ಸ್ಟೇಟಸ್ ಕತೆಗಳು (ಭಾಗ ೧೨೯೭) - ಅಂಗಡಿಯೊಳಗೆ

ಅವರು ಮೂಲೆಗುಂಪಾಗಿದ್ದಾರೆ, ಅವರಾಗಿಯೇ ಮಾಡಿಕೊಂಡಿದ್ದಲ್ಲ, ಸುತ್ತಲಿನವರು ಸೇರಿ ಅವರನ್ನು ದೂರ ತಳ್ಳುವುದಕ್ಕೆಆರಂಭ ಮಾಡಿದ್ದಾರೆ. ಅವರು ದುಡಿಯುವ ಅಂಗಡಿಯ ಮೇಲೆ ಜೀವಕ್ಕಿಂತಲೂ ಹೆಚ್ಚು ಪ್ರೀತಿ, ಹಗಲು ರಾತ್ರಿ ಎನ್ನದೆ ಆ ಅಂಗಡಿಯನ್ನ ಇನ್ನೊಂದಷ್ಟು ಎತ್ತರಕ್ಕೇರಿಸುವುದಕ್ಕೆ ಪ್ರತಿಕ್ಷಣವೂ ಯೋಚನೆ ಮಾಡುತ್ತಿದ್ದರು.

Image

ಬೆಳಕು ಕ್ಷೀಣಿಸುವುದು ಏಕೆ?

ಮನೆಯಲ್ಲಿ ನಾವು ಕತ್ತಲೆಯಲ್ಲಿ ದೀಪವನ್ನು ಬಳಸುತ್ತೇವಲ್ಲವೇ? ನಮ್ಮ ಕಾಲದಲ್ಲಿ ನಾವು ಸೀಮೆ ಎಣ್ಣೆ ದೀಪ, ಎಣ್ಣೆ ದೀಪ, ಲಾಟೀನನ್ನು ಬಳಸುತ್ತಿದ್ದೆವು. ಈ ಬೆಳಕು ಬಹಳ ದೂರ ಹೋಗುವುದಿಲ್ಲ. ಈಗ ವಿದ್ಯುತ್ ದೀಪಗಳು ಬಂದಿವೆ ಅವುಗಳು ಒಮ್ಮೆಲೇ ಇಡೀ ಕೊಣೆಯನ್ನೇ ಬೆಳಗುತ್ತವೆ. ಹಿಂದಿನ ಕಾಲದ ಕಾರಿನ ಹೆಡ್ ಲೈಟ್ ಗಳು ಕೆಂಪಗೆ ಉರಿಯುತ್ತಿದ್ದವು. ಅವು ಹೆಚ್ಚು ದೂರ ತಲುಪುತ್ತಿರಲಿಲ್ಲ. ಆದರೆ ಈಗ ಹಾಗಲ್ಲ.

Image

ಇದು ಸೊಕ್ಕಿನ ಪರಮಾವಧಿಯಷ್ಟೇ !

ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಪಾಕಿಸ್ತಾನದ ಆಳುಗರ ಅಥವಾ ಮಿಲಿಟರಿ ವ್ಯವಸ್ಥೆಯ ಧಾರ್ಷ್ಟ್ಯವನ್ನು ಕಂಡಾಗಲೆಲ್ಲ ಈ ಮಾತು ನೆನಪಾಗುತ್ತದೆ. ಪ್ರಸ್ತುತ, ಪಾಕ್ ನ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್, ‘೧೩ ಲಕ್ಷ ಯೋಧರಿದ್ದ ಭಾರತೀಯ ಸೇನೆಗೇ ನಮ್ಮನ್ನು ಹೆದರಿಸಲು ಸಾಧ್ಯವಾಗಲಿಲ್ಲ.

Image

ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ ?!

"ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರಾದೃಷ್ಟಕ್ಕಿಂತಲೂ ಪ್ರಬಲ....." - ಚಾರ್ಲ್ಸ್ ಡಿಕನ್ಸ್.

