಯದಿ
ತಂಪನು ಅನುಭವಿಸಿದಳು
ತಂಗದಿರನಾದ ನಲ್ಲನನು
ತಂಗರಗದಿ ನೋಡಿದಳು||

ತೆಪ್ಪದಲಿ ನನಗಾಗಿ
ತಂದಿಹಳು ನಗೆಯಲ್ಲಿ
ತುಪ್ಪವನು ಹೆಪ್ಪಿಳಿಸಿ
ತೆಂಗಿನ ತೋಟದಲ್ಲಿ||

-ಶಂಕರಾನಂದ ಹೆಬ್ಬಾಳ 

ಮಲೆನಾಡಿನ ರೋಚಕ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ.೧೩೦.೦೦ ಮುದ್ರಣ: ೨೦೧೬

ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಅದರಲ್ಲಿನ ಚಿಂಟಿಯ ಪಾತ್ರದ ಚಿತ್ರಣದ ಭಾಗ ಮಕ್ಕಳ ಸಾಹಿತ್ಯಕ್ಕೆ ಸ್ವೀಕೃತವಾಯಿತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಲೆನಾಡಿಗೆ ಸಂಬಂಧಪಟ್ಟ ಬರಹಗಳ ಪ್ರಭಾವವೂ ಈ ಕೃತಿ ರಚನೆಗೆ ಪ್ರಮುಖ ಕಾರಣ ಎನ್ನುತ್ತಾರೆ ಲೇಖಕರು. ‘ಕಾಫಿ ನಾಡಿನ ಕಿತ್ತಳೆ' ಮುಂದೆ ಮುದ್ರಣವಾಗಿ, ನಂತರ ಪರಿಷ್ಕೃತ ಮುದ್ರಣವಾಗುವ ಸಮಯದಲ್ಲಿ ಮಲೆನಾಡಿನ ರೋಚಕ ಕತೆಗಳು ಎಂದಾಯಿತು. 

ಒಂದು ಒಳ್ಳೆಯ ನುಡಿ (6) - ಗೆಳೆತನ

ಹಾಲು ನೀರು ನಮಗೆಲ್ಲ ತಿಳಿದ ವಿಷಯ, ಅದಿಲ್ಲದೆ ನಾವುಗಳಿಲ್ಲ. ಹಾಲಿನೊಂದಿಗೆ ನೀರು ಸೇರಿದಾಗ ಇಲ್ಲಿ ಬೆಲೆ ನೀರಿಗೂ ಬರುತ್ತದೆ. ಇದು ನಿತ್ಯ ಸತ್ಯ. ಅದೇ ಹಾಲನ್ನು ಕಾಯಿಸುವಾಗ ನೀರೆಲ್ಲಾ ಆವಿಯಾಗಿ, ಹಾಲು ಉಕ್ಕಲು ಪ್ರಾರಂಭಿಸುತ್ತದೆ. ಆಗ ಸ್ವಲ್ಪ ನೀರನ್ನು ಚಿಮುಕಿಸುತ್ತೇವೆ. ಹಾಲಿಗೆ ಬೇಸರ, ಛೇ, ಈ ನನ್ನ ಮಿತ್ರ ನನ್ನನ್ನು ಬಿಟ್ಟು ಹೋಗ್ತಾ ಇದ್ದಾನಲ್ಲ ಅಂತ. ಪುನಃ ನೀರು ಚಿಮುಕಿಸಿದಾಗ ಹಾಲಿಗೆ ಸಂತಸ, ನನ್ನ ಮಿತ್ರ ಬಂದನಲ್ಲ ಅಂತ. ಆಗ ಹಾಲು ಶಾಂತವಾಗುತ್ತದೆ. ಇದುವೇ ನಿಜವಾದ ಗೆಳೆತನ, ಮಿತ್ರತ್ವ ಎಂದರೆ.

Image

ಗಾನ ಮಾಂತ್ರಿಕನಿಗೆ ನುಡಿ ನಮನ

ಭಾವಜೀವಿ

ಧರೆಯಿಂದ ಕಳಚಿತು ಗಾಯನ ಕೊಂಡಿ

ಮರೆಯಲಿ ಇಣುಕುವ ಸಪ್ತಸ್ವರವು

ನೆರೆಹೊರೆ ರಾಜ್ಯದ ಹೃನ್ಮನ ಹೊನ್ನಕಳಶ

ತೆರೆಮರೆ ಶೋಭಿತ ಸ್ವರಗಾನವು||