Image

ಸ್ಟೇಟಸ್ ಕತೆಗಳು (ಭಾಗ ೧೨೯೬) - ಸರ್ಕಸ್

ಹಾರಬೇಕು ಕುಣಿಯಬೇಕು ಜಿಗಿಯಬೇಕು ಜೀವ ಪಣಕ್ಕಿಟ್ಟು ಆಟ ಆಡಲೇಬೇಕು. ನಮ್ಮ ಬದುಕು ಸಾಗಬೇಕು ಅಂತಾದರೆ ನಾವು ಹೀಗೆಲ್ಲ ಮಾಡ್ಲೇಬೇಕು. ನಮ್ಮದು ಈ ಊರಲ್ಲ ಸರ್. ನಮ್ಮ ಮೂಲ ಊರನ್ನೇ ಮರೆತುಬಿಟ್ಟಿದ್ದೇವೆ. ಒಂದೊಂದು ತಿಂಗಳು ಒಂದೊಂದೂರನ್ನ ದಾಟಿಕೊಂಡು ಹೊರಟಿದ್ದೇವೆ. ಅದ್ಭುತ ಕ್ಷಣಗಳನ್ನು ಕಳೆದುಕೊಂಡಿದ್ದೇವೆ. ಎಲ್ಲದಕ್ಕೂ ಒಗ್ಗಿ ಹೋಗಿದ್ದೇವೆ. ಹೊಸ ಆಲೋಚನೆಗಳಿಲ್ಲ.

Image

ಎಲೆ ಹಕ್ಕಿಯ ಹುಡುಕಲು ಸಾಧ್ಯವೇ?

ನಾನೊಮ್ಮೆ  ನಮ್ಮ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಮಲೆನಾಡಿನ ಮಡಿಲಿನಲ್ಲಿರುವ ಅವರ ಮನೆಗೆ ಹೋದರೆ ಅವರ ತೋಟವನ್ನೆಲ್ಲ ಸುತ್ತುವುದು ನನಗೆ ಬಹಳ ಖುಷಿ ಕೊಡುವ ವಿಷಯ. ಸಮಯ ಸಿಕ್ಕಾಗಲೆಲ್ಲ ಅವರ ತೋಟದಲ್ಲಿ ಓಡಾಡುತ್ತಿದ್ದೆ. ಅವರಿಗೂ ನನ್ನ ಹಕ್ಕಿಗಳ ಬಗೆಗಿನ ಆಸಕ್ತಿಯ ಬಗ್ಗೆ ಕುತೂಹಲ ಇತ್ತು.

Image

ಶಿಲ್ಪ ವೈಭವಕ್ಕೆ ಹೆಸರಾದ ಸೇನೇಶ್ವರ ದೇವಸ್ಥಾನ

ಬೈಂದೂರಿನ ಸೇನೇಶ್ವರ ದೇವಸ್ಥಾನ ಶಿಲ್ಪ ವೈಭವಕ್ಕೆ ಹೆಸರಾಗಿದೆ. ದೇವಸ್ಥಾನದ ಸೊಬಗು ದೂರದಿಂದ ನೋಡುವಾಗ ಗೊತ್ತೇ ಆಗುವುದಿಲ್ಲ. ಆದರೆ ಒಳಹೊಕ್ಕು ನೋಡಿದರೆ ಶಿಲ್ಪ ಕಲಾ ಕೆತ್ತನೆಯು ದೇವ ಸಭೆಯಂತೆ ಅನಾವರಣಗೊಳ್ಳುತ್ತ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕರಾವಳಿ ಪ್ರದೇಶದ ಬೇಲೂರು ಎಂದೇ ಇತಿಹಾಸ ತಜ್ಞರಿಂದ ಗುರುತಿಸಲ್ಪಟ್ಟಿರುವ ಸೇನೇಶ್ವರ ದೇವಸ್ಥಾನ ಪ್ರಸ್ತುತ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿದೆ.

Image